ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ಕಥೆ-ಕಾದಂಬರಿಕಾರ ಪತ್ರಕರ್ತರಾದ ಶಂಕರಭಟ್ಟರು ಹುಟ್ಟಿದ್ದು ಆಗಸ್ಟ್ ೯, ೧೯೦೪ರಲ್ಲಿ ದ. ಕನ್ನಡ ಜಿಲ್ಲೆಯ ಪೆರುಮಾಯಿ ಗ್ರಾಮದಲ್ಲಿ. ತಂದೆ ಈಶ್ವರಭಟ್ಟ, ತಾಯಿ ಗೌರಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ. ಮಂಗಳೂರಿನ ಕೆನರಾ ಶಾಲೆಯಲ್ಲಿ ಹೈಸ್ಕೂಲು ವಿದ್ಯಾಭ್ಯಾಸ. ಧಾರವಾಡದ ಶಿಕ್ಷಣ ಸಮಿತಿಯಿಂದ ಉನ್ನತ ಶ್ರೇಣಿಯಲ್ಲಿ ಸ್ನಾತಕ ಪದವಿ. ಕಾರ್ನಾಡ ಸದಾಶಿವರಾಯರಿಂದ ಪ್ರಭಾವಿತರಾಗಿ ಶಾಲೆಯನ್ನು ತೊರೆದು ಸೇರಿದ್ದು ಸ್ವಾತಂತ್ರ್ಯ ಚಳವಳಿ, ಸ್ವಯಂಸೇವಕರಾಗಿ ಸೇವೆ. ಉದ್ಯೋಗಕ್ಕಾಗಿ ಸೇರಿದ್ದು ಕಾರ್ನಾಡ ಸದಾಶಿವರಾಯರು ಸ್ಥಾಪಿಸಿದ್ದ ಮಂಗಳೂರಿನ ರಾಷ್ಟ್ರೀಯ ಪಾಠಶಾಲೆ. ತಿಲಕ ವಿದ್ಯಾಲಯದಲ್ಲಿ ಅಧ್ಯಾಪಕರಾಗಿ ನಂತರ ಮಂಗಳೂರಿನ ಸೇಂಟ್ ಆಗ್ನೇಸ್ ಮಹಿಳಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ. ವಿದ್ಯಾರ್ಥಿಗಳಲ್ಲಿ ಕನ್ನಡದ ಒಲವನ್ನು ಮೂಡಿಸುವುದೇ ಇವರ ಅಧ್ಯಾಪನದ ಒಂದು ಅಂಗ. ಪತ್ರಿಕೋದ್ಯಮದಲ್ಲೂ ಆಸಕ್ತಿ. ಮಂಗಳೂರಿನ ನವಯುಗ, ಪತ್ರಿಕೆಯಲ್ಲಿ ಪತ್ರಕರ್ತರಾಗಿ, ರಾಷ್ಟ್ರಬಂಧು ವಾರಪತ್ರಿಕೆಯ ಪ್ರಥಮ ಸಂಪಾದಕರಾಗಿ, ರಾಷ್ಟ್ರಮತ ವಾರಪತ್ರಿಕೆಯನ್ನಾರಂಭಿಸಿ ತಮ್ಮ ಜೀವಿತಾವಯವರೆಗೂ ಸಂಪಾದಕರಾಗಿ ಸೇವೆ. ಹಲವಾರು ಕೃತಿ ರಚನೆ. ಕಾವ್ಯ-ವಿದ್ಯಾರ್ಥಿ ದೆಸೆಯಲ್ಲೇ ಕಾವ್ಯರಚನೆ ಪ್ರಾರಂಭ. ‘ಘೋಷಯಾತ್ರೆ’ ಸಂಕಲನ ಪ್ರಕಟಿತ. ಚೌಪದಿ, ಕುಸುಮ ಷಟ್ಪದಿ, ಮಂದಾನಿಲ ರಗಳೆಗಳ ಯಶಸ್ವಿ ಪ್ರಯೋಗ. ಗಾಂ ಸಂದೇಶ, ವಸ್ತ್ರಾಪಹರಣ, ಕಾಣಿಕೆ, ನಲ್ಮೆ, ಹಣ್ಣು-ಕಾಯಿ, ಪತ್ರ-ಪುಷ್ಪ ಮೊದಲಾದ ಕಾವ್ಯಕೃತಿಗಳು. ನಾಟಕ-ಉಷೆ, ಹಿಡಿಂಬೆ, ವಿರಾಮ, ಯಜ್ಞಕುಂಡ, ಅಜಾತ ಶತ್ರು, ಗುರುದಕ್ಷಿಣೆ, ಮಹಾಯೋಗಿ. ಕಾದಂಬರಿ-ದೇವತಾಮನುಷ್ಯ, ಧೂಮಕೇತು, ಲೋಕದ ಕಣ್ಣು, ಕಥಾಸಂಕಲನ-ಹಿಂ…
ಮುಂದೆ ಓದಿ...