srinivasc (ಬ್ಲಾಗ್ ಬರಹಗಳು)
ತಪ್ಪು ಯಾರದ್ದು?
April 7, 2008 - 11:52am — srinivascಹೊಗೇನಕಲ್ ನೀರಾವರಿ ಕಾಮಗಾರಿಯ ಕುರಿತಾಗಿ ನಟ ಶ್ರೀ ರಜನಿಕಾಂತ್ ಅವರು ಐದು ಕೋಟಿ ಜನ ಕನ್ನಡಿಗರಿಗೆ ಒದೆಯಬೇಕು ಎಂದು ಹೇಳಿದ್ದಾರೆ ಎಂದು ನಮ್ಮ ಸೋ ಕಾಲ್ಡ್ ರಾಜಕಾರಣಿಗಳು ಮತ್ತು ಹಿರಿಯರೆನಿಸಿಕೊಂಡ ಮೇಧಾವಿ ಚಲನಚಿತ್ರ ನಟರು ರಜನಿಕಾಂತ್ ಅವರನ್ನು ಕನ್ನಡಿಗರ ಕ್ಷಮೆ ಕೇಳಬೇಕೆಂದು ಕೇಳುತ್ತಿರುವುದು ಹೇಸಿಗೆಯ ಸಂಗತಿಯಾಗಿದೆ. ಮುಂದೆ ಓದಿ »

ಅಂತ್ಯಕ್ರಿಯೆ
March 26, 2008 - 3:39pm — srinivasc``ನನಗ್ಯಾಕೋ ಅವನು ಹೋಗುವುದು ಸರಿಯಲ್ಲ ಅನಿಸತ್ತೆ'' ಕಾವೇರಮ್ಮ ಹೇಳಿದರು.
``ಅವನಿನ್ನೂ ಚಿಕ್ಕವನು'' ಹೇಳಿದರು ರಾಮಕ್ಕ. ``ಅವನಿಗೆ ದುಃಖ ಆಗ್ತದೆ, ಬಹುಶಃ ಅವನು ಏನಾದ್ರೂ ತಗಾದೆ ತೆಗೆದರೂ ತೆಗೆಯಬಹುದು. ಮತ್ತೆ ಮಕ್ಕಳು ಅಂತ್ಯಕ್ರಿಯೆಗೆ ಬರೋದು ರತ್ನಾಕರ ಮಾವ ಸಹಿಸೋದಿಲ್ಲ.'' ಮುಂದೆ ಓದಿ »

- srinivasc ರವರ ಬ್ಲಾಗ್
- Login or register to post comments
- 232 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಗೊಂದಲ
March 26, 2008 - 12:51pm — srinivasc
ನನ್ನಾವರಿಸಿದ ಮೌನಕೇನು ಗೊತ್ತು
ನನ್ನ ನೋವುಗಳು?
ಅದು ಹಾಗೇ ಮೌನವಾಗಿದೆ
ನನ್ನ ಪಾಡಿಗೆ ನನ್ನ ಬಿಟ್ಟು
ಮತ್ತೆ ಮೊಗದಲಿ ನಗೆಬುಗ್ಗೆ
ಬರುವುದೋ ಎಂದು ಕಾದಿಹ
ನನ್ನೀ ಮನಕೆ ಮತ್ತೆ
ಮೌನವೇ ಉತ್ತರ ನೀಡಬೇಕಿದೆ
ಮನಸಿಗೊಂದು ಹೊಸ ದಾರಿ ಹುಡುಕುವ
ಮೌನದಲ್ಲೊಂದು ಮೌನ
ಹೆಸರೇಕೆ ನೋವಿಗೆ? ಮೌನಕೆ?
ಮೌನ ಸಹಿಸಲಾಗದ ಮನಸಿಗೆ?
ಮಾತು ಮೌನಕೆ
ಮೌನ ಮಾತಿಗೆ ಬೇಕಿದೆ ಮುಂದೆ ಓದಿ »

- srinivasc ರವರ ಬ್ಲಾಗ್
- Login or register to post comments
- 226 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಪ್ರಶ್ನೆ - ಉತ್ತರ
June 28, 2007 - 5:17pm — srinivascಧಿಗ್ಗನೆ ತಿರುಗಿ ಕೇಳಿದ ಪ್ರಶ್ನೆಗೆ
ಉತ್ತರ ಏನು ನೀಡಲಿ
``ಬೇಗ ಬೇಗ'' ಎಂದು ಒತ್ತಾಯಿಸಿದರೆ
ಮತ್ತಿನ್ನೇನು ಹೇಳಲಿ
ಯಾಕೀ ಪ್ರಶ್ನೆ? ನಾನೇ
ಕೇಳಿದೆ ಮರು ಪ್ರಶ್ನೆ
ಪ್ರಶ್ನೆಗೆ ಪ್ರಶ್ನೆ ಅಲ್ಲ ಉತ್ತರ
ನನ್ನ ಪ್ರಶ್ನೆಗೇನು ಉತ್ತರ
ಮತ್ತದೇ ಪ್ರಶ್ನೆ
ನೀನು ಯಾರು?
ಅರೇ ನಾನು ನಾನೇ ಇನ್ಯಾರು ಆಗಲು ಸಾಧ್ಯ?
ಪ್ರಶ್ನೆ ಬೇಡ ಬೇಕು ಉತ್ತರ ಮುಂದೆ ಓದಿ »


RSS: