ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 1000

ವಿಶೇಷ

ಸಂಪದದಲ್ಲಿ ಹೊಸ ಬದಲಾವಣೆಗಳು

ಬದಲಾಗುತ್ತಿರುವ ಸಮುದಾಯಕ್ಕನುಗುಣವಾಗಿ ಸಂಪದದಲ್ಲಿ ಒಂದಷ್ಟು ಹೊಸ ಬದಲಾವಣೆಗಳನ್ನು ಕೆಳಗಿನಂತೆ ಮಾಡಲಾಗಿದೆ.
೧) ಫ್ಲಾಗ್ ಮಾಡಲ್ಪಟ್ಟು ನಿರ್ವಾಹಕರಿಂದ ಅಳಿಸಿಹಾಕಲ್ಪಟ್ಟ ಪ್ರತಿಕ್ರಿಯೆಗಳು ಪ್ರತಿಕ್ರಿಯೆ ಹಾಕಿದ ಸದಸ್ಯರ ಅಕೌಂಟಿಗೆ ತಲಾ ಒಂದು ನೆಗೆಟಿವ್ ಪಾಯಿಂಟ್ ಸೇರಿಸುತ್ತದೆ. ಹೀಗೆ ನಾಲ್ಕು ಪಾಯಿಂಟುಗಳು ಸೇರ್ಪಡೆಯಾದಲ್ಲಿ ಆಯಾ ಸದಸ್ಯರ ಖಾತೆ ಅನಿರ್ದಿಷ್ಟ ಕಾಲದವರೆಗೆ ತಂತಾನೆ ಬ್ಲಾಕ್ ಆಗುತ್ತದೆ. 

೨) ಸಂಪದ ತೀರ ಕಡಿಮೆ ಸಂಪನ್ಮೂಲಗಳಲ್ಲಿ ನಡೆಯುತ್ತಿರುವುದರಿಂದ ಇನ್ನು ಮುಂದೆ ವೈಯಕ್ತಿಕ ಮಟ್ಟದಲ್ಲಿ ನಡೆಯುತ್ತಿರುವ ಯಾವುದೇ ಕಿಡಿ ಹತ್ತಿಸುವ ಚರ್ಚೆ ಇರುವ ಬರಹಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ತೆಗೆದುಹಾಕಲಾಗುವುದು. ನಲವತ್ತಕ್ಕೂ ಹೆಚ್ಚು ಪ್ರಕಟಣೆಯಿಂದ ತೆಗೆದುಹಾಕಿದ ಪ್ರತಿಕ್ರಿಯೆಗಳಿದ್ದ ಪುಟಗಳು ತಂತಾನೆ ಪ್ರಕಟಣೆಯಿಂದ ಹೊರಹೋಗುವುದು. 

೩) ಸಂಪದಕ್ಕೆ ಸೇರ್ಪಡೆಯಾಗುವ ಹೊಸ ಸದಸ್ಯರ ಕೋರಿಕೆ ಇನ್ನು ನಿರ್ವಾಹಕ ತಂಡದ ಅನುಮೋದನೆಗೆ ಕಾಯುವುದು. ಕೆಲವು ಸದಸ್ಯರು ಹಲವು ಐಡಿಗಳನ್ನು ಸೃಷ್ಟಿಸಿ ದುರುಪಯೋಗಪಡಿಸುತ್ತಿರುವುದನ್ನು ತಡೆಯಲು ಈ ಕ್ರಮ. 

ಈ ಮೇಲಿನ ಬದಲಾವಣೆಗಳ ಕುರಿತು ಸಲಹೆಗಳಿದ್ದಲ್ಲಿ ಪ್ರತಿಕ್ರಿಯೆ ಮೂಲಕ ತಿಳಿಸಬಹುದು. ಸೂಕ್ತವಾಗಿದ್ದಲ್ಲಿ ಅದನ್ನು ಕಾರ್ಯರೂಪಕ್ಕೆ ತರಲಾಗುವುದು.

ಜೊತೆಗೆ, ಟ್ರಾಫಿಕ್ ಹೆಚ್ಚಳದಿಂದಾಗಿ ಸಂಪದ ಸೊರಗಿದೆ. ಬರುವ ದಿನಗಳಲ್ಲಿ ಹೆಚ್ಚಿನ ಟ್ರಾಫಿಕ್ ತಡೆದುಕೊಳ್ಳುವ ಕ್ಷಮತೆಯುಳ್ಳ ತಾಣವನ್ನಾಗಿ ಮಾಡಲು ಸಲಹೆ, ತಾಂತ್ರಿಕ ಪರಿಣಿತಿ ಹಾಗು ನಿಮ್ಮೆಲ್ಲರ ಬೆಂಬಲ - ಇವೆಲ್ಲವೂ ಬೇಕಿದೆ. ಸಂಪದಕ್ಕೆ ನಾಲ್ಕು ವರ್ಷ ತುಂಬಲಿರುವ ಸುದ್ದಿಯನ್ನು ಹೀಗೆ ಬರೆದು ತಿಳಿಸುತ್ತಿರುವ ಬೇಸರ ನಮ್ಮದಾದರೂ, ಅಂತರ್ಜಾಲದಲ್ಲಿ ಕನ್ನಡ ಹೆಚ್ಚಿಲ್ಲದ ಸಮಯ ಹೀಗೆಯೇ ಸುಮ್ಮನೆ ಸಹೃದಯಿಗಳೊಡಗೂಡಿ ಪ್ರಾರಂಭವಾದ ಸಮುದಾಯವೊಂದು ಮುಂದೆಯೂ ಅಪ್ರತಿಮ ಬದಲಾವಣೆ ತರಬಲ್ಲ ಸಾಮರ್ಥ್ಯ ಉಳಿಸಿಕೊಳ್ಳುವುದು ಎಂಬ ಆಶಾಭಾವನೆಯಿಂದ, 

ಸಂಪದ ನಿರ್ವಹಣೆ ತಂಡದ ಪರವಾಗಿ, 

ಹರಿ ಪ್ರಸಾದ್ ನಾಡಿಗ್  ಮುಂದೆ ಓದಿ »

~.~

ಹತ್ತಾರು ಸುಂದರ ಗೂಡುಗಳು; ಹತ್ತಾರು ಸುಂದರಿಯರೊಂದಿಗೆ ಸಂಸಾರ!

ಗಂಡು ಗೀಜಗ ನೂತನ ಸಂಗಾತಿಯ ಮನವೊಲಿಸಲು ಹೆಣೆಯುತ್ತಿರುವ ಹೊಸ ಗೂಡು..ಎಷ್ಟನೇ ಗೂಡು? ಕ್ಲಿಕ್ಕಿಸಿದ ಕೇದಾರ ಅಣ್ಣನನ್ನು ಕೇಳಿ.

ಗುಬ್ಬಿಗೆ ಎಷ್ಟು ಜನ ಗಂಡಂದಿರು?

ನಮ್ಮ ದೇಶದ ಖ್ಯಾತ ಪಕ್ಷಿ ಶಾಸ್ತ್ರಜ್ಞ ಡಾ. ಸಲೀಂ ಮೊಯಿಜುದ್ದೀನ್ ಅಬ್ದುಲ್ ಅಲಿ ಅವರಿಗೂ ಈ ಪ್ರಶ್ನೆ ಕಾಡಿತ್ತು!

ನಮ್ಮ ಮನೆಗಳಲ್ಲಿ ಗೋಡೆಗೆ ನೇತು ಹಾಕಲಾಗಿರುವ ಹಿರಿಯರ ಫೊಟೋ ಫ್ರೇಮ್ ಗಳ ಹಿಂಬದಿಯಲ್ಲಿ ಆಶ್ರಯ ಪಡೆದು ಸಂಸಾರ ಹೂಡುತ್ತಿದ್ದ ಗುಬ್ಬಕ್ಕ ಡಾ. ಸಲೀಂ ಅಲಿ ಅವರ ಕುದುರೆ ಲಾಯದ ಮೇಲ್ಛಾವಣಿಯ ಹೆಂಚುಗಳ ಬುಡದಲ್ಲಿ ಗೂಡು ಕಟ್ಟಿತ್ತು.

ಹೆಣ್ಣು ಗುಬ್ಬಚ್ಚಿ ಹುಲ್ಲಿನ ಗೂಡಿನಲ್ಲಿ ಮೊಟ್ಟೆ ಇಟ್ಟುದನ್ನು ಡಾ. ಅಲಿ ಖಾತ್ರಿ ಪಡಿಸಿಕೊಂಡರು. ಅಮ್ಮಾವ್ರ ಗಂಡನಂತಿದ್ದ, ಆಹಾರ ನೀಡಲು ಆಗಮಿಸುತ್ತಿದ್ದ ಗಂಡು ಗುಬ್ಬಣ್ಣನನ್ನು ಏರ್ ಗನ್ ಬಳಸಿ ಅವರು ಹೊಡೆದು ಹಾಕಿದರು. ಹತ್ತು ನಿಮಿಷ ಗತಿಸಿರಲಿಲ್ಲ..ಮತ್ತೊಂದು ಗಂಡು ಗುಬ್ಬಿ ಆಹಾರ ಒದಗಿಸಲು ಸಿದ್ಧವಾಗಿ ನಿಂತಿತ್ತು!  ಮುಂದೆ ಓದಿ »

~.~

ಗಾದೆಗಳು : ಬೀದಿಯಲ್ಲೇ ಹುಟ್ಟಿದರೂ, ತೋರಿಸುವುದು ರಾಜಮಾರ್ಗ!

"ಶ್ರೀಮಂತರಿಗೆ ಕೊಡುವ ಗೌರವ ಬಡವರಿಗೆ ಯಾರೂ ಎಂದೂ ತೋರಿಸುವುದಿಲ್ಲ, ತೋರಿಸಬೇಕೆಂಬ ಕಾನೂನೇನು ಇಲ್ಲ. ರಾಮೇಗೌಡ್ರು ಬಂದ್ರೆ ಜಮಖಾನೆ ಹಾಸಿ ಉಪಚರಿಸುವ ಜನ, ದಿನಗೂಲಿ ಮಾಡುವ ’ರಾಮ್ಯಾ’ ಬಂದರೆ ತೋರಿಸುವುದಿಲ್ಲ. ಹಣ ಇದ್ರೆ ಎಲ್ರು ನಮ್ಮವ್ರು ತಮ್ಮವ್ರು ಅಂತಾರೆ. ಗುಣ ಒಂದೇ ಇದ್ರೆ ಸಾಲ್ದು, ಸ್ವಲ್ಪ ಹಣ ಸಹ ಬೇಕು ಮರ್ಯಾದೆ ಗಿಟ್ಟಿಸಿಕೊಳ್ಳೋಕೆ. ಹಣ, ಐಶ್ವರ್ಯ ಇದ್ದವನೇ ದೊಡ್ಡವನು, ಇಲ್ಲದಿದ್ರೆ ದೇವರೇ ಗತಿ." ಇಷ್ಟೆಲ್ಲಾ ಉದ್ದುದ್ದಾದ ಅರ್ಥ ಬಿಡಿಬಿಡಿಸಿ ಹೇಳೊ ಬದಲು,

"ದೊಡ್ಡವರು ಬಂದ್ರೆ ಒದರಿ ಹಾಸ್ತೀವಿ
ಬಡವರು ಬಂದ್ರೆ ಬಾಗ್ಲಲ್ ನಿಲ್ಲಿಸ್ತೀವಿ"

ಅಂದ್ರೆ ಎಷ್ಟು ಚನ್ನ? [ಒದರಿ = ಕೂಗಿ]. ಇದೇ ಗಾದೆ(Proverb)ಗಿರುವ ಶಕ್ತಿ.  "ಮಾಡಿದ್ದುಣ್ಣೊ ಮಹರಾಯ", "ಹಾಸಿಗೆ ಇದ್ದಷ್ಟು ಕಾಲು ಚಾಚು", "ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ", "ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ", ಎಂಬ ಅನೇಕ ಗಾದೆಗಳು ಜೀವನಾನುಭವವನ್ನು, ಅತ್ಯಂತ ಸಂಕ್ಷಿಪ್ತವಾಗಿ, ವಿವೇಕಪೂರ್ಣವಾಗಿ, ಪರಿಣಾಮಕಾರಿಯಾಗಿ ಹೇಳಬಲ್ಲವು.  "ಗಾದೆಗಳು ಅನುಭವದ ಸಾಂದ್ರತೆಗೆ, ವಸ್ತುವೈವಿಧ್ಯತೆಗೆ, ಸಂಸ್ಕೃತಿ ಸಂಪನ್ನತೆಗೆ, ವಿಚಾರ ವೈಭವಕ್ಕೆ ಹೆಸರಾದುವು." ಯಾವುದೇ ಜನಾಂಗದ ಆತ್ಮಚರಿತ್ರೆ, ತಕ್ಕಮಟ್ಟಿಗೆ ಬಾಹ್ಯಚರಿತ್ರೆ ಕೂಡ ಆ ಜನಾಂಗದ ಗಾದೆಗಳಲ್ಲಿ ಗೋಚರಿಸುತ್ತದೆ. ಉಪ್ಪು ಊಟಕ್ಕೆ ಹೇಗೆ ಅಗತ್ಯವೋ ಹಾಗೆ ಗಾದೆ ಮಾತಿಗೆ ಅವಶ್ಯಕ. ಗಾದೆಗಳಿಲ್ಲದ ದೇಶವಿಲ್ಲ, ಗಾದೆಗಳಿಂದ ದೂರವಾದ ಭಾಷೆಯಿಲ್ಲ. ಗಾದೆಗಳನ್ನು ಬಳಸದ ಮನುಷ್ಯನಿಲ್ಲ.  ಮುಂದೆ ಓದಿ »

~.~

ಇದ್ದಿಲ ಚೂರು ಮತ್ತು ಮಂತ್ರದಂಡ

ನಗರಗಳನ್ನು ವಿನ್ಯಾಸಗೊಳಿಸುವುದು ಹೇಗೆ ಎಂಬ ವಿಷಯದಲ್ಲಿ ಉನ್ನತ ವ್ಯಾಸಂಗ ಕೈಗೊಂಡು ಅಮೇರಿಕಾದ ಬಾಸ್ಟನ್ ನಗರದಿಂದ ಮರಳಿ ಬಂದಿದ್ದ ಮೋಹನದಾಸನಿಗೆ ವಿನ್ಯಾಸಗೊಳಿಸಲು ನಗರಗಳೇ ಇರಲಿಲ್ಲ. ತಾನು ಈ ಎರಡು ವರ್ಷಗಳ ವ್ಯಾಸಂಗದಲ್ಲಿ ಓದಿ ಅರಗಿಸಿಕೊಂಡಿದ್ದ ವಾಸ್ತು ವಿಜ್ಞಾನದ ಇತಿಹಾಸ, ನಾಗರಿಕ ನಿಬಿಡತೆ ಮತ್ತು ವಿಸ್ತಾರ, ಒಳ ಚರಂಡಿ, ಜಲಾನಯನ ವಿತರಣಾ ವಿಜ್ಞಾನ ಇತ್ಯಾದಿ, ಕಲಿತದ್ದನ್ನೆಲ್ಲ ಉಪಯೋಗಿಸಿ ಮಾನಸಿಕವಾಗಿ ರೂಪಿಸಿಕೊಂಡಿದ್ದ ಕನಸಿನ ನಗರವನ್ನು ಕಾಗದಕ್ಕೆ ಇಳಿಸಿದಾಗ, ಅರೇ ಇದು ತನ್ನೂರಿನಂತೇ ಇದೆಯಲ್ಲ ಎಂದೆನಿಸಿ ಆಶ್ಚರ್ಯವಾಗಿತ್ತು. ಊರಿಗೆ ಮರಳಬೇಕು ಎಂಬ ಬಯಕೆಗೆ ಇದು ಇಂಬು ಕೊಟ್ಟು ತುಡಿತ ಇನ್ನಷ್ಟು ತೀವ್ರವಾಗಲು ಕಾರಣವಾಗಿತ್ತು.

"ನೋ.. ನೋ.. ಮಿ. ದಾಸ್. ನೀವ್ಹೇಳಿದಷ್ಟು ಸುಲಭವಲ್ಲ ಇದೆಲ್ಲ. ನೀವೇನೋ ಸರಿ ಕಲಿತು ಬಂದಿದ್ದೀರಿ. ಆದರೆ ನೀವು ಚಿತ್ರ ಬಿಡಿಸಿದಷ್ಟು ಸುಲಭವಾಗಿ ನಾವು ನಗರ ಕಟ್ಟಲು ಸಾಧ್ಯಾನಾ? ಏನೊಂದು ತಾಪತ್ರಯಗಳಿವೆ ಗೊತ್ತಾ?" ಇವನ ಪ್ಲಾನು ನೋಡಿ ಡಿ.ಸಿ.ಗೆ ಗಾಬರಿಯಾಯಿತು.

"ಸರ್ ನನ್ನ ವಿನ್ಯಾಸದ ಬೇಸಿಸ್‌ಗೆ ವಿಶ್ವ ಬ್ಯಾಂಕ್‌ನ ಮನ್ನಣೆ ಇದೆ. ಈ ಪ್ಲಾನನ್ನು ಎಡಿಬಿಗೆ ಕಳುಹಿಸಿದರೆ ಕೂಡಲೇ ಹಣ ಸ್ಯಾಂಕ್ಷನ್ ಆಗುತ್ತೆ."

"ದುಡ್ಡೊಂದೇ ಅಲ್ಲರೀ.. ನಿಮಗೆ ಅದೆಲ್ಲ ಅರ್ಥವಾಗಲ್ಲ.." ಅಸಹನೆ ಮತ್ತು ಕಾರ್ಯನಿಬಿಡತೆಯ ಗೊಂದಲದಲ್ಲಿ ನರಳುತ್ತಿದ್ದ ಡಿ.ಸಿ.ಯ ಆ ಕ್ಷಣದ ಪ್ರಮುಖ ಉದ್ದೇಶ ಇವನನ್ನು ಸಾಗಹಾಕುವುದಾಗಿತ್ತು.  ಮುಂದೆ ಓದಿ »

~.~

ಎಲ್ಲ ವಿಶೇಷ ಬರಹಗಳು

ಜನಪ್ರಿಯ

ಮತ್ತಷ್ಟು

ಚರ್ಚೆ