ಉಸಿರೇ ಉನ್ನತ ಬಹುಮಾನ !
ಕವನ
ಅಸಮಾನ್ಯ ನಿಗೂಢ ನಮ್ಮ ಬಾಳು
ಅನುಕ್ಷಣವೂ ಕೌತುಕತೆಯ ಬೀಡು
ಉಸಿರು ಉಸಿರಲಿ ಬಾಳ ಜಯ
ತಿಳಿಯಿರಿ ಉಸಿರೇ ಅತ್ಯುನ್ನ ಪುರಸ್ಕಾರ.
ಚಾರಿತ್ರಿಕ ನೆನ್ನೆಯ ಮರೆತು
ನಿಗೂಢ ನಾಳೆಯ ಆತoಕ ಬಿಟ್ಟು
ಸಿದ್ಧಿಸಬೇಕು ವರ್ತಮಾನ ಪರಿಸರದಲಿ
ಬದುಕಿಗೆ ಇದೇ ದೊಡ್ಡ ಬಹುಮಾನ.
ಮನವನು ಇoದಿನ ಕಾರ್ಯದಲಿ ಕೆoದ್ರೀಕರಿಸಿ
ಅಳಿದ ಭೂತ ಕಾಲ
ಹುಟ್ಟಿರದ ಭವಿಷ್ಯ
ನಿರಾಸೆ ಭೀತಿಗೆ ಅಲುಗಾಡದೆ
ಮುನ್ನಡೆಯುವುದೇ ಯೋಗ ಸಮಾಧಿ
ನಮ್ಮನು ನಾವೇ ಅರಿತುಕೊಳ್ಳುವ ಪರಿ.
ಶ್ರೀ ನಾಗರಾಜ.
- Log in to post comments