ತಪ್ಪನ್ನು ತಿದ್ದಿದವರಿಗೊಂದು ನಮನ.....

ತಪ್ಪನ್ನು ತಿದ್ದಿದವರಿಗೊಂದು ನಮನ.....

ಬರಹ

 


ಚಿಕ್ಕ ಮಗುವಾಗಿದ್ದಾಗ ನಾನು ಕೊಳಚೆಯಲ್ಲಿ ಆಟ ಆಡುತ್ತಿದ್ದಾಗ ಅಕ್ಕ ಪಕ್ಕದ ಜನ ಬೈಯುತ್ತಿದ್ದರು ಏ ಹೋಗೇ....ಮನೆಗೆ ಹೋಗಿ ಕೈ, ಕಾಲು ಶುಚಿ ಮಾಡ್ಕೊ ಅಂತಾ ಆವತ್ತು ಆ ತಪ್ಪು ತಿದ್ದಿಕೊಳ್ಳದಿದ್ದರೆ ಈವತ್ತೂ ಹಾಗೇ ಇರ್ತಿದ್ದೆ.


ಶಾಲೆಯಲ್ಲಿ ಗುರುಗಳು ಘಳಿಗೆಗೊಮ್ಮೆ ಅವಮಾನಿಸುತ್ತಿದ್ದರು "ಕನ್ನಡ ಬರೆಯೋಕೇ ಬರಲ್ಲಾ" ಅಂತಾ


ಆವತ್ತು ನಾನು ಗುರುಗಳ ಮೇಲೆ ಕೋಪ ಮಾಡಿಕೊಂಡಿದ್ದರೆ...ಈವತ್ತೂ ಹಾಗೆ ಇರ್ತಿದ್ದೆ.


ಅತ್ತೆಯ ಮನೆಯಲ್ಲಿ ತೆಗಳುತ್ತಿದ್ದರು "ಅಡುಗೆಗೆ ಉಪ್ಪು ಖಾರ ಸರಿ ಹಾಕೊಲ್ಲಾ ಅಂತಾ, ಆವತ್ತು ತಿದ್ದಿಕೊಳ್ಳದಿದ್ದರೆ ಈವತ್ತು...ಈವತ್ತೂ ಹಾಗೇ ಇರ್ತಿದ್ದೆ.....


ನೌಕರಿ ಸೇರಿದ ಮೇಲೆ ಮೇಲಧಿಕಾರಿ ಕ್ಷಣ ಕ್ಷಣಕೂ ತಪ್ಪು ಹುಡುಕುತ್ತಿದ್ದರು ಆವತ್ತು ಸಹಿಸಿಕೊಂಡು ಸರಿಪಡಿಸಿಕೊಳ್ಳದಿದ್ದರೆ ಈವತ್ತೂ ಹಾಗೇ ಇರ್ತಿದ್ದೆ....


ತಪ್ಪುಗಳನ್ನು ತಿದ್ದಿಕೊಂಡು ವ್ಯಕ್ತಿತ್ವ ಸರಿಪಡಿಸಿಕೊಳ್ಳುವದರಲ್ಲೇ ದೇವರನ್ನು ಕಂಡುಕೊಳ್ಳ ಬಹುದು.