ಪುಸ್ತಕ ಸಂಪದ

  • ನಕ್ಕರೆ ಅದೇ ಸ್ವರ್ಗ ! ನಗಬೇಕು, ನಗೆ ಬೇಕು ಬರಡು ಬದುಕಿನಲ್ಲಿ ! ಮುದುಡಿದ ಮನಸ್ಸಿಗೆ ನಗೆಯಂಥ ಸಿಹಿಮದ್ದು ಇನ್ನೊಂದಿಲ್ಲ ! ಈ ಧಾವಂತದ ದಿನಗಳಲ್ಲಿ  ನಗುವನ್ನು ಮರೆಯುವಂತೆಯೇ ಇಲ್ಲ. ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ ‘ನಗೆ ತುಂತುರು' ತುಣುಕುಗಳನ್ನು ರಚಿಸಿರುವ ಶ್ರೀ ಎಸ್ ಎನ್ ಶಿವಸ್ವಾಮಿಯವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದರು. ಖ್ಯಾತ ನಗೆ ಬರಹಗಾರರು, ಕಚಗುಳಿಯಾಡಿಸಿ ನಗಿಸುವಂಥ ಈ ತುಣುಕುಗಳಿಗೆ ಶ್ರೀ ಹರಿಣಿ ಸೊಗಸಾದ ಚಿತ್ರ ರಚಿಸಿದ್ದಾರೆ. ನಿಮ್ಮ ನಗು ಬರಿಯ ಮುಗುಳಿನಲ್ಲಿ ಮುಗಿಯುವುದಿಲ್ಲ ; ಚಟಾರನೆ ಸಿಡಿದು ಅರಳುತ್ತದೆ. ಓದಿ ನಕ್ಕು ಮನಸ್ಸನ್ನು ಹಗುರ ಮಾಡಿ. 

    ಇದು ‘ನಗೆ ತುಂತುರು' ಬೆನ್ನುಡಿಯಲ್ಲಿ ಕಂಡ ಮಾತುಗಳು. ಈ ಪುಟ್ಟ ಪಾಕೆಟ್…

  • ಎಸ್.ಕೆ. ಮಂಜುನಾಥ್ ಅವರ 'ಗಾಳಿಯ ಎದೆಸೀಳಿ ಹೊರಟ ಹಕ್ಕಿ' ಎಂಬ ಈ ೭೬ ಪುಟಗಳ ಪುಟ್ಟ ಕವನ ಸಂಕಲನದಲ್ಲಿ ನಲವತ್ತೆರಡು ಕವಿತೆಗಳಿವೆ. ಹಿರಿಯ ಲೇಖಕ ಮಹಾದೇವ ಶಂಕನಪುರ ಅವರು ಕವಿ ಎಸ್.ಕೆ. ಮಂಜುನಾಥ್ ಅವರ ಕವನ ಸಂಕಲನ ‘ಗಾಳಿಯ ಎದೆಸೀಳಿ ಹೊರಟ ಹಕ್ಕಿ’ ಗೆ ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ....

    “ಕವಿ ಎಸ್.ಕೆ. ಮಂಜುನಾಥ್ ಈಗಾಗಲೇ 'ಎದೆಗಿಲಕಿ' ಸಂಕಲನದ ಮೂಲಕ ಕಾವ್ಯಕ್ಷೇತ್ರದಲ್ಲಿ ಕೃಷಿ ಮಾಡಿದವರು, ಕನ್ನಡ ಕಾವ್ಯಲೋಕದಲ್ಲಿ ತಮ್ಮದೇ ವಿಶಿಷ್ಟ ಹೆಜ್ಜೆಗುರುತುಗಳನ್ನು ಮೂಡಿಸುತ್ತಿರುವವರು. ಕನ್ನಡದ ಯುವಕವಿಗಳಲ್ಲಿ ಭರವಸೆಯ ಧ್ವನಿ, ದೀರ್ಘ ಸಮಯದ ನಂತರ ಮಂಜುನಾಥ್ 'ಗಾಳಿಯ ಎದೆಸೀಳಿ ಹೊರಟ ಹಕ್ಕಿ' ಕವಿತೆಗಳ ಮೂಲಕ ತಮ್ಮ ಕಾವ್ಯಯಾನವನ್ನು ತೆರೆದು ಹರಿಯ…

  • ಸದಾನಂದ ಎನ್ ಪಾಟೀಲ್ ಅವರು ನಿರೂಪಿಸಿರುವ “ಸತ್ಯಾಗ್ರಹಿ" ಎನ್ನುವ ಕೃತಿಯು ಶ್ರೀ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಸಮರ್ಪಿಸಿದ ಅಭಿನಂದನಾ ಗ್ರಂಥ. ಹುಲ್ಲೂರು ಗ್ರಾಮದ ಶ್ರೀ ಸಂಗನಬಸಯ್ಯ ಹಿರೇಮಠ ಅವರ ಮಗ ಶ್ರೀ ಕೇದಾರಲಿಂಗಯ್ಯ ಅವರು ಪ್ರಾರಂಭದಿಂದಲೂ ಬಡವರ ಪರವಾದ, ರೈತರ ಪರವಾದ, ನ್ಯಾಯದ ಪರವಾದ, ಹೋರಾಟಗಳನ್ನು ಮಾಡುತ್ತಲೆ ಬೆಳೆದವರು ಎನ್ನುವುದು ಕೃತಿಗೆ ಮುನ್ನುಡಿಯನ್ನು ಬರೆದ ಪ್ರೊ. ಎಚ್.ಟಿ. ಪೋತೆ ಅವರ ಮಾತು. ಅವರು ಬರೆದ ಮುನ್ನುಡಿಯ ಆಯ್ದ ನುಡಿಗಳು ಇಲ್ಲಿವೆ…

    “ಶ್ರೀ ಕೇದಾರಲಿಂಗಯ್ಯ ಹಿರೇಮಠರು ನಿರಂತರವಾಗಿ ಐದು ದಶಕಗಳ ಕಾಲ ಸಾರ್ವಜನಿಕ ಸೇವೆಯಲ್ಲಿಯೇ ಜೀವನ ಸವೆಸಿದವರು, ರೈತರನ್ನು ಒಗ್ಗೂಡಿಸಿ ಮಲ್ಲಾಬಾದ ಏತ ನೀರಾವರಿ ಯೋಜನೆಗಾಗಿ ಹೋರಾಟ, ಉರುಳು ಸೇವೆ,…

  • ಉದಯೋನ್ಮುಖ ಲೇಖಕರಾದ ಮಂಜಯ್ಯ ದೇವರಮನಿ ಇವರು ತನ್ನ ನೂತನ ಕೃತಿ “ಬಿಟ್ಟು ಬಂದಳ್ಳಿಯ ನೆನಪುಗಳು” ಯಲ್ಲಿ ತಮ್ಮ ಊರಿನ ನೆನಪುಗಳನ್ನು ಕೆದಕಲು ಹೊರಟಿದ್ದಾರೆ. ಗ್ರಾಮೀಣ ಬದುಕು ಆಧುನಿಕತೆಯತ್ತ ವಾಲುತ್ತಿದೆ ಎನ್ನುವ ಲೇಖಕರು ತಮ್ಮ ಕೃತಿಗೆ ಬರೆದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು... 

    “ಚಿಕ್ಕಯ್ಯ ಊರಿನಿಂದ ಬಂದಿದ್ದರು. ತಿಂಗಳಿಗೋ ಆರು ತಿಂಗಳಿಗೋ ಏನಾದರೂ ಒಂದು ಕೆಲಸದ ನಿಮಿತ್ತ ಬೆನ್ನೂರಿಗೆ ಬರುತ್ತಿರುತ್ತಾರೆ. ಜಮೀನಿನ ಕಾಗದಪತ್ರ ಮಾಡಿಸಲೋ... ದನದ ವ್ಯಾಪಾರಕ್ಕೋ... ಇಲ್ಲವೇ ನಾನು ಚಿಕ್ಕವನಿದ್ದಾಗ ಬಗೆಹರಿಯದ ಒಂದು ವ್ಯಾಜ್ಯದ ಸಂಬಂಧ ಕೋರ್ಟಿಗೋ... ಅಪ್ಪನ ಆರೋಗ್ಯವನ್ನು ವಿಚಾರಿಸಲೋ... ಬರುತ್ತಿರುತ್ತಾರೆ. ಇದು ಅವರ ಜೀವನ ಕ್ರಮದ…

  • ಈಗಾಗಲೇ ‘ಬದುಕ ಬದಲಿಸುವ ಕತೆಗಳು' ಪುಸ್ತಕದ ಮೊದಲನೇ ಭಾಗ ಬಹು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿರುವ ಕತೆಗಳು ನಮ್ಮ ಬದುಕಿನ ಕತೆಗಳಂತೆಯೇ ಇವೆ ಎಂಬ ಅಭಿಮಾನದಿಂದ ಕೊಂಡು ಓದಿದವರು ಅದರ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದರು. ಡಾ. ಶಶಿಕಿರಣ್ ಶೆಟ್ಟಿ ಅವರ ‘ಬದುಕ ಬದಲಿಸುವ ಕತೆಗಳು' ಕೃತಿಯ ಎರಡನೇ ಭಾಗ ಇತ್ತೀಚೆಗೆ ಬಿಡುಗಡೆಯಾಗಿದೆ. ಮೊದಲ ಭಾಗದಲ್ಲಿ ೬೦ ಕತೆಗಳಿದ್ದರೆ, ಎರಡನೇ ಭಾಗದಲ್ಲಿ ೧೦೪ ಕತೆಗಳಿವೆ. ಭಾವನಾತ್ಮಕ ರೀತಿಯ ಕತೆಗಳನ್ನು ಓದುವವರಿಗೆ ಸುಗ್ಗಿಯೇ ಸರಿ. 

    ಹಿಂದಿನ ಪುಸ್ತಕದಲ್ಲಾಗಿರುವ ಸಣ್ಣ ಪುಟ್ಟ ತಪ್ಪುಗಳನ್ನು ಈ ಪುಸ್ತಕದಲ್ಲಿ ಸರಿಪಡಿಸಿಕೊಂಡಿದ್ದಾರೆ. ಪುಟವೊಂದಕ್ಕೆ ಒಂದು ಕತೆ ಬರುವಂತೆ ಮತ್ತು ಕತೆ ಮುಗಿದ ಬಳಿಕ, ಹೊಸ ಕತೆಯನ್ನು ಹೊಸ…

  • ‘ವೇಶ್ಯೆ’ ಎಂಬ ಪದವನ್ನು ಕೇಳಿದೊಡನೆಯೇ ಬಹಳಷ್ಟು ಮಂದಿ ಅಸಹ್ಯಕರ ಭಾವವನ್ನು ಮೂಡಿಸಿಕೊಳ್ಳುತ್ತಾರೆ. ಒಂದು ಹೆಣ್ಣು ವೇಶ್ಯೆಯಾಗಲು ನೂರಾರು ಕಾರಣಗಳು ಸಿಗುತ್ತವೆ. ಬಡತನ, ಅನಕ್ಷರತೆ, ಪ್ರೇಮ ವೈಫಲ್ಯ, ಬಲವಂತ, ಶೋಕಿ ಜೀವನದ ಆಸೆ, ಕಾಮದ ಹಂಬಲ, ಸುಲಭದಲ್ಲಿ ಸಿಗುವ ಹಣ, ದೊಡ್ದ ವ್ಯಕ್ತಿಗಳ ಸಂಪರ್ಕ ಹೀಗೆ ಹತ್ತು ಹಲವಾರು ಕಾರಣಗಳು ಸಿಕ್ಕೇ ಸಿಗುತ್ತವೆ. ನಮ್ಮ ಸಮಾಜ ವೇಶ್ಯಾವೃತ್ತಿಯನ್ನು ಅತ್ಯಂತ ಕೀಳು ಕೆಲಸವೆಂದು ಹೇಳಿಕೊಂಡರೂ, ಶತಶತಮಾನಗಳಿಂದಲೂ ಇದು ಇನ್ನೂ ನಿವಾರಣೆಯಾಗದೇ ಮುಂದುವರಿದುಕೊಂಡು ಬಂದಿದೆ. ಪುರುಷ ಪ್ರಧಾನ ಸಮಾಜವೇ ಇದಕ್ಕೆ ಮುಖ್ಯ ಕಾರಣವೆಂದು ಅನಿಸಿದರೂ ಇದರ ಹಿಂದಿನ ಕಥೆಗಳು ನೂರಾರು ಇವೆ. ಪ್ರತಿಯೊಬ್ಬ ವೇಶ್ಯೆ ತನ್ನ ಆತ್ಮಕಥೆ ಬರೆಯಲು ಹೊರಟರೆ ಹಲವಾರು ಪ್ರತಿಷ್ಟಿತರು ಎನಿಸಿಕೊಂಡಿರುವ…

  • ೭೪ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಸಪ್ನ ಬುಕ್ ಹೌಸ್ ಹೊರತಂದ ಪುಸ್ತಕಗಳಲ್ಲಿ “ಉಳ್ಳಾಲದ ವೀರರಾಣಿ ಅಬ್ಬಕ್ಕ” ಸಹ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲ ಎಂಬಲ್ಲಿ ರಾಜ್ಯವಾಳುತ್ತಿದ್ದ ಅಬ್ಬಕ್ಕ ಎಂಬ ಮಹಿಳೆ ನಮ್ಮ ಸ್ವಾತಂತ್ರ್ಯದ ಇತಿಹಾಸದ ಪುಟಗಳಲ್ಲಿ ಅಮರಳಾಗಿ ಸೇರಿಹೋದ ಸಂಗತಿ ಎಲ್ಲರಿಗೂ ಗೊತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಗ್ರಗಣ್ಯ ಮಹಿಳೆಯರಲ್ಲಿ ಒಬ್ಬರಾದ ಅಬ್ಬಕ್ಕನ ಬಗ್ಗೆ ಬಹುತೇಕರಿಗೆ ತಿಳಿದಿರುವುದು ಅಲ್ಪವೇ. ಪೋರ್ಚುಗೀಸ್ ಸೈನಿಕರ ವಿರುದ್ಧ ವೀರೋಚಿತವಾಗಿ ಹೋರಾಡಿದ ಅಬ್ಬಕ್ಕನ ಬಗ್ಗೆ ತಿಳಿಯಲು ಈ ಪುಸ್ತಕ ಸ್ವಲ್ಪ ಮಟ್ಟಿಗೆ ಸಹಕಾರಿ. 

    ಪುಸ್ತಕದ ಲೇಖಕಿಯಾದ ವಿಜಯಲಕ್ಷ್ಮಿ ಇವರು ತಮ್ಮ ‘ಮನಸ್ಸಿನ ಮಾತು' ಎಂಬ…

  • ಈಗಾಗಲೇ 12 ಸಲ ಮುದ್ರಣವಾಗಿರುವ, ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಳ್ಳಬೇಕಾದ ಪುಸ್ತಕ ಇದು - ಯಾಕೆ? ಎಂಬುದನ್ನು ಲೇಖಕರ ಮಾತಿನಲ್ಲೇ ಕೇಳೋಣ: “ಡಿಪ್ರೆಷನ್, ಇನ್‌ಪೀರಿಯಾರಿಟಿ ಕಾಂಪ್ಲೆಕ್ಸ್, ಆಂಕ್ಸೈಟಿ … ಮೊದಲಾದ ಅನುಭವಗಳಿಗೆ ಅಂಟಿಕೊಂಡು, ಸಂತೋಷ ಅನುಭವಿಸಬೇಕಾದ ಹರಯವನ್ನು ಸಂತೋಷವಿಲ್ಲದೆಯೇ ಕಳೆದ ನಂತರ, ಶಾಂತಿಯಾದರೂ ಸಿಕ್ಕೀತೇ ಎಂದು (ಹಿಂದಿನ ಬಾಗಿಲಿನಿಂದಲೋ? ಮುಖಕ್ಕೆ ಮುಸುಕು ಹಾಕಿಕೊಂಡೋ?) ಸೈಕಾಲಜಿಸ್ಟ್‌-ರನ್ನು ನೋಡುವ ಜನರೇ ಹೆಚ್ಚು ಇರುವ ಈ ಸಮಾಜದಲ್ಲಿ …. ಎಳೆ ಹರೆಯ ಇನ್ನೂ ಮಿಕ್ಕಿರುವಾಗ ಸಂಕೋಚವಿಲ್ಲದೆ ಸೈಕಾಲಜಿಯ ಶಿಬಿರಗಳಲ್ಲಿ ಭಾಗವಹಿಸಿ, ಜೀವನದ ಸುಖ ಪಡೆಯುವ ಸಾಮರ್ಥ್ಯ ಹೆಚ್ಚಿಸಿಕೊಂಡ ಭಾಗ್ಯವಂತರು …. ನನಗೆ ಖುಷಿ ಕೊಡುತ್ತಾರೆ.” ಅಂತಹ ಭಾಗ್ಯವಂತರಾಗಲು ಈ ಪುಸ್ತಕದ ಓದು ಮತ್ತು ಮರುಓದು ಖಂಡಿತ ಸಹಾಯ ಮಾಡುತ್ತದೆ…

  • ವೀರೇಂದ್ರ ರಾವಿಹಾಳ್ ಅವರ ನೂತನ ಕಥಾ ಸಂಕಲನ “ಡಂಕಲ್ ಪೇಟೆ" ಇತ್ತೀಚೆಗೆ ಬಿಡುಗಡೆಯಾಗಿದೆ. ಸುಮಾರು ೧೫೦ ಪುಟಗಳನ್ನು ಹೊಂದಿರುವ ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಹಿರಿಯ ಲೇಖಕರಾದ ಜಿ ಪಿ ಬಸವರಾಜು. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮಓದಿಗಾಗಿ...

    “ಡಂಕಲ್‌ಪೇಟೆ' ಒಂದು ಕಲ್ಪನಾ ವಿಲಾಸದಲ್ಲಿ ಕಟ್ಟಿದ ಪೇಟೆಯಲ್ಲ. ಅದು ಈ ನೆಲದ ಗಾಳಿ- ಮಳೆ- ದೂಳು-ಕೆಸರು- ಉಸಿರು- ಬೆವರು- ಜನ- ಭಾಷೆ- ಸಂಸ್ಕೃತಿ- ನಂಬಿಕೆ-ನಿತ್ಯದ ಗೋಳು-ನಗುವಿನ ಅಬ್ಬರ-ಎಲ್ಲವನ್ನೂ ಕಟ್ಟಿಕೊಂಡಿರುವ ನಿಜ ಪೇಟೆ. ದೇಶದ ವಿದ್ಯಮಾನಗಳೆಲ್ಲ ಈ ಪೇಟೆಯ ಕನ್ನಡಿಯಲ್ಲಿ ಬಿಂಬಿತವಾಗುತ್ತವೆ. ಜನರ ಸಿಟ್ಟು ಸೆಡವುಗಳು ಇಲ್ಲಿ ಸಿಡಿಯುತ್ತವೆ. ಕಾಲಾಂತರದ ಇತಿಹಾಸ, ವರ್ತಮಾನದ…

  • ನಾವಿಂದು ಮನೆ, ಕಚೇರಿಗಳಲ್ಲಿ ಬಳಸುತ್ತಿರುವ AC ವಿದ್ಯುತ್ ವ್ಯವಸ್ಥೆಯನ್ನು ರೂಪಿಸಿದ್ದು ನಿಕೊಲಾ ಟೆಸ್ಲಾ ಎಂಬ ವಿಜ್ಞಾನಿ. ಈತನ ಬಗ್ಗೆ ನಮಗೆ ಪಠ್ಯ ಪುಸ್ತಕಗಳಲ್ಲಾಗಲೀ, ವಿಜ್ಞಾನ ಸಂಬಂಧೀ ಪುಸ್ತಕಗಳಲ್ಲಾಗಲೀ ಮಾಹಿತಿ ದೊರೆತದ್ದು ಕಡಿಮೆ. ಈ ಕೊರತೆಯನ್ನು ನೀಗಿಸಲು ಲೇಖಕರಾದ ಡಿ ಆರ್ ಬಳೂರಗಿ ಅವರು “ವಿದ್ಯುತ್ ಮಾಂತ್ರಿಕ ನಿಕೊಲಾ ಟೆಸ್ಲಾ” ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಈ ಪುಸ್ತಕದ ಲೇಖಕರ ಮಾತಿನಲ್ಲಿ ಅವರು ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ... 

    “ಕ್ರಿಸ್ತಪೂರ್ವದಲ್ಲಿಯೇ ವಿಜ್ಞಾನದ ಬೀಜಾಂಕುರವಾಗಿತ್ತು. ಆದರೆ ಹದಿನೈದನೆಯ ಶತಮಾನದವರೆಗೆ ಹೇಳಿಕೊಳ್ಳುವಂತಹ ಪ್ರಗತಿಯಾಗಲಿಲ್ಲ. ಕೋಪರ್ನಿಕಸ್, ಗೆಲಿಲಿಯೋ, ನ್ಯೂಟನ್ ಮುಂತಾದವರು ಅದರ ಪ್ರಗತಿಯ ವೇಗವನ್ನು…