ಆಗೊಂದು ಮುಗಿಲು, ಈಗೊಂದು ಸಿಡಿಲು, ನಿನಗೆ ಅಲಂಕಾರ!!

ಆಗೊಂದು ಮುಗಿಲು, ಈಗೊಂದು ಸಿಡಿಲು, ನಿನಗೆ ಅಲಂಕಾರ!!

ಬರಹ

ದೀಪವು ನಿನ್ನದೆ, ಗಾಳಿಯು ನಿನ್ನದೆ ಆರದಿರಲಿ, ಬೆಳಕು,,, ಹಡಗು ನಿನ್ನದೆ, ಕಡಲು ನಿನ್ನದೆ ಮುಳುಗದಿರಲಿ ಬದುಕು,
ಆಗೊಂದು ಮುಗಿಲು, ಈಗೊಂದು ಸಿಡಿಲು, ನಿನಗೆ ಅಲಂಕಾರ! ಎಷ್ಟೊಂದು ಸುಂದರ ಈ ವರ್ಣನೆ. ಆದರೆ ದುಬೈನಲ್ಲಿ ಮಳೆಗಾಲದ ಒಂದು ದಿನ ಸಿಡಿಲಿನ ಹೊಡೆತ, ಗಲ್ಫ್ ನ್ಯೂಸ್ ನ ಛಾಯಾಗ್ರಾಹಕರೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.

ಎಲ್ಲಾ ಗಗನ ಚುಂಬಿ ಕಟ್ಟಡಗಳಿಗೂ ಸಹಾ ಸಿಡಿಲಿನ ವಿದ್ಯುತ್ ನಿರೋಧಕಗಳನ್ನು ಹಾಕಿಟ್ಟಿದ್ದಾರೆ. ಇದುವರೆಗೂ ಯಾವುದೇ ಜೀವಹಾನಿ ಸಂಭವಿಸಿದ ವರದಿಗಳಿಲ್ಲ. ಆದರೆ ಮೇಲಿಂದ ಹೊಡೆವ ಸಿಡಿಲಿಗೆ ನಮ್ಮೂರಿನಲ್ಲಿ ಅದೆಷ್ಟು ಜೀವಗಳು ಬಲಿಯಾಗಿಬಿಟ್ಟವೋ ಗೊತ್ತಿಲ್ಲ...