ಹೆತ್ತವ್ರ ದೊಡ್ಡ ತಪ್ಪು...

ಹೆತ್ತವ್ರ ದೊಡ್ಡ ತಪ್ಪು...

    ಹೆತ್ತವ್ರ ಕೆಲ್ಸ ಬರೇ ಹಡೆಯುದಲ್ಲ ಮಕ್ಕಳ್ನ ಓದ್ಸುದೂ ಹೌದು ನಿಜ. ಇವತ್ತು ಹೆತ್ತ್ ಮ್ಯಾಲೆ ಮಕ್ಕಳ್‍ನ ಶಾಲೆಗೆ ಸೇರ್ಸಿಯೇ ಸೇರ್ಸ್ತರೆ ಅದ್ರಲ್ಲೇನು ಡೌಟ್ ಇಲ್ಲ ಆದ್ರೆ ಸಮಸ್ಯೆ ಬರೊದು ಇಲ್ಲಿ, ಯಾವ್ ಶಾಲೆ?? ಹೆಂಗಸ್ರುಗಳು ಅಲ್ಲಿ, ಇಲ್ಲಿ ಗುಡ್ಡಿಗೆ ಕುತ್ಗೊಂಡ್ರಾಯ್ತು.."ನಿಮ್ಮ್ ಮಗ ಏನ್ ಓತಂಡ್ರಿ.. ಪಿ.ಯು ನಾ, ಯಾವ್ ಕಾಲೇಜು? ಏನ್ ಕೊಡ್ಸಿದಿರ...? ಆರ್ಟ್ಸ.. ಶೇ.. ಸ್ಕೋಪಿಲ್ಲ ಬಿಡಿ.. "ನಮ್ಮ್ ಭಾವುನ್ ಮಗ ಮುಂಬಾಯ್ಲಿರೊದು ಟೆಂತಲ್ಲಿ ೯೬ ಪರ್ಸೆಂಟು ಕಂಡ್ರಿ ಮೆಡಿಕಲ್ ಮಾಡ್ತಾಇದನೆ".
    ಎಲ್ಲಾ ರಾಕೆಟ್ ಸೈನ್ಸೇ ಓದ್ಬೆಕಾಗಿಲ್ಲ, ಇಂಜಿನಿಯರ್ಸ್, ಡಾಕ್ಟರ್ಸ್ ಆಗೇ ಅನ್ನತಿನ್‍ಬೆಕಾಗಿಲ್ಲ. ಓದೊ ಮಕ್ಳಿಗಿಂತ ಹೆತ್ತವ್ರಿಗೆ ಒಂದ್ ರೀತಿ ಹುಚ್ಚು. ಇವತ್ತು ನೋರಾರ್ ಜನ ಮಕ್ಕ್ಳು ಆತ್ಮಹತ್ಯೆ ಮಾಡ್ಕೋಳ್‍ತಿದ್ದಾರೆ ಅಂತಾದ್ರೆ ಅದಕ್ಕೆಲ್ಲ ಹೆತ್ತವ್ರೆ ನೇರ ಕಾರಣ. ಹೆತ್ತವ್ರೆ ಮುಗ್ದ ಮಕ್ಕಳ ಭವಿಷ್ಯ ಹಾಳು ಮಾಡೊ ಪಾತಕಿಗಳು.
     "ದೆವ್ವ ಹಿಡಿದಿದ್ರೆ ಬಿಡಿಸ್‍ಬಹುದು.. ಹಾವು ಕಚ್ಚಿದ್ರೆ ನುಡಿಸ್‍ಬಹುದು..ಆದ್ರೆ ಸಿರಿಗರ ಹೋಡೆದವರ ನುಡಿಸಲಾಗದು" ಎಂಬ ಬಸವಣ್ಣನ ಮಾತು ಎಷ್ಟೋಸತ್ಯ ಅನ್ಸುತ್ತೆ.. ನಾವು ಹಿಂಗೆ ನಮ್ ಮಕ್ಕ್ಳೂ ಹಿಂಗೇ ಆಗ್ಬೇಕು ಅಂದ್ರೆ ಆಗುತ್ತಾ, ಎಲ್ಲಾ ಬೆರ್ಳೂ ಒದೇ ತರ ಇರ್ತವ? ಸ್ಟಾಂಡರ್ಡ್ ಮೈಂಟೆನ್ ಮಾಡಕೋಗಿ ಒಂದ್ ಮುಗ್ದ ಜೀವ ಬಲಿತೆಗೊಳದು ಎಷ್ಟು ಒಳೇದು? SSLC exam ಇನ್ನೇನು ಹತ್ರ ಬಂತು, ಸತ್ಯ ತಿಳಿಬೆಕಿದ್ರೆ ಈ ಸಲ್ದ SSLC ಪರಿಕ್ಷೆ ಮೊದ್ಲು ಮತ್ತು ರಿಸಲ್ಟ್ ನಂತ್ರ ದಿನ ಪತ್ರಿಕೆಗಳ್ ಮೇಲೆ ಕಣ್ಣಾಡಿಸ್ತಾ ಇರಿ; ಎಷ್ಟು ಜನ ಜೀವ ಕಳ್ಕೋಳ್ ತ್ತಾರೆ ತಿಳಿತದೆ. ಇದು, ಈ ಸಲ ಮಾತ್ರ ಅಲ್ಲ ಪ್ರತೀ ವರ್ಷ ಇದೇ ಕೇಸು. ಮತ್ತೆ, ಇದೋ೦ದೆ ಗಡುವಲ್ಲ, ಕೆ.ಜಿ ಇಂದ ಪಿ.ಜಿ ತನ್ಕ ಇದೇ ಹಣೆಬರಹ. ಇನ್ನೂ ಪರೀಕ್ಷೆ ಮಾಡ್ಬೇಕು ಅಂತಾದ್ರೆ ಯಾವ್ದಾದ್ರು ಶಾಲೆಗೋ ಕಾಲೇಜಿಗೊ ಭೇಟಿ ಕೊಟ್ಟು ನೋಡಿ ಅಲ್ಲಿರೊ ಅರ್ಧಕ್ಕೂ ಹೆಚ್ಚು ಮಕ್ಳು ತಮ್ಗೆ ಇಷ್ಟವೇ ಇಲ್ಲದಿರೋ ಕೋರ್ಸ್ ತೆಗ್ದು, ತಮ್ಗೆ ಅರ್ಥವೇ ಆಗ್ದೇ ಇರೋ ಮಾಧ್ಯಮದಲ್ಲಿ ಓದ್ತಾ ಇರದು ಕಂಡು ಬರುತ್ತೆ ಇದು ಇಂದಿನ ಪರಿಸ್ತಿತಿ.
     ನಾವು ಜಪಾನಿಯರು ಅಥವಾ ಚೀನಾದ ಜನರಷ್ಟು ಸ್ವಾಭಿಮಾನಿಗಳಲ್ಲ ಎಂಬುದು ನಿಜಕ್ಕೂ ಧುರಾದೃಷ್ಟ, ನಾಚಿಕೆ ಗೇಡು, ನಮ್ಮ ಮಾತೃಭಾಷೆಯ ಮೇಲೇ ನಮಗೆ ಅಭಿಮಾನ ಇಲ್ಲ ಅದ್ರಲ್ಲಿ ವಿಧ್ಯಾಭ್ಯಾಸ ಬೇಡ. ಅರ್ಥ ಆಗ್ದೇ ಇದ್ರು ಆಂಗ್ಲ ಮಾಧ್ಯಮನೇ ಬೇಕು. ಜೊತೆಗೆ ಕನ್ನಡ ಶಾಲೆ ಗಳ್ನೆಲ್ಲ ಮುಚ್ಚ್ ಬೇಕು ಅಲ್ದೆ ಇನ್ನೋದು ಸರ್ಕಾರಿ ಶಾಲೆ ಬೇಡ್‍ವೇ ಬೇಡ ಎಷ್ಟು ಡೊನೇಷನ್ನಾದ್ರು ಪ್ರೈವೇಟೆ ಆಗ್ಬೇಕು.     ತಲೆ ಇಲ್ಲದ ಸರ್ಕಾರ ಓಟಿಗೋಸ್ಕರ ಏನೆಲ್ಲ ಮಾಡುತ್ತೆ ಅನ್ನೋದಕ್ಕೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕಿಲ್ಲ. "ಅಲ್ಪ ಸಂಖ್ಯಾತ ಮಕ್ಕಳಿಗೆ ಉಚಿತ ಟ್ಯೂಷನ್" ಅಂತ ರೇಡಿಯೋ ಟಿ.ವಿ ಯಲ್ಲಿ ಹೇಳ್ತರಲ್ಲ ಎಷ್ಟೋ ಸರ್ಕಾರಿ ಶಾಲೆಲಿ ಶಿಕ್ಷಕರೇ ಸರಿಯಾಗಿಲ್ಲ ಇನ್ನು ಶಾಲೆಹೋರಗೆ ಟ್ಯೂಷನ್ ಚಿಂತೆ ಬೇರೆ ಕೇಡು.
    ಕೊನೆದಾಗಿ ವಿದ್ಯಾರ್ಥಿಗಳು ಒಂದು ತಿಳಿದಿರೋದು ಅವಶ್ಯ Follow the interest ಅಷ್ಟೆ. ಅಪ್ಪ ಅಮ್ಮ ಸಾವ್ರ ಹೇಳ್ತರೆ ತಲೆಕೆಡ್ಸ್ಕೊಬೆಡಿ ನಿಮ್ಮ ಭವಿಷ್ಯ ನಿಮ್ಮ ಜೀವನ. ಆಸಕ್ತಿ ಒಂದಿದ್ರೆ ಎಲ್ಲವೂ ಸುಲಭ ಆಸಕ್ತಿಯೇ ಮುಖ್ಯ. ಆಸಕ್ತಿ ಇದ್ದದ್ದಕ್ಕೇ ನೀವೀಗ ಈ ಲೇಖನ ಓದ್ತಿದ್ದೀರಿ ಅರ್ಥ ತನ್ನಷ್ಟಕ್ಕೇ ಆಗ್ತ ಇದೆ ಅನ್ನೋದನ್ನ ಮರಿಬೆಡಿ. ಮತ್ತೋದೇನಂದ್ರೆ ನಮ್ಮ್ Education system ಒಂದು memory test ಅಷ್ಟೆ ಕಡಿಮೆ ಮಾರ್ಕ್ ಬಂದ್ರೆ ಕೀಳರಿಮೆ ಬೇಡ practical’sಗೆ ಹೆಚ್ಚು ಒತ್ತು ಕೊಡಿ. ಹೆತ್ತವ್ರು ಜಾಸ್ತಿ ಮಗನ/ಮಗಳ ಭವಿಷ್ಯದ ಬಗ್ಗೆ ವರಿ ಮಾಡ್ಬೇಡಿ, "ಹುಟ್ಟಿಸ್ದವ್ನು ಹುಲ್ಲು ಮೇಯಿಸೇ ಮೇಯಿಸ್ತಾನೆ" ಅಷ್ಟಕ್ಕೂ ಮಾರ್ಕ್ಸ್ ಹೆಚ್ಚು ಕಡ್ಮೆ ಆದ್ರೇನು ಸುನಾಮಿ ಬರಲ್ಲ...!!, ತಣ್ಣಗೆ ಇದ್ಬಿಡಿ.
 ಏನಂತಿರಾ..


Rating
No votes yet

Comments