ತುಷಾರಿಣಿ

ತುಷಾರಿಣಿ

ಕವನ

ತಮವನ್ನು ಓಡಿಸುತ
ತರತರದಿ ಬೆಳಕಿನವಳು
ತುಷಾರವಾಗಿ ಮನವ
ತಂಗಾಳಿಯಲಿ ಅಪ್ಪಿದಳು||

ತಳಮಳದ ಹೃದಯವನು
ತಪ್ಪಿಲದೆ ಒಪ್ಪಿದಳು
ತರಂಗದ ಅಲೆಯಂತೆ
ತೆವಂಗದಿ ಕಾಣುವಳು||

ತನುವನು ಬಯಸುತ
ತಪಸಿಯಾಗಿ ನಿಂತಳು
ತಮಟೆಯನು ಬಾರಿಸಿ
ತಳಕಿತ್ತದೆ ಕುಳಿತಳು||

ತಂಗುತಲಿ ಹೃದಯದಿ
ತಂಪನು ಅನುಭವಿಸಿದಳು
ತಂಗದಿರನಾದ ನಲ್ಲನನು
ತಂಗರಗದಿ ನೋಡಿದಳು||

ತೆಪ್ಪದಲಿ ನನಗಾಗಿ
ತಂದಿಹಳು ನಗೆಯಲ್ಲಿ
ತುಪ್ಪವನು ಹೆಪ್ಪಿಳಿಸಿ
ತೆಂಗಿನ ತೋಟದಲ್ಲಿ||

-ಶಂಕರಾನಂದ ಹೆಬ್ಬಾಳ 

ಚಿತ್ರ್