ಅಧ್ಯಾತ್ಮ ಉನ್ಮಾದ !

ಅಧ್ಯಾತ್ಮ ಉನ್ಮಾದ !

ಕವನ

ಅಹಂ ಬ್ರಹ್ಮಾಸ್ಮಿ !
ವೇದೋಪನಿಷತ್ತಿನ ಮೇರುವಾಕ್ಯ
ಋಷಿ ಮುನಿ ಉಸಿರಲಿ ನಿತ್ಯಐಕ್ಯ
ಜಗವೆಲ್ಲಾ ಮಿಥ್ಯ ದೇವನೊಬ್ಬನೇ ಸತ್ಯ
ಅಮರ ಸಂದೇಶ ಸಾರಿದ ಸಂತರಿಗೆ ಚಿರ ಧನ್ಯ .

ವಿಷಯಾಸಕ್ತ ಮನ ಮೋಹ ಮಾತ್ಸರ್ಯ ಮದ
ಆವರಿಸಿದೆ ಬುದ್ಧಿ ಅಜ್ಞಾನದ ಕಲ್ಮಷ
ಸಾಧು ಸಂತರ ನುಡಿ ಬರಹ ಸತ್ಸಂಗ
ರಾಗದ ಧೂಳು ಝಾಡಿಸಿ ವಿರಾಗ ಪರಿಮಳ ಹರವಿ
ಮೂಡಿಸಿದೆ ಹೃದಯದಲಿ ಅಧ್ಯಾತ್ಮ ಉನ್ಮಾದ .

ಎಂಥ ಭ್ರಮೆ ! ಎಂಥ ''ಅಹಂ"ತೆ !ಎಲ್ಲವೂ ನಮಗಾಗಿ
ತಿಳಿಯಾಗಲಿ ಮನ ಅಸತ್ಯ ಅಜ್ಞಾನ ಮುಸುಕಿನಿಂದ
ಅದೇ ಮನೋವಿಕಾಸ -ದೇವ ದರ್ಶನ ! ಆತ್ಮಾನುಭವ !
ಅರಳಲಿ ಚಿತ್ತು ! ಕ್ರಿಯಾಯೋಗ ಆಚರಣೆಯಲಿ
ಅನುಭವಿಸಲಿ ಅಧ್ಯಾತ್ಮ ಅರುಣೋದಯ !

ಶ್ರೀ ನಾಗರಾಜ್