shreedevikalasad (ಬ್ಲಾಗ್ ಬರಹಗಳು)
ವಾಪಾಸ್ ಬಂದುಬಿಟ್ಟೆ...!
October 11, 2008 - 3:53pm — shreedevikalasadಸುಮಾರು ಐದಾರು ವರ್ಷದ ಹಿಂದೆ ವೈದೇಹಿಯವರು ಬರೆದ ಪುಸ್ತಕ ನನ್ನನ್ನು ಅಲ್ಲಿಗೆ ಹೋಗುವಂತೆ ಮಾಡಿತ್ತು. ಸಂಗೀತ ನಿರ್ದೇಶಕ ಭಾಸ್ಕರ್ ಚಂದಾವರ್ಕರ್ ಅವರು ನಡೆಸಿದ ರಸಗ್ರಹಣ ಶಿಬಿರದ ಸಂವಾದವನ್ನು ವೈದೇಹಿಯವರು ಸರಳವಾಗಿ, ಮನಮುಟ್ಟುವಂತೆ ಆ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದೇ ನಾನು ಹೆಗ್ಗೋಡಿಗೆ ಹೋಗಲು ಕಾರಣ. ಮುಂದೆ ಓದಿ »

ಮರಳ (ಲಾರದ) ಶಿಲ್ಪ!
September 13, 2008 - 4:19pm — shreedevikalasadಪುಟ್ಟ ಗೆಳತಿಗೊಂದು ನುಡಿನಮನ
ಅವಳು ನನಗೇ ಅಂತ ತೆಗೆದುಕೊಟ್ಟ ಮೆಹಂದಿ ಇನ್ನೂ ಪ್ಯಾಕೆಟ್ನಲ್ಲಿ ಹಾಗೇ ಇದೆ. ಅವಳ ಕೆಂಚು ಕೂದಲ ನೋಡಿ ಅವತ್ತು ಕೇಳಿದ್ದೆ. ಕಲರ್ ಹಾಕಿಸ್ಕೊಂಡಿದ್ದೀಯೇನೇ ಅಂತ. ಇಲ್ಲಪ್ಪ. ನಮ್ಮ ಕಾಲೇಜ್ ಕ್ಯಾಂಪಸ್ಲ್ಲಿ ಮೆಹಂದಿ ಗಿಡಗಳಿವೆ. ಅದನ್ನ ಅರೆದು ಹಚ್ಚಿಕೊಂಡಿದ್ದೀನಷ್ಟೇ. ನಿಮಗೂ ಬೇಕಾ? ನೆಕ್ಸ್ಟ್ ಟೈಂ ತಂದ್ಕೊಡ್ತೀನಿ. ಅಂದ್ಲು. ಕೆಲವು ತಿಂಗಳು ಬಿಟ್ಟು ಮತ್ತೆ ಬೆಂಗಳೂರಿಗೆ ಬಂದ್ಲು. ಆಗ ಮರೆಯದೇ ಮೆಹಂದಿ ತಂದಿದ್ದಳು. ಆದರೆ ಎಲೆಯಲ್ಲ ಪ್ಯಾಕೆಟ್. ಮೆಹಂದಿ ಗಿಡದ ಎಲೆ ತರಕ್ ಆಗ್ಲಿಲ್ಲ. ಆದ್ರೆ ಈ ಪ್ಯಾಕೆಟ್ನಲ್ಲಿರೋ ಮೆಹಂದಿ ಚೆನ್ನಾಗಿರತ್ತೆ. ಹಚ್ಕೊಳ್ಳಿ ಅಂದ್ಲು. ಆದ್ರೆ ಆ ಪ್ಯಾಕೆಟ್ ಓಪನ್ ಮಾಡೋದಕ್ಯಾಕೋ ಮನಸ್ಸಾಗ್ತಿಲ್ಲ. ಪ್ಯಾಕೆಟ್ ಓಪನ್ ಮಾಡಿಬಿಟ್ಟರೆ ಅವಳಂತೆ ಆ ಮೆಹಂದಿಯ ಘಮವೂ ಹೊರಟುಹೋಗುತ್ತದೆಯೇನೋ ಎಂಬ ಅಳುಕಿನಿಂದಲೇ ಅದನ್ನ ಹಾಗೇ ಇಟ್ಟಿದ್ದೇನೆ. ಅದು ಇನ್ಮುಂದೇನೂ ಹಾಗೇ ಇರಲೇನೋ.
ನನ್ನ ಅಕ್ಕನ ಮಗಳು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಾಸ್ಕಾಮ್ ಓದ್ತಿದಾಳೆ. ನಿಮ್ಮಲ್ಲಿ ಇಂಟರ್ನ್ಶಿಪ್ ಮಾಡ್ಬೇಕು ಅಂತಿದಾಳೆ. ಅವಳಿಗೆ ಒಂಚೂರು ಗೈಡ್ ಮಾಡಿ ಅಂದ್ರು. ನಾನು ಸರಿ ಚಿಂತೆಬಿಡಿ. ನಾನ್ ಕೇರ್ ತಗೊಳ್ತೀನಿ ಅಂತ ಅವಳ ಮಾವನಿಗೆ ಹೇಳಿ ಫೋನ್ ಇಟ್ಟೆ. ಮುಂದೆ ಓದಿ »

ಕರ್ಮ-ಉಪಾಕರ್ಮ
September 1, 2008 - 5:56pm — shreedevikalasadಮೊನ್ನೆ ಹುಣ್ಣಿಮೆಯಂದು
ಅಪಾದಮಸ್ತಕ
ದಳದಳನೆ ಇಳಿವ ನೀರ ಹನಿ
ಅರೆನಿಮೀಲಿತ ನಯನ
ವೇದ-ನಾದ-ನಿನಾದ
ಮಂಡಿ ಏರಿದ ಮಡಿ
ತೊಪ್ಪನೆ ತೊಯ್ದುಪ್ಪಿದ
ರೋಮ ರೋಮರಾಶಿ
ವ್ಯೋಮ ತನಕ ಹೋಮ
ಕುಳಿತವರ, ನಿಂತವರ
ಕಾಣದ ಹಲವರ
ಹರಕೆ-ಹಾರೈಕೆ-ಆಶೀರ್ವಾದ.
ಅಭ್ಯಂಜನ, ಉತ್ಸರ್ಜನ, ಉಪಾಕರ್ಮ
***
ಹುಣ್ಣಿಮೆಯ ಮರುದಿನ
ಮುಖಮಾರ್ಜನ ಶಾಸ್ತ್ರ
ಬ್ರಹ್ಮಾಂಡ ದರ್ಶನ ಮುಂದೆ ಓದಿ »

- shreedevikalasad ರವರ ಬ್ಲಾಗ್
- Login or register to post comments
- 168 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
August 27, 2008 - 5:51pm — shreedevikalasadಇವ ಮುಂದೆ ಮುಂದೆ ಸಾಗಿ ಒಂದೊಂದು ತುಣುಕುಗಳನ್ನ ಜೋಡಿಸಿಡಲು ಪ್ರಯತ್ನಿಸುತ್ತಿದ್ದ. ಅಂದರೆ ಆ ಎಲ್ಲ ಒಟ್ಟಾಗಿಸಿ ಒಂದು ಆಕಾರ ಕೊಡುವುದು ಇವನ ಇರಾದೆ. ಹೀಗೆ ಮಾಡುತ್ತಿರುವುದು ಮೊದಲ ಸಲವೇನಲ್ಲ. ನೆನಪಾದಾಗಲೆಲ್ಲ ಅನ್ನುವುದಕ್ಕಿಂತ ಇವನದು ಇದೇ ಖಯಾಲಿ. ಆಕಾಶಕ್ಕೆ ಮುಖ ಮಾಡಿ ಏರಲಾಗದ ಏಣಿಗಾಗಿ ಹಂಬಲಿಸುವುದು. ಅಚ್ಚಾಗದ ಚಿತ್ರವನ್ನು ಮತ್ತೆ ಮತ್ತೆ ಬಿಡಿಸುವುದು. ಸುರುಳಿ-ಸುರುಳಿಯಾಗಿ ಗಂಟುಹೊಸೆದುಕೊಳ್ಳುವ ಬಣ್ಣಗಳ ಮೊಂಡಾಟ ಬಿಡಿಸುವುದು.
ಒಂದು-ಒಂದೇ ಬಾರಿ ಇವನಂದುಕೊಂಡಂತೆ ಅದೊಂದು ಅದ್ಭುತ ಕಲಾಕೃತಿಯಾಗಿಬಿಟ್ಟರೆ, ಅದಕ್ಕೊಂದು ಚೌಕಟ್ಟು ಕಟ್ಟುವುದು ಹೆಚ್ಚು ಹೊತ್ತಿನ ಕೆಲಸವಲ್ಲ. ಯಾಕೆಂದರೆ ಚೌಕಟ್ಟು ಕಟ್ಟುವುದು, ಕಟ್ಟಿಕೊಳ್ಳುವುದು ಎರಡೂ ಇವನಿಗಿಷ್ಟ. ಇಷ್ಟಪಟ್ಟದ್ದು ಎಂದೂ ಕಷ್ಟದ ಕೆಲಸವಲ್ಲವಲ್ಲ? ಮುಂದೆ ಓದಿ »

ಕಾಮನಬಿಲ್ಲ್...!
August 22, 2008 - 7:05pm — shreedevikalasadಗಣಿತ ಕ್ಲಾಸು.
ತಲೆತಗ್ಗಿಸಿ ಇಂಚುಪಟ್ಟಿ
ಅಂಚಿಗೆ ಗೆರೆ ಎಳೆದ ನೆನಪು.
ಹೆಂಚಿನ ಸಂದಿಯಿಂದ
ಅವ ಕುಕ್ಕುತ್ತಿದ್ದ ಕಣ್ಣ.
ಅದೇ ಇಂಚುಪಟ್ಟಿಯಿಂದ
ಪೆಟ್ಟು ಕೊಡಹೋದವಳಿಗೆ
ಬೀಸಿದ್ದ ಬಣ್ಣ
ಅರಳಿತ್ತು ಅವಳ ಕಣ್ಣ.
ಕೆಮ್ಮಿದ್ದು
ತುಸು ಹಗುರವಾಗಿಯೇ.
ಅರೆರೆ! ಎನ್ನುವ ಮೊದಲೇ
ಅರೆಕ್ಷಣದಲ್ಲಿ
ಮಿಂಚಿ ಮೀನವಾದವು
ಬಣ್ಣಬಣ್ಣದ ನೀರ್ಬಿಂದು ಮುಂದೆ ಓದಿ »


RSS: