ಮರ ಹೇಳಿದ್ದು.....

ಮರ ಹೇಳಿದ್ದು.....

 

   ಗೆಳೆಯರೇ.....!
 ಮಾನವೀಯತೆ ಮರೆತು
 
  ಹೊತ್ತೊಡಲ ಬಂಜೆಯಾಗಿಸುವ
   ಛಲವೇಕೆ ?

    ಶುದ್ಧುಸಿರು,ಹಸಿರು ಬೆಳೆ
    ನೀಡುವ ನನ್ನೊಡಲಿಗೆ
   ಕೊಡಲಿಯೇಟು  ಹಾಕುವ
   ಕಟುಕರಾದಿರೇಕೆ ?
    ಸಾಯದಿರಿ...ಸಾಯಿಸದಿರಿ !
   
    ತಾಯ್ ತಲೆಯ ಬೋಳಾಗಿಸಿ
    ವಿಧವೆಯ ಪಟ್ಟ ಕಟ್ಟುವ ಹಂಬಲ ಬಿಟ್ಟು
     ನಿಮ್ಮ ಹೊಲದ ಬದಿಯಲ್ಲಾದರೂ
     ಬೆಳೆಯುವ ಅವಕಾಶ ಕೊಡಿ ದಯವಿಟ್ಟು...
 
       (  ಸಂಪದದಲ್ಲಿ  ಮಹಿಳಾ ಸಾಹಿತಿ ಹಾಗೂ ಕವಿಗಳಿಗೆ ದೊರೆಯುತ್ತಿರುವ ಪ್ರೋತ್ಸಾಹಕ್ಕೆ  ಧನ್ಯವಾದ ಅರ್ಪಿಸುವೆ)

Rating
No votes yet

Comments