ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಈ ಜೀವನ..

   ಈ ಜೀವನವೇ ಈ ತರಹ ಎಂದು ಕಾಡುವ ಪ್ರಶ್ನೆ ಮನದಲ್ಲಿ ಮನೆ ಮಾಡಿ ಕುಳಿತಿದೆ. ಉತ್ತರ ಹುಡುಕುವ ದಾರಿಯಲ್ಲಿ ತಗ್ಗಿ-ನುಗ್ಗಿ,

ಎದ್ದು-ಬಿದ್ದು,ಹುಡುಕಿದರು ಸಿಗದಂಥ ಪ್ರಶ್ನೆಗೆ ದೊರೆಯದಂಥ ಉತ್ತರ ಸಿಗುವ ಸ್ಥಳವೆಲ್ಲೂ ಕಾಣುವುದಿಲ್ಲ.ಜೀವನದ ದಾರಿಯಲ್ಲಿ ಸರಳ

ಸುಖದ ಹಾಗೇ, ವಿರಳ ದುಃಖದ ಕಷ್ಟವನ್ನು ಅನುಭವಿಸು ಎಂದು ಜೀವನವು ಪಾಠದ ಸರಮಾಲೆಯನ್ನು ಹೊತ್ತು ಮನುಷ್ಯನ ಮನಸ್ಸಿನ

ದಾರಿಯಲ್ಲಿ ಹೊಕ್ಕಿ ತನ್ನದೇ ಆಡಳಿತವನ್ನು ಚಲಿಸುತ್ತದೆ.

   ಮಾನವ ತಾನೇ ಶ್ರೇಷ್ಠ ಎಂದು ತಿಳಿದರೂ ಪರಿತಪಿಸುವ ಮನವ ಆ ಮಾನವ ಹೊಂದಿಹ, ಹಲವಾರು ಹೆಸರು ಈ ಜೀವಗಳಿಗೆ

ಪಾಪಿ ಜೀವ ನನ್ನದು, ಪುಣ್ಯ ಜೀವ ನನ್ನದು , ಕರ್ಮ ಜೀವ ನನ್ನದು ಎಂದು ಗೊಣಗುವ ಮನಗಳ ಸಂಖ್ಯೆಯ ಬೆಲೆ ಎಷ್ಟು ಎಂದು 

ಒಂದು ಮರೆಯಲಾಗದ ದಿನ!

ನೆನ್ನೆ ನಮ್ಮ ತಂದೆ ತಾಯಿಗಳ ವಿವಾಹ ವಾರ್ಷಿಕೋತ್ಸವ. ಆಫೀಸಿಂದ ಸ್ವಲ್ಪ ಬೇಗ ಹೊರಟೆ.
ಎಷ್ಟು ಬೇಗ ಅಂದರೂ ೬ ಗಂಟೆ ಆಗಿಹೋಯ್ತು. ೬-೮ ರ ಮಧ್ಯೆ ಹೊರಡದೆ ಇರುವುದು ಲೇಸು ಎಂಬುದು ನನ್ನ ಅಭಿಪ್ರಾಯ. ಯಾಕೆಂದರೆ ಆ ಎರಡು ಘಂಟೆಗಳಲ್ಲಿ ಯಾವಾಗ ಹೊರಟರೂ ಮನೆ ಸೇರೋದು ಒಂದೇ ಸಮಯಕ್ಕೆ! ೯ ಘಂಟೆ ಮೇಲೆಯೇ :)

ಮಧ್ಯಾಹ್ನವೇ ನನ್ನ ತಂಗಿ ಫೋನ್ ಮಾಡಿ ಇವತ್ತು ಊಟಕ್ಕೆ ಹೊರಗೆ ಹೋಗೋಣ ಬೇಗ ಬಾ ಅಂತ ಹೇಳಿದ್ಲು. ಅದೇನೋ ಗೊತ್ತಿಲ್ಲ ನಾನು ಬೇಗ ಬರ್ತೀನಿ ಅಂತ ಮನೇಲಿ ಹೇಳಿದ ದಿನವೇ ಏನಾದರೊಂದು ಕೆಲಸ ಬಂದು ೭:೩೦ ಕ್ಕೆ ಮೊದಲು ಹೊರಡಲಾಗುವುದಿಲ್ಲ :(  ಅಂತೂ ಬೇರೆಯವರು ನನ್ನ ನೋಡಿ ಕೆಲಸ ಹೇಳೋ ಮೊದಲು ಹೊರಟೆ. ಪುಣ್ಯಕ್ಕೆ ಹೆಚ್ಚು ಟ್ರಾಫಿಕ್  ಇರಲಿಲ್ಲ. ಹೇಗೋ ೮ ಘಂಟೆ ಹೊತ್ತಿಗೆ ಹೋಟೆಲ್ ಸೇರಿದೆ.

ಪ್ರೀತ್ಯರ್ಥ

ಕೆಲವೊಮ್ಮೆ ನಮಗಿಷ್ಟವಿಲ್ಲದ ಅಥವಾ ನಮಗೆ ವಿಶ್ವಾಸವಿಲ್ಲದ ಕೆಲಸಗಳನ್ನು ಇನ್ನೊಬ್ಬರ ಪ್ರೀತ್ಯರ್ಥ ಮಾಡಬೇಕಾಗುತ್ತದೆ. ದೇವರು, ದೇವಸ್ಥಾನ, ಪೂಜೆ, ಇತ್ಯಾದಿಗಳಲ್ಲಿ ನಂಬಿಕೆಯಿಲ್ಲದಿರುವವರು ಈ ರೀತಿಯ ಪ್ರಸಂಗಗಳಿಗೆ ಒಳಗಾಗುತ್ತಾರೆ. ಇಂಥವರು ತಮ್ಮ ಆತ್ಮೀಯರು, ಮುಖ್ಯವಾಗಿ ಮಕ್ಕಳು, ಆಕಸ್ಮಿಕ/ಅಪಘಾತಕ್ಕೊಳಗಾಗಿ ಅತ್ಯಂತ ದಾರುಣ ಪರಿಸ್ಥಿತಿಯಲ್ಲಿರುವಾಗ ಹರಕೆ-ಬೇಡಿಕೆಗಳನ್ನು ಮಾಡಿಕೊಂಡು ಸೇವೆಸಲ್ಲಿರುವದನ್ನು ನಾವು ನೋಡಿರುತ್ತೇವೆ. ತಮ್ಮದೇ ಆದರ್ಶ-ದರ್ಶನಗಳಿಗೆ ಕಟ್ಟುಬಿದ್ದುಕೊಂಡಿರುವ ಸಂದರ್ಭದಲ್ಲಿ ಇನ್ನೊಬ್ಬರನ್ನು ಸಂತೋಷಪಡಿಸಲು ಈ ಕಾರ್ಯಗಳನ್ನು ಮಾಡುವಾಗ ಮೊದಲಿಗೆ ಮುಜುಗರ, ಕಿರಿಕಿರಿಯಾದರೂ, ಬಳಿಕ ನಿಧಾನವಾಗಿ ಯೋಚಿಸಿದಾಗ ಒಂದು ಕೆಲಸವನ್ನು ಸಂಪೂರ್ಣಗೊಳಿಸಿದಾಗ ಸಿಗುವ ತೃಪ್ತಿಯ ಅನುಭವವಾಗುತ್ತದೆ. ಈ ರೀತಿಯ ಪರಿಸ್ಥಿತಿಯ ಒಂದು ಲಘು ಅನುಭವ ಇಲ್ಲಿದೆ. ***

ಈ ಪ್ರೀತಿ ನನ್ನದು..

 ನನ್ನದೇ ಆದ ಲೋಕವನ್ನು ಸೃಷ್ಟಿಸಿದೆ ನಾನು

 ಮನಸ್ಸೆಂಬ ಶಿಲೆಯನ್ನು ಕೆತ್ತಿದೆ ನೀನು

 ಭಾವನೆಗಳ ಮನೆಯನ್ನು ಕಟ್ಟಿದೆ ನಾನು

 ಸ್ನೇಹವೆಂಬ ಬೀಜವನ್ನು ಬಿತ್ತಿದೆ ನೀನು

 ಪ್ರೀತಿಯೆಂದು ತಿಳಿದು ಬೆಳೆಸಿದೆ ನಾನು

 ಸಂಬಂಧವನ್ನು ಅರಿಯದೆ ಆಗಲಿದೆ ನೀನು 

 ನೆನಪಿನ ಮೊಗ್ಗನ್ನು ಬಿಟ್ಟಿರುವೆ ನಾನು

 ಸೌಂದರ್ಯದ ಬಲೆಗೆ ಮರಳಿಬಂದೆ ನೀನು

 ಸ್ನೀಹದಿಂದ ಪ್ರೀತಿಯ ಹೂವನ್ನು ಅರಳಿಸಿದೆ ನಾನು

 ಹಿಂದಿನ ತಪ್ಪಿನ ಶಿಕ್ಷೆಗಾಗಿ ಮುಳ್ಳಾದೆ ನೀನು

 ಸ್ನೇಹ ಮರಳಿ ಬೆಳೆಸಿ ಹೂವಾದೆ ನಾನು


ನನ್ನ ಪ್ರಿಯತಂ..

ನನ್ನ ಪ್ರಿಯನ ಕಣ್ಣಿನಲ್ಲಿ ಕೋಪ ನೋಡಿದಾಗ

ಪ್ರೀತಿಯು ಬಚ್ಚಿಟ್ಟುಕೊಂಡು ಕುಳಿತಿದೆ .

ನನ್ನ ಪ್ರಿಯನ ಮನಸ್ಸಲ್ಲಿ ನೋವು ಉಂಟಾದಾಗ

ಪ್ರೀತಿಯೇ ನೆನಪಿನ ಕಾಣಿಕೆಯಾಗಿದೆ

ನನ್ನ ಪ್ರಿಯನ ಮನ ಮುಗ್ಧವಾದಾಗ

ಸಂಗಾತಿಯ ಜೊತೆ ಚೆಲ್ಲಾಟವಾಗಿದೆ

ನನ್ನ ಪ್ರಿಯನ ಹೃದಯ ಮಿಡಿಯುವಾಗ

ಸಂಗಾತಿಯ ಹೆಸರಹೇಳಿ ಮಿಡಿದಿದೆ

ನನ್ನ ಪ್ರಿಯನ ಪ್ರತಿ ಉಸಿರಿನಲ್ಲಿ

ಸಂಗಾತಿಯ ಪ್ರೀತಿಯೇ ಉಸಿರಾಡಿದೆ ..


ಹನಿಹನಿ ಮಾತು..

 

* ಹುಡುಗಿ ಹೊಡೆದಳು ಕಣ್ಣು

ನಾ ಹತ್ತಿದೆ ಬೆನ್ನು

ಅವಳು ಅಂದಳು ಚಿನ್ನು

ಬಾ ಹೋಗೋಣ ಶಾಪಿಂಗ ಇನ್ನು..

 

 * ಕದ್ದು ನೋಡ್ಯಾಳ ಕನ್ನಡಿಯಾಗಿಂದ

ಮುದ್ದು ಮಾಡ್ಯಾಳ ಕನಸಾಗಿಂದ

ನಕ್ಕು ನಾಚ್ಯಾಳ ಮೊಗದಾಗಿಂದ

ಪ್ರೀತಿ ಮಾಡ್ಯಾಳ ಹೃದಯಾಗಿಂದ..

 

 * ಸ್ನೇಹದ ಬಲ್ಲಿ ಬೆಳೆದು

ಮನದಲಿ ಮನೆ ಮಾಡಿದೆ

ಪ್ರೀತಿಯ ಹೂ ಆಗಿ ಹುಟ್ಟಿ

ನನ್ನ ಮನದಲಿ ಅರಳಿದೆ..

 

 * ಮದುವೆ ನಂತರ ಅವಳು

ನನ್ನ ಅರ್ಧಾಂಗಿನಿ

ಹೇಗೆ ಉಡುವುದು ಇನ್ನು

ಅರ್ಧ ಸೀರೆ-ಅರ್ಧಅಂಗಿ?

 

 * ಅವಳು ಕೊಟ್ಟಿದಳು ಮುತ್ತು

ಎನಿಸಿದಳು ಮುತ್ತು ಹತ್ತು

ಹೇಳಿದ ಕೊಡಲೆ ಇನ್ನು ಕತ್ತು

ನಾಸಿಕ ನಾಪತ್ತೆ ಪುರಾಣ೦

ಶಿವಮೊಗ್ಗ ಜಿಲ್ಲೆಯ ನಗರ ತಾಲ್ಲೂಕಿನ ಎಸ್. ನಾವಡರ ಏಕೈಕ ಪುತ್ರನು , ಕುಲೋದ್ಧಾರಕನು , ಸಕಲ ಕಲಾವಲ್ಲಭನು , ಸರ್ವಗುಣ ಪಾರಂಗತನೂ , ಆದ ವರ್ತಮಾನದಲ್ಲಿ ಬೆಂಗಳೂರಿನಲ್ಲಿರುವ  ಎಸ್. ಮೊಸರುದ್ದಿನ ನಾವಡನಿಗೆ , ಮೊನ್ನೆಯಿಂದ ತನ್ನ ಮೂಗು ಕಳೆದು ಹೋಗಿದೆಯೆಂಬ ವಿಚಿತ್ರ ಗುಮಾನಿ ಶಂಕೆಯಾಗಿ ಆಂಕೆಯನ್ನು ದಾಟಿ ಮೊಸರುದ್ದಿನನ ಸರ್ವ ದಮನ ಯತ್ನವನ್ನೂ ದಾಟಿ , ಅವನ ಮನಸ್ಸಿನಲ್ಲಿ ನಾಗಲೋಟದಿಂದ ಸರಸ್ರನೇ ಸುತ್ತುತ್ತಾ , ಹಬ್ಬುತ್ತಾ , ಚಕ್ರಾಕಾರವಾಗಿ ತಿರುಗುತ್ತಾ ಆರ್ಭಟಿಸುತ್ತಿತ್ತು.