ಪುಸ್ತಕನಿಧಿ - ಕನ್ನಡ ಕೀಚಕ - ಜಿ ಪಿ ರಾಜರತ್ನಂ / ಕೈಲಾಸಂ ಅವರ ಪುಸ್ತಕ

ಪುಸ್ತಕನಿಧಿ - ಕನ್ನಡ ಕೀಚಕ - ಜಿ ಪಿ ರಾಜರತ್ನಂ / ಕೈಲಾಸಂ ಅವರ ಪುಸ್ತಕ

ಚಿತ್ರ

 ಕನ್ನಡದ ಶ್ರೇಷ್ಠ ನಾಟಕಕಾರ ಕೈಲಾಸಂ ಅವರು ಕೆಲವು ನಾಟಕಗಳನ್ನು ಇಂಗ್ಲೀಷ್ನಲ್ಲಿ ಬರೆದಿದ್ದಾರೆ.  ಒಂದು ನಾಟಕವನ್ನು ಕೀಚಕನ ಕುರಿತಾಗಿ ಇಂಗ್ಲೀಷಿನಲ್ಲಿ ಬರೆಯುವ ವಿಚಾರ ಇತ್ತು. ಅದರ ಕುರಿತು ಕೆಲವು ಸಂಗತಿಗಳನ್ನು ತಮ್ಮ ಆಪ್ತರೊಬ್ಬರಲ್ಲಿ ಹೇಳಿದ್ದರು. ಆ ನಾಟಕವನ್ನು ಬರೆಯುವ ಮುನ್ನವೇ ಅವರು ತೀರಿಕೊಂಡರು. ಮುಂದೆ ಆ ನಾಟಕವನ್ನು ತಮಗೆ ನೆನಪಿದ್ದ ಹಾಗೆ ಆಪ್ತರು ಇಂಗ್ಲಿಷ್ ನಲ್ಲಿ ಬರೆದರು. ಅದನ್ನು ಕನ್ನಡಿಗರಿಗೆ ತಲುಪಿಸುವ ಉದ್ದೇಶದಿಂದ ಜಿ ಪಿ ರಾಜರತ್ನಂ ಅವರು ಅನುವಾದಿಸಿದರು.  ಈ ಪುಸ್ತಕದ ಮುಖಪುಟವನ್ನು ಜೊತೆಯಲ್ಲಿನ ಚಿತ್ರದಲ್ಲಿ ನೋಡಬಹುದು. ಈ ಪುಸ್ತಕವು archive.org ನಲ್ಲಿ ನೀವು ಕೀಚಕ ಎಂದು ಹುಡುಕಿದರೆ ಸಿಗುತ್ತದೆ. 

ಇದು ಸುಮಾರು ನೂರು ಪುಟಗಳ ಚಿಕ್ಕ ಪುಸ್ತಕ. ಇದರಲ್ಲಿ ಕೀಚಕನ ಕುರಿತು ಕೈಲಾಸಮ್ ಅವರ ಹೊಸ ಕಲ್ಪನೆಗಳಿವೆ  ಇದರಲ್ಲಿ ಕೀಚಕನೇ ನಾಯಕ, ಒಳ್ಳೆಯವನು. ವಿರಾಟನಗರದ ಒಟ್ಟಾರೆ ಸಂಸ್ಕೃತಿಯ ಕುರಿತು ಒಳ್ಳೆಯ ಮಾತುಗಳಿವೆ.  ಸದ್ಯ ನಡೆಯುತ್ತಿರುವ ಎನ್ ಆರ್ ಸಿ /ಸಿ ಸಿ ಎ /ಎನ್ ಪಿ ಆರ್ ಮುಂತಾದ ನಾಗರಿಕತ್ವ ಕುರಿತಾದ ವಾದ ವಾಗ್ವಾದಗಳ ಬೆಳಕಿನಲ್ಲಿಯೇ ಇದನ್ನು ನೋಡಬಹುದು. ಇರಲಿ.

 

ಕೀಚಕನು ದ್ರೌಪದಿಯ ಸ್ವಯಂವರಕ್ಕೆ ಹೋಗಿದ್ದನು ಅವಳನ್ನು ನೋಡಿದ ತಕ್ಷಣ ಅವನಲ್ಲಿ ಒಲವು ಮೂಡಿತು. ಅವಳನ್ನು ಮದುವೆಯಾಗಲು ಬಿಲ್ಲುವಿದ್ಯೆ ಪರೀಕ್ಷೆ ಇತ್ತು. ಇವನು ಗದೆಯನ್ನು ಬಳಸುವಾತ . ಎಲ್ಲಾ ವಿಧಿಯಾಟ. ಉಪಾಯವಿಲ್ಲ ಎಂದುಕೊಂಡ.   ಮುಂದೆ ಬೇರೆ ಯಾರನ್ನೂ ಮದುವೆ ಆಗಲಿಲ್ಲ.  25 ವರ್ಷಗಳು ಕಳೆದು ಹೋದವು.  ಅನೇಕ ಯುದ್ಧಗಳನ್ನು  ಹಿಂದೆ ಗೆದ್ದ ಹಾಗೆ  ಇನ್ನೂ ಒಂದು ಯುದ್ಧ ಗೆದ್ದು ವಾಪಸ್ಸು ಬಂದಾಗ ತಂಗಿ ಸುದೇಷ್ಣೆಯು 
ಮದ್ಯವನ್ನು ತರಿಸಿಕೊಟ್ಟಳು.  ಆ ಮದ್ಯವನ್ನು  ಕೊಡಲು ಬಂದವಳು ಯಾರು ಅಂತೀರಿ ?  ದ್ರೌಪದಿ!  

ನೀವು ಆ ಪುಸ್ತಕವನ್ನು ಓದಲು ಅನುವಾಗುವಂತೆ ಹೆಚ್ಚೇನೂ ಬರೆಯುತ್ತಿಲ್ಲ. 

Rating
Average: 5 (4 votes)