ಆಶಾ. ಡಿ (ಆಷಾಢ) ಮಾಡಿದ ಮೋಡಿ .....

ಆಶಾ. ಡಿ (ಆಷಾಢ) ಮಾಡಿದ ಮೋಡಿ .....

ಯಾರು ರೀ.. ಆಶಾದೇವಿ ನಿಮಗೇನಾದರೂ ಗೊತ್ತ?. ಹೆದರಬೇಡಿ, ಇವಳು ನನ್ನ ಹೆ೦ಡತಿನು .. ಅಲ್ಲ ಗರ್ಲ್ ಫ್ರೆಂಡ್ ನು.. ಅಲ್ಲ . ಇವಳು ಋತುರಾಜನ ಗರ್ಲ್ ಫ್ರೆಂಡ್ ಮತ್ತು ಪ್ರೇಯಸಿ ಕೂಡ . ಋತು ರಾಜ ಎಲ್ಲ ೧೧ ಮಾಸಗಳನ್ನು ಪಟಾಯಿಸಿ ಮದುವೆಯಾಗಿದ್ದಾನೆ ಅಂತ ಅನ್ನಿಸುತ್ತೆ , ಆದರೆ ಈ ಆಶಾ ದೇವಿ ಮಾತ್ರ ಅವನಿಗೆ ಕೈ ಕೊಟ್ಟಿರಬೇಕು. ಅದಕ್ಕೆ ಇರಬೇಕು ಗಂಡ ಹೆ೦ಡತಿರು ಒಂದಾಗಿ ಇರಬಾರದೆಂದು, ಈ ಆಷಾಢ ಮಾಸದಲ್ಲಿ ಅತ್ತೆ ಸೊಸೆಯ ನೆಪ ಹೇಳಿ ಅವರನ್ನು ವಿರಹ ವೇದನೆ ಇಂದ ಸತಾಯಿಸುತ್ತಿರಬೇಕು .

ಆಶಾ. ಡಿ (ಆಷಾಢ) ಮಾಸದಲ್ಲಿಯ ಚಳಿ ಗಾಳಿ ತುಂಬಾ ಚೆನ್ನಾಗಿ ಬಿಸುತ್ತೆ . ಚಳಿಯಲ್ಲಿ ಏನು ಕೆಲಸ ಮಾಡಲು ಮನಸ್ಸು ಬರುವದಿಲ್ಲ ಹಾಗೆ ಬೆಚ್ಚನೆ ಹಾಸಿಗೆ ಹಾಸಿ ಮಲಗಿ ಬಿಡಬೇಕೆಂದು ಅನಿಸುವದು .

ಇವತ್ತಿನಿಂದ ಆಶಾದೇವಿ ಮನೆಗೆ ಬಂದಿದ್ದಾಳೆ. ಹೆಂಡತಿಗೆ ರಜೆ ಇವಳ ಜೊತೆನೆ ಪ್ರಣಯ ಸಲ್ಲಾಪವೆಲ್ಲ. ನಮ್ಮೂರಲ್ಲಿ ಅಂದರೆ ಮಲೆನಾಡಿ ನಲ್ಲಿ ಈ ಆಶಾ ದೇವಿಯ ಪ್ರತಾಪ ನೋಡಬೇಕು . ಇವಳು ತನ್ನ ಅಮೃತ ಸ್ಪರ್ಶದಿಂದ ಎಲ್ಲ ಹದಿ ಹರೆಯದ ಹುಡುಗ ಹುಡುಗಿಯರನ್ನು ಸತಾಯಿಸಿರುತ್ತಾಳೆ . ಅವಳು ಎಲ್ಲ ಹುಡುಗ , ಹುಡುಗಿಯರಿಗೂ ತನ್ನ ಸಿಹಿ ಮುತ್ತು ಗ್ಯಾರಂಟೀ ನೀಡಿರುತ್ತಾಳೆ (ಅಂದರೆ ತುಟಿಗಳು ತಂಪು ಗಾಳಿಯಿಂದ ಬಿರುಕು ಬಿಟ್ಟಿರುತ್ತವೆ). ಹುಡುಗಿಯರಿಗೆ ಆದರೆ ಪರವಾಗಿಲ್ಲ ಹುಡುಗರಿಗೂ lipstick ಹಾಕಿರುತ್ತಾಳೆ . ಹೀಗೆ ಗೋವಿಂದ ಆಚಾರ್ಯರ ಮಗ ರಮೇಶನಿಗೆ lipstick ಇಟ್ಟಿದ್ದಳು . ಅವಳ lipstick ಮಹಾತ್ಮೆಯಿಂದ ತೇಟ ಹುಡುಗಿಯಂತೆ ಕಾಣುತ್ತಿದ್ದ ರಮೇಶ . ರಮೇಶ ಯಾವತ್ತು ಪ್ಯಾಂಟ್ ಶರ್ಟ್ ದರಿಸಿದವನಲ್ಲ. ಅವನೆನಿದ್ದರು ಹಾಕುವದು ಜುಬ್ಬಾ ಪೈಜಾಮ. ಅವನು ಹೊಸದಾಗಿ ಹೊಲಸಿದ ಜುಬ್ಬಾ ಪೈಜಾಮ ತೇಟ ಹುಡುಗಿಯರ ಚುಡಿದಾರದಂತೆ ಹೊಲೆದಿದ್ದ ಅವನ ಟೈಲರ್. ಅವನ ರೂಪವೋ ಯಾ ಹುಡುಗಿಯರು ನಾಚುವ ಸೌಂದರ್ಯ . ಹೊಸದಾಗಿ transfer ಆಗಿ ಬಂದ ಕಲ್ಲೇಶಪ್ಪನ ಮಗ ಪಕ್ಯ ಈ ರಮೆಶನನ್ನ ಹುಡುಗಿ ಎಂದು ತಿಳಿದು ಅವನ ಹಿಂದೆ ಬಿದ್ದು ಲವ್ ಲೆಟರ್ ಬೇರೆ ಕೊಡಲು ಹೋಗಿದ್ದಾಗ ಅವರಪ್ಪ ಗೋವಿಂದ್ ಆಚರ್ಯರಿಂದ ಕಪಾಳ ಮೋಕ್ಷ ಹೊಂದಿದ್ದ . ಅನಂತರ ಜುಬ್ಬಾ ಪೈಜಮಕ್ಕೆ ದೊಡ್ಡದೊಂದು ನಮಸ್ಕಾರ ಹೇಳಿ ಪ್ಯಾಂಟ್ ಶರ್ಟ್ ಧರಿಸಲು ಶುರು ಮಾಡಿದ್ದ ಪಾಪ.. ನಮ್ಮ ಈ ರಮೇಶ.

ಹೀಗೆ ಗೋವಿಂದ ಆಚಾರ್ಯರ ಇನ್ಸಿಡೆಂಟ್ ನ ಹಾಗೆ ಅತ್ತೆ ಗಂಡನ ಹಾಗೆ ಸೊಸೆಗೆ ಕಾಣುತ್ತಾಳೋ... ಗೊತ್ತಿಲ್ಲ ಅಥವಾ ಋತುರಾಜನ ಶಾಪ ದಿಂದಲೋ? ಒಟ್ಟಿನಲ್ಲಿ ಅವರನ್ನು ದೂರ ದೂರ ಇಡುತ್ತಾರೆ.

ಈ ಆಶಾ ದೇವಿಯ ಮುತ್ತಿನಿಂದ ಬಚಾವ ಆಗಲು ಕೆಲ ನನ್ನ ಸ್ನೇಹಿತರು ಬಿಡಿ ಅಥವಾ ಸಿಗರೇಟ್ ಗೆ ಮೊರೆ ಹೋಗಿರುತ್ತಾರೆ .

ಇದು ಇಲ್ಲಿಯ ಕತೆ ಅಷ್ಟೆ ಅಲ್ಲ ತಮಿಳ್ ನಾಡಿನಲ್ಲೂ ಗಂಡ ಹೆಂಡತಿಯರನ್ನು ಒಂದಾಗಿ ಇರಲು ಬಿಡುವದಿಲ್ಲ . ಆದರೆ ಹೆಸರು ಮಾತ್ರ "ಆಡಿ". ಆದರೆ ನೋಡಲು ಬಿಡಲಾರದೆ ಇಬ್ಬರನ್ನು ದೂರ ದೂರ ಓಡಿಸಿರುತ್ತಾರೆ .

ಅದಕ್ಕೆ ಇರಬೇಕು ನನ್ನ ಗಾಡಿಗೂ ಆಶಾಳ ಗಾಳಿ ಸೊಂಕಿದೆ . ರಾಡಿ(ಕೆಸರು)ಯನ್ನು ಕಂಡು ದೂರ ದೂರ ಓಡುತ್ತಿದ್ದ ಹಾಗೆ ನಾನು ಖುಷಿಪಟ್ಟಿದ್ದು ಅಷ್ಟಿಷ್ಟಲ್ಲ, ಆದರೆ ಹುಡುಗಿಯರ ಗಾಡಿ ಕಡೆಗೆ ವಾಲುತ್ತಿದ್ದಾಗ ಕೆಟ್ಟ ಕೋಪ ಬಂದಿತ್ತು .

ಈ ಆಶಾ ದೇವಿಯ ಪ್ರತಾಪ ನನ್ನ ಗೆಳೆಯನ ಮನೆಯಲ್ಲೂ ನಡೆದಿತ್ತು .ಅವರದು joint family ಎಲ್ಲರು ಒಟ್ಟಿಗೆ ಇರುವದು ತವರು ಮನೆ ಅತ್ತೆ ಮನೆ ಎರಡು ಒಂದೇ . ಹೀಗಾಗಿ ನನ್ನ ಗೆಳಯ ತನ್ನ ಹೆಂಡತಿಯನ್ನು ಅಕ್ಕ ಪಕ್ಕ ದಲ್ಲಿ ಯಾವುದಾದರು ಒಂದು ರೂಂ ಭಾಡಿಗೆ ಹಿಡಿದು ಅಲ್ಲಿ ಇಡಿಸುತ್ತಿದ್ದ . ವರ್ಷದಲ್ಲಿ ೨೦೦೦ ರುಪೈಯಗಳ extra ಖರ್ಚು .ಮಕ್ಕಳಿಗೆ ಹಬ್ಬವೋ ಹಬ್ಬ . ಎರಡೆರಡು ತರಹದ ತಿಂಡಿ ,ಊಟ etc...

ಬೇಗನೆ ಈ ಆಶಾ ದೇವಿ ಹೋಗಿ ವಿರಹ ವೇದನೆ ಮುಗಿಯಲಿ ಎಂದು ಆಶಿಸೋಣ . Dr ರಾಜ ರವರ "ಶ್ರಾವಣ ಮಾಸ ಬಂದಾಗ ಆನಂದ ತಂದಾಗ ..ವಿರಹ ಗೀತೆ ಇನ್ನಿಲ್ಲ ..." ಹಾಡಿನ ಹಾಗೆ ನಮ್ಮೆಲ್ಲರಿಗೂ ಮಡದಿಯ ಪ್ರೀತಿಯನ್ನು ಸವಿಯೋಣ . ವಿರಹ ಗೀತೆಯನ್ನು ಮರೆಯೋಣ .........

(Note:ಆಷಾಢದ ಮೇಲೆ ಕವನ ಬರೆದು ಈ article ಬರೆಯುವದಕ್ಕೆ ಪ್ರೋತ್ಸಾಹಿಸಿದ ಶ್ರೀ ಉಮೇಶ್ ದೇಸಾಯಿ ಯವರಿಗೆ ಅನಂತಾನಂತ ಧನ್ಯವಾದಗಳು).

Rating
No votes yet