ಪರಸ್ಪರ

ಪರಸ್ಪರ

ಬರಹ

ಹರಿದುಬಂತು ನಾಲ್ಕು ಲಕ್ಷ ಕೋಟಿ ಬಂಡವಾಳ
ಕೊಡಬೇಕಿನ್ನವರಿಗೆ ನಾವ್ ಭೂಮಿ ಭಾಳಭಾಳ!
ಜೊತೆಗೆ ನೀರು ಮತ್ತು ಕರೆಂಟ್ ಕೂಡ ನೀಡಬೇಕು
ತೆರಿಗೆ, ಶುಲ್ಕ ಎಲ್ಲವನ್ನು ಮಾಫಿ ಮಾಡಬೇಕು

ನೀಡೋಣ, ಮಾಡೋಣ, ನಮಗೇ ಲಾಭ ತಾನೆ?
ಕೈಗಾರಿಕೆಯಿಂದ ರಾಜ್ಯ ಬೆಳೆವುದು ತಂತಾನೇ.
ಆದರೀಗ ಸಮಸ್ಯೆಯೇ ನೀರು, ಕರೆಂಟ್‌ನದ್ದು
ಜೊತೆಗೆ, ಭೂಮಿಬಿಡಲೊಪ್ಪದ ರೈತ ಬಂಧುಗಳದು

ಕುಡಿಯಲಿಕ್ಕೇ ನೀರಿಲ್ಲ, ಮನೆಗೆ ಕರೆಂಟಿಲ್ಲ,
ಬೆಳೆ ಬೆಳೆದೂ ರೈತರಿಗೂ ನಮಗೂ ಸುಖವಿಲ್ಲ.
ಕೈಗಾರಿಕೆ ಬೇಕೆಂದರೆ ಕಷ್ಟ ಸಹಿಸಬೇಕು
ಪ್ರಗತಿಗಾಗಿ ನೀರು, ಕರೆಂಟ್, ಭೂಮಿ ತ್ಯಜಿಸಬೇಕು?

ಈ ದಿಸೆಯಲಿ ಜನರಿಗಾವ ಸಮಸ್ಯೆ ಇರದಂತೆ
ನೋಡಿಕೊಳುವ ಜವಾಬ್ದಾರಿ ಸರ್ಕಾರದ್ದಂತೆ
ಪರ್ಯಾಯ ಮಾರ್ಗಗಳನು ಹುಡುಕಲಿ ಸರ್ಕಾರ
ಜೊತೆಗೆ ನಾವು ಸಹಕರಿಸುತ್ತಿರೋಣ ಭರಪೂರ