ಮತ್ತೊಮ್ಮೆ

ಮತ್ತೊಮ್ಮೆ

ಕವಿ

ಯಾರೋ ಅಂದರು,
'ರವಿ ಕಾಣದ್ದನ್ನು ಕವಿ ಕಂಡ',
ನಾನಂದೆ, ಕವಿ ಕುಡಿದಿರಬಹುದು ಹೆಂಡ.


ಯೋಚನೆ

ಸಂತರು ಹೇಳಿದರು 'ಒಳ್ಳೆಯದು ಯೋಚನೆ ಮಾಡು',
ನಾನಂದೆ, 'ಒಳ್ಳೆಯದು, ಯೋಚನೆ ಮಾಡುತ್ತೇನೆ'.


ನನ್ನದಲ್ಲ

ಕೆಲ ಪಂಕ್ತಿಗಳು ಅಪ್ರಯತ್ನವಾಗಿ ಮೂಡಿ ಬಂದಿವೆ ನನ್ನ ಬರಹದಲ್ಲಿ.
ಅವುಗಳನ್ನು ನಾನು ಯೋಚಿಸಿ ಬರೆದಿರಲಿಲ್ಲ,
ಆದ್ದರಿಂದ ಈ ಪಂಕ್ತಿಗಳು ನನ್ನದೆಂಬ ಯೋಚನೆ ಸಲ್ಲ!

 

Rating
No votes yet