ಮಂತ್ರಪಠಣದಿಂದ ವಿಶ್ವಚೇತನದತ್ತ ಸಾಧನೆಯ ಹಾದಿ
1 day 14 hours ago - addoorಮಂತ್ರ ಎಂದರೇನು? “ಮನ್" ಎಂದರೆ "ಚಿಂತನೆ ಮಾಡುವುದು"; “ತ್ರ" ಎಂದರೆ "ಬಿಡುಗಡೆ". ಆದ್ದರಿಂದ ಮಂತ್ರ ಎಂದರೆ "ಬಿಡುಗಡೆ ಮಾಡುವ ಚಿಂತನೆ" ಎಂದರ್ಥ. ಸಾವಿರಾರು ವರುಷಗಳ ಮುಂಚೆ ಮಹಾನ್ ಋಷಿಗಳು ಮಂತ್ರಗಳನ್ನು ಸರಳರೂಪದಲ್ಲಿ ಶಾಶ್ವತವಾಗಿ ಉಳಿಯುವಂತೆ ರೂಪಿಸಿದ್ದಾರೆ. ಮಂತ್ರಪಠಣವು ಭೂತಗನ್ನಡಿಯಂತೆ ಕೆಲಸ ಮಾಡುತ್ತದೆ. ಅಂದರೆ, ವಿಶ್ವಚೇತನವನ್ನು ಕೇಂದ್ರೀಕರಿಸಿ, ಸಾಧಕನ ಒಳಗಿಳಿಸಿ, ಸಾಧಕನ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುತ್ತದೆ.
ಗಮನಿಸಿ: ಪ್ರತಿಯೊಂದು ಮಂತ್ರವನ್ನು ಕಳೆದ ಸಾವಿರಾರು ವರುಷಗಳಲ್ಲಿ ಲಕ್ಷಗಟ್ಟಲೆ ಸಾಧಕರು ಕೋಟಿಗಟ್ಟಲೆ ಸಲ ಪಠಣ ಮಾಡಿದ್ದಾರೆ. ಇದರಿಂದಾಗಿ ಮಂತ್ರಗಳಲ್ಲಿ ಅಪಾರ ಶಕ್ತಿ ಸಂಚಯವಾಗಿದೆ.
ಇಂತಹ ಯಾವುದೇ ಮಂತ್ರವನ್ನು ಸಾಧಕನು ಪಠಿಸುತ್ತಾ ಸಾಗಿದಂತೆ, ಒಂದು ಹಂತದಲ್ಲಿ ಆ ಮಂತ್ರವು ಸ್ವಯಂ-ಶಕ್ತಿಕೇಂದ್ರವಾಗಿ ಕೆಲಸ ಮಾಡಲು ಶುರು ಮಾಡುತ್ತದೆ (ತಾನೇ ತಾನಾಗಿ ಪರಿಭ್ರಮಿಸುತ್ತಾ ಉಜ್ವಲವಾಗಿ ಉರಿಯುತ್ತಾ ಎಲ್ಲ ಗ್ರಹಗಳನ್ನು ನಿಯಂತ್ರಿಸುವ ಸೂರ್ಯನಂತೆ.) ಇದಕ್ಕೆ ಕಾರಣ ಮಂತ್ರದ ಮೂಲಸತ್ವ ಅಥವಾ "ಬೀಜ". ಆ ಹಂತದಲ್ಲಿ ಮಂತ್ರವು ಆರಾಧಿಸುವ ದೇವರು ಮತ್ತು ಸಾಧಕನ ನಡುವೆ ಒಂದು ಸಂಪರ್ಕಸೇತು ನಿರ್ಮಾಣವಾಗುತ್ತದೆ. ಆಗ, ಮಂತ್ರದ ಪುರುಷ ಶಕ್ತಿ ಮತ್ತು ದೇವಿಶಕ್ತಿ ಮಂತ್ರದ ಅವ್ಯಕ್ತಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಆ ಕ್ಷಣದಲ್ಲಿ ಸಾಧಕನಲ್ಲಿ ಅತ್ಯುನ್ನತ ಮಟ್ಟದ ಅಧ್ಯಾತ್ಮಿಕ ಜಾಗೃತಿಯಾಗುತ್ತದೆ; ಸಾಧಕನಿಗೆ ದೈವಸಾಕ್ಷಾತ್ಕಾರವಾಗುತ್ತದೆ ಹಾಗೂ ಮಂತ್ರದ ಗುರಿ ಸಾಧಿಸಲ್ಪಡುತ್ತದೆ. ಇದುವೇ "ಯೋಗ".
ಮನುಷ್ಯರ ಮೇಲೆ ಭಾವನೆಗಳ ಪ್ರಭಾವ ಅಪಾರ. ಅನಿಯಂತ್ರಿತ ಭಾವನೆಗಳಿಂದಾಗಿ ಮಾನವ ಜನಾಂಗಕ್ಕೆ ಹಾನಿ ಮಾಡಿದ ಹಲವರ ಬಗ್ಗೆ ನಾವು ತಿಳಿದಿದ್ದೇವೆ. ಚರಿತ್ರೆಯಲ್ಲಿ ಅಂತಹ ನೂರ… ಮುಂದೆ ಓದಿ...