ತೆರೆ ಕಣ್ಣೊಳಗಿನ ಕಣ್ಣು !
ಕವನ
ಅಲ್ಲಿ ಇಲ್ಲಿ ಹುಡುಕುವುದೇಕೆ
ಓ ಕಣ್ಣೆ !
ಹಚ್ಚಹಸಿರ ಹೊಸ ವಾತಾವರಣ
ನೆಮ್ಮದಿ ಶಾoತಿಯ ಆಶಾಕಿರಣ
ಪ್ರೀತಿ ಶ್ರದ್ಧೆಯ ಸಿಹಿ ಹೂರಣ.
ಓ ಕಣ್ಣೆ !
ಬದಿಗೆ ಸರಿಸು ಆ ಪರದೆ
ಭಯ ಭೀತಿ ಭ್ರಮೆ
ಮದ ಮೋಹ ಮಾತ್ಸರ್ಯ ಮುಸುಕು
ಕತ್ತರಿಸು ಕೋಪ ತಾಪ ಆತoಕ ಜಾಲ
ಮೂಡಲಿ ದಿವ್ಯ ಚೇತನ ಕಾoತಿ
ಕಣ್ಣೊಳಗಿನ ಕಣ್ಣಲಿ
ಆತ್ಮ ಸಾಕ್ಷಾತ್ ಕಾರದಲಿ.
ಶ್ರೀ ನಾಗರಾಜ
- Log in to post comments