ವಿಧ: Basic page
October 04, 2007
ಪಾಪು ಮತ್ತು ಚಂದಮಾಮ
**************
ಅಮ್ಮಾ ನಂಗೆ ತಿನ್ನಿಸ್ತೀಯಾ ನೀನು ಮಮ್ಮೂನಾ?
ತೋರಿಸ್ತೀಯಾ ಮೇಲೆ ನಗುವ ಚಂದಮಾಮನ್ನಾ?
ಚಂದಮಾಮ ಮಮ್ಮು ತಿನ್ನಲು ಹಠ ಮಾಡ್ತಾನಾ?
ಆಗ ಅವನಿಗೆ ತೋರಿಸುವುದು ಯಾವ ಮಾಮನ್ನಾ?
ಕಾಣಿಸಲ್ಲ ಯಾಕೆ ಅವನ ಕಣ್ಣು ಕಿವಿ ಕೈ ಕಾಲು?
ತುಳಿವನೇ ಅವನು ನನ್ನ ಹಾಗೆ ಪುಟ್ಟ ಸೈಕಲ್ಲು?
ಆಡಲಿಕ್ಕೆ ಬರುವನೇ ಅವನು ನನ್ನ ಸಂಗಡ?
ಬರೆಯಲೆ ಈಗಲೆ ಅವನಿಗೆ ಒಂದು ಪುಟ್ಟ ಕಾಗದ !
-೦-
(ಇದು ನನ್ನ ಮಕ್ಕಳ ಇಷ್ಟದ ಪದ್ಯ. ಸ್ವಲ್ಪ "ಬ್ರಹ್ಮ ನಿಂಗೆ ಜೋಡಿಸ್ತೀನಿ"…
ವಿಧ: ಚರ್ಚೆಯ ವಿಷಯ
October 03, 2007
ಶ್ರೀವತ್ಸ ಜೋಶಿ ಅವರ ನಳಪಾಕ
ರಾಮ ಇದ್ದನಾ ರಾಮಾಯಣ ಆದದ್ದು ಹೌದಾ ಎಂದೆಲ್ಲ ಹೇಗೆ ಪ್ರಶ್ನಿಸಬಾರದೋ ಹಾಗೆಯೇ ರಾಮಾಯಣಕಾಲದಲ್ಲಿ ಸೊಳ್ಳೆಗಳಿದ್ವಾ ರಾಮನಿಗೆ ಕಚ್ತಿದ್ವಾ ಎಂದೂ ಪ್ರಶ್ನಿಸಬಾರದು,
ವಿಧ: ಚರ್ಚೆಯ ವಿಷಯ
October 03, 2007
ಈಗೀಗ Dell, HP ಎಲ್ಲ ಲಿನಕ್ಸ್ ಅನುಷ್ಟಾಪಿತವಾದ ಲ್ಯಾಪ್ ಟಾಪ್ ಗಳನ್ನು ಮಾರುತ್ತಿದ್ದಾರಂತೆ.
ಇದರ ವಿಚಾರ ಗೊತ್ತಿದ್ದರೆ ಹೇಳಿ. ಬೆಂಗಳೂರಿನಲ್ಲಿ ಇಂತಹ ಲ್ಯಾಪ್ ಟಾಪ್ ಗಳು ಲಭ್ಯ ಇದೆಯೇ? ಎಲ್ಲಿ ಕೊಳ್ಳಬೇಕು ಎನ್ನುವ ಮಾಹಿತಿ ಇದ್ದರೆ ತಿಳಿಸಿ.
ಧನ್ಯವಾದಗಳೊಂದಿಗೆ
ಅರವಿಂದ
ವಿಧ: ಬ್ಲಾಗ್ ಬರಹ
October 03, 2007
"ಬ್ರಾಹ್ಮೀಮುಹೂರ್ತದಲ್ಲಿ ಏಳುವುದು ಆರೋಗ್ಯಕ್ಕೆ ಒಳ್ಳೆಯದು." ಇದು ರಾಮನ ಕತೆಯಂತೆ ಕಟ್ಟುಮಾತು.ನಿದ್ರೆ ಬರದ ಮುನಿಗಳು ಬರೆದುದು. ಕಂಪ್ಯೂಟರ್,ಟಿ.ವಿ.ಇಲ್ಲದ ಆ ಕಾಲದಲ್ಲಿ ಜನ ಬೇಗನೆ ಮಲಗುತ್ತಿದ್ದರು.ಸಹಜವಾಗಿ ಬೇಗನೆ ಏಳುತ್ತಿದ್ದರು.ಎದ್ದ ಮೇಲೆ ಮಾಡಲು ಬೇರೇನೂ ಕೆಲಸವಿಲ್ಲ,ವ್ಯಾಯಾಮ,ಧ್ಯಾನ,ಪೂಜೆ ಇತ್ಯಾದಿ ಮಾಡುತ್ತಾ ಬೆಳಗಾಗುವುದನ್ನು ಕಾಯುತ್ತಿದ್ದರು.ಪ್ರಾಣಿಪಕ್ಷಿಗಳೂ ಸಹ ಬೇಗನೆ ಏಳುವುದು.ಈ ಕಾಲದವರು ಸೋಮಾರಿಗಳು ಸಮಯ ಏಳಾಗದೇ ಏಳುವುದಿಲ್ಲ ಎನ್ನುತ್ತಾರೆ. ಅವು ಸಂಜೆ ಆರರ…
ವಿಧ: ಬ್ಲಾಗ್ ಬರಹ
October 03, 2007
ಈ ಬಾರಿಯ ವಿಚಿತ್ರಾನ್ನದಲ್ಲಿ, ಶ್ರೀವತ್ಸ ಜೋಷಿಯವರು ಸೊಳ್ಳಾಯಣ ವನ್ನು ಮುಂದಿಟ್ಟಿದ್ದಾರೆ. ರಾಮ ಇದ್ದದ್ದು ನಿಜವೋ ಸುಳ್ಳೋ, ಆದರೆ ರಾಮಾಯಣ ಇರುವುದಂತೂ ನಿಜ. ರಾಮನನ್ನು ಕಂಡವರು ಈಗ ಯಾರೂ ಇಲ್ಲ. ಆದರೆ, ಸೊಳ್ಳೆಗಳನ್ನು ಕಾಣದವರುಂಟೇ? ಇದ್ದನೋ ಇಲ್ಲವೋ ತಿಳಿಯದ ಅಂತಹ ರಾಮನಂತಹ ರಾಮನಿಗೆ, ವಾಲ್ಮೀಕಿ ೨೪೦೦೦ ಶ್ಲೋಕಗಳ ರಾಮಾಯಣವನ್ನು ರಚಿಸಿದ ಮೇಲೆ, ಸರ್ವವ್ಯಾಪಿ ಸೊಳ್ಳೆಗಳ ಮೇಲೆ್ ಒಂದು ಮಹಾಕಾವ್ಯ ಇಲ್ಲದಿದ್ದರೆ, ಒಂದು ಕಾದಂಬರಿ ಇಲ್ಲದಿದ್ದರೆ, ಒಂದು ಅಂಕಣಬರಹವನ್ನಾದರೂ ಬರೆಯಬೇಕೆಂಬ ಬಯಕೆ…
ವಿಧ: ಬ್ಲಾಗ್ ಬರಹ
October 03, 2007
ಈ ಬಾರಿಯ ವಿಚಿತ್ರಾನ್ನದಲ್ಲಿ, ಶ್ರೀವತ್ಸ ಜೋಷಿಯವರು ಸೊಳ್ಳಾಯಣ ವನ್ನು ಮುಂದಿಟ್ಟಿದ್ದಾರೆ. ರಾಮ ಇದ್ದದ್ದು ನಿಜವೋ ಸುಳ್ಳೋ, ಆದರೆ ರಾಮಾಯಣ ಇರುವುದಂತೂ ನಿಜ. ರಾಮನನ್ನು ಕಂಡವರು ಈಗ ಯಾರೂ ಇಲ್ಲ. ಆದರೆ, ಸೊಳ್ಳೆಗಳನ್ನು ಕಾಣದವರುಂಟೇ? ಇದ್ದನೋ ಇಲ್ಲವೋ ತಿಳಿಯದ ಅಂತಹ ರಾಮನಂತಹ ರಾಮನಿಗೆ, ವಾಲ್ಮೀಕಿ ೨೪೦೦೦ ಶ್ಲೋಕಗಳ ರಾಮಾಯಣವನ್ನು ರಚಿಸಿದ ಮೇಲೆ, ಸರ್ವವ್ಯಾಪಿ ಸೊಳ್ಳೆಗಳ ಮೇಲೆ್ ಒಂದು ಮಹಾಕಾವ್ಯ ಇಲ್ಲದಿದ್ದರೆ, ಒಂದು ಕಾದಂಬರಿ ಇಲ್ಲದಿದ್ದರೆ, ಒಂದು ಅಂಕಣಬರಹವನ್ನಾದರೂ ಬರೆಯಬೇಕೆಂಬ ಬಯಕೆ…
ವಿಧ: Basic page
October 03, 2007
( ಮೂಲ - ಇಂಗ್ಲೀಷ್ನಲ್ಲಿ ಶ್ರೀ ಎಸ್. ಆರ್.ಪಂಢರಿನಾಥ್ ರವರ ಲೇಖನದ ಭಾವಾನುವಾದ)
- ನವರತ್ನ ಸುಧೀರ್
ಪಂದ್ಯ ಮುಗಿದ ನಂತರ, ರವಿ ಶಾಸ್ತ್ರಿ ಪ್ರೆಸೆಂಟೇಷನ್ ಸಮಯದಲ್ಲಿ ಧೋಣಿಯನ್ನು ಸಂದರ್ಶನಕ್ಕಾಗಿ ಆಮಂತ್ರಿಸುತ್ತಾರೆ.
ರ: ಧೋಣಿ, ವಿಶ್ವ ಕಪ್ ಗೆದ್ದ ನಿಮಗೂ ನಿಮ್ಮ ತಂಡಕ್ಕೂ ಅಭಿನಂದನೆಗಳು. ನೀವುಗಳು ನಿಜಕ್ಕೂ ಉಗುರುಕಚ್ಚುವಷ್ಟು
ರೋಚಕ ರೀತಿಯಲ್ಲಿ ಪಂದ್ಯ ಗೆದ್ದಿರಿ. ನಿಮ್ಮ ಸಂತೋಷವನ್ನು ನಮ್ಮೊಡನೆ ಹಂಚಿಕೊಳ್ಳಿ ಬನ್ನಿ!”
ಧೋ: ಧನ್ಯವಾದ ರವಿ, ಪಂದ್ಯದ ಕೊನೆ…
ವಿಧ: Basic page
October 03, 2007
ಬಾಲ್ಯದ ಸೊಗಸು
**********
ಹೋಗದೇಕೆ ನನ್ನ ಬದುಕು
ಮರಳಿ ಮತ್ತೆ ಬಾಲ್ಯಕೆ ?
ಹೊಳೆಯದೇಕೆ ಚುಕ್ಕಿ ಬೆಳಕು
ಮುಗ್ಧ ಮನದ ಲಾಸ್ಯಕೆ?
ಅರಳದೇಕೆ ಮೊಲ್ಲೆ ಮೊಗ್ಗು
ಜಡೆಗೆ ಮಾಲೆಯಾಗಲು?
ನುಡಿಯದೇಕೆ ತಾಯಿ ಕೊರಳು
ಜೋಜೋ ಲಾಲಿ ಹಾಡಲು?
ಉಲಿಯದೇಕೆ ಗೆಜ್ಜೆ ಪಲುಕು
ಊರಿ ನಡೆವ ಹೆಜ್ಜೆಗು?
ಒಲಿಯದೇಕೆ ಮಮತೆ ಮೆಲುಕು
ಹಠವ ಹಿಡಿದ ರಚ್ಚೆಗು?
ರುಚಿಸದೇಕೆ ತಿಂಡಿ ಹಲವು
ತಾಯಿ ಗುಟುಕ ಸೊಗಸಿಗೆ?
ಚಿಗುರದೇಕೆ ಮತ್ತೆ ಚೆಲುವು
ಸುಕ್ಕು ಬಿದ್ದ ಬದುಕಿಗೆ?
-೦-
ವಿಧ: Basic page
October 02, 2007
ಗೆಳೆಯರೆ, ತಂತ್ರಜ್ಞಾನದ ಸಾಧ್ಯತೆಗಳಿಂದಾಗಿ ಜಗತ್ತು ಕಿರಿದಾಗುತ್ತಿದೆ. ಕನ್ನಡ ಈಗ ಕರ್ನಾಟಕದಲ್ಲಷ್ಟೇ ಅಲ್ಲದೆ ಸಾಮಾನ್ಯ ಕನ್ನಡಿಗನು ಕೇಳಿಯೂ ಅರಿಯದ ಅನೇಕ ದೇಶಗಳಲ್ಲಿ ಅನುರಣಿಸುತ್ತಿದೆ. ಅಂತರ್ಜಾಲದ ಮೂಲಕ ಕನ್ನಡ ವಿಶ್ವಾತ್ಮಕ ದೇಶ ಭಾಷೆಯೂ ಆಗಿಬಿಟ್ಟಿದೆ. ಈ ಪ್ರಕ್ರಿಯೆಗಳು ತೆರೆದಿಟ್ಟಿರುವ ಸಾಧ್ಯತೆಗಳ ಜತೆ ಜತೆಯಲ್ಲೇ ಕನ್ನಡ ಭಾಷೆ, ಅದರ ಅಕ್ಷರಗಳಿಗಿರುವ ಅನನ್ಯತೆಯನ್ನು ಕಿತ್ತುಕೊಳ್ಳುವ ಪ್ರಯತ್ನಗಳೂ ಚಾಲನೆಯಲ್ಲಿವೆ. ಇದಕ್ಕೆ ಉತ್ತಮ ಉದಾಹರಣೆ ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಆಪರೇಟಿಂಗ್…
ವಿಧ: Basic page
October 02, 2007
ಆಕ್ಟೋಬರ್ ತಿಂಗಳ, 'ಮಯೂರ,' ಮಾಸಪತ್ರಿಕೆಯಲ್ಲಿ " ವಿಹಾರಿ" ಯವರು ಬರೆದ ಲೇಖನ, ಇಂದಿಗೆ ಬಹುಪ್ರಸ್ತುತವಾದ ಲೇಖನ. [ಪುಟ- ೧೨೨.] ಓದುಗರ ಗಮನಕ್ಕಾಗಿ, ಅದನ್ನು ಮತ್ತೆ ಪ್ರಸ್ತುತ ಪಡಿಸುತ್ತಿದ್ದೇನೆ.
ಕೆಳಗಿನ ವಿಶಿಷ್ಟ ಕವನವನ್ನು ಬರೆದವರು, ನಮ್ಮ ಪ್ರಖ್ಯಾತ ನಾಟಕಕಾರರಾದ ಕೈಲಾಸಂರವರು. ನಾಟಕಗಳನ್ನೇ ಅತಿಯಾಗಿ ಬರೆದ ಅವರು, ಕವನವನ್ನು ಬರೆದಿರುವುದು ಅಪರೂಪ. ಅದನ್ನು ಹೆಚ್ಚಾಗಿ ಯಾರೂ ಗಮನಿಸಿಲ್ಲ. ಆದರೆ, 'ವಿಹಾರಿ' ಯವರ ಕಣ್ಣಿನಿಂದ ಅದು ತಪ್ಪಿಸಿಕೊಂಡುಹೋಗಿಲ್ಲ. ನಮ್ಮಲ್ಲಿ ಕೆಲವರು,…