ಪುಸ್ತಕ ಪರಿಚಯ

May 21, 2023
“ಅಪ್ಪ ಕಾಣೆಯಾಗಿದ್ದಾನೆ” ಕಥಾ ಸಂಕಲನವು ಒಟ್ಟು ಹತ್ತು ಕಥೆಗಳನ್ನು ಒಳಗೊಂಡಿದೆ. ಬಹು ಪಾಲು ಈ ಕಥೆಗಳಲ್ಲಿ ಅಪ್ಪನಂತಹ ಗಂಡಸು ಪ್ರಾಣಿಗಳು ಕಾಣೆಯಾಗಿಯೇ ಹೋಗಿದ್ದಾರೆ, ಅಪ್ಪ ಇಲ್ಲಿ ಪ್ರತಿಮೆ ಮಾತ್ರ ಆಗಿದ್ದಾನೆ ಎನ್ನುವುದು ನನ್ನ ಅಭಿಮತ. ಲೇಖಕರಾದ ಬೇಲೂರು ರಘುನಂದನ್ ಅವರ ಈ ಕಥಾ ಸಂಕಲನ ಓದಿದ ಬಳಿಕ ನನಗನಿಸಿದ್ದು... “ಕವಿಯೊಬ್ಬ ಸಾಮಾನ್ಯರಿಗಿಂತ ಭಿನ್ನವಾಗುವುದು ಹೇಗೆ? ಇದು ಮಿಲಿಯನ್ ಡಾಲರ್ ಪ್ರಶ್ನೆ.ಬಹುಶಃ ಕವಿ ತನ್ನ ಅನುಭವಗಳನ್ನು ಪದಗಳಲ್ಲಿ ಕಟ್ಟಿಕೊಡುವ ಪ್ರತಿಭೆ ಹೊಂದಿರುತ್ತಾನೆ.…
ಲೇಖಕರು: Ashwin Rao K P
May 20, 2023
ವೃತ್ತಿಯಲ್ಲಿ ಶಿಕ್ಷಕರಾದ ಉದಯೋನ್ಮುಖ ಬರಹಗಾರರಾದ ಗುರುಪ್ರಸಾದ್ ಕಂಟಲಗೆರೆ ಅವರು ತಮ್ಮ ಹಾಸ್ಟೆಲ್ ದಿನಗಳ ಅನುಭವಗಳನ್ನು ಬಹಳ ಸೊಗಸಾಗಿ ‘ಟ್ರಂಕು ತಟ್ಟೆ' ಎಂಬ ಪುಸ್ತಕದ ಮೂಲಕ ಹೊರತಂದಿದ್ದಾರೆ. ೧೩೬ ಪುಟಗಳ ಪುಟ್ಟ ಪುಸ್ತಕದಲ್ಲಿ ಬರೆದಿರುವ ಗುರುಪ್ರಸಾದ್ ಇವರ ಹಾಸ್ಟೆಲ್ ಅನುಭವಗಳು ಬಹಳಷ್ಟು ಹಾಸ್ಟೇಲ್ ವಾಸಿಗಳ ಅನುಭವವೂ ಆಗಿರಬಹುದು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ಹೀಗಿವೆ...   “ನಮ್ಮ ಅಮೂಲ್ಯ ಬಾಲ್ಯವನ್ನ ಸರ್ಕಾರಿ ಹಾಸ್ಟೆಲ್‍ನಲ್ಲಿ ಒಟ್ಟಿಗೆ ಕಳೆದಿದ್ದ ನಾವು,…
ಲೇಖಕರು: Ashwin Rao K P
May 18, 2023
ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯವರ ಸೌಜನ್ಯದಿಂದ ಪ್ರಕಟವಾದ ಪುಸ್ತಕ ‘ಹೊಸಗನ್ನಡ ಕಾವ್ಯಶ್ರೀ’. ಈ ಪುಸ್ತಕದ ಮುದ್ರಣವಾಗಿ ಈಗಾಗಲೇ ಆರು ದಶಕಗಳು ಸಂದಿವೆ. ಆದರೂ ಅಂದಿನ ಕವಿಗಳ ಹೊಸಗನ್ನಡ ಕಾವ್ಯಗಳು ಮನಸ್ಸಿಗೆ ಮುದ ನೀಡುತ್ತಿವೆ. ಅಂದಿನ ಸಮಯದ ಭಾಷಾ ಪ್ರಯೋಗ, ವಿಷಯ ವಸ್ತುಗಳು ಹೊಸ ಕವಿಗಳಿಗೆ ಇನ್ನಷ್ಟು ಕಲಿಯುವ ಹುಮ್ಮಸ್ಸು ಮೂಡಿಸುತ್ತದೆ. ಈ ಕೃತಿಯ ಕವನಗಳನ್ನು ಸಂಗ್ರಹಿಸಿದವರು ‘ವರಕವಿ’ ದ ರಾ ಬೇಂದ್ರೆ ಹಾಗೂ ಸಾಹಿತಿ ಎಂ. ಮರಿಯಪ್ಪ ಭಟ್ ಇವರು.  ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ…
ಲೇಖಕರು: Ashwin Rao K P
May 16, 2023
‘ಚಾಲುಕ್ಯ ವಿಕ್ರಮ' ಎನ್ನುವ ಐತಿಹಾಸಿಕ ಕಾದಂಬರಿಯನ್ನು ಬರೆದಿದ್ದಾರೆ ಪ್ರಕಾಶ್ ಹೇಮಾವತಿ ಇವರು. ಕರ್ನಾಟಕದ ಭವ್ಯ ಚರಿತ್ರೆಯಲ್ಲಿ ತಮ್ಮದೇ ವಿಶಿಷ್ಟ ಕೊಡುಗೆಗಳಿಂದ ಅಮರರಾಗಿರುವ ಚಕ್ರವರ್ತಿಗಳಲ್ಲಿ ಕಲ್ಯಾಣಿ ಚಾಲುಕ್ಯರ ಆರನೇ ವಿಕ್ರಮಾದಿತ್ಯ ಅದ್ವಿತೀಯ ವ್ಯಕ್ತಿ. ಸುಮಾರು ಐವತ್ತೊಂದು ವರುಷಗಳ ತನ್ನ ದೀರ್ಘ ಆಳ್ವಿಕೆಯಲ್ಲಿ ಬಹುತೇಕ ಶಾಂತಿಯನ್ನು ಕಾಪಾಡಿಕೊಂಡು, ಜನರಿಗೆ ಸುರಕ್ಷತೆ ಒದಗಿಸುವುದರೊಂದಿಗೆ ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲಿಯೂ ಅಗಾಧ ಏಳಿಗೆ ಹೊಂದುವುದಕ್ಕೂ ಕಾರಣನಾಗಿದ್ದಾನೆ"…
ಲೇಖಕರು: addoor
May 13, 2023
“ಚಿತ್ರಗುಪ್ತ" ಪತ್ರಿಕೆಯಲ್ಲಿ ನಿರಂಜನರು ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ "ಐದು ನಿಮಿಷ”. ಎಪ್ಪತ್ತು ವರುಷಗಳ ಮುಂಚೆ (1953ರಲ್ಲಿ) ಪ್ರಕಟವಾದ ಈ ಪುಸ್ತಕದ ಬರಹಗಳನ್ನು ಓದುವುದೇ ಖುಷಿ. ನಿರಂಜನರು ಕನ್ನಡದ ಪ್ರಸಿದ್ಧ ಕಾದಂಬರಿಕಾರರು ಹಾಗೂ ಸಣ್ಣ ಕತೆಗಳ ಬರಹಗಾರರು. ಜಗತ್ತಿನ 125 ದೇಶಗಳ ಆಯ್ದ ಸಣ್ಣಕತೆಗಳ ಮಾಲಿಕೆ (25 ಸಂಪುಟಗಳಲ್ಲಿ) “ವಿಶ್ವ ಕಥಾಕೋಶ" ಮತ್ತು ಕಿರಿಯರ ವಿಶ್ವಕೋಶ - "ಜ್ನಾನ ಗಂಗೋತ್ರಿ” -ಇವೆರಡು ಅಮೂಲ್ಯ ಪುಸ್ತಕಗಳನ್ನು ಸಂಪಾದಿಸಿ, ಕನ್ನಡದ ಸಾಹಿತ್ಯಭಂಡಾರವನ್ನು…
ಲೇಖಕರು: Ashwin Rao K P
May 13, 2023
“ಗುಜರಿ ಬಕೀಟಿನೊಂದಿಗೆ ಶಿವಾಯನಮಹ" ಎಂಬ ವಿಲಕ್ಷಣ ಹೆಸರಿನ ಕೃತಿಯೊಂದನ್ನು ಬರೆದು ಪ್ರಕಟಿಸಿದ್ದಾರೆ ಲೇಖಕರಾದ ಕೃಷ್ಣಮೂರ್ತಿ ಬಿಳಿಗೆರೆ ಇವರು. ಮನುಷ್ಯ ಪಾತ್ರಗಳು ಬಂದರೂ ಅವು ನಿಮಿತ್ತ ಮಾತ್ರ ಇಡಿಯಾದ ನೋಟವನ್ನು ಸಾಧಿಸಿಕೊಂಡಿರುವುದರಿಂದಲೇ ಅವರು ವೈರುಧ್ಯ ಪಾತ್ರಗಳ ಎದಿರು ಬದಿರು ನಿಲ್ಲಿಸಿ ಜಗಳ ಮಾಡಿಸುವುದಿಲ್ಲ. ಭೂಮಿ ತಾಯಿಯ ಸಲುವಾಗಿ ತಾನೇ ಸೇನಾನಿಯಾಗಲು ತೊಡಗುವ ಬರಹಗಳಲ್ಲಿ ಲೇಖಕರು ಮುಳುಗುತ್ತಾರೆ ಎನ್ನುತ್ತಾರೆ ಮುನ್ನುಡಿಯನ್ನು ಬರೆದ ಲೇಖಕರಾದ  ಮೊಗಳ್ಳಿ ಗಣೇಶ್‌ ಇವರು. ಇವರು…