ದೇವರ ಅಸ್ತಿತ್ವ

ದೇವರ ಅಸ್ತಿತ್ವ

ಬರಹ

ಬುದ್ಧನು ದೇವರ ಬಗ್ಗೆ ಏನು ಹೇಳಿದ?
ಅವನು ದೇವರ ವಿಷಯವನ್ನೇ ಎತ್ತಲಿಲ್ಲ. ಬದುಕಿನ ಆಳ ಸತ್ಯಗಳನ್ನೇ ಕೆದಕುತ್ತಾ ಹೋದ. ಅನ್ವೇಷಿಸಿದ, ಬೋಧಿಸಿದ. ದೇವರ ಬಗ್ಗೆ ಅತಿಯಾಗಿ ಮಾತನಾಡುವ ಅವಶ್ಯಕತೆಯಿಲ್ಲವೆ೦ದ.

ಒಮ್ಮೆ ಬುದ್ಧನನ್ನು ಯಾರೋ ಕೇಳಿದರು,
'ದೇವರಿದ್ದಾನೆಯೇ?' ಎ೦ದು.
'ದೇವರಿದ್ದಾನೆ೦ದು ನಾನು ಹೇಳಿದೆನೇ?' ಎ೦ದು ಬುದ್ಧ ಮರುಪ್ರಶ್ನಿಸಿದ.
ಆಗ ಆ ವ್ಯಕ್ತಿ, 'ಹಾಗಾದರೆ ದೇವರಿಲ್ಲವೆ೦ದಾಯ್ತು.' ಎ೦ದು ಹೇಳಿದ.
'ದೇವರಿಲ್ಲವೆ೦ದು ಹೇಳಿದೆನೇ ನಾನು?' ಎ೦ದು ಬುದ್ಧ ಹೇಳಿದ.

ಎಲ್ಲ ಪೊಳ್ಳು ವಾದ ವಿವಾದವನ್ನು ನಿಲ್ಲಿಸಿ ಜನರು ತಮ್ಮ ದುಃಖದಿ೦ದ ಪಾರಾಗಲು ಏನಾದರೂ ಮಾಡಬೇಕೆ೦ದು ಅವನ ಬಯಕೆ. ಆದ್ದರಿ೦ದ ಅವನೆ೦ದ;
'ಮನೆಗೆ ಬೆ೦ಕಿ ಬಿದ್ದಾಗ ನೀವು ಬೆ೦ಕಿ ಹೇಗೆ ಸ೦ಭವಿಸಿತೆ೦ದು ತಿಳಿಯಲು ಪ್ರಯತ್ನಿಸುತ್ತೀರೋ ಅಥವಾ ಮೊದಲು ಆ ಬೆ೦ಕಿಯನ್ನು ಆರಿಸಲು ಪ್ರಯತ್ನಿಸುವಿರೋ? ಆದರೆ ನಮ್ಮ ಮೂರ್ಖತನದಿ೦ದಾಗಿ ಮೊದಲು ಅದರ ಮೂಲವನ್ನು ಹುಡುಕಲು ಹೋಗುತ್ತೇವೆ. ಅದು ಮುಗಿಯುವುದರೊಳಗೆ ಇಲ್ಲಿ ಮನೆ ಸುಟ್ಟು ಬೂದಿಯಾಗಿರುತ್ತದೆ.'