ಸೊಳ್ಳೆ ಸಂಸಾರ

ಸೊಳ್ಳೆ ಸಂಸಾರ

ಬರಹ

ಬೆಂಗಳೂರಿನ M . G .ರೋಡ್ ಬಹುಮಹಡಿಯ  ಕಟ್ಟಡದ ಮುಂದೆ ಇರೋ ಕಂಬದ ಮೇಲೆ ಸುಬ್ಬುಲಕ್ಷ್ಮಿ ,ಸಾವಿತ್ರಿ ,ಸುಲೋಚನ ,ಕಮಲಾಬಾಯಿ ಎಲ್ಲಾ ಕೂತಿರುತ್ತಾರೆ.


ಸುಲೋಚನ: ಅಮ್ಮ ನಾವೆಲ್ಲ ಇಲ್ಲಿ ಏಕೆ ಕೂತಿದ್ದಿವೇ ?.
ಸಾವಿತ್ರಿ: ಪುಟ್ಟ ,ಇನ್ ಏನ್ ಫಿಲಂ ಶುರುವಾಗೊತ್ತೆ ಆಮೇಲೆ ಎಲ್ಲಾ ಒಳಗೆ ಹೋಗೋಣ ! ಆಯ್ತಾ
ಸುಲೋಚನ: ಅಮ್ಮ! ಇದು ಸಿನಿಮಾ ಥಿಯೇಟ್ರ ?
ಸುಬ್ಬುಲಕ್ಷ್ಮಿ: ಹೌದು ! Symphony  talkies (ಎನ್ನುತಿದ್ದಂತೆ , ಟಪಾರ್! ಅಂತ ಸುಬ್ಬುಲಕ್ಷ್ಮಿ ತಲೆಗೆ ಸಾವಿತ್ರಿ ಬೀಸ್ತಾಳೆ . 

                 ಸಾವಿತ್ರಿ ಯೆಲ್ಲರ್ಗಿನ್ನ ದೊಡ್ಡವಳು)
ಸಾವಿತ್ರಿ: ಎಷ್ಟು ಸಲಿ ಹೇಳಲಿಲ್ಲ .. ಈಗ ಇದು ಶಂಕರ್ನಾಗ್ ಚಿತ್ರಮಂದಿರ ಅಂತ, ಆಗಲೇ ಹೆಸರಿಟ್ಟು ತುಂಬಾ ದಿನ ಆಗಿದೆ.  

            ನನ್ಗೆ ಕನ್ನಡ ಬಿಟ್ಟು ಬೇರೆ ಹೆಸರು ಹೇಳಿದ್ರೆ ತುಂಬಾ ಕೋಪ ಬರೋತ್ತೆ.
ಕಮಲಾಬಾಯಿ: ಯಾವಾಗಿಂದ ಈ ಬುದ್ಧಿ ಬಂದಿರೋದು ? (ವ್ಯಂಗ್ಯವಾಗಿ ).
ಸಾವಿತ್ರಿ: ಈ ರೋಡ್ ಎಂಡ್ಅಲ್ಲಿ , ಅದೇ ತಾತಪ್ಪರೋ statue ಇದ್ಯಲ್ಲ ! ಅದ್ರ ಕಳಗೆ ತುಂಬಾ ಜನ ಕೆಂಪು ಹಳದಿ 

            ಪಟ್ಟೇ,ಬಟ್ಟೆ ಕಟ್ಕೊಂದಿರ್ತಾರಲ್ಲ ?  ಅವರ ರಕ್ತ ಹೀರಿದಮೇಲೆ ನನ್ಗೆ ಈ ಬುದ್ದಿ.
ಕಮಲಾಬಾಯಿ:ಓಹೋ ... ಖನ್ನಡ ಓರಾಟಗಾರರ ರಕ್ತ , ಬರೀ ಎಣ್ಣೆ ಮಿಕ್ಷು ! ಅದು ಹೇಗೆ ಹೀರ್ತಿಯೋಮ್ಮ !
ಸಾವಿತ್ರಿ:ಏನೆ ಆಗ್ಲಿ ಬೆಂಗಳೂರ್ನಲ್ಲಿ ಅದರಲ್ಲೂ ಈ ರೋಡ್ ನಲ್ಲಿ ಸ್ವಲ್ಪ ಕನ್ನಡ ಇರೋದೇ ಅವರಿಂದ.
ಸುಲೋಚನ: ಅಮ್ಮ ಈ building ....
ಸುಬ್ಬುಲಕ್ಷ್ಮಿ: Utility ಬಿಲ್ಡಿಂಗ್ ....(ದರ್ಪದಿಂದ)
ಸುಲೋಚನ:  ಅಮ್ಮ ಅಮ್ಮ ನಾವು ಅದ್ರು ಮೇಲೆ ಹೋಗೋಣ ಫುಲ್ ಬೆಂಗಳೂರು ಕಾಣತ್ತೆ !
ಸುಬ್ಬುಲಕ್ಷ್ಮಿ: ನಮ್ಮ ಕೆಪಾಕಿಟಿ ಇರೋದೇ upto 3 floorsu  , ಅದಕ್ಕಿನ ಮೇಲೆ Not Pazibal (ಸಿದ್ರಾಮಪ್ಪನ ಸ್ಟೈಲ್).
ಕಮಲಾಬಾಯಿ:ಲಿಫ್ಟ್ ನಲ್ಲಿ ಹೋಗಬಹುದು ಯಾರಿಗೂ ಗೊತ್ತಾಗೊಲ್ಲ , ಲಿಫ್ಟ್ ನ ಲೈಟ್ ಯಾವಾಗ ಸಾಯ್ತೀನೋ ಅಂತ

                   ಉರಿತಾಯಿದೆ.
ಸಾವಿತ್ರಿ:ಕಡೇ ಅಂತಸ್ತಲ್ಲಿ ಪೋಲಿಸ್ ಕಂಟ್ರೋಲ್ ರೂಂ ಇದೆ ಬೇಕಾದ್ರೆ ಹೋಗೋಣ !
ಕಮಲಾಬಾಯಿ:ಯಾಕೆ ಸಾಯಕ್ಕಾ ?  ಮದ್ಲೆ ಅಲ್ಲಿ ಕೆಲಸ ಇಲ್ಲ .ಇನ್ನು ನಾವ್ ಹೋದರೆ ......
ಎಲ್ಲರು: ಸೊಳ್ಳೆ ಹೊಡಿತಾರೆ !! (ಅಂತ ಜ್ಯೋರಾಗಿ ನಗುತ್ತಾರೆ )
ಸುಲೋಚನ: ಅಮ್ಮ ! ಈ ಥಿಯೇಟರ್ ಗೆ ಏಕೆ ಬರಬೇಕು ಬೇರೆಕಡೆ ಹೋಗೋಕ್ಕೆ ಅಗೊಲ್ಲ್ವ ?
ಸುಬ್ಬುಲಕ್ಷ್ಮಿ:  ಪೆದ್ದು ಮುಂಡೇದೆ ! ಇನ್ ಏನ್ ಶೋ ಟೈಮ್ ಎಲ್ಲಾ ಒಳಗಡೆ ಹೋಗಿ ಸೆಟಲ್ ಆಗ್ತಾರೆ , ಕತ್ಲೇಲಿ attack

                  ಮಾಡಿದ್ರೆ ಯಾರಿಗೂ ನಾವು ಸಿಕ್ಕಾಕೊಳೋಲ್ಲ.
ಸಾವಿತ್ರಿ:ಇಲ್ಲಿ ತೋರ್ಸೋದೆ ಇಂಗ್ಲಿಷ್ ಫಿಲಂಸ್ , ಅದ್ದಿಕ್ಕೆ ನಾವು ಇಲ್ಲಿ ಬಂದಿರೋದು.
ಕಮಲಾಬಾಯಿ: ಅದಪ್ಪ ಕನ್ನಡ ಪ್ರೇಮ ! ನೀನು ನಿಜವಾಗಲು ಕನ್ನಡತಿ ಆದ್ರೆ ಉಮಾ ಥಿಯೇಟರ್ ಗೋ , ಪ್ರಸನ್ನ ಪ್ರಮೋದ್ 

                    ಥಿಯೇಟರ್  ಗೋ ಹೋಗ್ಬೇಕು !
ಸಾವಿತ್ರಿ: ಯಾಕೆ ! ಬಾಯಿಗೆ ಮಣ್ಣ ಹಾಕೊಳಕ್ಕ ? ಅಲ್ವೇ... ಅಲ್ಲಿ ತೋರ್ಸೋದು ಕನ್ನಡ ಫಿಲ್ಮ್, ಯಾವ ನನ್ಮಕ್ಕಳು ಬರ್ತಾರೆ ?
             ಜನಾನೇ ಇರೋಲ್ಲ , ನಾವೇನ್ ಉಪಾಸ ಸಾಯಬೇಕ ? ಈಗಂತೂ ಮಚ್ಚು ಲಾಂಗು ಕಥೆಗಳು. ಆ ಸಿನಿಮಾ

             ನೋಡಿದ್ರೆ ನಮಗೆ ಭಯ ಅಗೊತ್ತೆ. ನಾವು ರಕ್ತ ಕುಡಿಬೇಕಾದ್ರೆ ಕಲರ್ನೋಡ್ತೀವ ?

             ಸ್ಕ್ರೀನ್ ಮೇಲೆ ಬರೀ ರಕ್ತಾನೆ, ಅದು ಕೆಂಪಾಗಿರೋದು ನೋಡಿದ್ರೆ ಊಟನೆ ಸೇರಲ್ಲ ಥೂ !! ವ್ಯಾ ......... ಅ

             ಥಿಯೇಟರ್ ನಲ್ಲಿ ಲಾಸ್ಟ್ ಫಿಲ್ಮ್ ಅಂದ್ರೆ ಮುಂಗಾರು ಮಳೆ. ಫಿಲ್ಮು ೧೦೦ ಡೇಸ್, ನಮಗೆ ಅದು ಗೋಲ್ಡನ್ ಡೇಸ್.

ಆ ಸಮಯಕ್ಕೆ 'ಕೃಷ್ಣವೇಣಿ' ಹಾರಡ್ಕೊಂಡು ಬರ್ತಾಳೆ.


ಕೃಷ್ಣವೇಣಿ: ಎನ್ರೆಮ್ಮ ! ಎಲ್ಲಾ ಇಲ್ ಸೆಟಲ್ ಆಗಿದ್ದಿರ ?
ಕಮಲಾಬಾಯಿ: ಏನೇ ತ್ರಿಪುರ ಸುಂದರಿ ! ಎಲ್ಲಿಂದ ಸವಾರಿ.
ಕೃಷ್ಣವೇಣಿ: ಇವತ್ತು ! really Bad day , ನೈಸ್ ರೋಡ್ ಕಡೇ ಹೋಗಿದ್ದೆ , ಅಲ್ಲಿ ತುಂಬಾ ಜನ ಸೇರಿದ್ರು ಒಳ್ಳೆ deal

               ಅನ್ನ್ಕೊಂಡು ನುಗ್ದೆ . ಜನ ತುಂಬಾ ಕೂಗಾಡತಾಇದ್ರು .ಸೀದಾ ಮುಂದೆ ನಿಂತಿದ್ದ ವ್ಯಕ್ಕ್ತಿಗೆ ಚುಚ್ಚಿದೆ . ನನ್ಮಗಂದು

               ನನ್ನ taste buds ಎಲ್ಲಾ ಎಕ್ಕುಟೋಯಿತು. blood aaa ಅದು ಬರೀ ವಿಷ , ಎಲ್ಲಾ medicine ಮಿಶ್ರಿತ and

               ಸಪ್ಪೆ,  ಆ ಮನುಷ್ಯನು ಸಪ್ಪೆನೇ.ನನ್ನ ಕೊಂಡಿ bend and blunt ಆಗೊಯಿತು. ಸೀದಾ ಸಿಟಿ ಮಾರ್ಕೆಟ್ ಗೆ

               ಹೋದೆ ನಮ್ ಅಮ್ಜದ್ ಅಲಿ ಮುನ್ನವರ್ ಪಾಷ ಹತ್ರ.
ಸುಲೋಚನ: ಅಮ್ಜದ್ ಅಲಿ ಮುನ್ನವರ್ ಪಾಷ ?(ಆಶ್ಚರ್ಯದಿಂದ )
ಕಮಲಾಬಾಯಿ:ಅದೇ ಸಾಣೆ ಹಿಡಿಯೋನು ! ನಮ್ಮವನೇ......  ಗಂಡಸೊಳ್ಳೆ
ಕೃಷ್ಣವೇಣಿ: ಅವನ ಹತ್ರ ಕೊಂಡಿ ಶಾರ್ಪ್ ಮಾಡಿಸ್ಕೊಂಡೆ ! ಅವನು ಹೇಳ್ದ Session ಶುರುವಾಗಿದೆ ತುಂಬಾ ಜನ ಇರ್ತಾರೆ

               ಸೀದಾ ವಿಧಾನ ಸೌಧಕ್ಕೆ ಹೋಗು ಅಂದ. ನಾನ್ ಸೀದಾ ಅಲ್ಲಿಂದಾನೆ ಬರ್ತಿರೋದು.
ಸುಬ್ಬುಲಕ್ಷ್ಮಿ: ಏನ್ ಒಳ್ಳೆ ಡೀಲಾ !
ಕೃಷ್ಣವೇಣಿ: ಅಯ್ಯೋ ! ಒಳಗೆ ಹೋದೆ, ಯಾವೋನೋ ಒಬ್ಬ ದೇವ್ರು ವಿಗ್ರಹ ತರಹ ಕೂತಿದ್ದ , ಪೂಜಾರಿ ತರಹ ಒಬ್ಬ ಎದ್ದು

               ನಿಂತು ಮಾತಾಡ್ತಿದ್ದ . ಇನ್ ಎಲ್ಲರೂ ನಿದ್ದೆ ಮಾಡ್ತಿದ್ರು. ಒಬ್ಬ ಶಿಮೊಗ್ಗ ದವನಂತೆ, ನಾನು ಹೆಣ್ಣು ಸೊಳ್ಳೆ ಅಂತ

               ಗೊತ್ತಾದ ಮೇಲೆ ನನ್ನ ಮೇಲೆ ಅತ್ಯಾಚಾರ ಮಾಡೋಕ್ಕೆ ಪ್ರಯತ್ನ ಪಟ್ಟ. ಅವನಿಂದ ತಪ್ಪಿಸ್ಕೊಂಡೆ.
ಸುಬ್ಬುಲಕ್ಷ್ಮಿ: ಮಿಕ್ಕಿದವರ ರಕ್ತ ಹೀರ್ದೆತಾನೆ ?

ಕೃಷ್ಣವೇಣಿ: ಏನ್ ಸುಡುಗಾಡು , ಅ ಬಡ್ಡಿ ಮಕ್ಳುದು ಚರ್ಮನಾ ! ಟಾರ್ಪಾಲ್ ಟಾರ್ಪಾಲ್,ಎಮ್ಮೆಚರ್ಮಕ್ಕಿನ್ನಾ ಗಟ್ಟಿ.

              ಮತ್ತೆ ನಾನು ಮುನ್ನವರ್ ಪಾಷ ನ ಹತ್ರ ಹೋಗ್ಬೇಕು.
ಸುಲೋಚನ:
ಅಮ್ಮ ಅಣ್ಣನ ವಿಧಾನ ಸೌಧಕ್ಕೆ ಕಳ್ಸಿದ್ರೆ ?
ಸಾವಿತ್ರಿ:ಪುಟ್ಟ ! ರಕ್ತ ಹೀರೋದು ಬರಿ ಹೆಂಗ್ಸ್ರುದು ಕೆಲ್ಸ, ಗಂಡ್ಸ್ರುದಲ್ಲ.

ಶೋ ಟೈಮ್ ಅಯಿತು ಎಲ್ಲಾರು ಥಿಯೇಟರ್ ಒಳಗೆ ನುಗ್ಗುತಾರೆ.