ಗಣೇಶ ಬಂದ ... ..

ಗಣೇಶ ಬಂದ ... ..

ಬರಹ

 ಪ್ರಸಂಗ 1

ಶಂಕರ ಶಾಸ್ತ್ರೀಗಳು ಪೂಜೆಗೆ ಗಣೇಶನ ತರೋಕ್ಕೆ ಅಂಗಡಿಗೆ ಹೋಗ್ತಾರೆ, ಮಳೆ ಶುರುವಾಗೊತ್ತೆ. ಅಂಗಡಿಯವರು ಎಲ್ಲಾ ಗಣೇಶರನ್ನು ಒಳಗಡೆ ಇಟ್ಟುಬಿಟ್ಟಿರ್ತಾರೆ.ಅ ಏರಿಯ ದಲ್ಲಿ ಇರೋದು ಒಂದೇ ಅಂಗಡಿ ಬಹಳ demand ಇರೊತ್ತೆ. ಗಜಗಾತ್ರದ ಶಂಕರ ಶಾಸ್ತ್ರೀಗಳು ದಸರಾ ಪ್ರೊಸೆಶನ್ ಆನೆ ತರಹ ಬರೋ ಹೊತ್ತಲ್ಲಿ, ಅಂಗಡಿಯವಳು ಮಳೆಯಿಂದ ಕಾಪಾಡಲು ಗಣೇಶರನ್ನು ಒಳಗಿಟ್ಟು ತನ್ನ ಕುಡುಕ , ವೇಸ್ಟ್ ಬಾಡಿ ಗಂಡನಿಗೆ ಜವಾಬ್ದಾರಿ ಕೊಟ್ಟು ಹೊರಡುತ್ತಾಳೆ. ಗಂಡ ಮುನಿಯಂಕಟ ಸದಾ 'ರಿಚ್' ಆಗಿರ್ತಾನೆ.

ಶಾಸ್ತ್ರೀಗಳು ಓಸ ಅಬ್ಬ ಅಂತ ಅಂಗಡಿಗೆ ಕಾಲಿಡ್ತಿರೋಹಾಗೆ, ಶಾಸ್ತಿಗಳು ಹೊಟ್ಟೆಗೆ ಕೈಹಾಕಿ ಮುನಿಯಾ ಎಳೆಯುತ್ತಾನೆ. "ಲೇ ದರಿದ್ರ ಯೆನೋಮಾಡ್ತಾ ಇದಿಯ್ಯ" ಅಂದ್ರು ಶಾಸ್ತಿಗಳು.

ಮುನಿಯ : ಸೆಮ್ಸಿ ! ಅಣೆಸ ಎಲ್ಲಾ ನನ್ನ ಎಂಡ್ತಿ ಒಳಗಡೆ ಇಕ್ಕಿದ್ಲು , ದೊಡ್ಡ ಅಣೆಸ ನ ಮರ್ತವ್ಲೇ ಅಂತ ನಿಮಗೆ ಕೈಹಾಕಿದೆ.

            ಏನ್ ಸಾಮಿ ಮುಕಾಡ ಅಕೊಂಡ್ರೆ ನೀವು ಅಂಗೆ ಕಾಣ್ತೀರ.

ಶಾಸ್ತಿಗಳು: (ಕೋಪದಿಂದ) ಲೇ ನನ್ಗೆ ಗಣೇಶ ಕೊಡೊ !

ಮುನಿಯ: ೩ ಅಡಿದು ಬೇಕೋ ? 6 ಅಡಿದು ಬೇಕೋ ? 1 ಅಡಿದು ಬೇಕೋ ? ಸಾಮಿ

ಶಾಸ್ತಿಗಳು: ಒಂದು ಅಡಿದು !

ಮುನಿಯ : ಕುಂತಿರದೋ , ನಿಂತಿರದೋ ?

ಶಾಸ್ತಿಗಳು: ಕೂತಿರದು

ಮುನಿಯ: ಚಕ್ಕಂ ಬಕ್ಳ ಹಾಕೊಂಡಿರೋದೋ ? ಒಂದು ಕಾಲು ಬಿಟ್ಕೊಂದಿರೋದ.

ಶಾಸ್ತಿಗಳು:ಒಂದು ಕಾಲು ಬಿಟ್ಕೊಂದಿರೋದದೇ ಕೊಡೊ ಪ್ರಾರಬ್ಧ..

ಮುನಿಯ : ಬಲಮುರಿನೋ ? ಎಡಮುರಿನೋ ?

ಶಾಸ್ತಿಗಳಿಗೆ ಕರ್ಪೂರ ಇಟ್ಟು ಬೆಂಕಿ ಹಚ್ಚಿದಹಾಗೆ ಆಯಿತು .

ಶಾಸ್ತಿಗಳು:ಬಲಮುರಿ ಕೊಡೊ ಬೇಕೂಪ್ಹ !

ಮುನಿಯ : ಸೊಂಡ್ಲಲ್ಲಿ ಕಡಬು ಇರೋದೋ ? ಇಲ್ಲದಿರೋದೋ ?

ಶಾಸ್ತಿಗಳು ಅಸಹಾಯಕರಾಗಿದ್ರು , ಗಣೇಶಗಳನ್ನ ಮನೆಯೊಳಗೇ ಇಟ್ಟಿದ್ದ, ಒಳಗಡೆ ತಾವೇ ಹೋಗೋಣ ಅಂದ್ರೆ .' ಯಾರ್ಯಾರೋ ನೋಡಿದ್ರೆ ? ಅಂತ ಸಹನೆ ಇಂದ ಕುಡುಕನ ಮಾತಿಗೆ ಬೆಲೆ ಕೊಡ್ತಿದ್ರು.

ಶಾಸ್ತಿಗಳು: ನೋಡಪ್ಪ ! ಸೊಂಡ್ಲಲ್ಲಿ ಕಡಬು ಇರೋದು ಶ್ರೇಷ್ಠ ! ಅದೇ ಕೊಡು

ಮುನಿಯ : ಸಾಮಿ ! ಸೀಕಡ್ಬು ಇರೋದೋ , ಖಾರದ್ದು ಬೇಕೋ ಸಾಮಿ.

ಶಾಸ್ತಿಗಳು: ನಿನ್ ಪಿಂಡ ಇರೋದು ! ಇದ್ಯಾ ?

ಮುನಿಯ : ಕೋಪ ಮಾಡ್ಕೋಬೇಡಿ ಸಾಮಿ ! ನೀವು ಗಿರಾಕಿ ಅಲ್ವ ನಿಮಗೆ ಸರಿಯಾದ ಗಣೇಶ ಕೊಟ್ಟರೆ ನಮಗೂ ಖುಷಿ.

ಶಾಸ್ತಿಗಳು:ಗಣೇಶ ಸೀಕಡ್ಬು ತಿನ್ನೋದು, ಖಾರ ಯಾವತ್ತ್ತು ತಿನ್ನೋಲ್ಲ , ಸುಡುಗಾಡು ! ಸೀಕಡ್ಬು ಇಟ್ಟುಕೊಂಡಿರೋದ್ದನ್ನೇ ಕೊಡಯ್ಯ!

ಮುನಿಯ :ಸಾಮಿ ! ಇಲಿ ಇರೋದು ಬೇಕೋ , ಇಲ್ಲದೆ ಇರೋದು ಬೇಕೋ ?

ಶಾಸ್ತಿಗಳು ಸಹನೆ ಕೆಡೋಕ್ಕೆ ಶುರುವಾಯಿತ.

ಶಾಸ್ತಿಗಳು:ಇಲಿ ಅವನ ವಾಹನ ! ಅದು ಇರ್ಲೆಬೇಕಯ್ಯ !

ಮುನಿಯ: ಸಾಮಿ , ಸೊಂಡಿಲಿ ಇರೋದೋ , ಮೂಗಿಲಿ ಇರೋದೋ ಬೇಕೋ?

ಶಾಸ್ತಿಗಳು: ನಿನ್ ಹೆಣ , ಹೆಗ್ಗಣ ಇಲ್ವಾ ? ವಿಭೂತಿ ಪಟ್ಟಿ ಇರೋದು ಕೊಡೊ ಮಾರಾಯ !

ಮುನಿಯ: ಸಾಮಿ ! ಇಬುತಿ , ಪಟ್ಟಿ . ಬಿಳೀದು ! ಅದೇ ಮೂರ್ ಪಟ್ಟಿ . ! ಮೊದಲೇ ಯೆಳದಲ್ವ , ಅದು ಸ್ಟಾಕ್ ಇಲ್ಲ ಸಾಮಿ ! ನಾಳೆ ಬನ್ನಿ ನಾನೇ ಇರ್ತೀನಿ,ಕೊಡ್ತೀನಿ.

ಶಾಸ್ತಿಗಳು Dr ರಾಜ್ ಭಕ್ತ ಕುಂಬಾರನ ಪಾತ್ರ ನೆನುಸ್ಕೊಂಡು, ಮುನಿಯನ್ನ ಹಾಕೊಂಡು ಚನ್ನಾಗಿ ತುಳಿತಾರೆ!

 

ಪ್ರಸಂಗ 2

ಕ್ಯಾತ್ಮಾರನಹಳ್ಳಿ ಗ್ರಾಮ ನೆರಯಿಂದ ಜಲಾವೃತ ಗೊಂಡಿತ್ತು , ಎಲ್ಲಾ ಜನರು ದೇವರನ್ನು ಬೇಡುತಿದ್ದರು. ಇನ್ನೊಂದು ದಡದಲ್ಲಿ ಸಾಕ್ಷಾತ್ ಗಣೇಶ ತನ್ನ ಇಲಿಯೊಡನೆ bean ಬ್ಯಾಗ್ ಮೇಲೆ ವಿರಾಜಮಾನನಾಗಿ , ಎಡಕೈನಲ್ಲಿ popcorn ಡಬ್ಬದಲ್ಲಿ ಮೋದಕವನ್ನ ತಿನ್ನುತ್ತಾ, ಜಲಾವೃತ ಗೊಂಡ ಪ್ರದೇಶ ವನ್ನು PVR ಥಿಯೇಟರ್ ನಲ್ಲಿ ಸಿನಿಮಾ ನೋಡುವರೀತಿಯಲಿ ಕೂತಿರುತ್ತಾನೆ.

 

ಜನರು ಹೇ ದೇವ ನಮ್ಮನು ಕಾಪಾಡು ಎನ್ನಲ್ಲು , ಗಣೇಶ ಇಲ್ಲವೆಂದು ಕೈ ಆಡಿಸುತ್ತಾನೆ.

 

ಗಣೇಶ: ನಾನು ರಜೆನಲ್ಲಿ ಇದ್ದೀನಿ , i am ಸಾರೀ.

ಜನ : ದೇವ್ರೇ , ನಾವೆಲ್ಲಾ ನೀರಲ್ಲಿ ಮುಳುಗತಾ ಇದ್ದಿವಿ, ನಿಂಗೆ ಕರುಣೆ ಇಲ್ವಾ ?

ಗಣೇಶ : ಕರುಣೆ ನಾ ! ಕಳ್ಳನನ್ಮಕ್ಕಳ , ವಿಸರ್ಜನೆ ದಿನ ಎಲ್ಲರೂ ಸೆರೆ ನನ್ನ ನೀರಲ್ಲಿ ಮುಳುಗಿಸಿ ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು

           ಡಾನ್ಸ್ ಆಡ್ತೀರ. ನೀರು ಖಚದ ಇರೊತ್ತೆ ಇಲ್ಲವೋ ನೋಡೋದೇ ಇಲ್ಲ. ಇನ್ ಕೆಲವರು ಭಾವಿ ಮೇಲಿಂದ  ಎಸಿತಾರೆ ,

           ನೆನುಸ್ಕೊಂಡ್ರೆ ಭಯ ಆಗೊತ್ತೆ. ಯಾವತ್ತದ್ರೋ ನನ್ಗೆ ಈಜು ಬರೋತ್ತೋ ಇಲ್ವೋ ಅಂತ ಕೇಳಿದ್ದಿರಾ?

 

          ನನ್ನನ ಕೂರಿಸ್ತೀರ , ಫುಲ್ ಗಲಾಟೆ ಮಾಡ್ತಿರ್ತೀರ. ಸುಮಾರ್ ವರುಷದಿಂದ "ಗಜಮುಖನೇ ಗಣಪತಿಯೇ......."

          ಹಾಡಿಂದ ಪ್ರಾರಂಭ ಮಾಡ್ತೀರ , ಬ್ಲೂ ಬಾಯ್ಸ್ , ವೈಟ್ ಬಾಕ್ಸ್ orchestra ಕರ್ಸಿ , item ಸಾಂಗ್ ಹಾಡ್ಸ್ತೀರ.

          ನನ್ನ ಹೆಸರಿನ್ನಲಿ collection ಬೇರೆ ! 50 % ಖರ್ಚ ಮಾಡಿ , ಇನ್ 50% ನಲ್ಲಿ ವಿಸರ್ಜನೆ ಆದ next ಡೇ ಗೋವಾ ದಲ್ಲಿ

          ಇರ್ತೀರಾ.

 

          ಮಧ್ಯದಲ್ಲಿ ಫಿಲ್ಮ್ ಶೋ ಬೇರೆ. ಇಷ್ಟು ದಿನ ವಿಷ್ಣುವರ್ಧನನ 'ಲೋಡ್ದೆ' ಅಂತ ಏಕೆ ಕರಿತಾರೆ ಅಂತ ಕೊತಾಗ್ ಇರಲಿಲ್ಲ ,

          ಹೇಗೆ ಗೊತ್ತಾಗಬೇಕು ? ನನ್ನ್ಮಕ್ಳ ಸಿನಿಮಾ ಸ್ಕ್ರೀನ್ ನನ್ಮುಂದೆ ಕಟ್ಟಿ ಆ ಕಡೇ ನೀವು ಸಿನಿಮಾ ನೋಡ್ತಿದ್ರೆ , ನನ್ಗೆ

          ವಿಷ್ಣುವರ್ಧನ್ 'ಲೋಡ್ದೆ' ಅಂತ ಹೇಗೆ ಗೊತ್ತಾಗಬೇಕು ?.

          (ಹೆಚ್ಚಾಗಿ ಎಡಗೈ ಉಪಯೋಗಿಸುವವರನ್ನು  'ಲೋಡ್ದೆ' ಎಂದು ಕರೆಯುತ್ತಾರೆ)

 

           swine flue ಬಂದಾಗ, ಬಡ್ಡಿ ಮಕ್ಳಾ ! ನೀವೇ ಬಾಯಿಗೆ ಬಟ್ಟೆ ಕಟ್ಕೊಂಡ್ರೀ, ನನ್ಗೆ ಕಟ್ಟಿದ್ರಾ ?.

          ಯಾವ್ದೋ ಪುಜಾರಿ ನಿಮ್ಗಳಿಗೆ ಸಂಸ್ಕೃತ ಬರೋಲ್ಲ ಅಂತ , ಬರೀ ತಿಥಿ ಮಂತ್ರ ಹೇಳಿ ಕಾಸ್ಕಿತ್ಕೊಂಡು ಕಡಬು

          ಕದ್ದುಕೊಂಡು ಹೋದ. ಹೆಣದ ಮುಂದೆ ತಮಟೆ ಬಾರಿಸೋ ನನ್ಮಕ್ಕಳ ಕರ್ಕೊಂಡು ಬಂದು , " ಹರಿಶ್ಚಂದ್ರ " ಫಿಲ್ಮ್ ದು

          ಡಾನ್ಸ್ ಬೇರೆ !.

 

           ಇನ್ ಕೆಲವು ಸಲಿ ಕರ್ನಾಟಕ ಸಂಗೀತ , ಅವರುಗಳು ಆಲಾಪನೆ ಮಾಡಿದ್ರೆ 3 ತಾಸು ಹಿಡಿಯತ್ತೆ, ಇನ್ನು ಕೀರ್ತನೆ

           ಹೇಳೋದು ಯಾವಾಗಲೋ. 10 ದಿನ ಪ್ರೋಗ್ರಾಮ್ ನಲ್ಲಿ , orchestra , ಪೋಲಿ ನಾಟಕ , ಕಿತ್ತೋಗಿರೋ ಹಳೆ

           ಪತ್ತೇದಾರಿ ಚಿತ್ರ. ಹರಿ ಕಥೆ , ಅ ನನ್ ಮಕ್ಕಳು ಕುಡುಕೊಂಡು ಗಣೇಶನ ಕಥೆ ಅಂತ ಶುರುಮಾಡಿ , ಲಂಕಾ ದಹನ ಅಂತ

          ಎಂಡ್ ಮಾಡ್ತಾರೆ, ನಿಮಗೂ ಗೊತ್ತಾಗೊಲ್ಲ. ಗಣೇಶ pashto? ರಾಮ pashto? ಅಂತೀರಾ. ಇದು ಸಾಲದು ಅಂತ ಲಾರಿ

          ಮೇಲೆ ನನ್ನ ಮೆರೆವಣಿಗೆ. ಎಲೆಕ್ಟ್ರಿಕ್ ಕೇಬಲ್ ಕಳಗಡೆ ಹೋಗಬೇಕಾದ್ರೆ ಎಷ್ಟು ದಿಗಿಲು ಆಗೊತ್ತೆ ಅಂತ ನಿಮ್ಗೆನ್ ಗೊತ್ತು ?

 

          ರೆಸ್ಕು ಟೀಂ ಕರೆದು ಬಚಾವ್ ಆಗಿ ! ಸಾರೀ ನಾನು ರಜೆನಲ್ಲಿ ಇದ್ದೀನಿ .