vedumaani (ಬ್ಲಾಗ್ ಬರಹಗಳು)
ನಕ್ಷತ್ರ ದೆಸೆ
October 13, 2007 - 1:26pm — vedumaaniಅದೊಂದು ನಕ್ಷತ್ರ. ಅನಂತವಾದ ವಿಶ್ವದ ಯಾವುದೋ ಮೂಲೆಯಲ್ಲಿ, ಕ್ಷಮಿಸಿ, ವಿಶ್ವಕ್ಕೆ ಮೂಲೆಯೆಂಬುದೇ ಇಲ್ಲವಲ್ಲ; ವಿಶ್ವದ ಯಾವುದೋ ಒಂದು ಕಡೆ ಹುಟ್ಟಿಕೊಂಡಿತ್ತು. ಅದರ ಹುಟ್ಟಿನಲ್ಲಿ ವಿಶೇಷವೇನಿರಲಿಲ್ಲ, ಬೇರೆಲ್ಲಾ ನಕ್ಷತ್ರಗಳು ಹುಟ್ಟಿದ ರೀತಿಯಲ್ಲೇ ಇದೂ ಹುಟ್ಟಿತ್ತು. ಅದು ಹುಟ್ಟಿದಾಗ ಹೆಸರು ಇಡುವವರು ಯಾರೂ ಇರಲಿಲ್ಲವೆಂದೋ ಏನೋ ಅದಕ್ಕೆ ಹೆಸರಿರಲಿಲ್ಲ. ಮುಂದೆ ಓದಿ »

- vedumaani ರವರ ಬ್ಲಾಗ್
- Login or register to post comments
- 250 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮುಯ್ಯಿಗೆ ಮುಯ್ಯಿ
September 13, 2007 - 12:57pm — vedumaaniಮಗು ಬಿತ್ತು. ಅಳತೊಡಗಿತು. ಅಮ್ಮ ಓಡಿ ಬಂದಳು, ಮಗುವನ್ನು ಎತ್ತಿಕೊಂಡು ಮುದ್ದಿಸತೊಡಗಿದಳು.
"ಅಮ್ಮಾ... ಆಯೀ" ಎಂದು ಅಳುತ್ತಿತ್ತು ಮಗು.
"ಆಯಿ ಆಯ್ತಾ ನನ್ನ ಬಾಬುಗೇ... ಎಲ್ಲಿ ಆಯ್ತು ನೋಡುವ ತೋರಿಸು" ಎಂದಳು ಅಮ್ಮ
ಮಗು ತಲೆ ಮುಟ್ಟಿ ತೋರಿಸಿತು. ಅಮ್ಮ ಮಗುವಿನ ತಲೆಗೆ ಮುತ್ತಿಟ್ಟಳು, "ಆಯಿ ಹೋಯ್ತು" ಅಂದಳು ಮುಂದೆ ಓದಿ »

ಜನಪದ ತ್ರಿಪದಿಗಳು
August 3, 2007 - 1:25pm — vedumaaniಪದವಿ ಓದುತ್ತಿದ್ದಾಗ ಕನ್ನಡ ಭಾಷಿಕದಲ್ಲಿ ಜನಪದ ತ್ರಿಪದಿಗಳು ಎಂಬ ಪಾಠವಿತ್ತು. ಅದರಲ್ಲಿ ಒಂದು ತ್ರಿಪದಿ ಹೀಗಿತ್ತು:
"ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ
ಕೂಸು ಕಂದವ್ವ ಒಳ ಹೊರಗ ಆಡಿದರ
ಬೀಸಣಿಗಿ ಗಾಳಿ ಸುಳಿದಾವ" ಮುಂದೆ ಓದಿ »

ನಾವು ಭಾರತೀಯರು ಏಕೆ ಹೀಗೆ?
July 20, 2007 - 1:31pm — vedumaaniಇತ್ತೀಚೆಗೆ ಬೀದಿಯಲ್ಲಿ ನಡೆಯುತ್ತಿದ್ದಾಗ ಮನೆಯೊಂದರಿಂದ ತಾಯಿ ಮಗನಿಗೆ ಕೂಗಿ ಹೇಳುವ ಮಾತು ಕೇಳಿ ಬಂತು.."ಜೂಲೀನ ಹೊರಗಡೆ ಕರ್ಕೊಂಡು ಹೋಗಿ ಬಾ, ಇಲ್ಲಾಂದ್ರೆ ಮನೆ ಒಳ್ಗೇ ಗಲೀಜು ಮಾಡುತ್ತೆ" ಆ ಹುಡುಗ ನಾಯಿಯನ್ನು ರಸ್ತೆ ಬದಿಯಲ್ಲಿ ’ಗಲೀಜು’ ಮಾಡಿಸಲು ಕರೆದುಕೊಂಡು ಹೊರಟ. ಮುಂದೆ ಓದಿ »

- vedumaani ರವರ ಬ್ಲಾಗ್
- Login or register to post comments
- 325 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಚಂಡೀಗಢದ ಮೂಲೆಯಲ್ಲಿ ಕನ್ನಡದ ಸವಿ
July 8, 2007 - 10:44pm — vedumaaniಚಂಡೀಗಢದ ಸೆಕ್ಟರ್ ೪೭-ಡಿ. ಹೋಟೆಲ್ ಹೆಸರು "ಸೌತ್ ರತ್ನಮ್". ಹೊರಗೆ ದೊಡ್ಡದಾದ ತಿರುಪತಿ ವೆಂಕಟೇಶ್ವರನ ಚಿತ್ರ. ಆಂಧ್ರದವರಿರಬೇಕೆಂದುಕೊಂಡೆ. ಒಳ ಹೊಗ್ಗಿ ಕುಳಿತು ಸುತ್ತಲೂ ನೋಡಿದಾಗ ಕಂಡದ್ದು ಚಿಕ್ಕದಾದರೂ ಚೊಕ್ಕದಾದ ಹೋಟೆಲ್. ಸರ್ದಾರ್ಜೀಗಳು ದೋಸೆ, ಇಡ್ಲಿ ಮೆಲ್ಲುವ ದೃಶ್ಯ. ಸ್ವಲ್ಪ ಸಮಯದ ನಂತರ ಸಂಗೀತ ತೇಲಿಬರತೊಡಗಿತು.. ಮುಂದೆ ಓದಿ »



RSS: