ಪುಸ್ತಕ ಸಂಪದ

  • “ಗುಣ ಲಕ್ಷಣ + ಅವಕಾಶ = ಯಶಸ್ಸು ಎನ್ನುವ ಇನ್ ಫೋಸಿಸ್ ನ ಸ್ಥಾಪಕರಲ್ಲೊಬ್ಬರಾದ ಎನ್ ಆರ್ ನಾರಾಯಣ ಮೂರ್ತಿಯವರ ಮಾತನ್ನು ಮುಖಪುಟದಲ್ಲೇ ಪ್ರಕಟಿಸಿದ್ದಾರೆ ‘ಸಾಧಕರ ೮ ವಿಶೇಷ ಗುಣಗಳು’ ಕೃತಿಯ ಲೇಖಕರಾದ ಸುಂಬರ್ ಬಾಬು ಇವರು. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ‘ಉಪ್ಪಿಗಿಂತ ರುಚಿ ಬೇರೆ ಇಲ್ಲ’ ಎಂಬ ಕೃತಿಯ ಲೇಖಕರಾದ ರಾಮಸ್ವಾಮಿ ಹುಲಕೋಡು. ಅವರು ತಮ್ಮ ‘ಎಂಟರ ನಂಟು ಬೆಳೆಯಲಿ’ ಎನ್ನುವ ಬರಹದಲ್ಲಿ “ ಎಂಟು ಎಂದರೆ ಸಂಸ್ಕೃತದಲ್ಲಿ ‘ಅಷ್ಟ’. ಅಷ್ಟ ಸಿದ್ದಿ ಸಾಧಿಸಿದರೇನೆ ಯೋಗಿಯಾಗಲು ಸಾಧ್ಯ. ಅಷ್ಟ ದಿಕ್ಕುಗಳಿಂದ ಅರಿವಿನ ಬೆಳಕು ಪಡೆದರೇನೆ ಜ್ಞಾನಿಯಾಗಲು ಸಾಧ್ಯ. ಹಾಗೆಯೇ ಸಾಧಕರಾಗಲು ಕೂಡ ಬೇಕಾಗಿರುವುದು ಅಷ್ಟ ಅಂದರೆ ಎಂಟು ಗುಣಗಳು.

    ಈ ಗುಣಗಳು ಯಾವವು, ಈಗಲೂ…

  • ಸಂತೆಕಸಲಗೆರೆ ಪ್ರಕಾಶ್ ಎಬವರು ‘ಬೂಸ್ಟರ್ ಡೋಸ್ ಮುನಿಯಪ್ಪ’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಕೇಶವ ಮಳಗಿ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…

    “ಎರಡು-ಮೂರು ವರ್ಷಗಳ ಕಾಲ ಕಾಡಿದ ಸೋಂಕಿನ ಕರಾಳಛಾಯೆ ನಮ್ಮ ಸಮಾಜವನ್ನು ಇನ್ನೂ ಸಂಪೂರ್ಣವಾಗಿ ತೊರೆದುಹೋಗಿಲ್ಲ. ಸಮಾಜವೊಂದರಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುವ ಸಾಂಕ್ರಾಮಿಕ ಜಾಡ್ಯವೊಂದು ಏನನ್ನು ಸೂಚಿಸುತ್ತದೆ ಎಂಬ ಪ್ರಶ್ನೆ ಕೇಳಿಕೊಂಡು ಸಮಾಧಾನಚಿತ್ತದಿಂದ ಉತ್ತರವನ್ನು ಹುಡುಕುಲು ಪ್ರಯತ್ನಿಸಿದಾಗ ನಮಗೆ ಚಕಿತಗೊಳ್ಳುವ ಅಂಶಗಳು ಗೋಚರಿಸಬಹುದು.

    ಸೋಂಕಿನಿಂದ ನರಳುತ್ತಿರುವ ಸಮಾಜದ…

  • ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಸೂರ್ಯೋದಯ’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ಸುವಿಚಾರಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು ಮಾಡಿದ್ದಾರೆ. ಕೆಲವೇ ಕೆಲವು ವಾಕ್ಯಗಳಲ್ಲಿ ನಮಗೆ ಜೀವನ ಮೌಲ್ಯಗಳನ್ನು ಕಲಿಸಬಲ್ಲ ಶಕ್ತಿ ಈ ಸುವಿಚಾರಗಳಿಗಿವೆ. ತಮ್ಮ ಮನದಾಳದ ನುಡಿಗಳನ್ನು ರತ್ನಾ ಭಟ್ ಅವರು ಹಂಚಿಕೊಂಡಿರುವುದು ಹೀಗೆ…

    “ ಮೊದಲಿನಿಂದಲೂ ಬರೆಯುವ ಹವ್ಯಾಸವಿಟ್ಟುಕೊಂಡಿದ್ದ ನನಗೆ ಸರಿಯಾದ ರೀತಿಯಲ್ಲಿ ಬರವಣಿಗೆಗೆ ಪ್ರೋತ್ಸಾಹ ದೊರೆತದ್ದು ವಾಟ್ಸಾಪ್ ಬಳಗದ ಓದುಗರು ಹಾಗೂ ಕವಿಬಂಧುಗಳಿಂದ. ಪ್ರತಿನಿತ್ಯ ಇಂದಿಗೊಂದು ನುಡಿ ಬರೆಯುವ ಹವ್ಯಾಸವಿತ್ತು. ಇದೇ ‘ಆನೆಬಲ’…

  • ‘ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ವಾರೆನೋಟ ಎನ್ನುವ ಅಂಕಣ ಬರೆಯುತ್ತಿದ್ದ ದೀಕ್ಷಿತ್ ನಾಯರ್ ಎನ್ನುವ ಚಿಗುರು ಮೀಸೆಯ ಹುಡುಗನ ಸಾಧನೆ ದೊಡ್ದದು. ಬರೆದ ಬರಹಗಳನ್ನು ಒಟ್ಟುಗೂಡಿಸಿ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಬೆನ್ನುಡಿ ಬರೆದು ಹುದಿದುಂಬಿಸಿದ್ದಾರೆ ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಪಾದಕಿ ಭಾವನಾ ಬೆಳಗೆರೆ. ಅಗಲಿದ ತನ್ನ ಅಪ್ಪ ರವಿ ಬೆಳಗೆರೆಯವರ ಅಪ್ಪಟ ಅಭಿಮಾನಿಯಾಗಿರುವ ದೀಕ್ಷಿತ್ ನಾಯರ್ ಎಂಬ ಹುಡುಗನ ಬಗ್ಗೆ ಅವರು ಬರೆದಿರುವುದು ಹೀಗೆ…

    “ಈ ಪುಸ್ತಕವಿದೆಯಲ್ಲಾ ಹೆಸರೇ ಹೇಳುವಂತೆ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಅದರ ಅರ್ಥವೇ ಎಂಥ ಚೆಂದ ರೀ ! ಇದಕ್ಕೊಂದು ಬೆನ್ನುಡಿ ಬೇಕೇ? ಹೌದು…

  • ಲೇಖಕ ಮಂಜುನಾಥ್‌ ಚಾಂದ್‌ ಅವರ ‘ಕಾಡ ಸೆರಗಿನ ಸೂಡಿ’ ಕಾದಂಬರಿಯು 1930ರ ದಶಕದ ಭಾರತ ಸ್ವಾತಂತ್ರ್ಯ ಹೋರಾಟವನ್ನು ಹಿನ್ನೆಲೆಯಾಗಿರಿಸಿಕೊಂಡು ರಚಿಸಿದ ತ್ಯಾಗ ಮತ್ತು ಬಲಿದಾನದ ಕಥನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಲೇಖಕ ಜಗದೀಶ್ ಕೊಪ್ಪ ಅವರು “ ಅನೇಕ ರೋಚಕ ತಿರುವುಗಳ ನಡುವೆಯೂ ಈ ಕಾದಂಬರಿಯು ಹಲವು ಬಗೆಯ ಕುತೂಹಲ, ವಿಷಾದಗಳ ಜೊತೆ ರೋಮಾಂಚನವನ್ನುಂಟು ಮಾಡುತ್ತಾ, ಓದಿದ ನಂತರವೂ ಓದುಗರನ್ನು ನಿರಂತರವಾಗಿ ಕಾಡುವ ಗುಣವನ್ನು ಒಳಗೊಂಡಿರುವುದು ವಿಶೇಷವಾಗಿದೆ’ ಎಂದು ಪ್ರಶಂಸಿಸಿದ್ದಾರೆ. 

    ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ ಪಿ ಶೇಷಾದ್ರಿ. ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವೊಂದು ಅನಿಸಿಕೆಗಳು ಹೀಗಿವೆ…”’ಇಷ್ಟೆಲ್ಲ ಓದುತ್ತಿರುವಾಗ ಒಂದು ಅಂಶ…

  • ಸುಮಾರು ಐದು ಸಾವಿರ ವರುಷಗಳ ಪರಂಪರೆ ಇರುವ ಭಾರತದ ಆಯುರ್ವೇದದ ಬಗ್ಗೆ ನಮ್ಮೆಲ್ಲರ ಕಣ್ಣು ತೆರೆಸಬಲ್ಲ ಪುಸ್ತಕ ಇದು. ಮುಂಬೈ ವೈದ್ಯರಾದ ಶರದಿನಿ ದಹನೂಕರ್ ಮತ್ತು ಊರ್ಮಿಳಾ ತಟ್ಟೆ ಬರೆದಿರುವ ಈ ಪುಸ್ತಕವನ್ನು ಡಾ. ಎಚ್.ಡಿ. ಚಂದ್ರಪ್ಪ ಗೌಡ ಕನ್ನಡಕ್ಕೆ ಅನುವಾದಿಸಿದ್ದಾರೆ.

    ಇದರಲ್ಲಿರುವ 14 ಅಧ್ಯಾಯಗಳು:
    1)ಪ್ರಸ್ತಾವನೆ                      8)ನಾಲ್ಕನೆಯ ಆಯಾಮ: ಕಾಲ
    2)ಒಂದು ಪಕ್ಷಿನೋಟ           9)ಪಥ್ಯಾಹಾರ
    3)ಆಳುವವರು: ದೋಷಗಳು 10)ಮೊದಲನೆ ಮತ್ತು ಎರಡನೆ ಬಾಲ್ಯಾವಸ್ಥೆ
    4)ಜನತೆ: ಧಾತುಗಳು          11)ಮಾಂತ್ರಿಕ ಗುಂಡು
    5)ಪ್ರೇರಕ ಶಕ್ತಿ: ಅಗ್ನಿ             12)ಮೈಗೆ ಸ್ವಲ್ಪ ಹುಷಾರಿಲ್ಲವೇ?
    6)ಆಮ ಎಂಬ ಶತ್ರು           13)ಪಂಚಕರ್ಮ
    7)ನಿಮ್ಮ ದೇಹ…

  • ‘ಪಿಟ್ಕಾಯಣ’ ಈ ಕೃತಿಯು ಬಹು ಆಯಾಮಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಹಾಗೆಂದು ಅದು ಓದುಗರನ್ನು ಪರೀಕ್ಷಿಸುತ್ತದೆ ಎಂದೇನೂ ಅಲ್ಲ. ಬದಲಾಗಿ ಆಯಾ ವಯಸ್ಕರಿಗೆ ತಕ್ಕಂತೆ ಆಸಕ್ತಿಯಿಂದ ಸಲೀಸಾಗಿ ಓದಿಸಿಕೊಳ್ಳುತ್ತದೆ. ಈ ಕೃತಿಯ ಲೇಖನಗಳ ತಲೆಬರಹ ಓದುಗರನ್ನು ಕುತೂಹಲಿಗರನ್ನಾಗಿಸುವುದಲ್ಲದೆ, ಅವರಲ್ಲಿ ಬೆರಗನ್ನೂ ಉಂಟುಮಾಡುತ್ತವೆ. ಅಂತಹ ಕೆಲವನ್ನು ಇಲ್ಲಿ ಹೆಸರಿಸುವುದು ಸೂಕ್ತ-ಬಿಸಿಲುಗುದುರೆ ಆಗಿಬಿಟ್ಟಿರುವ ‘ಹಠಾತ್ ಸಾವು’ ಅಧ್ಯಯನ ಫಲಿತಾಂಶ; ವಿದ್ಯುತ್ ಖಾಸಗೀಕರಣಕ್ಕೆ ಗಂಟಲಲ್ಲಿ ಸಿಕ್ಕ ಮುಳ್ಳು; ಹೆದ್ದಾರಿ ಅಭಿವೃದ್ಧಿಯನ್ನು ‘ಹುಲಿ ಸವಾರಿ’ ಮಾಡಿಕೊಂಡಿರುವ ಗಡ್ಕರಿ ಸಾಹೇಬರು; ‘ಭಾರತ್ ನೆಟ್’-ಗೋಲಾಗದಿದ್ದದ್ದಕ್ಕೆ ಗೋಲ್‌ಪೋಸ್ಟ್ ಖಾಸಗೀಕರಣ?!; ಗಾಳಿ ಬಂದತ್ತ ತೂರಿಕೊಳ್ಳುವಾಗಲೂ ವಿಳಂಬ; ಕಳೆದುಕೊಂಡ ‘…

  • ಅಂಕಣಕಾರ, ಸಂಸ್ಕೃತ ವಿದ್ವಾನ್ ಡಾ. ವಿಶ್ವಾಸ ಇವರು ಬರೆದ ಸಣ್ಣ ಕಥೆಗಳ ಸಂಗ್ರಹವೇ ‘ಅಣ್ವಣೂಪಾಧ್ಯಾಯ’ ಎನ್ನುವ ವಿಚಿತ್ರ ಹೆಸರಿನ ಪುಸ್ತಕ. ಈ ಪುಸ್ತಕದಲ್ಲಿ ೧೦ ಕಥೆಗಳಿವೆ. ಈ ಕಥೆಗಳ ಬಗ್ಗೆ ಖ್ಯಾತ ವಿಮರ್ಶಕರಾದ ಡಾ. ಬಿ. ಜನಾರ್ದನ್ ಭಟ್ ಅವರು ತಮ್ಮ ಮುನ್ನುಡಿಯಲ್ಲಿ ಹೇಳಿರುವುದು ಹೀಗೆ…

    “ಡಾ. ವಿಶ್ವಾಸ ಅವರ ಈ ಕಥಾ ಸಂಕಲನಕ್ಕೆ ಒಂದು ವಿಶಿಷ್ಟ ಗೌರವವಿದೆ. ಅದೇನೆಂದರೆ ಸಂಸ್ಕೃತದಲ್ಲಿ ಈ ಆಧುನಿಕ ಕತೆಗಳನ್ನು ಬರೆದು, ಅವನ್ನು ತಾವೇ ಕನ್ನಡಕ್ಕೆ ಅನುವಾದಿಸಿರುವ ಒಂದು ಅಪೂರ್ವ ಸನ್ನಿವೇಶ ಇದು. ಹೀಗೆ ಏಕಕಾಲದಲ್ಲಿ ಎರಡೂ ಭಾಷೆಯಲ್ಲಿ ಒಂದು ಸಾಹಿತ್ಯ ಕೃತಿಯನ್ನು ಬರೆಯುವ ಸಾಮರ್ಥ್ಯ ಜಗತ್ತಿನಲ್ಲಿ ಕೆಲವೇ ಕೆಲವು ಸಾಹಿತಿಗಳಿಗೆ ಇದೆ. ಮೊದಲು ಪ್ರಭುತ್ವ ಇರುವ ಒಂದು…

  • ಲೇಖಕರಾದ ರಾಜು ಅಡಕಳ್ಳಿಯವರ ನೂತನ ಕೃತಿ ಹರಟೆ ಕಷಾಯ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕೃತಿಗೆ ಬೆನ್ನುಡಿ ಬರೆದು ಲೇಖಕರ ಬೆನ್ನು ತಟ್ಟಿದ್ದಾರೆ ಬಿಎಂಶ್ರೀ ಪ್ರತಿಷ್ಟಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ. ಈ ಕೃತಿಯ ಬಗ್ಗೆ ಲೇಖಕರಾದ ರಾಜು ಅಡಕಳ್ಳಿ ಇವರು ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ…

    “ಈ 'ಹರಟೆ ಕಷಾಯ'ವನ್ನು ಬರೆಯಲೇಬೇಕೆಂದು ಹಠಕ್ಕೆ ಬಿದ್ದು ಬರೆದಿದ್ದಲ್ಲ ಅಥವಾ ಒತ್ತಾಯಕ್ಕೆ ಬಸಿರಾಗಿ ಹೆತ್ತಿದ್ದೂ ಅಲ್ಲ. ಇದನ್ನು ತೀರಾ ಗಂಭೀರ ಕೃತಿ ಎಂದು ಭಾವಿಸುವುದಕ್ಕಿಂತಲೂ ಬದುಕಿನ ಸುಖ, ದುಃಖ, ಪ್ರೀತಿ, ನಗು, ಸಂಬಂಧ, ವಿಡಂಬನೆ, ಹಾಸ್ಯ, ಚೋದ್ಯ, ಚೊಗರು, ಚಿಗುರು, ಚೆಂದಗಳನ್ನು ಒಳಗೊಂಡಿರುವ ಕೋಸುಂಬರಿ ಎನ್ನಬಹುದೇನೋ.

  • ‘ದೇವರು ಹೊರಟನು’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕಾದಂಬರಿಯಾಗಿದೆ. ಕೃತಿಯ ಮೂಲ ಮರಾಠಿ ಲೇಖಕ ದಿ.ಬಾ. ಮೊಕಾಶಿ. ಈ ಕಾದಂಬರಿ ರಚಿಸಿ ಆರು ದಶಕಗಳು ಗತಿಸಿದರೂ ಇಂದಿಗೂ ಎಲ್ಲ ವಯಸ್ಸಿನವರಿಗೆ ಮೋಡಿ ಮಾಡುತ್ತದೆ. ಕಾರಣವೇನೆಂದರೆ ಲೇಖಕನು ಕಾದಂಬರಿಯ ಆರಂಭದಲ್ಲೇ 'ಯಾವುದಕ್ಕೆ ಆದಿಯಿಲ್ಲವೋ-ಅಂತ್ಯವಿಲ್ಲವೋ ಇದು ಅಂಥ ದೇವರ ಕಥೆಯಾಗಿದೆ' ಎನ್ನುತ್ತಾನೆ. ಸತ್ಯವೆಂದರೆ ದೇವರ ರೂಪವಾಗಿರುವ ಮನೆಯಲ್ಲಿಯ ಮುನ್ನೂರು ವರ್ಷಗಳ ನರಸಿಂಹನು, ಈ ಕಥೆಯ ಕೇವಲ ನಿಮಿತ್ತವಾಗಿದ್ದಾನೆ. ಆದರೆ ಈ ನರಸಿಂಹನ ಸಾಕಾರ ಮೂರ್ತಿಯ ಸುತ್ತಲೂ ಆಕಾರ ಪಡೆದ 'ಪಳಸಗಾಂವ' ಎಂಬ ಚಿಕ್ಕ ಊರಿನ ಒಂದು ದೊಡ್ಡ ಕುಟುಂಬದ ಭಾವ ಭಾವನೆಯ, ಒತ್ತಡ ತಲ್ಲಣಗಳ, ಆಕಾಂಕ್ಷೆ-ಉಪೇಕ್ಷೆಗಳ ಅನನ್ಯ ಚಿತ್ರಣವನ್ನು ಈ ಕಾದಂಬರಿಯ ಮೂಲಕ ಮೊಕಾಶಿಯವರು ಓದುಗರ ಮುಂದೆ…