ಚುರ್ಮುರಿ - ೧೦

ಚುರ್ಮುರಿ - ೧೦

ಬರಹ

೨೮) ನಮ್ಮ ದೇಶದಲ್ಲಿ ಮಹಾತ್ಮರಾಗುವುದರಿಂದ ಆಗುವ ಲಾಭಕ್ಕಿಂತ ನಷ್ಟಗಳೇ ಹೆಚ್ಚು.

 

೨೯) ಅವರಿಬ್ಬರೂ ಸಹೋದ್ಯೋಗಿಗಳು, ಒಬ್ಬ ಬ್ರಾಹ್ಮಣ, ಇನ್ನೊಬ್ಬ ದಲಿತ. ಬ್ರಾಹ್ಮಣ ಮೊದಲ ದರ್ಜೆಯ ಕ್ಲರ್ಕ್ ಆಗಿದ್ದ, ಆಮೇಲೆ ಸೇರಿದ ದಲಿತ ಎರಡನೇ ದರ್ಜೆಯ ಕ್ಲರ್ಕ್ ಆಗಿ ಬ್ರಾಹ್ಮಣನ ಕೈಕೆಳಗೆ ಕೆಲಸ ಮಾಡುತ್ತಿದ್ದ. ಸ್ವಲ್ಪ ವರ್ಷಗಳ ನಂತರ ದಲಿತ ಸುಪರಿಟೆನ್ಡೆಂಟ್ ಆದ. ಬ್ರಾಹ್ಮಣ ಇನ್ನೂ ಅದೇ ಹುದ್ದೆಯಲ್ಲಿದ್ದಾನೆ ಆದರೆ ದಲಿತನ ಕೈಕೆಳಗೆ.

 

೩೦) ಮಲ್ಲಿಕಾ ಶೆರಾವತಳನ್ನು ದೇವಸ್ಥಾನಕ್ಕೆ ಸೀರೆ ಯಾಕೆ ಹಾಕಿಕೊಂಡು ಹೋದಳೆಂದು ಯಾರೋ ಕೇಳಿದ್ದಾರೆ. ಆ ಪುಣ್ಯಾತ್ಗಿತ್ತಿ ಅಲ್ಲಾದರೂ ಬಟ್ಟೆಯಲ್ಲಿರಲು ಬಿಡಿ.

 

೩೧) ಆಗೆಲ್ಲ ಬೆಳಗ್ಗೆ ಬಹುತೇಕ ಮನೆಗಳಲ್ಲಿ ಬೆಳಗ್ಗೆ ಕೌಸಲ್ಯ ಸುಪ್ರಜಾ ರಾಮ. ಈಗ ಬೆಳಗ್ಗೆ ಸಕತ್ ಹಾಟ್ ಮಗಾ, ಮಸ್ತ್ ಮಜಾ ಮಾಡಿ, ಕೇಳಿ ಕೇಳಿಸಿ.

 

೩೨) ಅವಳು ೫.೫ ಅಡಿ ಎತ್ತರ ಇದ್ದರೂ ಹೈ ಹೀಲ್ಡ್ ಚಪ್ಪಲಿ ಹಾಕಿಕೊಂಡಿದ್ದಳು.