ಎಂಧಿರನ್ ಪ್ರಚಾರಕ್ಕಿಳಿದ ಕನ್ನಡ ಮಾಧ್ಯಮಗಳು

ಎಂಧಿರನ್ ಪ್ರಚಾರಕ್ಕಿಳಿದ ಕನ್ನಡ ಮಾಧ್ಯಮಗಳು

ಬರಹ

 

ರಜನಿಕಾಂತ್ ಅಭಿನಯದ ಎಂಧಿರನ್/ರೋಬೋಟ್ ಚಿತ್ರ ಮೊನ್ನೆ ಬಿಡುಗಡೆ ಆಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ.
ಇದೆಲ್ಲಾದರ ನಡುವೆ ನಮ್ಮ ಕನ್ನಡ ಟಿ.ವಿ ವಾಹಿನಿಗಳು, ದಿನಪತ್ರಿಕೆಗಳು, ವಾರ ಪತ್ರಿಕೆಗಳು ಎಂಧಿರನ್ ಚಿತ್ರದ ಬಗ್ಗೆ ಆ ಚಿತ್ರದ ನಟರು, ವಿತರಕರು, ನಿರ್ಮಾಪಕರಿಗಿಂತ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ.
ಎಂಧಿರನ್ ಚಿತ್ರ ನಿರ್ಮಾಣದಲ್ಲಿ ಭಾಗಿಯಾಗಿರುವವರೊಬ್ಬರ ಒಡೆತನದಲ್ಲಿರುವ ಕನ್ನಡ ವಾಹಿನಿಯೊಂದರಲ್ಲಿ ತಾವು ಕನ್ನಡ ವಾಹಿನಿಯೆಂಬುದನ್ನು ಮರೆತು ಭಾನುವಾರ ೧ ಘಂಟೆಯನ್ನು ಚಿತ್ರದ ಪ್ರಚಾರಕ್ಕೆ ಮೀಸಲಿಟ್ಟಿದ್ದನ್ನು ನೋಡಿ ಅಸಹ್ಯವಾಯಿತು. ಇದರ ಜೊತೆಗೆ ಇನ್ನುಳಿದ ಕನ್ನಡ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ, ಕನ್ನಡ ರೇಡಿಯೊದಲ್ಲಿ ಈ ಚಿತ್ರದ ಅತಿರಂಜಿತ ಪ್ರಚಾರ ಮಾಡುತ್ತಿದ್ದಾರೆ. 
ಕನ್ನಡದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ರಜನಿಕಾಂತ್ ಚಿತ್ರ ಬಿಡುಗಡೆ ಆದಾಗಲೆಲ್ಲಾ ಮುಖಪುಟದಲ್ಲಿ ಅವರ ಮುಖಸ್ತುತಿ ಮಾಡಿ ಅವರ ಚಿತ್ರಗಳ ಗುಣಗಾನ ಮಾಡುವ ಅವಶ್ಯಕತೆ ಏನಿದೆ?
ಅಲ್ಲಾ ಸ್ವಾಮಿ, ಕನ್ನಡದ ವಾಹಿನಿಗಳಾಗಿ, ಕನ್ನಡ ಪ್ರೇಕ್ಷಕರಿಗೆ ಬೇಕಿಲ್ಲದ ಕಾರ್ಯಕ್ರಮ ತೋರ್ಸಿ ಅಂತ ಹೇಳಿದವರು ಯಾರು?
ನಮಗೆ ಬೇಕಿರೋ ಕಾರ್ಯಕ್ರಮವನ್ನು ಇವರು ಪ್ರಸಾರ ಮಾಡಬೇಕಾ ಅಥವಾ ಇವರು ಪ್ರಸಾರ ಮಾಡೋ ಕಾರ್ಯಕ್ರಮಾನ ನಾವು ನೋಡಬೇಕಾ?
ಇವರು ಪ್ರಸಾರ ಮಾಡಿದನ್ನೆಲ್ಲಾ ನೋಡಕ್ಕೆ, ಬರೆದಿದನ್ನೆಲ್ಲಾ ಓದಕ್ಕೆ, ಹೇಳಿದ್ದನ್ನೆಲಾ ಕೇಳಕ್ಕೆ ಕನ್ನಡ ನೋಡುಗರನ್ನ, ಓದುಗರನ್ನ, ಕೇಳುಗರನ್ನ ಏನ್ ಆಟದ ಗೊಂಬೆಗಳು ಅಂದುಕೊಂಡಿದ್ದಾರಾ?  Have they taken kannadiga consumers for granted
ಗೆಳೆಯರೇ, ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಮಗೆ ಸಾಧ್ಯವಾದ ರೀತಿಯಲ್ಲೆಲಾ ಪ್ರತಿಭಟಿಸೋಣ.
ಈ ವಾಹಿನಿಗಳಿಗೆ ಮತ್ತು ಪತ್ರಿಕೆಗಳಿಗೆ ಪತ್ರಗಳನ್ನು ಬರೆಯೋಣ. ಒಟ್ಟಿನಲ್ಲಿ ನಮ್ಮ ಮೇಲೆ ಆಗುತ್ತಿರುವ ಈ ಸಂಸ್ಕ್ರುತಿಕ ಧಾಳಿಯನ್ನು ನಿಲ್ಲಿಸೋಣ.. 

 

ರಜನಿಕಾಂತ್ ಅಭಿನಯದ ಎಂಧಿರನ್/ರೋಬೋಟ್ ಚಿತ್ರ ಮೊನ್ನೆ ಬಿಡುಗಡೆ ಆಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ.ಇದೆಲ್ಲಾದರ ನಡುವೆ ನಮ್ಮ ಕನ್ನಡ ಟಿ.ವಿ ವಾಹಿನಿಗಳು, ದಿನಪತ್ರಿಕೆಗಳು, ವಾರ ಪತ್ರಿಕೆಗಳು ಎಂಧಿರನ್ ಚಿತ್ರದ ಬಗ್ಗೆ ಆ ಚಿತ್ರದ ನಟರು, ವಿತರಕರು, ನಿರ್ಮಾಪಕರಿಗಿಂತ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ.


ಎಂಧಿರನ್ ಚಿತ್ರ ನಿರ್ಮಾಣದಲ್ಲಿ ಭಾಗಿಯಾಗಿರುವವರೊಬ್ಬರ ಒಡೆತನದಲ್ಲಿರುವ ಕನ್ನಡ ವಾಹಿನಿಯೊಂದರಲ್ಲಿ ತಾವು ಕನ್ನಡ ವಾಹಿನಿಯೆಂಬುದನ್ನು ಮರೆತು ಭಾನುವಾರ ೧ ಘಂಟೆಯನ್ನು ಚಿತ್ರದ ಪ್ರಚಾರಕ್ಕೆ ಮೀಸಲಿಟ್ಟಿದ್ದನ್ನು ನೋಡಿ ಅಸಹ್ಯವಾಯಿತು. ಇದರ ಜೊತೆಗೆ ಇನ್ನುಳಿದ ಕನ್ನಡ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ, ಕನ್ನಡ ರೇಡಿಯೊದಲ್ಲಿ ಈ ಚಿತ್ರದ ಅತಿರಂಜಿತ ಪ್ರಚಾರ ಮಾಡುತ್ತಿದ್ದಾರೆ. 
ಕನ್ನಡದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ರಜನಿಕಾಂತ್ ಚಿತ್ರ ಬಿಡುಗಡೆ ಆದಾಗಲೆಲ್ಲಾ ಮುಖಪುಟದಲ್ಲಿ ಅವರ ಮುಖಸ್ತುತಿ ಮಾಡಿ ಅವರ ಚಿತ್ರಗಳ ಗುಣಗಾನ ಮಾಡುವ ಅವಶ್ಯಕತೆ ಏನಿದೆ?


ಅಲ್ಲಾ ಸ್ವಾಮಿ, ಕನ್ನಡದ ವಾಹಿನಿಗಳಾಗಿ, ಕನ್ನಡ ಪ್ರೇಕ್ಷಕರಿಗೆ ಬೇಕಿಲ್ಲದ ಕಾರ್ಯಕ್ರಮ ತೋರ್ಸಿ ಅಂತ ಹೇಳಿದವರು ಯಾರು?ನಮಗೆ ಬೇಕಿರೋ ಕಾರ್ಯಕ್ರಮವನ್ನು ಇವರು ಪ್ರಸಾರ ಮಾಡಬೇಕಾ ಅಥವಾ ಇವರು ಪ್ರಸಾರ ಮಾಡೋ ಕಾರ್ಯಕ್ರಮಾನ ನಾವು ನೋಡಬೇಕಾ?ಇವರು ಪ್ರಸಾರ ಮಾಡಿದನ್ನೆಲ್ಲಾ ನೋಡಕ್ಕೆ, ಬರೆದಿದನ್ನೆಲ್ಲಾ ಓದಕ್ಕೆ, ಹೇಳಿದ್ದನ್ನೆಲಾ ಕೇಳಕ್ಕೆ ಕನ್ನಡ ನೋಡುಗರನ್ನ, ಓದುಗರನ್ನ, ಕೇಳುಗರನ್ನ ಏನ್ ಆಟದ ಗೊಂಬೆಗಳು ಅಂದುಕೊಂಡಿದ್ದಾರಾ?  Have they taken kannadiga consumers for granted.

 

ಗೆಳೆಯರೇ, ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಮಗೆ ಸಾಧ್ಯವಾದ ರೀತಿಯಲ್ಲೆಲಾ ಪ್ರತಿಭಟಿಸೋಣ.ಈ ವಾಹಿನಿಗಳಿಗೆ ಮತ್ತು ಪತ್ರಿಕೆಗಳಿಗೆ ಪತ್ರಗಳನ್ನು ಬರೆಯೋಣ. ಒಟ್ಟಿನಲ್ಲಿ ನಮ್ಮ ಮೇಲೆ ಆಗುತ್ತಿರುವ ಈ ಸಂಸ್ಕ್ರುತಿಕ ಧಾಳಿಯನ್ನು ನಿಲ್ಲಿಸೋಣ..