ಚುಟುಕು

ಚುಟುಕು

ಬರಹ

ಶವ"ಸಂಸ್ಕಾರ"

 
      ಶವ ಸಂಸ್ಕಾರ
      ಬರೀ ದೇಹ ಊಳೂವ ಕ್ರಿಯೆಯಲ್ಲ,
      ಶವವಾಗಿರುವಾತನ ಬದುಕ್ಕಿದ್ದಾಗಿನ ಸಂಸ್ಕಾರ ತಿಳಿಸುವ ಕ್ರಿಯೆಯೂ ಹೌದು!!.
       
ಪ್ರಕೃತಿ-ವಿಕೃತಿ


       ಸುಂದರವಾದ ಕೃತಿ
       ಈ ಪ್ರಕೃತಿ.
       ಇದರ ರಕ್ಷಣೆಯೆ ನಮ್ಮ ಸಂಸ್ಕೃತಿ
       ಆದರೂ ನಾವು ಮಾಡುವುದೆಲ್ಲಾ  ವಿಕೃತಿ
       ಹೀಗೆಯೇ ಸಾಗಿದರೆ ಇದರ ಗತಿ
       ನಮಗೇ ವಿನಾಶ ಕಟ್ಟಿಟ್ಟ ಬುತ್ತಿ
       ನಾವೆನೇ ಮಾಡಿದರೂ,
       ಬರಬೇಕು ನಿಸರ್ಗಕ್ಕೆ ಸುತ್ತಿ-ಸುತ್ತಿ
       ಈಗಲಾದರು ನೋಡಬಾರದೆ ನಾವೆಲ್ಲಾ ಕಣ್ಣೆತ್ತಿ.

ಮನುಜ


       ಓ ಮನುಜ,
       ಖಾಲಿಯಾಯಿತೆ ನಿನ್ನ ಬುದ್ದಿ ಕಣಜ
       ತಿದ್ದಿ-ತೀಡಿ ಬುದ್ದಿ ಹೇಳಿದರೂ ಸಹಜ
       ಲದ್ದಿ ತಿಂದ ಬುದ್ದಿ ಬಿಡನು ಈ 'ಕಲಿ'ರಾಜ
       ಹೇಳುವುದೆಲ್ಲ ಬರೀ ತತ್ವಜ್ಞಾನ ಈ ಸಮಾಜ
       ನಮ್ಮ ಈಗಿನ ಸ್ಥಿತಿಯಲ್ಲೆ ಅಡಕವಾಗಿದೆ..ನುಡಿದದ್ದನ್ನ ನಡೆಸಿದ ನಿಜ!!!