ಮಂಜುಬೊಮ್ನಳ್ಳಿ (ಲೇಖನಗಳು)
ಕುಂತಿಯ ಅಂತ್ಯ
March 26, 2008 - 3:39pm — ಮಂಜುಬೊಮ್ನಳ್ಳಿದು:ಖತಪ್ತನಾದ ಸೂರ್ಯ ತಲೆಮರೆಸಿಕೊಂಡುಬಿಟ್ಟಿದ್ದ. ಮೋಡಗಳಿಂದ ಸುರಿವ ಭಾಶ್ಪಾಂಜಲಿಯ ನಡುವೆ ಕಾಡ ಮಧ್ಯದಲ್ಲಿ ಒಂದು ಅಂತ್ಯಸಂಸ್ಕಾರ. ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯದ ಎಮ್ಮೆಗುಂಡಿ ಕಾನಿನಲ್ಲಿ ೮೦ ವರ್ಷದ ಹಿರಿಯಾನೆ ಕುಂತಿಗೆ ವಿದಾಯ ಹೇಳುವ ಘಳಿಗೆ ಅದು. ಮುಂದೆ ಓದಿ »

- Login or register to post comments
- 195 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಹಕ್ಕಿಗಳ ಗ್ಯಾರೇಜು
March 6, 2008 - 7:28pm — ಮಂಜುಬೊಮ್ನಳ್ಳಿಈ ಗ್ಯಾರೇಜಿನಲ್ಲಿ ಗಾಯಗೊಂಡ ಹಕ್ಕಿಗಳನ್ನೂ ರೆಪೇರಿ ಮಾಡಲಾಗುತ್ತದೆ. ಮುಂದೆ ಓದಿ »

- Login or register to post comments
- 184 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಕೊಡಚಾದ್ರಿಗೆ ಬೇಕಿತ್ತೇ ರಸ್ತೆ-ರೆಸಾರ್ಟು?
January 4, 2008 - 2:26pm — ಮಂಜುಬೊಮ್ನಳ್ಳಿಕೊಡಚಾದ್ರಿ ಸುದ್ದಿಯಲ್ಲಿದೆ. ಅಲ್ಲಿಗೆ ೧೦ ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಸಮೀಪದ ನಾಗೋಡಿಯಲ್ಲಿ ೩ ಕೋಟಿ ರೂ.ನ ರೆಸಾರ್ಟ್ ಇವುಗಳ ಅಗತ್ಯವನ್ನು ಪ್ರಶ್ನಿಸಿ ಕೇಮಾರು ಸಾಂದಿಪನಿ ಆಶ್ರಮದ ಈಶವಿಠಲದಾಸ ಸ್ವಾಮಿ ಮತ್ತು ಹಿಂದೂ ಸೇನೆಯ ಪ್ರಮೋದ ಮುತಾಲಿಕ ಹೈಕೊರ್ಟಿನಲ್ಲಿ ಕೇಸು ಜಡಿದಿದ್ದಾರೆ. ಕೋರ್ಟು ಕಾರಣ ಕೇಳಿ ಸರ್ಕಾರಕ್ಕೆ ನೋಟೀಸ್ ನೀಡಿದೆ.
ಇತ್ತ ಮಾಜಿ ಶಾಸಕ ಅರಗ ಜ್ನಾನೇಂದ್ರ ರಸ್ತೆ - ರೆಸಾರ್ಟು ಅಂದ್ರೆ ಕೊಡಚಾದ್ರಿಯ ಅಭಿವ್ರದ್ಧಿ. ‘ಡೆವಲಪ್ಮೆಂಟು’ ಆದ್ರೆ ಸ್ಥಳೀಯರ ಜೀವನ ಮಟ್ಟ ಉತ್ತಮಗೊಳ್ಳುತ್ತದೆ. ಇದನ್ನು ಬೇಡ ಅನ್ನೋರು ಅಭಿವ್ರದ್ಧಿ ವಿರೋಧಿಗಳು ಅನ್ನುತ್ತಿದ್ದಾರೆ. ಸ್ವಿಮ್ಮಿಂಗ್ ಪೂಲ್ ಇರೋ ರೆಸಾರ್ಟು ಜನಸಾಮಾನ್ಯರಿಗಲ್ಲ ಅನ್ನೋದಂತೂ ನಿಜ, ಅದು ಹೇಗೆ ಸ್ಥಳೀಯರಿಗೆ ಸಹಾಯ ಮಾಡುತ್ತದೋ ಗೊತ್ತಿಲ್ಲ.
ಕೇಮಾರು ಸ್ವಾಮಿಜಿಯ ಕಾವಿ ಬಟ್ಟೆಗೆ ಹಸಿರು ಛಾಯೆ ಬಂದಿದ್ದರೆ ಸ್ವಲ್ಪ ಸಮಾಧಾನವಾಗುತ್ತಿತ್ತೇನೋ. ಕೊಡಚಾದ್ರಿ ಧಾರ್ಮಿಕ-ಆಧ್ಯಾತ್ಮಿಕ ಶಕ್ತಿಕೇಂದ್ರ, ರಸ್ತೆ ಅಲ್ಲಿಯ ಅಧ್ಯಾತ್ಮಿಕ ವಾತಾವರಣಕ್ಕೆ ಘಾಸಿ ಮಾಡುತ್ತದೆ, ಅಲ್ಲಿಗೆ ಜೀಪುಗಳು ಬರೋದೂ ಬೇಡ ಅನ್ನುವ ಇವರಿಗೆ ಕೊಡಚಾದ್ರಿ ಪರಿಸರದ ಅಪರೂಪದ ಅತಿ ಸೂಕ್ಷ್ಮ ಜೈವಿಕ ವ್ಯವಸ್ಥೆಯ ಕುರಿತಾಗಲೀ, ರಮ್ಯಾದ್ಭುತ ನಿಸರ್ಗ ಸ್ರಷ್ಟಿಯ ಬಗ್ಗೆಯಾಗಲೀ ಅದೆಷ್ಟು ಕಾಳಜಿಯಿದೆಯೋ ತಿಳಿಯದು. ಮುಂದೆ ಓದಿ »

ಬಾಣಾವತಿಯ ಮಡಿಲ ಜಾರುಬಂಡಿ
January 2, 2008 - 2:17pm — ಮಂಜುಬೊಮ್ನಳ್ಳಿಘಟ್ಟದ ರಸ್ತೆಯಲ್ಲಿ ಬೈಕ್ ಓಡಿಸೋದು ಅಂದ್ರೆ ನನಗೆ ಯಾವತ್ತೂ ಖುಶಿನೇ. ನಾನು ಪದೆಪದೆ ಹೋಗೋದಕ್ಕೆ ಇಷ್ಟ ಪಡೋದು ಮಲೆಮನೆ ಘಟ್ಟದ ರಸ್ತೆಯಲ್ಲಿ. ಜೋಗದಿಂದ ಹೊನ್ನಾವರದವರೆಗಿನ ೬೨ ಕಿಮೀ ಪ್ರಯಾಣ ಅಂದ್ರೆ ಅದು ಶರಾವತಿಯ ಮಡಿಲ ಜಾರುಬಂಡಿ.
ಬ್ರಿಟಿಶ್ ಬಂಗಲೆಯಂಗಳದಿಂದ ಜೋಗಕ್ಕೊಮ್ಮೆ ಕಣ್ಣು ಹೊಡೆದು ಬೈಕ್ ಹತ್ತಿದರೆ ಮುಂದಿನ ದಾರಿ ನೀಡುವ ಅನುಭವ ಅಪೂರ್ವ. ಮಾವಿನಗುಂಡಿಯಲ್ಲಿ ಒಂದು ರಿಫ್ರೆಶಿಂಗ್ ಚಾ ಕುಡಿಯೋದು ಕಡ್ಡಾಯ. ಎಡ ಭಾಗದಲ್ಲಿ ಬಳುಕುತ್ತ ಹರಿಯುವ ಶರಾವತಿ ಮತ್ತು ಬಲಭಾಗದ ರಾಕ್ಷಸ ಗಾತ್ರದ ಗುಡ್ಡಗಳಿಂದ ಧುಮುಕುವ ಮಲೆಮನೆ ಜಲಪಾತ ಹಸಿರು ತಿರುವುಗಳನ್ನು ಕ್ರಮಿಸುವಾಗಲೆಲ್ಲ ಯಾವ ಕಡೆ ನೋಡಬೇಕೆಂಬ ಗೊಂದಲ ಹುಟ್ಟಿಸುತ್ತವೆ.
ಮಳೆಗಾಲದಲ್ಲಿನ ಮಂಜು, ಕೊರೆವ ಛಳಿಯಲ್ಲಿ ಅಲ್ಲಲ್ಲಿ ಮೈ ಬೆಚ್ಚಗಾಗಿಸಲೆಂದೆ ಇದೆಯೇನೋ ಎನ್ನಿಸುವ ಬಿಸಿಲಿನ ಜಾಗಗಳು, ಸುಡುವ ಬೇಸಿಗೆಯಲ್ಲೂ ಘಟ್ಟದುದ್ದಕ್ಕೂ ತಣ್ಣಗಿನ ಗಾಳಿ. ಇಳಿಸಂಜೆಯಲ್ಲಿ ಹೊರಟರೆ ಸೂರ್ಯ ಹೊನ್ನಾವರದ ಕಡಲಲ್ಲಿ ತಲೆ ಮರೆಸಿಕೊಳ್ಳುವವರೆಗೂ ಹಿಂಬಾಲಿಸುವ ವೇಗ ಅದು ಹೇಗೆ ನಮಗೆ ಬಂತು ಅನ್ನೊದೇ ಆಶ್ಚರ್ಯಕರ.
ಘಟ್ಟ ಇಳಿದ ಮೇಲೂ ರಸ್ತೆಯನ್ನಷ್ಟೇ ನೋಡೋದು ಕಷ್ಟ. ಹೊಳೆಸಾಲಿನ ಹಸಿರು ತೋಟ, ಕರಿಕಲ್ಲಿನ ಗುಡ್ಡ, ದೂರದಲ್ಲಿ ಮಿಂಚುವ ಸಮುದ್ರದ ನೀರು ಎಲ್ಲವೂ ಆ ರಸ್ತೆಗೆ ಮತ್ತೆ ಮತ್ತೆ ಆಹ್ವಾನಿಸುವ ಸಿಹಿ ಆಮಿಷಗಳು. ಮುಂದೆ ಓದಿ »

ಹಿನ್ನೀರಿನಲ್ಲಿ ಬೆರೆತ ಕಣ್ಣೀರು (ರಕ್ತಕಣ್ಣೀರು?)
December 18, 2007 - 3:16pm — ಮಂಜುಬೊಮ್ನಳ್ಳಿವಾರಾಹಿ ಹಿನ್ನಿರಿನಿಂದ ಸುತ್ತುವರೆಯಲ್ಪಟ್ಟಿರುವ ಕೆಲವು ಹಳ್ಳಿಗಳು ಚಿತ್ರವಿಚಿತ್ರ ಸಮಸ್ಯೆಗಳಿಂದ ಬಳಲುತ್ತಿವೆ. ಮೆಲ್ಸುಂಕ ಎಂಬ ಗ್ರಾಮವೊಂದರ ಕಥೆ ಇಲ್ಲಿದೆ. ಮುಂದೆ ಓದಿ »

- Login or register to post comments
- 332 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: