ಪುಸ್ತಕ ಪರಿಚಯ

ಲೇಖಕರು: Ashwin Rao K P
June 17, 2023
‘ನೀ ದೂರ ಹೋದಾಗ’ ಇದು ಫೌಝಿಯಾ ಸಲೀಂ ಅವರ ಕಾದಂಬರಿ. ಕಾದಂಬರಿ ಬರೆಯುವವರೇ ಅಪರೂಪವಾಗಿರುವಾಗ ಇವರು ಬರೆದ ಕಾದಂಬರಿಯು ಹೊಸ ಆಕಾಂಕ್ಷೆಯನ್ನು ಹುಟ್ಟುಹಾಕುತ್ತದೆ. ಹೆಣ್ಣು ಮಗಳೊಬ್ಬಳು ಕಷ್ಟ ಪಟ್ಟು ದುಡಿದು, ಯಾರ ಸಹಾಯವನ್ನೂ ಕೋರದೆ ಹಣ ಗಳಿಸಿ ದೂರದ ದುಬೈಗೆ ಹೋಗುವ ಸಂಗತಿಯನ್ನು ಕಾದಂಬರಿಯಲ್ಲಿ ರೋಚಕವಾಗಿ ವರ್ಣಿಸಿದ್ದಾರೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಮೋಹನ್ ಕುಮಾರ್ ಟಿ. ಇವರು. ಇವರ ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ... “ಫೌಝಿಯಾ ಸಲೀಂ(ದುಬೈ)ರವರ ನಾಲ್ಕನೆಯ…
ಲೇಖಕರು: Ashwin Rao K P
June 15, 2023
ಶಿವಕುಮಾರ ಮಾವಲಿ ಅವರ ಮೊದಲ ಕಥಾ ಸಂಕಲನ `ದೇವರು ಅರೆಸ್ಟ್ ಆದ’. ಇಲ್ಲಿಯ ಕತೆಗಳ ನವೀನ ನಿರೂಪಣೆ, ಸೃಜನಾತ್ಮಕತೆ, ನವಿರಾದ ಹಗುರ ಭಾವಗಳು ಓದಿನೊಂದಿಗೆ ನಮ್ಮದಾಗುತ್ತದೆ. ತಮ್ಮ ತಾಜಾತನದ ಕತೆಯ ಎಳೆಯೊಂದಿಗೆ ಸಮ್ಮೋಹನಗೊಳಿಸುವಲ್ಲಿ ಯಶಸ್ವಿಯಾಗುತ್ತವೆ. ೧೦೪ ಪುಟಗಳ ಈ ಪುಟ್ಟ ಕಥಾ ಸಂಕಲನದ ಎಲ್ಲಾ ಕತೆಗಳು ಓದುವಂತಿವೆ. 'ದೇವರು ಅರೆಸ್ಟ್ ಆದ’ ಕತೆಯು ಬರಹಕ್ಕೂ ಬದುಕಿಗೂ ಸಂಬಂಧವಿಲ್ಲದೆ ನಾಡಿಗೆ ಬುದ್ಧಿ ಹೇಳುವ ಆಷಾಡಭೂತಿಗಳ ಬಣ್ಣ ಬಯಲು ಮಾಡುತ್ತದೆ. ಮೇಲ್ನೋಟಕ್ಕೆ ಸರಳವಾದ ಕತೆ ಎನಿಸಿಕೊಂಡರೂ…
ಲೇಖಕರು: Ashwin Rao K P
June 13, 2023
ಖ್ಯಾತ ಕತೆಗಾರ ಅಬ್ದುಲ್ ರಶೀದ್ ಮತ್ತೊಮ್ಮೆ ತಮ್ಮ ಕಥಾ ಸಂಕಲನದ ಜೊತೆ ಬಂದಿದ್ದಾರೆ. ಈ ಬಾರಿ ಅವರು ಅದಕ್ಕೊಂದು ವಿಲಕ್ಷಣ ಹೆಸರನ್ನೂ ನೀಡಿದ್ದಾರೆ. ‘ಅಂತರಾಷ್ಟ್ರೀಯ ಕುಂಬಳಕಾಯಿ' ಎನ್ನುವ ಶೀರ್ಷಿಕೆಯೇ ಕಥಾ ಸಂಕಲನವನ್ನು ಓದುವಂತೆ ಪ್ರೇರೇಪಿಸುತ್ತದೆ. ೯೬ ಪುಟಗಳ ಪುಟ್ಟ ಕಥಾ ಸಂಕಲನ. ಮುನ್ನುಡಿಯನ್ನು ಬರೆದಿದ್ದಾರೆ ಕನ್ನಡದ ಮತ್ತೊರ್ವ ಖ್ಯಾತ ಕತೆಗಾರ ಎಸ್ ದಿವಾಕರ್ ಇವರು. ಇವರ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ... “ಕನ್ನಡದಲ್ಲಿ ಸಣ್ಣಕತೆಗೆ ಪುನಃಶ್ಚೈತನ್ಯವನ್ನು ತಂದುಕೊಡುವ ಹೊಸ…
ಲೇಖಕರು: Ashwin Rao K P
June 10, 2023
‘ಸಿನಿ ಲೋಕ ೨೧’ ಪುಸ್ತಕವು ಇಪ್ಪತ್ತೊಂದನೇ ಶತಮಾನದ ಆಯ್ದ ಜಾಗತಿಕ ಶ್ರೇಷ್ಟ ಚಲನಚಿತ್ರಗಳ ವಿಶ್ಲೇಷಣಾತ್ಮಕ ಲೇಖನಗಳ ಸಂಕಲನವಾಗಿದೆ. ಎ.ಎನ್.ಪ್ರಸನ್ನ ಈ ಕೃತಿಯ ಲೇಖಕರು. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಇವರು. ತಮ್ಮ ಮುನ್ನುಡಿಯಲ್ಲಿ ಅವರು ಮರೆದ ನುಡಿಗಳು ಹೀಗಿವೆ... “ಸಿನಿಲೋಕ-21 ಕೃತಿಯು ಇಪ್ಪತ್ತೊಂದನೆ ಶತಮಾನದ ಮೊದಲಿನ ಈ ಎರಡು ದಶಕಗಳಲ್ಲಿ ಜಗತ್ತಿನಲ್ಲಿ ಮೂಡಿಬಂದ ಚಿತ್ರಗಳಲ್ಲಿ ಆಯ್ದ ನಲವತ್ತು ಚಿತ್ರಗಳ ಕುರಿತ ಲೇಖನ…
ಲೇಖಕರು: Ashwin Rao K P
June 08, 2023
ಪತ್ರಕರ್ತ, ಕಥೆಗಾರ ಪ್ರೇಮಕುಮಾರ್ ಹರಿಯಬ್ಬೆ ತಾವು ಬರೆದ ಕಥೆಗಳನ್ನು ಒಟ್ಟುಗೂಡಿಸಿ ‘ನಾಟಕೀಯ' ಎಂಬ ಕಥಾ ಸಂಕಲನವನ್ನು ಹೊರತಂದಿದ್ದಾರೆ. ೯೮ ಪುಟಗಳ ಪುಟ್ಟ ಪುಸ್ತಕದ ಕಥೆಗಳ ಬಗ್ಗೆ ಕಥೆಗಾರ ಪ್ರೇಮಕುಮಾರ್ ಅವರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ... “ಪ್ರಸ್ತುತ ಕರ್ನಾಟಕದ ಸಾಮಾಜಿಕ ಸಂದರ್ಭ ವಿಚಿತ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ನಾವು ರೂಢಿಸಿಕೊಂಡು ಬಂದ ಸೌಹಾರ್ದ ಪರಿಸರ ಕ್ರಮೇಣ ಕಣ್ಮರೆಯಾಗುತ್ತಿದೆ. ಇತಿಹಾಸವನ್ನು ವಿಕೃತಗೊಳಿಸಿ ಅಸಹನೆಯ ಬೀಜಗಳನ್ನು ಬಿತ್ತಿ ಫಸಲು ತೆಗೆಯುವ…
ಲೇಖಕರು: Ashwin Rao K P
June 06, 2023
ವೀರಣ್ಣ ಮಡಿವಾಳರ ಇವರು ಬರೆದ ‘ನಾಗರ ನುಂಗಿದ ನವಿಲುʼ ಸಂಕಲನದಲ್ಲಿ ೫೪ ಕವಿತೆಗಳಿವೆ. ಈ ೧೨೦ ಪುಟಗಳ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಪುರುಷೋತ್ತಮ ಬಿಳಿಮಲೆ ಇವರು. ಇವರ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ... “ವೀರಣ್ಣ ಮಡಿವಾಳರ ಬಹಳ ತೀವ್ರತೆಯಿಂದ ಬರೆಯುತ್ತಿರುವ ಕವಿ. ಅವರಿಗೆ ಬರವಣಿಗೆ ಎಂಬುದು ಬದುಕಲು ಬೇಕಾದ ಒಂದು ಉತ್ಕೃಷ್ಟ ಬದ್ಧತೆ. ಉಸಿರಾಡಲು ಬೇಕಾದ ಗಾಳಿ ಮತ್ತು ಸಂಭ್ರಮಿಸಲು ಬೇಕಾದ ಒಂದು ವಸ್ತು. ಹಾಗಾಗಿ ಎಲ್ಲಿಯೂ ಅವರ ಅಕ್ಷರಗಳು…