ಪುಸ್ತಕ ಸಂಪದ

  • ಸದಾಶಿವ ಸೊರಟೂರು ಅವರ ನೂತನ ಕವನ ಸಂಕಲನ “ನಿನ್ನ ಬೆರಳು ತಾಕಿ" ಬಿಡುಗಡೆಯಾಗಿದೆ. ಭರವಸೆಯ ಕವಿಯಾಗಿರುವ ಸದಾಶಿವ ಸೊರಟೂರು ಅವರ ಈ ೧೧೮ ಪುಟಗಳ ಪುಟ್ಟ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಲಕ್ಸ್ಮಣ ವಿ ಎ. ಇವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತಾ...‘“ನಿನ್ನ ಬೆರಳು ತಾಕಿ' ಸದಾಶಿವ ಸೊರಟೂರರ ಪ್ರೇಮ ಕವನ ಸಂಕಲನ. ಸೃಷ್ಟಿಯ ಆದಿಯಿಂದಾಗಿ ಇಲ್ಲಿಯ ತನಕ ಭಾಷೆಯ ಹಂಗಿಲ್ಲದೆ ಸಂವಹನ ಸಾಧ್ಯವಾಗಿದ್ದು ಈ ಪ್ರೇಮಕ್ಕೆ ಮಾತ್ರ. ಪ್ರೇಮ ಸರಳವೆಂದುಕೊಂಡಷ್ಟೂ ಜಟಿಲ. ಕ್ಲಿಷ್ಟಕರ ವೆಂದುಕೊಂಡಷ್ಟೂ ಸರಳ. ಇಲ್ಲಿ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಹೊರಡುವುದೆಂದರೆ ಹುಚ್ಚು ಕಡಲ ಹಕ್ಕಿ ಕಡಲಿನ ಆಗಾಧತೆಯನ್ನು ಅಳೆಯಲು ಹೊರಟಂತೆ. ಕವಿತೆ ಹುಟ್ಟುವ ಮೊದಲೇ ಪ್ರೀತಿ ಇತ್ತೋ ಅಥವ ಪ್ರೀತಿ ಹುಟ್ಟವ ಮೊದಲೇ…

  • ಡಾ. ಮೀನಗುಂಡಿ ಸುಬ್ರಹ್ಮಣ್ಯ ಅವರ ಜನಪ್ರಿಯ ಪುಸ್ತಕ “ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?” ಅದರ 2ನೇ ಭಾಗ ಈ ಪುಸ್ತಕ. ಇದರಲ್ಲಿವೆ ಒಂಭತ್ತು ವೃತ್ತಾಂತಗಳು ಮತ್ತು ಎರಡು ಲೇಖನಗಳು: “ವಿಪಶ್ಯನ ಧ್ಯಾನ ಶಿಬಿರ - ಒಂದು ಅನುಭವ” ಮತ್ತು “ವಿಜ್ನಾನಕ್ಕೆ ಅಪಚಾರ.”

    ಹಲವರು ಮಾನಸಿಕ ಸಮಸ್ಯೆಯಿಂದ ಸಂಕಟ ಪಡುತ್ತಾ ಇರುತ್ತಾರೆ - ಒಂದೆರಡಲ್ಲ, ಹಲವಾರು ದಶಕಗಳ ಕಾಲ. ಇಲ್ಲಿನ ವೃತ್ತಾಂತಗಳನ್ನು ಓದಿದಾಗ ಅವರು ಎಷ್ಟು ಸುಲಭವಾಗಿ ತಮ್ಮ ಸಂಕಟ ಹೋಗಲಾಡಿಸಿಕೊಳ್ಳಬಹುದು ಎಂದು ಸ್ಪಷ್ಟವಾಗುತ್ತದೆ. ಅದಕ್ಕಾಗಿ, ನಮಗೆ ಹೊಟ್ಟೆನೋವು ಅಥವಾ ತಲೆನೋವು ಬಂದಾಗ ನಾವು ಡಾಕ್ಟರ್ ಬಳಿ ಹೋಗಿ ಚಿಕಿತ್ಸೆ ಪಡೆದು ಸಂಕಟದಿಂದ ಮುಕ್ತರಾಗುವಂತೆಯೇ ಮಾನಸಿಕ ಸಮಸ್ಯೆ ಇದ್ದಾಗಲೂ ಅದರಿಂದ ಮುಕ್ತರಾಗಲು ನಾವು ಸೈಕೊಥೆರಪಿಸ್ಟ್ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು…

  • ಯಾಕೂಬ್ ಎಸ್ ಕೊಯ್ಯೂರು ಅವರು ವೃತ್ತಿಯಲ್ಲಿ ಪ್ರೌಢ ಶಾಲೆಯಲ್ಲಿ ಗಣಿತ ವಿಷಯದ ಶಿಕ್ಷಕರು. ಮಕ್ಕಳಿಗೆ ಗಣಿತ ಯಾವಾಗಲೂ ಕಬ್ಬಿಣದ ಕಡಲೆಯೇ. ಇವರು ಕಾರ್ಯ ನಿರ್ವಹಿಸುವ ಸರಕಾರಿ ಪ್ರೌಢ ಶಾಲೆ ನಡ, ಬೆಳ್ತಂಗಡಿಯಲ್ಲಿ ಗಣಿತ ಪ್ರಯೋಗ ಶಾಲೆಯನ್ನು ನಿರ್ಮಿಸಿ, ರಾಜ್ಯದಲ್ಲೇ ಸಂಚಲನ ಮೂಡಿಸಿದ್ದಾರೆ. ಇವರ ಈ ಸೃಜನಶೀಲ ವ್ಯಕ್ತಿತ್ವವನ್ನು ಗುರುತಿಸಿ ಕೇಂದ್ರ ಸರಕಾರವು ಯಾಕೂಬ್ ಅವರಿಗೆ ೨೦೨೦ರಲ್ಲಿ ದೇಶದ ಅತ್ಯುನ್ನತ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

    ಯಾಕೂಬ್ ಅವರು ಒಬ್ಬ ಉತ್ತಮ ಶಿಕ್ಷಕರು ಮಾತ್ರವಲ್ಲ, ಪ್ರತಿಭಾವಂತ ಬರಹಗಾರರೂ ಹೌದು. ಇವರು ಬರೆದ ಲೇಖನಗಳನ್ನು ಸಂಗ್ರಹಿಸಿ “ಮೌಲ್ಯಗಳ ಹುಡುಕಾಟದಲ್ಲಿ" ಎಂಬ ಕೃತಿಯನ್ನು ಹೊರ ತಂದಿದ್ದಾರೆ. ಈ ಪುಸ್ತಕದಲ್ಲಿ ಯಾಕೂಬ್…

  • ಖ್ಯಾತ ತೆಲುಗು ಲೇಖಕ ಪೆದ್ದಿಂಟಿ ಅಶೋಕ್ ಕುಮಾರ್ ಅವರು ಬರೆದ ವಿಭಿನ್ನ ಶೈಲಿಯ ಕಥೆಗಳನ್ನು ಎಂ ಜಿ ಶುಭಮಂಗಳ ಇವರು “ಜಾಲ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿ ಡಾ. ಪಾರ್ವತಿ ಜಿ ಐತಾಳ್. ಇವರು ತಮ್ಮ ಮುನ್ನುಡಿಯಲ್ಲಿ ಈ ಕಥಾ ಸಂಕಲನದ ಬಗ್ಗೆ ಬಹಳ ಸೊಗಸಾದ ಮಾಹಿತಿ ನೀಡಿದ್ದಾರೆ. ಅದರ ಆಯ್ದ ಭಾಗಗಳು ನಿಮ್ಮ ಓದಿಗಾಗಿ…

    “ಜಾಗತೀಕರಣಗೊಂಡ ಈ ಜಗತ್ತಿನಲ್ಲಿ ಸಾವಿರಾರು ಭಾಷೆಗಳ ನಡುವೆ  ಸಂವಹನದ ಅಗತ್ಯವು ಎಂದಿಗಿಂತ ಹೆಚ್ಚಾಗಿರುವ ಇಂದಿನ ಸಂದರ್ಭದಲ್ಲಿ ಪರಸ್ಪರ ಅನುವಾದದ ಕೆಲಸವೂ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಬಹುಭಾಷಾ ದೇಶವಾದ ಭಾರತದಲ್ಲಿ ಅಸ್ತಿತ್ವದಲ್ಲಿರುವ ನೂರಾರು ಭಾಷೆಗಳು …

  • ‘ಅರಿವಿನ ಜಾಡು' ಎಂಬ ಲೇಖನಗಳ ಸಂಗ್ರಹವನ್ನು ಬರೆದವರು ದಾವಲಸಾಬ ನರಗುಂದ. ಇವರ ಬರವಣಿಗೆಯ ಬಗ್ಗೆ ಸ್ವತಃ ನರಗುಂದರ ಗುರುಗಳಾದ ಧನವಂತ ಹಾಜವಗೋಳ ಇವರು ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ. ಆ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...

    “ಸ್ನಾತಕೋತ್ತರ ಕನ್ನಡ ಎಂ.ಎ ಮಾಡುವಾಗ ದಾವಲಸಾಬ ನರಗುಂದ ಅವರು ನನ್ನ ವಿದ್ಯಾರ್ಥಿ ಅಂತಿಮ ವರ್ಷದಲ್ಲಿ ಆಂಶಿಕ ಅಂಕಗಳಿಗಾಗಿ ಸಿದ್ಧಪಡಿಸುವ ಕಿರುಪ್ರಬಂಧ ರಚನೆಯ ಸಂದರ್ಭದಲ್ಲಿ ನಾನು ಇವರಿಗೆ ಮಾರ್ಗದರ್ಶಕ, 'ಮುಳಗುಂದ ಪರಿಸರದ ಜಾನಪದ ಅಧ್ಯಯನ' ಎಂಬ ಇವರ ಕಿರುಪ್ರಬಂಧ ನೋಡಿ ತುಂಬಾ ಖುಷಿಪಟ್ಟಿದ್ದೆ. ಇವರು ತುಂಬಾ ಪ್ರತಿಭಾವಂತ ಮತ್ತು ಪರಿಶ್ರಮ ಪಡುವ ವಿದ್ಯಾರ್ಥಿ, ಸರಳ ಸಜ್ಜನಿಕೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡ…

  • ಉದಯೋನ್ಮುಖ ಕಥೆಗಾರ್ತಿ ದಿವ್ಯಾ ಕಾರಂತರ ‘ಮಿಂಚು ಮತ್ತು ಮಳೆ' ನಿಸರ್ಗದ ಪರ ಲೇಖಕಿಯ ತುಡಿತದ ಕಥೆಗಳು. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ದಿವ್ಯಾ ಅವರು ಈ ಕಥಾ ಸಂಕಲನದ ಕಥೆಗಳನ್ನು ಅನುಭವಿಸಿ ಬರೆದಂತಿದೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಹಿರಿಯ ಲೇಖಕರಾದ ಎಸ್ ಎನ್ ಸೇತೂರಾಮ್ ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ನಿಮ್ಮ ಓದಿಗಾಗಿ...

    “ದಿವ್ಯಾ ಕಾರಂತರ ಕಥಾ ಸಂಕಲನ 'ಮಿಂಚು ಮತ್ತು ಮಳೆ'. ಮೂಲತಃ ಚಿಕ್ಕಮಗಳೂರು, ಕೊಪ್ಪದ ಹತ್ತಿರದ ಬಸರೀಕಟ್ಟೆಯವರು. ಮಲೆನಾಡ ಗರ್ಭ ಹಾಗಾಗಿ ಮಿಂಚು ಮತ್ತು ಮಳೆ ಸ್ವಾಭಾವಿಕ. ಆಪ್ತವಾದ, ವೈಯಕ್ತಿಕ ಅನುಭವಗಳು ಕಥೆಗಳಾದಾಗ, ವಿವರಗಳು ಹೆಚ್ಚಿರುತ್ತೆ. ಓದಿದವರಿಗೂ ಆಪ್ತ ಅನ್ನಿಸತ್ತೆ…

  • ಕನ್ನಡದಲ್ಲಿ ಇಂತಹ ಪುಸ್ತಕ ಇರೋದು ಕನ್ನಡಿಗರ ಭಾಗ್ಯ. ಯಾಕೆಂದರೆ, ಜನಸಾಮಾನ್ಯರಿಗೆ ಅರ್ಥವಾಗುವಂತಹ ಸರಳ ಭಾಷೆಯಲ್ಲಿರುವ ಕಾನೂನು ಪುಸ್ತಕಗಳು ಕೆಲವೇ ಕೆಲವು. ಅಂತಹ ಪುಸ್ತಕಗಳಲ್ಲಿ ಇದು ಅತ್ಯಂತ ಉಪಯುಕ್ತ ಪುಸ್ತಕ.

    ಇದರ ಲೇಖಕರಾದ ಅಡ್ವೋಕೇಟ್ ಎಸ್. ಆರ್. ಗೌತಮ್ ಪುಸ್ತಕದ ಹಿನ್ನೆಲೆಯ ಬಗ್ಗೆ ಹೀಗೆ “ಅರಿಕೆ" ಮಾಡಿಕೊಂಡಿದ್ದಾರೆ:
    “ಈಗ್ಗೆ ಕೆಲವು ವರ್ಷಗಳ ಹಿಂದೆ “ನಿತ್ಯಜೀವನದಲ್ಲಿ ಕಾನೂನು" ಎಂಬ ಶೀರ್ಷಿಕೆಯ ಅಡಿಯಲ್ಲಿ ಎರಡು ಪುಸ್ತಕಗಳನ್ನು ಬರೆದು ಅವುಗಳಲ್ಲಿ ಪೌರ ಕಾನೂನಿನ ಹಲವು ಮುಖಗಳನ್ನು ಕುರಿತು ಚರ್ಚಿಸಿದ್ದೆ. ನಿಜಜೀವನದ ಘಟನೆಗಳನ್ನು ಅಥವಾ ಸನ್ನಿವೇಶಗಳನ್ನು ಆಧಾರವಾಗಿಟ್ಟುಕೊಂಡು ಕಾನೂನಿನ ಜಟಿಲತೆಗಳನ್ನು ಹಾಗೂ ಪೌರರು ವಹಿಸಬೇಕಾದ ಎಚ್ಚರಗಳನ್ನು ಸೂಚಿಸಿ ಬರೆದ ಆ ಪುಸ್ತಕಗಳು ತುಂಬ ಜನಪ್ರಿಯವಾಗಿ ಆರು (ಈಗ…

  • ಲೇಖಕರಾದ ನಿತ್ಯಾನಂದ ಶೆಟ್ಟಿ ಇವರು ‘ಮಾರ್ಗಾನ್ವೇಷಣೆ' ಎಂಬ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಸವಿವರವಾದ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಎನ್ ಎಸ್ ಗುಂಡೂರ ಇವರು. ನಿತ್ಯಾನಂದ ಬಿ. ಶೆಟ್ಟಿ ಅವರ ಸಂಶೋಧನಾತ್ಮಕ ಕೃತಿ ‘ಮಾರ್ಗಾನ್ವೇಷಣೆ’ಗೆ ಬರೆದ ಅರ್ಥಪೂರ್ಣ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ.

    ತರವಲ್ಲ ತಗಿ ನಿನ್ನ ತಂಬೂರಿ ಸ್ವರ
    ಬರದೇ ಬಾರಿಸದಿರು ತಂಬೂರಿ
    -ಶಿಶುನಾಳ ಶರೀಫಜ್ಜ

    ಕಂಡದ್ದರ ಬಲದ ಮೇಲೆ ಕಣ್ಣಿಗೆ ಕಾಣದ್ದನ್ನು
    ಹುಡುಕುವುದೆಂದರೇ ಸಂಶೋಧನೆ.
    -ಕೀರ್ತಿನಾಥ ಕುರ್ತಕೋಟಿ

    ಪ್ರಾರ್ಥನೆ: ನಮಗಿರುವ ಕಾಳಜಿ ಮತ್ತು ಪ್ರಾಮಾಣಿಕತೆ ನಮ್ಮ…

  • ಕಥೆಗಾರ, ಪತ್ರಕರ್ತ ಪದ್ಮನಾಭ ಭಟ್ ಅವರು ಬರೆದ ‘ದೇವ್ರು' ಪುಸ್ತಕದ ಬಗ್ಗೆ ಖುದ್ದು ಲೇಖಕರೇ ತಮ್ಮ ಮಾತುಗಳಲ್ಲಿ ಹೇಳಿರುವುದು ಹೀಗೆ..."ಇದನ್ನು ಬರೆಯಲು ಕೂಡುವ ಹೊತ್ತಿಗೆ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೇಡ್ತಿ ನದಿ ಉಕ್ಕಿ, ನನ್ನೂರಿಗೂ ಹೊರಜಗತ್ತಿಗೂ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ನಡುಮಧ್ಯ ಮುರಿದು ಬಿದ್ದಿದೆ. ಪ್ರತಿವರ್ಷ ಹೊಳೆ ಬಂದಾಗ ಆ ಸೇತುವೆ ಮೇಲೆ ನಿಂತು ನೋಡುವುದು, ಅದರ ಕಂಭಕ್ಕೆ ಹೊಳೆಯಲ್ಲಿ ತೇಲಿಬಂದ ದಿಮ್ಮಿಗಳು ಬಡಿದು ಕಂಪಿಸಿದಾಗ ಭಯಭೀತ ರಾಗುವುದು... ಎಷ್ಟೆಲ್ಲ ನೆನಪುಗಳು ಉಕ್ಕುತ್ತಿವೆ. ಮತ್ತೊಂದೆಡೆ ಪ್ರವಾಹದ ವಿವಿಧ ಚಿತ್ರ, ದೃಶ್ಯದ ತುಣುಕುಗಳು, ಉತ್ಸಾಹದಿಂದ ಕೊಡುತ್ತಿರುವ ವೀಕ್ಷಕ ವಿವರಣೆಯ ಪರಿಚಿತ ಧ್ವನಿಗಳು ಮೊಬೈಲ್‌ನೊಳಗೆ ಸಂದಣಿಗಟ್ಟಿ…

  • ವಿಜಯನಗರ ಸಾಮ್ರಾಜ್ಯದ ಬಗ್ಗೆ ಹಲವಾರು ಉಪಯುಕ್ತ ಪುಸ್ತಕಗಳು ಹೊರಬಂದಿವೆ. ಅದೇ ಸಾಲಿನಲ್ಲಿ ವಿಂಗ್ ಕಮಾಂಡರ್ ಬಿ ಎಸ್ ಸುದರ್ಶನ್ ಅವರು ಬರೆದ ‘ಉದಯವಾಯಿತು ವಿಜಯನಗರ' ಪುಸ್ತಕ ನಿಲ್ಲುತ್ತದೆ. ಈ ಪುಸ್ತಕಕ್ಕೆ ಹೆಸರಾಂತ ಕಾದಂಬರಿಕಾರರಾದ ಸದ್ಯೋಜಾತ ಭಟ್ಟ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಾದ ‘ಕನ್ನಡಿಗ ಕುಲಕೆ ರತ್ನ ಕನ್ನಡಿ' ಎನ್ನುವ ಬರಹದಲ್ಲಿ ಬರೆದ ಕೆಲವೊಂದು ಸಾಲುಗಳು ಇಲ್ಲಿವೆ…

    “ಭಾರತಕ್ಕೆ ವಿದೇಶಿಗರ ಆಗಮನವೇ ಹಾಗೆ. ಯಾವುದೋ ಕಲ್ಪನೆಯಲ್ಲಿ ಬಂದವರಿಗೆ ಇಲ್ಲಿನ ಜನರ ಆಚಾರ, ವಿಚಾರ, ಸಂಸ್ಕೃತಿ ಸಂಪ್ರದಾಯಗಳು ಹೊಸದಾದ ಜಗತ್ತನ್ನೇ ತೆರೆದಿಡುತ್ತವೆ. ಜಗತ್ತಿನ ಯಾವುದೇ ದೇಶ ಗಮನಿಸಿ. ಆ ದೇಶದಲ್ಲಿ ಇಲ್ಲಿನ ಸಾಂಸ್ಕೃತಿಕ ಬದುಕು ಕಾಣ…