ಗ್ರಹ ಪ್ರವೇಶ -1

ಗ್ರಹ ಪ್ರವೇಶ -1

"ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು " ಏ ಸಿ ಹವೆಯನ್ನು ತೂರಿಕೊಂಡು

 ಹದವಾಗಿ ಕೇಳುತಿತ್ತು. ಮೋಹನ ಇದನ್ನು ಮೊದಲ ಬಾರಿಗೆ ಕೇಳುತ್ತಿರಲಿಲ್ಲ, ಈ ದಾರಿಯೂ ಅವನಿಗೆ ಹೊಸದಾಗಿರಲಿಲ್ಲ. 

ಆದರೆ ಇಂದು ಅವನ ಮನಸಲ್ಲಿ ಏನೋ ಒಂದು ಬಗೆಯ ತಾಜಾತನ ಇತ್ತು. ಜೀವನದ ಹೊಸ

 ತಿರುವಿನಲ್ಲಿ ಅವನು ನಿಂತಿದ್ದ, ಹೊಸ ನಿರ್ಧಾರಕ್ಕೆ ಅಣಿಯಾಗಿದ್ದ. ಮುರಳಿಯ "ಬೇರೆ ಊರಿನಲ್ಲಿ 

ಬೆವರ್ಸಿಯಾಗಿ ವಿದ್ಯುಥ್ಗಾರದಲ್ಲಿ ದೇಹವನ್ನು ಭೂಮಿಗೆ ಮರಳಿಸುವ ಬದಲು, ತಾನು ಹುಟ್ಟಿ ಬೆಳೆದ 

ಊರಿನಲ್ಲಿ, ಬಾಲ್ಯದಲ್ಲಿ ಉಯ್ಯಾಲೆ ಕಟ್ಟಿ ಆಡಿದ ಮಾವಿನ ಮರದ ಕಟ್ಟಿಗೆಯ ಜೊತೆಗೆ ಸುಟ್ಟು ಹೋಗಲು 

ಇಷ್ಟ ಪಡುತ್ತೇನೆ" ಎಂಬ ಮಾತು ಇವನ ಮನಸ್ಸಿನಲ್ಲಿ ಹಲವು ಬಾರಿ ಮಂಥನ ನಡೆಸಿದ್ದರೂ, ಇವತ್ತು ಕಡೆದ 

ಮೊಸರಿನ ಮೇಲೆ ನಿಂತ ಬೆಣ್ಣೆಯಂತೆ ಎಲ್ಲಾ ವಿಚಾರಗಳಿಂದ ನಿರ್ಲಿಪ್ತವಾಗಿ ಎಲ್ಲದವುಗಳಿಗಿಂತ ಮೇಲೆ 

ಎದ್ದು ನಿಂತಿತ್ತು.


"ಸರ್ ಏಸಿ  ಹೆಚ್ಚು ಮಾಡಬೇಕಾ ...?" ಅಂದ ಡ್ರೈವರ್, ಕನ್ನಡಿಯನ್ನು ಕೆಳಗೆ ಮಾಡುತಿದ್ದ ಮೋಹನನನ್ನು ನೋಡುತ್ತಾ.
"ಇಲ್ಲ, ಬೇಡ ಅದನ್ನು ಆರಿಸಿ ಬಿಡು. ಮಳೆಗಾಲದ ಬಳಿಕ ಸಮುದ್ರಕ್ಕಿಳಿದ ಹಡಗು ಮರಳಿ ಲಂಗಾರು
 ಹಾಕಿದಾಗ ಅದರಲ್ಲಿನ ತಾಜಾ ಮೀನನ್ನು ತಿನ್ನುವುದನ್ನು ಬಿಟ್ಟು ಯಾರಾದರು ಪೇಟೆಗೆ ಹೋಗಿ ಒಣ ಮೀನು ಖರೀದಿಸುತ್ತಾರಾ ..?" ಅಂದ
ಇವನ ಈ ಮಾತುಗಳು ಬಿಳಿ ಧರಿಸಿನಲ್ಲಿದ್ದ ಚಾಲಕನಿಗೆ ಅರ್ಥವಾಗಲಿಲ್ಲ. ಅವನು ಮೋಹನನ ಅಣತಿಯಂತೆ
 ಏಸಿಯನ್ನು ಆರಿಸಿದ.  ಮೇಲಿನ ಕನ್ನಡಿಯನ್ನು ಹಿಂದಿನ ಸೀಟ್ ನಲ್ಲಿ ಕೂತ ಮೋಹನ್ ನ ಭಿಂಬ ಬೀಳುವಂತೆ ಹೊಂದಿಸಿದ. 
ಮೋಹನ ಮುಖವನ್ನು ಕಿಟಕಿಯ ಹೊರಹಾಕಿ, ಮೊದಲ ಬಾರಿಗೆ ಜಗತ್ತನ್ನು ನೋಡುವ ಮಗುವಿನ ಮುಗ್ದತೆಯಲ್ಲಿ
 ಹೊರಗಿನ ಪ್ರಪಾತವನ್ನು ನೋಡುತಿದ್ದ. ಕಾಣುವ ಅರ್ಧ ಮುಖದಲ್ಲಿ ಅವನನ್ನು ವಿಮರ್ಶಿಸುವುದು 
ಮುಂದಿನ ಸೀಟ್ ನಲ್ಲಿ ಕುಳಿತ ಡ್ರೈವರ್ ಗೆ ಏಕೋ ಕಷ್ಟವೆನಿಸಿತು.  ಕಿವಿಯ ಎಡೆಯಲ್ಲಿ ಬಣ್ಣ ಕಳೆದುಕೊಳ್ಳುತ್ತಿರುವ 
ಕೂದಲಿನಿಂದ ಅವನು ಚೂರು ಮುದುಕನಂತೆ ಕಂಡರೂ 
ಕಣ್ಣಲ್ಲಿನ ಕಾಂತಿ ಅವನಿಗೆ ನಲವತ್ತು ದಾಟಲಿಲ್ಲ ಎಂದು ಸಾರಿ ಹೇಳುತಿತ್ತು.
ಹೊರಗೆ ನೋಡುತ್ತಾ ಮೋಹನ್ "ತಾಜಾ ಗಾಳಿ ಇರುವಾಗ, ಕೋಣೆಯೊಳಗಿನ ಗಾಳಿಗೆ ನೀರು ಚಿಮುಕಿಸಿ
 ಅದನ್ನೇ ಸುಖ ಅಂತಾರಲ್ಲ ಜನ" ಅಂದ ಹತಾಶ ಭಾವದಲ್ಲಿ.

ಬಿಳಿ ಧರಿಸಿಗೆ ಇಂತಹ ಅನುಭವ ಮೊದಲ ಬಾರಿಗೆ ಆಗುತಿತ್ತು. ವಿಮಾನದಿಂದ ಇಳಿದು ತನ್ನ ಕಾರಿನಲ್ಲಿ 
ಬಂದು ಕುಳ್ಳುವ ಯಾತ್ರಿಗಳು ಹಿಂದೆಂದೂ ಅದಕ್ಕೆ ಈ ರೀತಿ ಅನಿಸಿರಲಿಲ್ಲ. ಎಲ್ಲರೂ ಬೇರೆ ಯಾವುದೊ 
ಗ್ರಹದಿಂದ ಭೂಮಿಯಲ್ಲಿ ಇಳಿದವರಂತೆ ವರ್ತಿಸುತಿದ್ದರು. ವೃತ್ತಿ ಶುರು ಮಾಡಿದ ಹೊಸದರಲ್ಲಿ ಹೀಗೆ ಬಂದ
 ಯಾತ್ರಿ ಒಬ್ಬರಿಗೆ ಮಡಿಕೇರಿಗೆ ಕರೆದು ಹೋಗಿ ಬಿಟ್ಟ ಬಳಿಕ ಅವರು ಕೊಟ್ಟ ಪ್ಲಾಸ್ಟಿಕ್ ಕಾರ್ಡ್ ಇವನಿಗೆ ಹೊಸದಾಗಿ 
ಕಂಡಿತ್ತು. ಕಾಗದ ಲೋಹದ ರುಪಾಯಿಯ ಬದಲು ಪ್ಲಾಸ್ಟಿಕ್ ಕಾರ್ಡ್ ಎಂಬ ಹಣವೂ ಈ ಲೋಕದಲ್ಲಿ ಚಾಲನೆಯಲ್ಲಿದೆ 
ಎಂದು ತಿಳಿದಿದ್ದ. ನಂತರ ಗೊತಿಲ್ಲದ ಇಂಗ್ಲಿಷ್ ನಲ್ಲಿ ಕಷ್ಟ ಪಟ್ಟು ಅವರಿಂದ ತಾನು ಹಣ ಎಂದು ಕರೆಯುವ ಹಸಿರು ಹಳದಿ 
ಕಾಗದವನ್ನು ಸಂಪಾದಿಸಿದ್ದ.ಆದರೆ ಇವತ್ತು ಹಿಂದೆ ಕುಳಿತ ವ್ಯಕ್ತಿ ಅವನಿಗೆ ಬೇರೆಯವನು ಎಂದು ಕಾಣಲಿಲ್ಲ. ಈ ಸಲುಗೆ ಸಾಕಿತ್ತು
 ಅವನಿಗೆ ಕಳೆದ ಹಲವು ವರ್ಷಗಳಿಂದ ಮೌನದಲ್ಲಿ ಬೀಗ ಜಡಿದಿದ್ದ ಅವನ ಬಾಯಿ ತೆರೆಸಲು.

"ಸರ್ ಅಲ್ಲಿ ಗುಡ್ಡ ಕಾಣ್ತಾ ಇದೆಯಾ.. ಅದರ ಹಿಂದೆಯೇ ನಿಮ್ಮ ದುಬಾಯಿ ವಿಮಾನ ವರ್ಷದ ಹಿಂದೆ ಉರಿದು ಬಿದ್ದದ್ದು" ಅಂದ.
 ವಿಮಾನ ಅಪಘಾತ ಅವನಿಗೆ ಯಾವುದೋ ಒಂದು ಬಗೆಯ ಹಳೆಯ ನೋವನ್ನು ಕೊಟ್ಟ ಅನುಭವ ಅವನ ಮಾತಿನಲ್ಲಿ ಕಾಣುತಿತ್ತು.
"ಎಷ್ಟೋ ಹಕ್ಕಿಗಳು ಗೂಡು ಸೇರಲಿದ್ದವೂ, ಎಷ್ಟು ಮನೆಯ ಸಂಭ್ರಮ ಅಲ್ಲಿ ಇದ್ದವೋ .. ಎಷ್ಟು ಕನಸುಗಳು ಅಲ್ಲಿದ್ದವೋ.. ಎಲ್ಲವೂ
 ಕೆಲವೇ ನಿಮಿಷಗಳಲ್ಲಿ ಕರಕಲಾದವು." ಅಂದ ಅವನೂ ಆ ಗುಡ್ಡವನ್ನು ನೋಡುತ್ತಾ.
"ಹೌದು, ಯಾರದೋ ದೇಹ ಯಾರದೋ ಕಾಲು ಮತ್ಯಾರದೋ ಬೆರಳಲ್ಲಿನ ಉಂಗುರದ ಗುರುತಿನೊಂದಿಗೆ ಯಾರದೋ ಚಿತೆ ಏರಿದವು. 
ಆತ್ಮ ಗಳಿಗೆ ಮುಕ್ತಿ ಸಿಕ್ಕಿದೆಯೋ ಇಲ್ಲವೋ, ಈ ಭೂಮಿಯಿಂದ ಅವರ ಆಕೃತಿಗಂತೂ ಮುಕ್ತಿ ಸಿಕ್ಕಿತು" ಅಂದ ಗೇರ್ ಬದಲಾಯಿಸುತ್ತಾ.
“ಯಾರ ಹೆಣಕ್ಕೆ ಯಾರು ಕೊಳ್ಳಿ ಇಡ್ತಾರೋ, ಯಾರ  ಸಮಾದಿಗೆ ಯಾರು ಹೊಂಡ ತೊಡ್ತಾರೂ, ಯಾರಿಗೂ ಗೊತ್ತಿರಲ್ಲ.    ಋಣಾನುಬಂಧ
ತಂದೆಯ ಹೆಣ  ಮಗ ಏರಿಸುವುದು ವಾಡಿಕೆ, ಆದರೆ ಕೆಲವೊಮ್ಮೆ ತಂದೆಯೇ ಮಗನ ಹೆಣ ಹೊರುತ್ತಾನೆ, 
ಇನ್ನು ಕೆಲವೊಮ್ಮೆ ಮತ್ಯಾರೋ ಹೆಣಕ್ಕೆ ತರ್ಪಣ ಕೊಡುತ್ತಾರೆ
" ಅವನ ಮುಖ ಇನ್ನೂ ಹೊರಗೆ ನೋಡುತ್ತಿತ್ತು  ಬಿಳಿ ಸಫಾರಿಗೆ ಇದು ಹೊಸದಾಗಿತ್ತು
ಮಂಗಳೂರ ಆವರಣ ಭೇದಿಸಿ ಕಾರ್ ಹೊರ
ತಲುಪಿದರೂ ಕಾರಿನಲ್ಲಿ ಆವರಿಸಿದ ಮೌನ ಬೇಧಿಸಿರಲಿಲ್ಲ .

ಇಲ್ಲಿಯ ವರೆಗೆ ಮುಖ ಹೊರಗೆ ಹಾಕಿ ಶುದ್ಧ ಗಾಳಿ ಅನುಭವಿಸುತ್ತಿದ್ದ ಮೋಹನನ ಮುಖದ 
ಮೇಲೆ ಚತುಷ್ಪಥ ಕಾಮಗಾರಿಯ ಟಿಪ್ಪರ್ 
ಸುರಿದ ಕೆಂಪು ಮಣ್ಣಿನ ಕಣಗಳು ಚಿಮ್ಮಿದವು. ಬೇರೆಯವರಿಗೆ ತನ್ನ ಕೂಲಿ ಮಾಡುತಿದ್ದ ಟಿಪ್ಪರ್ ನ
 ಸಾರಥಿಗೆ ಬೈಯಲು ಮನಸ್ಸಾಗದೆ ತನ್ನ ಮುಖವನ್ನು ಒಳಗೆ ಮಾಡಿ ಗಾಜನ್ನು ಮೇಲೆ ಮಾಡಿದ.
"ನಿನ್ನ ಹೆಸರೇನು ..?" ಎಂದು ಕೇಳಿದ.
ಅವನು "ಯಶವಂತ" ಅನ್ನುತ್ತಾ ತನ್ನ ಕನ್ನಡಿಯನ್ನೂ ಮೇಲೆ ಮಾಡಿ ಏಸಿಯನ್ನು ಚಾಲೂ ಮಾಡಿದ.

ಎರಡು ವರ್ಷದ ಹಿಂದೆ ಭಾರತಕ್ಕೆ ಬಂದಾಗ ಅವನು ತುಂಬಾ ವರ್ಷದ ಬಳಿಕ ಕುಂದಾಪುರಕ್ಕೆ ಹೋಗಿದ್ದ.  
ಆದರೆ ಅವತ್ತು ಅವನಿಗೆ ಈ ರಸ್ತೆ, ನಡುವಲ್ಲಿ ಬರುವ ಸುರತ್ಕಲ್, ಮುಲ್ಕಿ ಪಡುಬಿದ್ರೆ  ಹೊಸತೆನಿಸಿರಲಿಲ್ಲ
ಎಲ್ಲವೂ ಎಂಬತರ ದಶಕದಲ್ಲಿ ಸಿ.ಪಿ.ಸಿ ಬಸ್ಸನಲ್ಲಿ ನೋಡಿದ ನೋಟವೇ ಕಾಣುತಿತ್ತು. ಹಸಿರು ಭತ್ತದ ಗದ್ದೆ. 
ನಡ ನಡುವೆ ತನ್ನ ಪಾಡಿಗೆ ಹರಿಯುತ್ತಿರುವ ನದಿಗಳು. ಪ್ರತಿ ಐದು ಕಿ.ಮಿ ಗಳ ಅವಧಿಗೆ ಒಂದರಂತೆ 
ಬರುವ ಸಣ್ಣ ಸಣ್ಣ ಊರುಗಳು ಊರಿನಲ್ಲಿನ ರಾಷ್ಟ್ರೀಕ್ರತ ಬ್ಯಾಂಕುಗಳ ಬ್ರಾಂಚ್ ಆಫೀಸ್ ಗಳು, ಅವ್ವೆ
 ಹಳೆಯ ಅಂಗಡಿಗಳು, ಮೀನಿನ ಊಟದ ಹೋಟೆಲ್ ಗಳು, ಕರಾವಳಿಯ ಮಳೆಗೆ ಹೋಂಡ ಬಿದ್ದ
 ರೋಡುಗಳು, ಒಂದು ಸರ್ಕಾರ ಬಿದ್ದು ಮತ್ತೊಂದು ಸರ್ಕಾರ ಬಂದರೂ ನಿಲ್ಲದ ಟೆಂಡರ್ ಗಳು, 
ಕರಿ ಹೊಗೆಯ ನಡುವೆ ರೋಡ್ ಜೊತೆಗೆ ದೇಹಕ್ಕೂ ಟಾರ್ ಮೆತ್ತಿಕ್ಕೊಂಡು ಬಾಲ್ಡಿ ಯಲ್ಲಿ ಬಿಸಿ 
ಟಾರ್  ಅನ್ನು ಸುರಿಯುತ್ತಿರುವ ಉತ್ತರ ಕರ್ನಾಟಕದ ಮಂದಿ. ರೋಡಿನ ಪಕ್ಕದಲ್ಲಿ ಮಣ್ಣಿನಲ್ಲಿ 
ಆಡುತ್ತಿರುವ ಮಕ್ಕಳ ಚಿತ್ರಣ ಹಾಗೆಯೇ ಇತ್ತು.

ಇವತ್ತು ಆ ಚಿತ್ರಣ ಬದಲಾಗಿತ್ತು ಹಳದಿ ಬಣ್ಣದ ಕ್ರೇನ್, ಅಷ್ಟಗಲ ರೋಡನ್ನು ಒಂದೇ ಬಾರಿಗೆ 
ಟಾರ್  ಹಾಕುವ ಹನ್ನೆರಡು ಚಕ್ರದ ಆ ಬದಿಯಲ್ಲಿ ಲಾರಿ ಎನ್ನಲು ಆಗದ ಈ ಬದಿಯಲ್ಲಿ ರೋಡ್
 ರೋಲರ್ ಅನ್ನಲಾಗದ ಘನ ವಾಹನ ಅಲ್ಲಲ್ಲಿ ಕಾರ್ಯ ನಿರ್ವಹಿಸುತಿತ್ತು. ಹಿಂದಿನಂತೆ ಉತ್ತರ
ಕನ್ನಡದ ಮಂದಿಯ ಬದಲಾಗಿ ಆಂದ್ರ, ಬಿಹಾರ, ಒರಿಸ್ಸಾಗಳ ಹುಡುಗರು ವಲಸೆಗೊಂಡಿದ್ದರು. 
ಟೆಂಡರ್ ಕಂಪೆನಿಯ ಹೆಸರು ಅಚ್ಚೊತ್ತಿದ ಟೋಪಿಯನ್ನು ಮುಂಡಾಸಿನ ಬದಲಾಗಿ ಧರಿಸಿ ಯುದ್ಧಕ್ಕೆ 
ಹೋರಾಟ ಸೇನಾನಿಗಳಂತೆ ಕೆಲಸದಲ್ಲಿ ತೊಡಗಿದ್ದರು. ರೋಡಿನ ಇಕ್ಕೆಲ ಗಳಲ್ಲಿ ಕ್ರೇನ್ ನ ದಾಳಿಯಲ್ಲಿ 
ಅಸ್ತಿತ್ವ ಕಳಕ್ಕೊಂಡ ಹಲವು ಸಂಸಾರಗಳು, ಸ್ತಾನ ಪಲ್ಲಟ ಗೊಂಡ ಧೈವಸ್ಥಾನ, ದೇವಸ್ಥಾನಗಳು. 
ದೂಳು ಮೆತ್ತಿರುವ ಭತ್ತದ ಗದ್ದೆಗಳು, ಬ್ರಿಟೀಷರ ಕಾಮಗಾರಿಗೆ ಸವಾಲೆಸೆಯುತ್ತಾ ಹಳೆಯ ಸೇತುವೆಯ
 ಸಮಾನಾಂತರ ವಾಗಿ ಮೇಲೆಳುತ್ತಿರುವ ಸೇತುವೆಗಳು.

"ಏನ್ ಎಚ್ 17 ಗೆ ಬಣ್ಣ ಹಚ್ತಾ ಇದ್ದಾರೆ, ಭಾರತ ಉದ್ಧಾರ ಆಗ್ತಿದೆ" ಅಂದ ಮೋಹನ ಒಮ್ಮೆ ಕಾರ್ 
ನಯವಾದ ರೋಡಿನಲ್ಲಿ ಬರಲು.
"ಈಗ ಇದು ಏನ್ ಎಚ್ 66 ಆಗಿದೆ. ಅಂತಾಷ್ಟ್ರೀಯ ಮಟ್ಟಕ್ಕೆ ಏರಿಸುತ್ತಾರಂತೆ, ಇನ್ನೊಮ್ಮೆ ನೀವು 
ಬರುವಾಗ ನಿಮಗೆ ನಮ್ಮ ಭಾರತ ಯಾವುದು, ನಿಮ್ಮ ದುಬೈ ಯಾವುದು ಎಂದು ತಿಳಿಯದೆ ಹೋದ್ರೆ
 ತಪ್ಪೇನಿಲ್ಲ ಬಿಡಿ" ಅಂದ ಯಶವಂತ.
ಅವನ ಮಾತಿನಲ್ಲಿ ಮೋಹನನಿಗೆ ಏನೂ ವಿಪರ್ಯಾಸ ಕಾಣಲಿಲ್ಲ. ಕಳೆದ ಬಾರಿ ಊರಿಗೆ ಬಂದಾಗ 
ಮಂಗಳೂರಿನ ಪ್ರಗತಿ ಕಂಡು ಅವನು ದಂಗಾಗಿ ಹೋಗಿದ್ದ. ಧೂರದ ದುಬೈ ಇಲ್ಲೇ ಅನುಭವಿಸಿದ್ದ
 ಅವನು. ಆದರೆ ಯಶವಂತ ಹೇಳಿದ 'ಇನ್ನೊಮ್ಮೆ ನೀವು ಬರುವಾಗ' ಅವನಿಗೆ ಸರಿ ಕಾಣಲಿಲ್ಲ, ಕಾರಣ 
ಅವನು ಮರಳಿ ಭಾರತಕ್ಕೆ ಬರುವ ನಿರ್ಧಾರ ಮಾಡಿದ್ದ. ಮೊದಲಿಗೆ ಇದು ಇಲ್ಲಿನ ಇಂದಿನ ಪ್ರಗತಿಯನ್ನು 
ಕಂಡು ತೆಗೆದ ನಿರ್ಧಾರ ಅಂದುಕೊಂಡರೂ ಈ ನಿರ್ಧಾರದ ನಿಜವಾದ ಕಾರಣ ಮುರಳಿಯ ಸ್ಪೂರ್ತಿ ಆಗಿತ್ತು.

ಬ್ಯಾಂಕ್ ಉಧ್ಯೋಗಿಯ ಮಗನಾದ ಮೋಹನನಿಗೆ ನಮ್ಮವರು, ತಮ್ಮವರು, ಸಂಭಂಧ, ಅನುಭಂಧ
ಎಂಬ ಪದಗಳನ್ನು ಪರಿಚಯಿಸಿದವನು ಮುರಳಿ. 1980 ದಶಕದಲ್ಲಿ ತಂದೆಯವರಿಗೆ ವರ್ಗ ಆಗಿ 
ಮಂಗಳೂರಿಗೆ ಬಂದಾಗ ಎಸ್ಸೆಸೆಲ್ಸಿ ಮುಗಿಸಿದ್ದ.
 ಮಗನ ಭವಿಷ್ಯ ಮತ್ತು ತಮ್ಮ ಭವಿಷ್ಯದ ದಿನಗಳಿಗಾಗಿ ತಂದೆಯವರು ಮೋಹನನನ್ನು ಅಳಿಕೆಯಲ್ಲಿ 
ಪಿಯುಸಿ ಗೆ ಸೇರಿಸಿದ ಬಳಿಕ ವಷ್ಟೇ ಅವನಿಗೆ ಜೀವನದ ನಿಜ ತಿರುಳಿನ ಅರಿವಾದದ್ದು; ಹಾಜರಿ ಪುಸ್ತಕದಲ್ಲಿ 
ತನ್ನ ಬಳಿಕ ಇದ್ದ ಮುರಳಿಯನ್ನು, ತನ್ನ ಹಾಸ್ಟೆಲ್ ರೂಮ್ ಮೇಟ್ ಮತ್ತು ಬೆಂಚ್ ಮೇಟ್ ಮಾಡಿದ ಬಳಿಕವೇ.

ಉಧ್ಯೋಗದಲ್ಲಿರ ಬೇಕಾದರೆ ಊರು ಊರು ಸುತ್ತುತಿದ್ದ ತಂದೆಯವರಿಗೆ ಊರು ದೂರವಾಯಿತು. ಜೊತೆಯಲ್ಲಿ ಇದ್ದ 
ಉತ್ತರ ಭಾರತಿ ಇವನ ಅಮ್ಮ ಆದ ಬಳಿಕ ಇಲ್ಲಿನ ಎಲ್ಲ ಸಂಭಂಧ ತೊರೆಯ ಬೇಕಾಯಿತು. ಸಂಭಂದಿಕರು 
ಎಂದರೆ ಅಮ್ಮ ಅಪ್ಪ ಎಂಬಷ್ಟೇ ಪದ ತಿಳಿದಿದ್ದ ಇವನಿಗೆ ಅತ್ತ ಸಂಪೂರ್ಣವಾಗಿ ಹಿಂದಿಯವನಾಗದೆ ಇತ್ತ
 ಪೂರ್ತಿ ಕನ್ನಡದವನಾಗದೆ ಅಂತರ್ಪಿಶಾಶಿ ಆದ. ಮುರಳಿ ಮೊದಲ ರಾತ್ರಿ ನಿನ್ನ ಊರು ಯಾವುದೆಂದು 
ಕೇಳಲು ಇವನಿಗೆ ಲಾಲ್ ಗಂಜ್ ಹೇಳಬೇಕೋ ಕನಕಪುರ ಹೇಳಬೇಕೋ ತಿಳಿಯಲಿಲ್ಲ. ಆ ದಿನವೇ 
ಅವನಿಗೆ ಮನುಷ್ಯನಿಗೆ ಹುಟ್ಟಿದ ಊರಿನ ಜೊತೆಗೆ ಅವನ ಹೆತ್ತವರ ಊರಿನ ನಂಟೂ ಇರಬೇಕು ಎಂದು
 ತಿಳಿದದ್ದು. ನಿನ್ನ ಊರು ಯಾವುದೆಂದು ಕೇಳಲು ಮೊದಲು ಕೋಟ ಎಂದ ಮುರಳಿ ಬಳಿಕ, ಕುಂದಾಪುರ 
ಕೇಳಿದ್ದೀಯ ಅದರ ಹತ್ತಿರ ಬರುತ್ತದೆ ಅಂದಿದ್ದ. ಎರಡು ವರ್ಷದಲ್ಲಿ ತನ್ನ ಇಲ್ಲಿ ವರೆಗೆ ಕಲಿಯಲಾಗದ, 
ಶಾಲಾ ಪುಸ್ತಕದಲ್ಲಿ ಕಲಿಸಲಾಗದ ಅದೆಷ್ಟೂ ವಿಚಾರಗಳನ್ನು ಮೋಹನ ಮುರಳಿಯಿಂದ ಕಲಿತಿದ್ದ. ಅವನ
 ಕೋಟಕ್ಕೂ ಒಮ್ಮೆ ಭೇಟಿ ಕೊಟ್ಟಿದ್ದ. ಮನೆಯವರ ಅಕ್ಕರೆ ಮತ್ತು ಸೆಳೆತವನ್ನು ಪ್ರತ್ಯಕ್ಷವಾಗಿ ಅನುಭವಿಸಿದ್ದ.
 ಮುಂದೆ ಉತ್ತರ ಭಾರತಿಯ ಒತ್ತಾಯದ ಮೇರೆಗೆ ತಂದೆಯವರು ಮರಳಿ ಡೆಲ್ಲಿಗೆ ವರ್ಗ ತೆಗೆದ ಬಳಿಕ ಬರೇ
 ಪತ್ರ ವ್ಯವಹಾರಕ್ಕೆ ಸೀಮಿತ್ತವಿದ್ದ  ಗೆಳೆತನ ಮುಂದಿನೆರಡು ವರ್ಷಗಳಲ್ಲಿ ಕೊನೆಯಾಯಿತು. ಮುರಳಿಯ ಶಾಶ್ವತ
 ವಿಳಾಸ ಮೋಹನನ ನೆನಪಿನಿಂದ ಮಾಸದಿದ್ದರೂ ಪತ್ರ ಬರೆಯುವ ಸಮಯ ಸಿಕ್ಕದೆ ಸುತ್ತುವ ಮೋಹನನ ವಿಳಾಸ 
ಮುರಳಿಗೆ ದಕ್ಕದೇ ಹೋಯಿತು.

ಓದು ಮುಗಿಸಿ ಉಧ್ಯೋಗ ಗಿಟ್ಟಿಸಿ ಸಪೂರ್ಣ ಉತ್ತರ ಭಾರತೀಯನಾದ ಮೋಹನನಿಗೆ ತನ್ನ ಮದುವೆಯ 
ಸಂಧರ್ಭದಲ್ಲಿ ಮುರಳಿಯ ನೆನಪಾಗಿ ಅವನ ಹಳೆಯ 'ಕೋಟ' ವಿಳಾಸಕ್ಕೆ ಮದುವೆಯ ಆಮಂತ್ರಣವನ್ನು 
ಯಾವುದೇ ನಿರೀಕ್ಷೆಗಳಿಲ್ಲದೆ ಕಳುಹಿಸಿದ್ದ ಮೂರು ವರ್ಷದ ಹಿಂದೆ. ಕಾಲದ ಹೊಡೆತಕ್ಕೆ ಸಿಕ್ಕ ಗೆಳೆಯ ತನ್ನನ್ನು 
ಮರೆತಿರಬಹುದು ಅಂದುಕೊಂಡಿದ್ದ, ಜೊತೆಗೆ ಊರು ಬಿಟ್ಟಿರಬಹುದೂ ಅಂದೆನಿಸಿದರೂ, ಜೀವನದ ತಿರುಳನ್ನು
 ತಿಳಿಸಿಕೊಟ್ಟ ಗೆಳೆಯನಿಗೆ ಆಮಂತ್ರಣ ಕಳಿಸುವುದು ಅನಿವಾರ್ಯವೆಣಿಸಿ ಟಪ್ಪಾಲು ಹಾಕಿದ್ದ.

ಗಜ್ಹಿಯಾಬಾದ್ ನಲ್ಲಿ ಗೊತ್ತಿಲ್ಲದ ಒಂದು ಸಂಪ್ರದಾಯಕ್ಕೆ ಮಣೆಹಾಕಿ, ಕೆಂಪು ಮುಂಡಾಸು ಕಟ್ಟಿ ಕನಕಪುರವನ್ನು 
ಮರೆತು ಸ್ವಾಗತ ಕೊರುತಿದ್ದ ತಂದೆಯವರಿಗೆ ಮಗನ ವಯಸ್ಸಿನ ವ್ಯಕ್ತಿ ಕನ್ನಡದಲ್ಲಿ ಮಾತನ್ನಾಡಿ ಮರೆತ ಕನ್ನಡವನ್ನು
 ನೆನಪಿಸಿದ್ದ. ಮಂಟಪಕ್ಕೆ ಅವನನ್ನು ಕರೆತಂದಾಗ ಸಾವಿರದ ನೋಟಿನ ಮಾಲೆಯು ಮೋಹನನ ಕೊರಳಲ್ಲಿ ನಗುತಲಿತ್ತು
. ಮೂರು ಕಿ.ಮಿ ಇವನನ್ನು ಹೊತ್ತು ಬಂದ ಬಿಳಿ ಕುದುರೆ ತನ್ನ ಬಾಡಿಗೆಗಾಗಿ ಕಾಯುತ್ತಿತ್ತು. ಮೀಸೆ 
ಮೂಡಿದ ಗಲ್ಲದ ಉಬ್ಬುಗಳಲ್ಲಿ ತುಳುಕುವ ವಿಶ್ವಾಸ ಮತ್ತೆ ಅಳಕೆಯ ದಿನಗಳನ್ನು ನೆನಪಿಸಲು ಮೋಹನನಿಗೆ 
ಹೆಚ್ಚು ಸಮಯ ಹಿಡಿಯಲಿಲ್ಲ. ತಂದೆಯವರಲ್ಲಿ "ಮುರಳಿ ಅಪ್ಪಾ, ಕೋಟಾದವ, ಕುಂದಾಪುರ - ಕೋಟಾ" ಎಂದು ಪರಿಚಯಿಸಿದ.
ಮಗನ ಬಾಯಲ್ಲಿ "ಅಪ್ಪಾ" ಎಂಬ ಪದದ ಅಹ್ವಾಹನೆ ಏನೂ ತಂಪೆರಚಿದಂತೆ ಇತ್ತು. ಸಂಭಂದಗಳನ್ನು 
ಮರೆತರೂ ದೇಹದಲ್ಲಿ ಬೆರೆತ ಮಾತೃಭಾಷೆ ಇಪ್ಪತ್ತು ವರುಷಗಳ ಬಳಿಕ ನಿಜ ಅರ್ಥ ಪಡೆದು ನಗುತಿತ್ತು.
ಹಿಂದಿಯ ಗಜ ಗಿಜಿಯಲ್ಲಿ ಇಬ್ಬರ ನಡುವೆ ಮಾತು ಕಥೆ ಅಷ್ಟೇನೂ ನಡೆಯದಿದ್ದರೂ ಇಬ್ಬರೂ ತಮ್ಮ ತಮ್ಮ 
ಮೊಬೈಲ್ ನಂಬರ್ ಗಳನ್ನು ಇಮೇಲ್ ಐ ಡಿ ವಿನಿಮಯ ಮಾಡಿಕೊಂಡರು.

ಮದುವೆಯ ನಂತರ ಮೋಹನ ಮತ್ತೆ ದುಬೈಗೆ ಮರಳಿ ಅಲೆಮಾರಿಯಾದಾಗ ಮತ್ತೆ ಗೆಳೆಯನ ನೆನಪು ಹುಟ್ಟಿತು. 
ಅವನು ಕೊಟ್ಟ ಇಮೇಲ್ ವಿಳಾಸಕ್ಕೆ ಮೇಲ್ ಕಳುಹಿಸಿದ. ಶಾಲಾದಿನಗಳ ಬಳಿಕದ ಇಲ್ಲಿನ ವರೆಗಿನ 
ಎಲ್ಲ ಆಗು ಹೋಗುಗಳನ್ನು ಸವಿವರವಾಗಿ ಬರೆಯುತಿದ್ದಾಗ ಬಳಿಗೆ ಬಂದ ಜೂನಿಯರ್ ಉತ್ತರ ಭಾರತಿ
 ಕಂಪ್ಯೂಟರ್ ನಲ್ಲಿ ಮೂಡುತಿದ್ದ ಗುಂಡು ಗುಂಡಗಿನ ಅಕ್ಷರಗಳನ್ನೂ ನೋಡಿ ಅಚ್ಚರಿ ಪಟ್ಟು ಮೋಹನನಲ್ಲಿ 
ಕೇಳಿದಾಗ ತನ್ನ ತಾಯಿ ಬೇರು ಕನ್ನಡದ್ದು ಎಂದಾಗ ಅವಳ ಮನದಾಳದಲ್ಲಿ ಒಂದು ಅಲೆ ಎದ್ದು ಇವನ 
ಈಗಿನ ಐಶಾರಾಮಿ ಜೀವನ ಮತ್ತು ವಿದೇಶ ಕೆಲಸಗಳ ಅರಿವು ಹುಟ್ಟಿ ಮೌನದಲ್ಲಿ ಲೀನವಾಯಿತು. 
ವಾರದ ಬಳಿಕ ಬಂದ ಮುರಳಿಯ ಪ್ರತಿಕ್ರಿಯೆ ಇವನನ್ನು ಇನ್ನೂ ಉಬ್ಬುವಂತೆ ಮಾಡಿತ್ತು. ಅವನು
 ತನ್ನ ಕನಸನ್ನು ಅಕ್ಷರಷಹ ನಿಜ ಮಾಡಿದ್ದ ತನ್ನ ಮೊವತ್ತ ಮೂರನೇ ವಯಸ್ಸಿನಲ್ಲೇ ವಿದೇಶಿ ಕಂಪೆನಿ 
ಒಂದರ ಪಾಟ್ನರ್ ಆಗಿದ್ದ.

ವಿದೇಶಗಳ, ಅಲ್ಲಿನ ಜನ ಜೀವನಗಳ ವಿಚಾರಗಳು ಶಾಲೆಯಲ್ಲಿ ಬಂದಾಗ ಅದನ್ನೆಲ್ಲಾ ನೋಡಿದ
 ಮೋಹನನಿಗೆ ಅದರಲ್ಲಿ ಆಸಕ್ತಿ ಇರುತ್ತಿರಲಿಲ್ಲ, ಆದರೆ ಮುರಳಿ ಅವ್ವುಗಳಿಗೆ ಮನ ಸೋತಿದ್ದ,
 ಜೀವನ ಎಂದರೆ ಅದುವೇ ಎಂಬ ಕಲ್ಪನೆಯಲ್ಲೇ ತನ್ನ ಕನಸು ಹೆಣೆಯುತಿದ್ದ. ಆದರೆ ಮೋಹನ 
ಕೋಟದಲ್ಲಿ ಮುರಳಿಯ ಮನೆ ಮತ್ತು ಅಲ್ಲಿನ ವಾತಾವರಣ ಭಾಂಧವ್ಯ ನೋಡಿ ತನ್ನ ತಾಯಿ 
ಬೇರಿನ ಮೂಲ ಹುಡುಕಲು ಕಾತರ ನಾಗಿದ್ದ. ದೇಶದಲ್ಲಿದ್ದೆ ಸಾಧನೆ ಮಾಡಬೇಕು ಎನ್ನುತಿದ್ದ.
 ಆದರೆ ಕೊನೆಗೆ ಉತ್ತರ ಭಾರತಿಯ ಮಾತು ಮೀರುವಂತೆ ಇರಲಿಲ್ಲ. ಪರಿಣಾಮವಾಗಿ ದುಬೈಯ
 ನೌಕರಿಗೆ ಸೇರಿಕೊಂಡಿದ್ದ.

ಕಾಪು ತಲುಪುತಿದ್ದಂತೆ ಮತ್ತೆ ಆಚೆಗೆ ಹೊಸ ಹೆದ್ದಾರಿ ಆಗದ, ಈಚೆಗೆ ಟಾರ್ ಕಿತ್ತ ಹಳೇ 
ಮಾರ್ಗದಲ್ಲಿ ದೂಳೆಬ್ಬಿಸುತ್ತಾ ಕಾರ್ ಉಬ್ಬಸ ಬಿಡುತ್ತಿದ್ದಾಗ ಮೋಹನ ಮತ್ತೆ ವಾಸ್ತವಕ್ಕೆ ಬಂದ. 
ಕೈಯಲ್ಲಿ ಶಂಕರಪುರ ಮಲ್ಲಿಗೆಯ ಅಟ್ಟೆ ಹಿಡಿದು ನಿಂತ ಸಣ್ಣ ಹುಡುಗರ ಹಿಂಡು ವೇಗ ಇಳಿದ ಕಾರ್ 
ಗಳ ಗಾಜಿಗೆ ಅಂಟಿದ್ದ ದೂಳು ಒರೆಸುತ್ತಾ ವ್ಯಾಪಾರ ನಡೆಸುತಿದ್ದರು. ಒಬ್ಬ ಹುಡುಗ ಇವರ ಕಾರನ್ನೂ 
ಸಮೀಪಿಸಿದ. ಯಶವಂತನಿಗೆ ಕಾರ್ ನಿಲ್ಲಿಸಲು ಕಾರಣವಿರಲಿಲ್ಲ ಹಾಗಾಗಿ ಅವನು ಅವನ ಪಾಡಿಗೆ 
ಮುಂದುವರಿಸುತಿದ್ದ. ಮೋಹನ್ ಅವನ ಭುಜವನ್ನು ತಟ್ಟುತ್ತಾ ಕಾರ್ ನಿಲ್ಲಿಸಲು ಹೇಳಿದ.
 ಕೆಳಗಿಳಿದು ಒಂದು ಅಟ್ಟೆ ಮಲ್ಲಿಗೆ ಕೊಂಡುಕೊಂಡು ಬಳಿಯಲ್ಲೇ ಇದ್ದ ಬೊಂಡ ಕುಡಿದು ಅವನಿಗೂ 
ಒಂದು ಬೊಂಡ ಕೊಟ್ಟು ಕಾರ್ ಬಾಗಿಲು ಹಾಕಿದ.

"ಸರ್ ಹೆಂಡತಿ ಊರಲ್ಲೇ ಇರುವುದಾ ...?" ಅಂದ ಯಶವಂತ್.
ಇವನಿಗೆ ಏನು ಹೇಳ ಬೇಕೋ ತಿಳಿಯಲಿಲ್ಲ, ತಲೆಗೆ ಒಂದು ದಿನವೂ ಎಣ್ಣೆ ಇಡದ ಹೂ 
ಮುಡಿಯದ ಜೂನಿಯರ್ ಉತ್ತರ ಭಾರತಿಗೆ ಈ ಶಂಕರಪುರ ಮಲ್ಲಿಗೆಯ ಪರಿಮಳದ ಮತ್ತು
 ಅದನ್ನು ಮುಡಿಯುವ ಮಹತ್ವ ಹೇಗೆ ಗೊತ್ತಾಗಬೇಕು ಎಂದು ಸುಮ್ಮನಾದ.
"ಎಷ್ಟು ಮಕ್ಕಳು ಸರ್ " ಎಂದ ಇವನಿಂದ ಉತ್ತರ ಹೊರ ಬರದನ್ನು ನೋಡಿ.
"ಇಲ್ಲ ಮಕ್ಕಳಿಲ್ಲ" ಅಂದ ಅವನು.
"ಅದೂ ಹೌದು ಅನ್ನಿ ನೀವಲ್ಲಿ ಅವರಿಲ್ಲಿ ... ಮಕ್ಕಳು ಹೇಗೆ ಆಗ್ತಾರೆ... ಮೊದಲು ಹಣ ಮಾಡಿ, 
ಮಕ್ಕಳನ್ನು ಆರಾಮಾಗಿ ಮಾಡುವಿರಂತೆ" ಅಂದ ಕೊಟ್ಟ ಸ್ವಾತಂತ್ರ್ಯ ಜಾಸ್ತಿಯಾಗಿ.
ದೇಹ ಜೊತೆಗಿದ್ದರೆ ಸಾಕ ಮನಸ್ಸು ಜೊತೆಯಾಗುವುದು ಬೇಡವಾ ಎಂದನಿಸಿತು ಮೋಹನನಿಗೆ, 
ಅವನು  "ಇಲ್ಲ, ಹೆಂಡತಿ ನನ್ನ ಜೋಥೆಗಿದ್ದಾಳೆ, ಸದ್ಯಕ್ಕೆ ಬೇಡ ಹೇಳಿ, ಆ ಮಗುವೂ ನಮ್ಮಂತೆ 
ಅಬ್ಬೇಪಾರಿ ಆಗುವುದು ಬೇಡ ಹೇಳಿ ಸಧ್ಯಕ್ಕೆ ಮುಂದೆ ಹಾಕಿದ್ದೇವೆ" ಅಂದ.
"ಮತ್ತೆ ..? ಹೂ ಅಮ್ಮನಿಗಾ ...? ತಂದೆಯವರು ಏನು ಮಾಡುತ್ತಾರೆ ?" ಎಂದು ಮರು ಪ್ರಶ್ನೆ ಇಟ್ಟ.
'ಇಬ್ಬರೂ ಪರದೇಶಿಗಳು ..' ಎಂದು ಮೌನದಲ್ಲೇ ಹೇಳಿ ಅವನಿಗೆ ಕೇಳುವಂತೆ "ಅವರೀಗ ಡೆಲ್ಲಿಯಲ್ಲಿ 
ಇದ್ದಾರೆ, ಈಗ ನಾನು ಗೆಳೆಯನ ಮನೆಗೆ ಹೋಗ್ತಾ ಇದ್ದೇನೆ" ಅಂದ.
"ಏನು ವಿಶೇಷ ಸರ್ ..?"
"ವಿಶೇಷ ಏನೂ ಇಲ್ಲ ಅವನು ಮನೆ ಕಟ್ಟಿದ್ದಾನೆ, ಗ್ರಹಪ್ರವೇಶಕ್ಕೆ ಕರೆ ಮಾಡಿದ್ದ, ಬರಲಾಗಲಿಲ್ಲ.
 ಹಾಗೆ ಈಗ ನೋಡಿ ಹೋಗೋಣ ಹೇಳಿ ಬಂದದ್ದು."
"ಹೌದಾ.. ಏನು ಮಾಡಿಕೊಂಡಿದ್ದಾನೆ ನಿಮ್ಮ ಫ್ರೆಂಡು..?"
"ಗದ್ದೆ, ತೋಟ ಮತ್ತಿನ್ನೇನೂ .. ಅವನನ್ನು ಕಂಡ್ರೆ ಹೆಮ್ಮೆ ಆಗ್ತಿದೆ" ಅಂದ ಮೋಹನ ಹೆಮ್ಮೆಯಲ್ಲಿ
 ಹುಬ್ಬೇರಿಸುತ್ತಾ.
ಅವರು ಕನ್ನಡಿಯನ್ನು ಮತ್ತೆ ಸರಿ ಮಾಡಿ ಇವನನ್ನು ಸರಿಯಾಗಿ ನೋಡಿದರು, ಮೋಹನನ ಕಣ್ಣಲ್ಲಿ
 ಏನೂ ಒಂದು ಬಗೆಯ ಸಂಭ್ರಮ ಇತ್ತು.
"ಬಾಲ್ಯದ ಗೆಳೆಯ ಅಂದುಕೊಳ್ಳುತ್ತೇನೆ, ನೀವೂ ಕುಂದಾಪುರದವರಾ ...?" ಅಂದ.
"ಹೌದು, ಬಾಲ್ಯದ ಗೆಳೆಯ"
"ಯಾವುದು ನಿಮ್ಮ ಊರು ...?"
ಮೋಹನನಿಗೆ ಮತ್ತೆ ಮುರಳಿ ಅದೇ ಪ್ರಶ್ನೆ ಕೇಳಿದಂತಾಗಿ ಒಮ್ಮೆಗೆ ಲಾಲ್ ಗಂಜ್ ಎನ್ನುವ ಅಂತಾಗಿ 
ಮರುಕ್ಷಣವೇ ಕನಕಪುರ ಎನ್ನಲು ಮನಸ್ಸಾಯಿತು. ಆದರೆ ಕನಕ ಪುರ ಎಂದರೆ ಅಲ್ಲಿ ನಿಮ್ಮ ಯಾರಿದ್ದಾರೆ
 ಕೇಳಿದರೆ ಆ ಪ್ರಶ್ನೆಗೆ ಉತ್ತರ ಹೊಳೆಯದೆ ಕೋಟಾ  ಅಂದ.
"ಒಂದೇ ಊರಿನವರು  ಅಂದರೆ ಆ ಸೆಳೆತ ಇರುತ್ತದೆ, ನೀವೆಷ್ಟೇ ಧೂರ ಇದ್ದರೂ, ಎಷ್ಟೇ ಸಿರಿವಂತರಾದರು
 ಎಲ್ಲಾದರೊಂದು ಒಡೆದ ಮಡಕೆ, ಮಾವಿನ ಮರದಲ್ಲಿ ತುಗುವ ಉಯ್ಯಾಲೆ ಕಂಡರೆ ನೆನಪಾಗುತ್ತದೆ ಮತ್ತೆ 
ಅದೇ ಬೀದಿ, ಅದೇ ಜನಗಳು" ಅಂದ.
"ಹೌದು, ಏನೂ ಒಂದು ಸೆಳೆತ ಊರು ಮತ್ತು ಅಲ್ಲಿನ ಜನ ಅಂದ್ರೆ" ಅಂದ ಮೋಹನ ಮತ್ತಷ್ಟು
 ಹುರುಪಿನಲ್ಲಿ.
"ನೀವ್ಯಾವಾಗ ಮನೆ ಕಟ್ಟುತ್ತೀರ ಸರ್ " ಎಂದು ಮರುಕ್ಷಣವೇ ಯಶವಂತ್.
"ಸಧ್ಯದಲ್ಲೇ .. ಇಲ್ಲೇ ಕೋಟದಲ್ಲಿ" ಅಂದ ಮೋಹನ.....
ಮುಂದುವರಿಯುವುದು ....
Rating
No votes yet