ಭಕ್ತಿ- ಎರಡು ವಿಭಿನ್ನ ದೃಷ್ಟಿ

ಭಕ್ತಿ- ಎರಡು ವಿಭಿನ್ನ ದೃಷ್ಟಿ

ಬರಹ

                               ಭಕ್ತಿ-ಚಿಂತನೆ

ಶ್ರೀ ಕೃಷ್ಣ ಹೇಳಿದ್ದು -  ಭಕ್ತ್ಯಾತ್ವನನ್ಯಯಾ ಶಕ್ಯ ಅಹಮೇವಂ ವಿಧೋರ್ಜುನ|

ಅನನ್ಯವಾದ ಭಕ್ತಿಯಿಂದ ನನ್ನನ್ನು ತಿಳಿಯಬಹುದು.(ಭ.ಗೀ,೧೧-೫೪)

ಭಕ್ತಿಯೆಂದರೆ?

ಶಂಕರಾಚಾರ್ಯರ ಪ್ರಕಾರ-

ಮೋಕ್ಷಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸೀ|

ಸ್ವಸ್ವರೂಪಾನುಸಂಧಾನಂ ಭಕ್ತಿರಿತ್ಯಭಿಧೀಯತೇ||(ವಿವೇಕ ಚೂಡಾಮಣಿ-೩೧)

ಮೋಕ್ಷಕ್ಕೆ ಸಹಾಯಕವಾಗಿರುವ ಸಲಕರಣೆಗಳಲ್ಲಿ ಭಕ್ತಿಯೇ ಶ್ರೇಷ್ಠವಾದುದು.

ತನ್ನ ನಿಜವಾದ ಆತ್ಮ ಸ್ವರೂಪದ ಅನುಸಂಧಾನವೇ ಭಕ್ತಿಯೆನಿಸುವುದು.

(ಇಲ್ಲಿ ಅದ್ವೈತ ದೃಷ್ಟಿಯ ಪ್ರಕಾರ ಭಕ್ತಿಯ ಲಕ್ಷಣವನ್ನು ಹೇಳಿದೆ.)

ಮಧ್ವಾಚಾರ್ಯರ ಪ್ರಕಾರ-

ಮಾಹಾತ್ಮ್ಯ ಜ್ಞಾನಪೂರ್ವಸ್ತು ಸುಧೃಢಃ ಸರ್ವತೋಧಿಕಃ|

ಸ್ನೇಹೋ ಭಕ್ತಿರಿತಿ ಪ್ರೋಕ್ತಃ ತಯಾ ಮುಕ್ತಿರ್ನಚಾನ್ಯಥಾ||(ಭಾರತ ತಾತ್ಪರ್ಯ ನಿರ್ಣಯ)

ಮಾಹಾತ್ಮ್ಯ ಜ್ಞಾನಪೂರ್ವಕವಾದ ತನ್ನ, ತನಗೆ ಬೇಕಾದವರೆಲ್ಲರಮೇಲಿರುವ ಪ್ರೀತಿಗಿಂತಲೂ ಅಧಿಕವಾದ ಸ್ನೇಹಕ್ಕೆ (ಪ್ರೀತಿಗೆ)

ಭಕ್ತಿ ಎಂದು ಹೆಸರು.ಇದರಿಂದಲೇ ಮುಕ್ತಿ ಆಗುವುದಲ್ಲದೇ ಬೇರೆಯಾವುದರಿಂದಲೂ ಮುಕ್ತಿಯಾಗದು.

ಹೀಗೆ ಅದ್ವೈತಿಗಳ ಭಕ್ತಿಯ ಪರಿಕಲ್ಪನೆಯೂ ದ್ವೈತಿಗಳ ಪರಿಕಲ್ಪನೆಯೂ ಬೇರೆ ಬೇರೆ ಮಟ್ಟದ ಚಿಂತನೆಯಾಗಿದೆ.