ಸಡಿಲ ಮಾತುಗಳು ತರವಲ್ಲ
22 hours 8 minutes ago - Ashwin Rao K Pಲೋಕಸಭಾ ಚುನಾವಣಾ ಕಣವು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕಾವೇರುತ್ತಿರುವಂತೆಯೇ ಕೆಲವು ರಾಜಕೀಯ ಮುಖಂಡರ ಸಡಿಲ ಮಾತುಗಳೂ ಹೆಚ್ಚುತ್ತಿರುವುದು ವಿಷಾದನೀಯ. ಚುನಾವಣೆಯಲ್ಲಿ ಗೆದ್ದರೆ ತಾವೇನು ಮಾಡಬಲ್ಲೆವು ಎಂಬ ಗುಣಾತ್ಮಕ ವಿಚಾರವನ್ನು ಮಂಡಿಸುವುದಕ್ಕಿಂತ ಹೆಚ್ಚಾಗಿ ಕೆಲವರು ತಮ್ಮ ವಿರೋಧಿಗಳನ್ನು ವೈಯಕ್ತಿಕವಾಗಿ ಟೀಕಿಸುವ ನಕಾರಾತ್ಮಕ ರಣತಂತ್ರಕ್ಕೆ ಜೋತುಬಿದ್ದಿರುವುದು ಸಲ್ಲದ ನಡವಳಿಕೆ. ವಿರೋಧಿ ಮುಖಂಡರ ಕುರಿತಂತೆ ಟೀಕೆಗಳನ್ನು ಮಾಡುವುದಾದರೂ ಅದು ಆರೋಗ್ಯಪೂರ್ಣವಾಗಿರಬೇಕು ಹಾಗೂ ಸಭ್ಯತೆಯ ಎಲ್ಲೆ ಮೀರಬಾರದು.ಆದರೆ ಕೆಲವರು ಸಭ್ಯತೆಯ ಎಲ್ಲೆ ಮೀರಿ ಮಾತನಾಡುತ್ತಿದ್ದು, ರಾಜಕೀಯದ ಘನತೆ ಗೌರವ ಕುಂದಿಸುತ್ತಿದ್ದಾರೆ. ಇಂತಹ ಅಸಭ್ಯ ಮಾತುಗಳು ಪ್ರತಿದಿನವೆಂಬಂತೆ ವರದಿಯಾಗುತ್ತಿದ್ದು, ಇದು ತಗ್ಗುವ ಸೂಚನೆಗಳಂತೂ ಕಾಣುತ್ತಿಲ್ಲ. ಕೇವಲ ಒಂದೆರಡು ಪಕ್ಷಗಳ ಮುಖಂಡರಷ್ಟೇ ಅಲ್ಲದೆ ಬಹುತೇಕ ಎಲ್ಲಾ ಪಕ್ಷಗಳ ಮುಖಂಡರೂ ಇಂತಹ ಅಸಭ್ಯ ಮಾತುಗಳ ಬಳಕೆಯಲ್ಲಿ ತೊಡಗಿರುವುದಂತೂ ಇನ್ನೂ ವಿಷಾದನೀಯ.
ಕರ್ನಾಟಕದಲ್ಲಿ ಕೆಲವು ಆಡಳಿತಾರೂಢ ಪಕ್ಷದ ಮುಖಂಡರಷ್ಟೇ ಅಲ್ಲದೆ ಕೆಲವು ಸಚಿವರು ಕೂಡಾ ನಿಂದನಾತ್ಮಕ ಮಾತುಗಳನ್ನಾಡಿ ವಿವಾದ ಸೃಷ್ಟಿಸಿದ್ದಾರೆ. ಪ್ರಧಾನಿ ಮೋದಿಯವರನ್ನು ವೈಯಕ್ತಿಕ ನೆಲೆಯಲ್ಲಿ ಟೀಕಿಸುವುದು ಹೆಚ್ಚುತ್ತಿದೆ. ಮಾತಿಗೆ ಪ್ರತಿ ಮಾತು, ಟೀಕೆಗೆ ಪ್ರತಿಟೀಕೆಯೆಂಬಂತೆ ಇಂತಹ ಪಕ್ಷಗಳವರಿಂದಲೂ ಕೆಲವೊಮ್ಮೆ ಇಂತಹುದೇ ನಿಂದನಾತ್ಮಕ ಪದ ಬಳಕೆಯಾಗುತ್ತದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಪರ ಸ್ಪರ್ಧಿಸುತ್ತಿರುವ ಚಿತ್ರನಟಿ ಕಂಗನಾ ರಾಣಾವತ್ ವಿರುದ್ಧ ಕಾಂಗ್ರೆಸಿನ ಸುಪ್ರಿಯಾ ಶ್ರೀನೇತ್ ಕೀಳುಮಟ್ಟದ ಟೀಕೆ ಮಾಡಿದ್ದು ಅದರ ವಿರುದ್ಧವಾಗಿ ಕಂಗನಾ ದೂರು ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ದಿಲೀಪ… ಮುಂದೆ ಓದಿ...