ಜಗತ್ತಿನಲ್ಲಿ ಕಂಡು ಬರುವ ಅನೇಕ ಮತ ಪಂಥಗಳ ಉಗಮವಾದದ್ದಾದರೂ ಹೇಗೆ ? ಜಗತ್ತಿನ ಜನರನ್ನು ಮತ ಪಂಥಗಳು ತಮ್ಮ ಅಂಕೆಗೊಳಪಡಿಸಿಕೊಂಡಿರುವ ವಿಚಿತ್ರ ವಿದ್ಯಮಾನಗಳಿಗೆ ಕಾರಣವಾದರೂ ಏನು ? ಇತ್ಯಾದಿ ಪ್ರಶ್ನೆಗಳು ವಿಚಾರ ಮಾಡುವ ಮನಸ್ಸುಗಳಿಗೆ ಎದುರಾಗದೆ ಇರದು . ಅದರಲ್ಲೂ ಭಾರತವಂತೂ ಅನೇಕ ಮತ ಪಂಥಗಳ ತವರುಮನೆ ! ಇನ್ನೂ ಅನೇಕವುಗಳ ಆಶ್ರಯದಾತ ! ಇದು ಪ್ರಪಂಚದ ಇನ್ನಿತರ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರದ ವಿಶೇಷ ಪರಿಸ್ಥಿತಿ .
ಮನುಷ್ಯ ಜೀವಿ ವೈಯುಕ್ತಿಕವಾಗಿ ಎಷ್ಟೇ ವೈಚಾರಿಕನಾಗಿದ್ದರೂ ಸಾಂಘಿಕ ಜೀವನ ನಡೆಸುವಲ್ಲಿ ಕೆಲವು ನಿಬಂಧನೆಗಳಿಗೆ ಅವನು ಅನೈಚ್ಛಿಕವಾಗ ಒಳಪಡಲೇಬೇಕಾದ ಅನಿವಾರ್ಯ ಸ್ಥಿತಿಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ ; ಅದು ಅವನ ಪ್ರಾರಾಬ್ಧ. ಅದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ , ಅಲ್ಲಿ ಮನುಷ್ಯನ ತಪ್ಪಿಗಿಂತ , ಪ್ರಕೃತಿ ಅವನಲ್ಲಿ ಅಳವಡಿಸಿರುವ ಜೀವಕಣಗಳಲ್ಲೇ ಇಂಥದೊಂದು ಅಂಕೆಯ ಎಳೆಯನ್ನು ಪ್ರಕೃತಿಯೇ ನಿಯೋಜಿಸಿರುವ ಸಂಭವನೀಯತೆಯೇ ಅಲ್ಲಿ ಹೆಚ್ಚು ಕೆಲಸ ಮಾಡುತ್ತಿರುವಂತಿದೆ . ಪ್ರಕೃತಿ ಅಂತಹ ಕಣಗಳನ್ನು ಜೀವಕೋಶದಲ್ಲಿ ವಿನ್ಯಾಸ ಮಾಡಿರುವ ವಿದ್ಯಮಾನಗಳನ್ನು ಅತ್ಯಂತ ಕೆಳ ಸ್ತರದ ಕೀಟಗಳಲ್ಲಿ , ಮತ್ತು ಹೆಚ್ಚು ವಿಕಸಿತವಾಗಿ ಸಾಂಘಿಕ ಜೀವನ ನಡೆಸುತ್ತಿರುವ ಸಸ್ತನಿಗಳ ಅನೇಕ ಪ್ರಭೇದಗಳಲ್ಲಿ , ಪ್ರತ್ಯಕ್ಷವಾಗಿ ಗಮನಿಸಬಹುದು . ಪ್ರಕೃತಿಯ ಇದರ ಉದ್ದೇಶ ಜೀವದ ಬದುಕು ಮತ್ತು ಉಳಿವಿಗಾಗಿ , ಆಹಾರದ ಅನ್ವೇಷಣೆ ಮತ್ತು ಇತರ ಜೀವಿಗಳೊಂದಿಗೆ ಹೋರಾಡಬೇಕಾದ ಸಂದರ್ಭಗಳಲ್ಲಿ ಒಂದು ಸಾಂಘಿಕ ಬಲದ ಅಗತ್ಯವಿದೆ ಎನ್ನುವ ಕಾರಣಕ್ಕಾಗಿ , ವಿಕಾಸದ ವಿವಿಧ ಹಂತಗಳಲ್ಲಿ ಜೀವ ಅಳವಡಿಸಿಕೊಂಡಿರಬಹುದಾದ ವಿಲಕ್ಷಣ ಜೀವ ಕಣಗಳಲ್ಲಿ ಜೀವಿಗಳ ಈ ಸಾಂಘಿಕ ವಿಧೇಯ ಲಕ್ಷಣವೂ ಒಂದಾಗಿರ ಬಹುದು .
ಮಾನವ ಜೀವಿಯಲ್ಲಿಯೂ ಈ ರೀತಿಯ ಜೈವಿಕ ಕಣಗಳು ಸಕ್ರಿಯವಾಗಿರುವ ಕಾರಣದಿಂದಲೇ ಅವನ ವಿಚಾರ ಶಕ್ತಿಯನ್ನು ಮೀರಿ , ಕೆಲವು ನಂಬಿಕೆಗಳಿಗೆ ಅವನು ಅಡಿಯಾಳಾಗಿರುವ ಸಾಧ್ಯತೆಗಳಿವೆ . ಇದೇ ಆಧಾರದ ಮೇಲೆಯೇ ಮತಗಳು ಮನುಷ್ಯಕುಲವನ್ನು ಆಳಲು ಸಾಧ್ಯವಾಗಿರುವುದು . ಆದರೆ ಈ ಮತಗಳೆಂಬುವೇ ಏನು ? ಇವುಗಳ ಹುಟ್ಟುಗಳಿಗೆ ಯಾವುದಾದರೂ ಕಾರಣಗಳಿವೆಯೇ ? ಇಂದಿನ ವೈಚಾರಿಕ ಯುಗದಲ್ಲಿಯೂ ಇವು ಅನಿವಾರ್ಯವೇ ? ಇಂದು ಅವು ಬಳಕೆಯಾಗುತ್ತಿರುವುದು ಯಾವ ಯಾವ ಕಾರಣಗಳಿಗಾಗಿ ? ಇತ್ಯಾದಿ ಪ್ರಶ್ನೆಗಳು ಮನುಕುಲದ ಮುಂದಿವೆ .
ಕೆಲವು ಮತಗಳನ್ನು ಹೊರತುಪಡಿಸಿ ಅನೇಕ ಮತಗಳು ಹೇಳುವುದು ಆ ಮತಗಳ ಆರಂಭಕ್ಕೆ ಕಾರಣ ಸ್ವಯಂ ದೇವರೇ ಎಂಬುದು . ಇಲ್ಲಿ ದೇವರೇ ಸ್ವತಃ ಅಥವಾ ಒಬ್ಬ ಪ್ರವಾದಿಯ ಮೂಲಕ ದೇವರ ಅಭೀಷ್ಟದಂತೆ ಈ ಮತಗಳಿಗೆ ತಳಹದಿಯನ್ನು ಹಾಕಿದ ಎನ್ನುವುದು . ಮತ್ತು ಮನುಷ್ಯ ಕುಲದ ಮೇಲೆ ಅನೇಕ ನಿಯಮಾವಳಿಗಳನ್ನು ಕಟ್ಟಳೆಗಳನ್ನು ಆ ದೇವರೇ ಸ್ವತಃ ಹೇರಿದ ಎನ್ನುವುದು . ಈ ರೀತಿಯ ನಂಬಿಕೆಗಳ ಅಡಿಪಾಯದ ಮೇಲೆ ಆ ಮತದ ಅನುಯಾಯಿಗಳನ್ನು ಹದ್ದುಬಸ್ತಿನಲ್ಲಿಡಲಾಗಿದೆ . ಸಾಮಾನ್ಯ ಜನವರ್ಗಕ್ಕೆ ಇಂತಹ ವಿವರಣೆಗಳು ಸಾಕಾಗಬಹುದು . ಆದರೆ ವಿಚಾರಶಕ್ತಿ ಜಾಗೃತವಾಗಿರುವ ಮನುಷ್ಯನಲ್ಲಿ ಈ ರೀತಿಯ ವಿವರಣೆಗಳು ಸಮಾಧಾನ ನೀಡಲು ಅಸಮರ್ಥವಾಗುತ್ತವೆ .
ಸಾಮಾನ್ಯವಾಗಿ ಭಾರತದಂತಹ ಪ್ರಾದೇಶಿಕ ಸನ್ನಿವೇಶದಲ್ಲಿ ಅನೇಕ ವಿಚಾರಗಳು ನಿರಂತರವಾಗಿ ಚರ್ಚಿತವಾಗುತ್ತಿದ್ದುದರಿಂದ , ಇಲ್ಲಿ ಆಸ್ತಿಕರೂ ಚಾರ್ವಾಕರೂ ಅಲ್ಲದೆ ವಿವಿಧ ವಿಚಾರಗಳ ಜನವರ್ಗ ಸಹ ತಾತ್ವಿಕವಾಗಿ ಅನೇಕ ಭಿನ್ನ ಅಭಿಪ್ರಾಯಗಳನ್ನು ಹೊಂದಿದವರಿದ್ದರು . ಅದರ ಕಾರಣದಿಂದಲೇ ದೇವರ ವಿಷಯವನ್ನು ಪ್ರಸ್ತುತಗೊಳಿಸದೆ ಕೆಲವು ಮತಗಳು ಇಲ್ಲಿ ಉಗಮವಾಗಲು ಕಾರಣವಾಯಿತು . ಸಾಮಾನ್ಯವಾಗಿ ಗುರುವಿನ ಅಭಿಪ್ರಾಯಗಳನ್ನು ಒಪ್ಪದ ಶಿಷ್ಯರು ತಮ್ಮದೇ ಪಂಥಗಳನ್ನು ಆರಂಭಿಸಿದ ಉದಾಹರಣೆಗಳು ಇಲ್ಲಿ ಸಾಕಷ್ಟಿವೆ . ಅವರಲ್ಲದೆ ಸ್ವತಂತ್ರವಾಗಿ ಸ್ವಯಂ ಅಧ್ಯಯನದಿಂದಲೂ ತಮ್ಮ ತತ್ವ ಮಂದಿರಗಳನ್ನು ಕಟ್ಟಿದವರಿದ್ದಾರೆ . ಜಗತ್ತಿನ ಬೇರೆ ಭಾಗಗಳಲ್ಲಿಯೂ ಇಂಥವೇ ಕಾರಣಗಳಿಗಾಗಿ ಮತ ಪಂಥಗಳು ಹುಟ್ಟಿರುವ ಸಾಧ್ಯತೆಗಳು ಹೆಚ್ಚಾಗಿವೆ . ಎಲ್ಲ ಮನುಷ್ಯರಿಗೂ ಈ ಮತ ಪಂಥಗಳ ವೈಚಾರಿಕ , ತಾತ್ವಿಕ ನಿಲುವುಗಳು ಕೈಗೆಟುಕುವುದು ಸಾಧ್ಯವಿಲ್ಲದ ಮಾತು . ಅವರು ಹುಟ್ಟಿನ ಕಾರಣದಿಂದ ಅಥವಾ ಬೆರಾವುದೇ ನಂಬಿಕೆಗಳ ಕಾರಣದಿಂದ ಅಥವಾ ತಮ್ಮ ಸಂಕಷ್ಟಗಳ ನಿವಾರಣೆಯ ಕಾರಣಗಳಿಂದ ಒಂದು ಮತದ ತೆಕ್ಕೆಗೆ ಬೀಳಬೇಕಾಗುತ್ತದೆ . ನಂತರದ ವಿದ್ಯಮಾನವೇ ನಿಸರ್ಗ ಅವರಲ್ಲಿ ನಿಗೂಢವಾಗಿ ಅಡಗಿಸಿಟ್ಟಿರುವ , ನಂಬಿಕೆ , ವಿಧೇಯತೆಗಳ ಅಡಿಯಾಳಾಗಿ ಅವರು ಪ್ರವರ್ತಿಸಬೇಕಾಗಿ ಬರುತ್ತದೆ . ಇದೇ ಮತ ಮೌಢ್ಯದ , ಮತ ನಿಷ್ಠೆಯ , ಮತ ಹಠವಾದಿತ್ವದ ಮೂಲ ಕಾರಣಗಳು ; ಮನುಷ್ಯನೊಬ್ಬ ತನ್ನ ವಿಚಾರಶಕ್ತಿಯನ್ನು ಮೀರಿ , ಅವೈಜ್ಞಾನಿಕವಾಗಿಯಾದರೂ , ಅವೈಚಾರಿಕವಾಗಿಯಾದರೂ ಅವನು ನಂಬಿದ ಪಂಥದ ಕುರುಡು ಅನುಯಾಯಿಯಾಗುವ ಅಪಾಯಕ್ಕೆ ಸಿಲುಕುವ ಕಾರಣಗಳು .
ಎಲ್ಲಿಯವರೆಗೆ ಮತ ಪಂಥಗಳು ತಾತ್ವಿಕ ರೂಪದಿಂದ ಕೂಡಿದ್ದವೋ ಅಲ್ಲಿಯವರೆಗೆ ಸ್ವಲ್ಪ ಹೆಚ್ಚೂ ಕಡಿಮೆ ಎಲ್ಲವೂ ಸರಿಯಾಗಿಯೆ ಇದ್ದಂತೆ ಕಂಡು ಬರುತ್ತದೆ . ಆದರೆ ಮತಗಳಿಗೆ ಪ್ರಭುಶಕ್ತಿಯ ಬೆಂಬಲ ಯಾವಾಗ ದೊರಕಿತೋ ಆಗಲೇ ಪರಿಸ್ಥಿತಿ ತಾರುಮಾರಾಗಿ ಹೋಯಿತು . ಸಾಮಾನ್ಯವಾಗಿ ಎಲ್ಲ ಮತಗಳು ಬೃಹತ್ತಾಗಿ ಬೆಳೆದದ್ದೇ ಅರಸರ ಬೆಂಬಲಗಳಿಂದ . ಯಾವುದೇ ವಿಷಯಕ್ಕೆ ರಾಜಕೀಯದ ಸ್ಪರ್ಶವಾದರೆ ಮುಗಿಯಿತು, ಅಲ್ಲಿ ಅಮಾನವೀಯತೆ , ಹಿಂಸೆ ಇವೆಲ್ಲ ತಾನೇ ತಾನಾಗಿ ವಿಜೃಂಭಿಸುತ್ತವೆ . ಪ್ರಭುಶಕ್ತಿ ಮತಗಳನ್ನು ತಮ್ಮ ದಾಳವನ್ನಾಗಿ ಬಳಸಿಕೊಂಡು ಮಾನವ ಶೋಷಣೆಗೆ ತೊಡಗಿದ ನಂತರ , ಮತ ಮುಂದಾಳುಗಳಿಗೂ ತಮ್ಮ ಶಕ್ತಿಯ ಅರಿವಾಗತೊಡಗಿತು . ಇದರಿಂದಾಗಿ ಅವರೂ ರಾಜಕಾರಣದ ಚತುರರೇ ಆಗತೊಡಗಿದರು . ಅಲ್ಲಿಗೆ ಮತ ಪಂಥಗಳ ಒಂದು ಅವತಾರ ಮುಗಿದು ಇನ್ನೊಂದು ಅವತಾರ ತೊಡಗಿತು . ಒಂದು ಕಾಲಘಟ್ಟದಲ್ಲಿ ಪ್ರಭುತ್ವ ಮತ್ತು ಮತಗಳೇ ಮುಖಾಮುಖಿಯಾಗಿ ಹೋರಾಡಬೇಕಾದ ಪರಿಸ್ಥಿತಿಯೂ ನಿರ್ಮಾಣವಾಯಿತು . ಬೇಗ ಎಚ್ಚತ್ತುಕೊಂಡ ಆ ಶಕ್ತಿಗಳು ಪ್ರಜಾಶೋಷಣೆಗೆ ತಾವಿಬ್ಬರೂ ಒಂದಾಗಲೇಬೇಕಾದ ಅನಿವಾರ್ಯತೆಯನ್ನು ಮನಗಂಡು ಹೊಸ ವೇಷಧಾರಿಗಳಾಗಿ ಜನರನ್ನು ಅಜ್ಞಾನದ ಕೂಪಕ್ಕೆ ತಳ್ಳಿದರು . ದೂರದೃಷ್ಟಿಗಿಂತಲೂ ಸದ್ಯದ ಸ್ವಂತದ ಹಿತಾಸಕ್ತಿಗಳತ್ತಲೇ ಗಮನ ಹರಿಸುವ ರಾಜಕೀಯ ಮುಖಂಡರುಗಳಿಂದ ; ವೈಚಾರಿಕತೆ , ಅಧ್ಯಯನಶೀಲತೆ , ಮಾನವಾನುಕಂಪೆಗಳನ್ನು ಕ್ರೂಢೀಕರಿಸಿ ಜನರನ್ನು ತಿದ್ದಬೇಕಾದ ದಾರ್ಶನಿಕರ ಜಾಗದಲ್ಲಿ , ಮನುಷ್ಯನ ಅಂತಃಶಕ್ತಿಯನ್ನೇ ನಾಶಮಾಡುವ , ಮತ್ತು ಅವನನ್ನು ಕೇವಲ ಹೇಳಿದ್ದನ್ನು ಕೇಳುವ , ಪ್ರಶ್ನಿಸುವ ಸಾಮರ್ಥ್ಯವನ್ನೇ ಕಳೆದುಕೊಂಡ ಸೂತ್ರದ ಬೊಂಬೆಯನ್ನಾಗಿ ಪರಿವರ್ತಿಸುವ ಕೆಲಸವನ್ನು ಮತೀಯ ನಾಯಕರು ವ್ಯವಸ್ಥಿತವಾಗಿ ನಡೆಸಿದರು .
ಯಾವಾಗ ರಾಜಕೀಯ ನಾಯಕರು ಢಾಂಬಿಕ ಭಕ್ತರೂ ,ಕಪಟ ಶಿಷ್ಯರೂ ಆಗಿ ; ಮತೀಯ ಗುರುಗಳು ಹೈಟೆಕ್ ಸ್ವಾಮಿಗಳೂ , ಧಿಡೀರ್ ಯೋಗಿಗಳೂ ಆದರೋ , ಅಲ್ಲಿಗೆ ಪೂರ್ಣ ಸುತ್ತು ಮುಗಿಯಿತು . ಆಧ್ಯಾತ್ಮ , ಅನುಭಾವ ಇವೆಲ್ಲ ಅರ್ಥ ಕಳೆದುಕೊಂಡು , ಏರ್ ಕಂಡೀಷನ್ ಕೊಠಡಿಗಳಲ್ಲಿ ಹೈಟೆಕ್ ಕಾರು ಏರೋಪ್ಲೇನುಗಳಲ್ಲಿ ಅಂತರ್ಧಾನವಾಗಿ ಹೋದವು .
ಇಂದಿನ ಪ್ರಜಾಪ್ರಭುತ್ವ ಯುಗದಲ್ಲಂತೂ ಮನುಷ್ಯನು ಬೇಕಾಗಿರುವುದು ಕೇವಲ ಓಟ್ ಬ್ಯಾಂಕನ ರೂಪದಲ್ಲಿ ಮಾತ್ರ , ಅದರಿಂದಾಗಿಯೇ ತಮ್ಮ ಜನಾಂಗಗಳನ್ನು ಹೆಚ್ಚಿಸಿಕೊಳ್ಳುವ ಹುಂಬ ಆಲೋಚನೆ ಮತೀಯ ನಾಯಕರಿಗೆ ಹೊಳೆದು , ಮನುಷ್ಯಕುಲ ತಲ್ಲಣಗೊಳ್ಳಲು ಕಾರಣರಾಗುತ್ತಿದ್ದಾರೆ . ಇದರ ಪರಿಣಾಮವೇ ಇಂದು ಜಗತ್ತು ಹಿಂಸೆಯ ಬೀಡಾಗಿರುವುದು. ಹೇಗಾದರೂ ಸರಿಯೆ , ಅಧಿಕಾರ ಸಂಪಾದನೆಯನ್ನೇ ಗುರಿಯನ್ನಾಗುಳ್ಳ , ಅದಕ್ಕಾಗಿ ಮಾನವ ಸಮಾಜವನ್ನು ಬರಿಯ ಗುಲಾಮರನ್ನಾಗಿಸುವ ಕಾರ್ಯತಂತ್ರವು ಜಾರಿಯಾಗುತ್ತಿರುವುದೇ ಇಂದಿನ ಜಾಗತಿಕ ವಿಪ್ಲವಗಳಿಗೆ ಮೂಲ ಕಾರಣ . ಪ್ರಸಿದ್ದ ಸಾಹಿತಿ ’ಪೂರ್ಣಚಂದ್ರ ತೇಜಸ್ವಿ’ ಯವರು ಒಂದು ಕಡೆ ’ ಇಪ್ಪತ್ತನೆಯ ಶತಮಾನದಲ್ಲಿ , ರಾಜಕಾರಣದ ಸರ್ವಾಧಿಕಾರ ಮತ್ತು ಅಮಾನವೀಯ ನಡತೆಯಿಂದಾಗಿ , ಜಗತ್ತು ಅತೀವ ಯಾತನೆ ಬನ್ನಗಳಿಂದ ನೊಂದು, ಮನುಷ್ಯ ಕುಲ ನರಕಯಾತನೆ ಅನುಭವಿಸಿದ್ದು ಆಯಿತು ; ಇಪ್ಪತ್ತೊಂದನೆಯ ಶತಮಾನ ಮತ ಕಲಹಗಳಿಂದ ಮತ್ತು ಮತ್ತೊಂದು ರೂಪದ ಮತೀಯ ಸರ್ವಾಧಿಕಾರ , ಅವೈಚಾರಿಕ ನಡೆಯಿಂದ ಮನುಷ್ಯಕುಲದ ಮೇಲೆ ಯಮ ಯಾತನೆಗಳನ್ನು ಹೇರಲಿದೆ ’ ಎಂಬರ್ಥದ ಮಾತುಗಳನ್ನು ಬರೆದಿದ್ದರು . ಅದು ನಿಜವಾಗಿಯೇ ತೀರುತ್ತದೆನ್ನುವ ಸಂದೇಹ, ಬರಿಯ ಸಂದೇಹವಾಗುಳಿಯದೆ ನಿಜವಾಗಿಯೇ ತೀರುವ ಭಯ , ಜಾಗತಿಕ ವಿದ್ಯಮಾನಗಳಿಂದಾಗಿ ಮನುಷ್ಯ ಕುಲದ ಮುಂದೆ ಆಹ್ವಾನವನ್ನೊಡ್ಡಿ ನಿಂತಿದೆ .
ಜಗತ್ತಿನಲ್ಲಿ ಕಂಡು ಬರುವ ಅನೇಕ ಮತ ಪಂಥಗಳ ಉಗಮವಾದದ್ದಾದರೂ ಹೇಗೆ ? ಜಗತ್ತಿನ ಜನರನ್ನು ಮತ ಪಂಥಗಳು ತಮ್ಮ ಅಂಕೆಗೊಳಪಡಿಸಿಕೊಂಡಿರುವ ವಿಚಿತ್ರ ವಿದ್ಯಮಾನಗಳಿಗೆ ಕಾರಣವಾದರೂ ಏನು ? ಇತ್ಯಾದಿ ಪ್ರಶ್ನೆಗಳು ವಿಚಾರ ಮಾಡುವ ಮನಸ್ಸುಗಳಿಗೆ ಎದುರಾಗದೆ ಇರದು . ಅದರಲ್ಲೂ ಭಾರತವಂತೂ ಅನೇಕ ಮತ ಪಂಥಗಳ ತವರುಮನೆ ! ಇನ್ನೂ ಅನೇಕವುಗಳ ಆಶ್ರಯದಾತ ! ಇದು ಪ್ರಪಂಚದ ಇನ್ನಿತರ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರದ ವಿಶೇಷ ಪರಿಸ್ಥಿತಿ .
ಮನುಷ್ಯ ಜೀವಿ ವೈಯುಕ್ತಿಕವಾಗಿ ಎಷ್ಟೇ ವೈಚಾರಿಕನಾಗಿದ್ದರೂ , ಸಾಂಘಿಕ ಜೀವನ ನಡೆಸುವಲ್ಲಿ ಕೆಲವು ನಿಬಂಧನೆಗಳಿಗೆ ಅವನು ಅನೈಚ್ಛಿಕವಾಗ ಒಳಪಡಲೇಬೇಕಾದ ಅನಿವಾರ್ಯ ಸ್ಥಿತಿಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ ; ಅದು ಅವನ ಪ್ರಾರಾಬ್ಧ. ಅದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ , ಅಲ್ಲಿ ಮನುಷ್ಯನ ತಪ್ಪಿಗಿಂತ , ಪ್ರಕೃತಿ ಅವನಲ್ಲಿ ಅಳವಡಿಸಿರುವ ಜೀವಕಣಗಳಲ್ಲೇ ಇಂಥದೊಂದು ಅಂಕೆಯ ಎಳೆಯನ್ನು , ಪ್ರಕೃತಿಯೇ ನಿಯೋಜಿಸಿರುವ ಸಂಭವನೀಯತೆಯೇ ಹೆಚ್ಚು ಕೆಲಸ ಮಾಡುತ್ತಿರುವಂತಿದೆ . ಪ್ರಕೃತಿ ಅಂತಹ ಕಣಗಳನ್ನು ಜೀವಕೋಶದಲ್ಲಿ ವಿನ್ಯಾಸ ಮಾಡಿರುವ ವಿದ್ಯಮಾನಗಳನ್ನು, ಅತ್ಯಂತ ಕೆಳ ಸ್ತರದ ಕೀಟಗಳಲ್ಲಿ , ಮತ್ತು ಹೆಚ್ಚು ವಿಕಸಿತವಾಗಿ ಸಾಂಘಿಕ ಜೀವನ ನಡೆಸುತ್ತಿರುವ ಸಸ್ತನಿಗಳ ಅನೇಕ ಪ್ರಭೇದಗಳಲ್ಲಿ , ಪ್ರತ್ಯಕ್ಷವಾಗಿ ಗಮನಿಸಬಹುದು . ಪ್ರಕೃತಿಯ ಇದರ ಉದ್ದೇಶ ಜೀವದ ಬದುಕು ಮತ್ತು ಉಳಿವಿಗಾಗಿ ; ಆಹಾರದ ಅನ್ವೇಷಣೆ ಮತ್ತು ಇತರ ಜೀವಿಗಳೊಂದಿಗೆ ಹೋರಾಡಬೇಕಾದ ಸಂದರ್ಭಗಳಲ್ಲಿ ಒಂದು ಸಾಂಘಿಕ ಬಲದ ಅಗತ್ಯವಿದೆ ಎನ್ನುವ ಕಾರಣಕ್ಕಾಗಿ . ವಿಕಾಸದ ವಿವಿಧ ಹಂತಗಳಲ್ಲಿ ಜೀವ ಅಳವಡಿಸಿಕೊಂಡಿರಬಹುದಾದ ವಿಲಕ್ಷಣ ಜೀವ ಕಣಗಳಲ್ಲಿ , ಜೀವಿಗಳ ಈ ಸಾಂಘಿಕ ವಿಧೇಯ ಲಕ್ಷಣವೂ ಒಂದಾಗಿರ ಬಹುದು .
ಮಾನವ ಜೀವಿಯಲ್ಲಿಯೂ ಈ ರೀತಿಯ ಜೈವಿಕ ಕಣಗಳು ಸಕ್ರಿಯವಾಗಿರುವ ಕಾರಣದಿಂದಲೇ ಅವನ ವಿಚಾರ ಶಕ್ತಿಯನ್ನು ಮೀರಿ , ಕೆಲವು ನಂಬಿಕೆಗಳಿಗೆ ಅವನು ಅಡಿಯಾಳಾಗಿರುವ ಸಾಧ್ಯತೆಗಳಿವೆ . ಇದೇ ಆಧಾರದ ಮೇಲೆಯೇ ಮತಗಳು ಮನುಷ್ಯಕುಲವನ್ನು ಆಳಲು ಸಾಧ್ಯವಾಗಿರುವುದು . ಆದರೆ ಈ ಮತಗಳೆಂಬುವೇ ಏನು ? ಇವುಗಳ ಹುಟ್ಟುಗಳಿಗೆ ಯಾವುದಾದರೂ ಕಾರಣಗಳಿವೆಯೇ ? ಇಂದಿನ ವೈಚಾರಿಕ ಯುಗದಲ್ಲಿಯೂ ಇವು ಅನಿವಾರ್ಯವೇ ? ಇಂದು ಅವು ಬಳಕೆಯಾಗುತ್ತಿರುವುದು ಯಾವ ಯಾವ ಕಾರಣಗಳಿಗಾಗಿ ? ಇತ್ಯಾದಿ ಪ್ರಶ್ನೆಗಳು ಮನುಕುಲದ ಮುಂದಿವೆ.
ಕೆಲವು ಮತಗಳನ್ನು ಹೊರತುಪಡಿಸಿ ಅನೇಕ ಮತಗಳು ಹೇಳುವುದು , ಆ ಮತಗಳ ಆರಂಭಕ್ಕೆ ಕಾರಣ ಸ್ವಯಂ ದೇವರೇ ಎಂಬುದು . ಇಲ್ಲಿ ದೇವರೇ ಸ್ವತಃ ಅಥವಾ ಒಬ್ಬ ಪ್ರವಾದಿಯ ಮೂಲಕ ದೇವರ ಅಭೀಷ್ಟದಂತೆ ಈ ಮತಗಳಿಗೆ ತಳಹದಿಯನ್ನು ಹಾಕಿದ ಎನ್ನುವುದು . ಮತ್ತು ಮನುಷ್ಯ ಕುಲದ ಮೇಲೆ ಅನೇಕ ನಿಯಮಾವಳಿಗಳನ್ನು, ಕಟ್ಟಳೆಗಳನ್ನು ಆ ದೇವರೇ ಸ್ವತಃ ಹೇರಿದ ಎನ್ನುವುದು . ಈ ರೀತಿಯ ನಂಬಿಕೆಗಳ ಅಡಿಪಾಯದ ಮೇಲೆ ಆ ಮತಗಳ ಅನುಯಾಯಿಗಳನ್ನು ಹದ್ದುಬಸ್ತಿನಲ್ಲಿಡಲಾಗಿದೆ . ಸಾಮಾನ್ಯ ಜನವರ್ಗಕ್ಕೆ ಇಂತಹ ವಿವರಣೆಗಳು ಸಾಕಾಗಬಹುದು . ಆದರೆ ವಿಚಾರಶಕ್ತಿ ಜಾಗೃತವಾಗಿರುವ ಮನುಷ್ಯನಲ್ಲಿ ಈ ರೀತಿಯ ವಿವರಣೆಗಳು ಸಮಾಧಾನ ನೀಡಲು ಅಸಮರ್ಥವಾಗುತ್ತವೆ. ಮುಂದೆ ಓದಿ »