ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪಾಲ್ ಲಿಂಚ್ ಅವರ 'ಪ್ರೊಫೆಟ್ ಸಾಂಗ್' ಮತ್ತು ಚುನಾವಣೆಯ ನಂತರದ ದಿನಗಳು...!

ನಾನು ರಾಜಕೀಯ ವಿಮರ್ಶಕನಲ್ಲ; ಅಲ್ಲದೇ, ಹಿಂದೆಂದೂ ರಾಜಕೀಯದ ಆಗು-ಹೋಗುಗಳ ಕುರಿತು, ಅಥವಾ ರಾಜಕೀಯ ಪಕ್ಷಗಳ ಸಮರ್ಥನೆಯಲ್ಲೂ-ವಿರೋಧದಲ್ಲೂ, ಅಥವಾ ರಾಜನೀತಿಜ್ಞ/ರಾಜಕಾರಣಿಯನ್ನು ಪರಿಚಯಿಸುವ ಲೇಖನವನ್ನು ಎಂದಿಗೂ ಬರೆಯಲಿಲ್ಲ. ಬರೆಯುವುದೂ ಇಲ್ಲ ಅಂತ ನನ್ನ ಧೃಢ ನಿರ್ಧಾರವೂ ಇದೆ.

Image

ಸ್ಟೇಟಸ್ ಕತೆಗಳು (ಭಾಗ ೯೬೨)- ಪ್ರಶ್ನೆ

ದೊಡ್ದ ವೇದಿಕೆಯಲ್ಲಿ ಅಜ್ಜಿ ಒಬ್ಬಳನ್ನು ಕರೆಸಿದ್ದಾರೆ. ಅವರ ಸಾಧನೆ ಸನ್ಮಾನಗಳನ್ನು ಎಲ್ಲರೂ ಪ್ರಶಂಸಿಸಿದ್ದಾರೆ. ದೊಡ್ಡ ದೊಡ್ಡ ಕ್ಯಾಮರಾಗಳು, ಲೈಟುಗಳು ಅವರ ಮೇಲೆ ಬಿದ್ದು ಅವರನ್ನು ಇಡೀ ಜಗತ್ತಿಗೇ ತೋರಿಸುತ್ತಿದ್ದಾವೆ. ಆ ಕ್ಷಣದಲ್ಲಿ ಅಲ್ಲಿ ಕುಳಿತ ದೊಡ್ಡ ದೊಡ್ದ ಮಂದಿಯ ಕಣ್ಣಲ್ಲಿ ಇಳಿಯುತ್ತಿರುವ ನೀರನ್ನು ಕೇಂದ್ರೀಕರಿಸುತ್ತಿದ್ದಾರೆ.

Image

ಕಲಬುರ್ಗಿ, ಗೌರಿ, ಪಾನ್ಸರೆ ಹಂತಕರಿಗೂ ಶಿಕ್ಷೆಯಾಗಲಿ

ದಶಕದ ಹಿಂದೆ ದೇಶವನ್ನೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ನಡೆದ ವಿಚಾರವಾದಿಗಳು ಹಾಗೂ ಮೂಢನಂಬಿಕೆ ವಿರೋಧಿ ಹೋರಾಟಗಾರರ ಹತ್ಯೆಗಳು ಜನಮಾನಸದಿಂದ ಇನ್ನೂ ದೂರವಾಗಿಲ್ಲ. ಮಹಾರಾಷ್ಟ್ರದ ಡಾ. ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ ಪಾನ್ಸರೆ, ಕರ್ನಾಟಕದ ಡಾ, ಎಂ ಎಂ ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು. ಈ ಸರಣಿ ಹತ್ಯೆಗಳು ಶುರುವಾಗಿದ್ದು ಪುಣೆಯ ಡಾ.

Image

ಹಿಂದು - ಮುಸ್ಲಿಂ ಎಂಬ ಜ್ವಾಲಾಮುಖಿ…!

ಚುನಾವಣೆ ಗೆಲ್ಲಲು ವಿವಿಧ ರಾಜಕೀಯ ಪಕ್ಷಗಳು ಮಾಡುತ್ತಿರುವ  ತಂತ್ರಗಾರಿಕೆ ದೇಶದ ಮತ್ತೊಂದು ವಿಭಜನೆಗೆ ಕಾರಣವಾಗಬಾರದಲ್ಲವೇ? ಈ ದೇಶ ತನ್ನೊಡಲೊಳಗೆ ಸದಾ ಒಂದು ಜ್ವಾಲಾಮುಖಿಯನ್ನು ಇಟ್ಟುಕೊಂಡಿದೆ. ಅದು ಯಾವಾಗ ಸಿಡಿದು ಅಗ್ನಿ ಪರ್ವತವಾಗಿ ರೂಪಾಂತರವಾಗಿ ಎಲ್ಲ ಕಡೆಯೂ ಚೆಲ್ಲಾಡುತ್ತದೆ ಎಂಬ ಆತಂಕ ಮನದ ಮೂಲೆಯಲ್ಲಿ ಕಾಡುತ್ತಲೇ ಇರುತ್ತದೆ.

Image

ಮಂಗಟ್ಟೆ ಹಕ್ಕಿಗಳ ವಿಸ್ಮಯ ಲೋಕ !

ಹಾರ್ನ್ ಬಿಲ್ ಹಕ್ಕಿಗಳು (ಮಂಗಟ್ಟೆ ಹಕ್ಕಿ) ಈ ಬಾರಿ ಬೇಸಿಗೆಯಲ್ಲಿ ತಮ್ಮ ಗೂಡು ಕಟ್ಟುವ ತಾಣಗಳ ಬಳಿ ಇನ್ನೂ ಬಂದಿಲ್ಲ ಗೂಡು ಕಟ್ಟಲು ಪ್ರಾರಂಭಿಸಿಲ್ಲ’ ಎಂಬ ವರದಿಯನ್ನು ಕೆಲವು ದಿನಗಳ ಹಿಂದೆ ಪತ್ರಿಕೆಯಲ್ಲಿ ಓದಿದೆ. ಹಾರ್ನ್ ಬಿಲ್ ಗೂಡು ಅಂದ ತಕ್ಷಣ ಕೆಲವು ವರ್ಷಗಳ ಹಿಂದೆ ಜೂನ್ ತಿಂಗಳಿನಲ್ಲಿ ಹಳಿಯಾಳದಲ್ಲಿ ಭಾಗವಹಿಸಿದ ತರಬೇತಿ ಒಂದು ನೆನಪಾಯಿತು.

Image

ಪಾಳು ಬಾವಿಯಲ್ಲಿ ಸಿಕ್ಕಿದ ಜೇನು (ಭಾಗ 2)

ನೀರಿನ ಪಾತ್ರೆಗಳಾಗಿ ಜನರ ಬದುಕು ಕಟ್ಟಿಕೊಟ್ಟ ಈ ಬಾವಿಗಳು ನೀರಿಲ್ಲದೇ ದಿನಗಳು, ತಿಂಗಳುಗಳು, ವರ್ಷಗಳು ಕಳೆದಂತೆ ಈ ಬಾವಿಯಲ್ಲೇ ವಿವಿಧ ಜಾತಿಯ ಗಿಡ ಗಂಟೆಗಳು ಬೆಳೆದು ಅಕ್ಷರಶಃ ಗೂಬೆಗಳ ವಾಸಸ್ಥಾನ ಗಳಾದವು. ನಾನು ನನ್ನ ತಮ್ಮ ಬಾಲ್ಯದ ದಿನಗಳಲ್ಲಿ ಗೂಬೆಗಳ ನೋಡಲೆಂದೇ ಈ ಪಾಳು ಬಾವಿಗಳಿಗೆ ಬೇಟಿಕೊಟ್ಟು ಅವುಗಳ ಬೆಕ್ಕಿನಂತಹ ಮುಖವನ್ನು ನೋಡುವುದೇ ನಮಗೆ ಸಂಭ್ರಮವೆನಿಸುತ್ತಿತ್ತು.

Image

ಅರ್ಜುನ

ಪುಸ್ತಕದ ಲೇಖಕ/ಕವಿಯ ಹೆಸರು
ಐತಿಚಂಡ ರಮೇಶ್ ಉತ್ತಪ್ಪ
ಪ್ರಕಾಶಕರು
ಅಕ್ಷರ ಮಂಟಪ ಪ್ರಕಾಶನ, ಹಂಪಿನಗರ, ಬೆಂಗಳೂರು -೫೬೦೧೦೪
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

ಮೈಸೂರಿನ ಇತಿಹಾಸ ಪ್ರಸಿದ್ಧ ಜಂಬೂ ಸವಾರಿಯ ನೇತೃತ್ವ ವಹಿಸಿದ್ದ ಅರ್ಜುನ ಎಂಬ ಹೆಸರಿನ ಆನೆಯ ಬಗ್ಗೆ ಮರೆಯಲಾಗದ ನೆನಪಿನ ಪುಸ್ತಕವೊಂದನ್ನು ಬರೆದಿದ್ದಾರೆ ಐತಿಚಂಡ ರಮೇಶ್ ಉತ್ತಪ್ಪ. ಅರ್ಜುನ ಎಂಬ ಆನೆಯ ಬಗ್ಗೆ ಬರೆಯುತ್ತಾ ‘ನಿನ್ನ ಮರೆಯಲೆಂತು ನಾ’ ಎಂದು ರೋಧಿಸಿದ್ದಾರೆ. ಇದಕ್ಕೆ ಎ.ಪಿ. ನಾಗೇಶ್ ಅವರ ಮುನ್ನುಡಿ ಬರಹ ಹೀಗಿದೆ; “ಎಂತಹ ಕೃತಿ..! ಓದುತ್ತಾ ಹೋದಂತೆ ಭಾವುಕನಾದೆ.. ಕಣ್ಣೀರು ತುಂಬಿ ಬಂತು..