ಇದು ಮೊದಲನೇ ಬ್ಲಾಗ್, ನನ್ನನ್ನಾರ್ಶೀವಧಿಸಿ.

ಇದು ಮೊದಲನೇ ಬ್ಲಾಗ್, ನನ್ನನ್ನಾರ್ಶೀವಧಿಸಿ.

ಇದು ನನ್ನ ಮೊದಲ ಬ್ಲಾಗ್. ಇಲ್ಲಿ ನನ್ನದೇ ಹೆಸರಿನ ಇನ್ನೊಬ್ಬರೂ ಇದ್ದಾರೆ.
ಅವರು ಗಣೇಶ್ ಆದರೆ ನಾನು ‘ಗಣೇಶ’.

ಸಂಪದದಲ್ಲಿ ಬರೆಯುವ ಉತ್ತಮ ಗುಣದ ಯುವಕರಿಗೂ, ಸುಂದರ ಯುವತಿಯರಿಗೂ ನಮಸ್ಕಾರ. ನಿಮ್ಮ ಭವ್ಯ ಸ್ವಾಗತಕ್ಕಾಗಿ ನಾನು ಬ್ಲಾಗಿಲಲ್ಲಿ ನಿಂತಿರುವೆನು.

ನನ್ನ ಬಗ್ಗೆ ಹೇಳಬೇಕೆಂದರೆ:-

ನಾನು ಒಬ್ಬ ಮದ್ಯೋನ್ಮುಖ ಕವಿ. ಸುಮಾರು ನಾನೂರಕ್ಕೂ ಮಿಕ್ಕಿ ಅರೆಪ್ರೇಮ ಕವಿತೆಗಳನ್ನ ಬರೆದಿರುವೆನು. ದಿನಕ್ಕೊಂದು ಸಂಪದದಲ್ಲಿ ಹಾಕುವೆನು.

ದಿನವೂ ಅಜ್ಜಿಯೊಂದಿಗೆ ಪ್ರವಚನಗಳಿಗೆ ಹೋಗಿ ಪ್ರಸಾದ ಸಿಗುವವರೆಗೆ ಅಲ್ಲೇ ನಿದ್ರೆ ಮಾಡುತ್ತಿದ್ದೆ. ಧರ್ಮ/ದೇವರಿಗೆ ಸಂಬಂಧಿಸಿದ ಚರ್ಚೆಗಳಲ್ಲೂ ಭಾಗವಹಿಸಲು ಉತ್ಸುಕನಾಗಿದ್ದೇನೆ.

Kadak Mx 810 0.25 mega pixel ನ ನನ್ನದೇ ಕ್ಯಾಮರದಲ್ಲಿ ತೆಗೆದ ಅನೇಕ ಫೋಟೋಗಳಿವೆ. ಚಿತ್ರಪುಟದಲ್ಲಿ ಹಾಕುವೆ.

ಅನೇಕ ರಾತ್ರಿ ನಕ್ಷತ್ರಗಳನ್ನು ನೋಡಿಯೇ ಕಳೆದಿದ್ದೇನೆ. (ತಂದೆಯವರು ಮನೆಯಿಂದ ಹೊರಹಾಕಿದ್ದಾಗ). ನಕ್ಷತ್ರಗಳ ಬಗ್ಗೆಯೂ ಬರೆಯುವೆ.

ಪ್ರಾಣಿಗಳೆಂದರೆ ನನಗೆ ಬಹಳ ಇಷ್ಟ. ಅದರಲ್ಲೂ ಅಳಿವಿನಂಚಿನಲ್ಲಿರುವ ಕಾಡುಪ್ರಾಣಿಗಳನ್ನು ಹರ್ಷರವರ ಗಮನಕ್ಕೆ ಬಾರದಂತೆ ಹೇಗೆ ಕೊಲ್ಲುವುದು ಎಂಬ
ಬಗ್ಗೆಯೂ ಬರೆಯುವೆನು.

ಕೊನೇರಕ್ತವಿರುವವರೆಗೆ ಕನ್ನಡಕ್ಕಾಗಿ,ಕಾವೇರಿಗಾಗಿ ಹೋರಾಡುವೆ ಎಂದು ಮೆರವಣಿಗೆ ಹೊರಟು, ಪೋಲೀಸರು ಬಂದಾಗ ಓಡಿಹೋದವರಲ್ಲಿ ಮೊದಲಿಗ ನಾನು. ಇಲ್ಲೂ ಕನ್ನಡ/ಕಾವೇರಿ ಪರ ಹೋರಾಡುವೆ.

ಲೀನಾಕ್ಸಿ/ಒಂದುಗುಟ್ಟು ಬಗ್ಗೆ ಸರಣಿ ಲೇಖನ ಸಹ ಬರೆಯುವೆ.

ಕನ್ನಡ ಟಿ.ವಿ. ಧಾರಾವಾಹಿಗಳನ್ನು ನೋಡುವ ಇಬ್ಬರಲ್ಲಿ ನಾನೊಬ್ಬ. ಅದರ ಬ...ಗ್ಗೆ..
ಎಲ್ಲಿ ಓಡುವಿರಿ..ನಿಲ್ಲಿ..೪ ಮಾತು ಚೆಲ್ಲಿ..
-ಗಣೇಶ.

Rating
No votes yet

Comments