ದೀಪಾವಳಿ ಆಚರಿಸಿ . ದಿವಾಳಿ ಆಗಬೇಡಿ
ಗೆಳೆಯರೇ,
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆ ಏರ್ಟೆಲ್ ಅವರು ಬೆಂಗಳೂರಿನ ಹಲವೆಡೆ ಜಾಹಿರಾತು ಫಲಕಗಳನ್ನು ಹಾಕ್ತಿದ್ದಾರೆ.
ಹಿಂದಿಯನ್ನು ರೋಮನ್ ಲಿಪಿಯಲ್ಲಿ "khushiyon ki diwali" ಅಂತ ಹಾಕಿದ್ದಾರೆ.ಇದು ಎಷ್ಟು ಜನರಿಗೆ ಅರ್ಥವಾಗುವುದೋ ದೇವರೇ ಬಲ್ಲ. ಕರ್ನಾಟಕದಲ್ಲಿ ನಿಮಗಿರುವ ಹೆಚ್ಚಿನ ಗ್ರಾಹಕರು ಕನ್ನಡಿಗರಾಗಿದ್ದು ಕನ್ನಡದಲ್ಲೇ ಜಾಹಿರಾತು ಕೊಡಿ ಎಂದು ಇವರಿಗೆ ಹೇಳಬೇಕಾಗಿದೆ.ಜೊತೆಗೆ, ಕನ್ನಡದಲ್ಲಿ ದಿವಾಳಿ ಎಂದರೆ ಇರುವ ಅರ್ಥವನ್ನು ಇವರು ಅರಿತಂತೆ ಕಾಣುತ್ತಿಲ್ಲ. ದಿವಾಳಿ ಎಂದು ಹೇಳುತ್ತಾ ಜಾಹೀರಾತು ನೀಡಿದರೆ, ಜನರು ನಿಮ್ಮ ಸಂದೆಶವನ್ನೇ ತಪ್ಪಾಗಿ ತಿಳಿಯಬಹುದು ಎಂಬುದನ್ನು ಇವರಿಗೆ ತಿಳಿಸಬೇಕಾಗಿದೆ.ಕನ್ನಡದಲ್ಲಿ ದಿವಾಳಿ ಅಂದರೆ ಏನು ಅರ್ಥ ಅಂತ ಇವರಿಗೆ ಹೇಳಿ, ಮುಂದಿನ ದಿನಗಳಲ್ಲಿ ಬೆಳಕಿನ ಹಬ್ಬವನ್ನು ದೀಪಾವಳಿ ಎಂದೇ ಕರೆಯುವಂತೆ ಒತ್ತಾಯಿಸೋಣ.
ನಮ್ಮ ಸಂಸ್ಕೃತಿಗೆ ಬೆಲೆ ಕೊಡುವ ಮೂಲಕ ನಮ್ಮ ನಾಡಿನ ಜನರ ಮನ ಗೆಲ್ಲಬಹುದು ಎಂದು ಏರ್ಟೆಲ್ ಗೆ ಹೇಳಬೇಕಿದೆ. ಅವರಿಗೆ ಮಿಂಚೆ ಬರೆಯಬೇಕಾದ ವಿಳಾಸ - 121@airtelindia.com
ಇಲ್ಲಿಯೂ ಪ್ರತಿಕ್ರಿಯೆ ಬರೆಯಿರಿ : http://www.facebook.com/Airtel?v=app_2373072738