ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇಂಥ ವಿಕೃತಿಗೆ ಕೊನೆಯೆಂದು?

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಾಜಿ ಸೈನಿಕನೊಬ್ಬ ತನ್ನ ಪತ್ನಿಯನ್ನು ಕೊಂದು ತುಂಡಾಗಿ ಕತ್ತರಿಸಿ, ಕುಕ್ಕರ್ ನಲ್ಲಿ ಬೇಯಿಸಿ ಬಳಿಕ ಕೆರೆಗೆ ಎಸೆದಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಿಂದ ವರದಿಯಾಗಿದೆ.

Image

ಡೊನಾಲ್ಡ್ ಟ್ರಂಪ್ - ಸಹಜವೇ - ಅತಿರೇಕಿಯೇ....?

ಸಾಮಾನ್ಯ, ಸಾಂಪ್ರದಾಯಿಕ ರಾಜಕೀಯ ನಿರೀಕ್ಷೆಗಳನ್ನು ಮೀರಿ ಅಮೆರಿಕದ ಮತದಾರರು ಸ್ವಲ್ಪ ಹೆಚ್ಚು ಅನಿರೀಕ್ಷಿತ ಒಲವು ಮತ್ತು ಬೆಂಬಲವನ್ನು ನೀಡಿ ಎರಡನೆಯ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಅವರನ್ನು ಗೆಲ್ಲಿಸಿದ್ದಾರೆ.

Image

ಸ್ಟೇಟಸ್ ಕತೆಗಳು (ಭಾಗ ೧೨೧೨) - ಎಚ್ಚರ

ಬೆಳಗಿನ ಸೂರ್ಯ ಮನೆಯ ಮುಂದೆ ಬಂದು ಅಲಾರಾಂ ಹೊಡೆದು ಮುಂದೆ ಚಲಿಸಿಯಾಗಿದೆ. ನಾನು ಎದ್ದು ನನ್ನ ಕೆಲಸದ ಕಡೆಗೆ ಹೋಗೋಣ ಅನ್ನುವಷ್ಟರಲ್ಲಿ ಮನೆಯ ಮುಂದೆ ಅವರು ನಿಂತಿದ್ರು. ಇವತ್ತು ನಾನು ಮಾತನ್ನ ಆರಂಭಿಸುವ ಮೊದಲೇ ಅವರ ಮಾತು ಶುರುವಾಗಿತ್ತು.

Image

‘ಮಧು’ ಚೋರ ಈ ಜೇನು ಗಿಡುಗ !

ಒಂದು ದಿನ ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳಿಗೆಲ್ಲ ಊಟ ಬಡಿಸಿ ಆದ ನಂತರ ನಾನೂ ಬಂದು ಊಟಮಾಡಲು ಕುಳಿತೆ. ನನ್ನ ಊಟ ಅರ್ಧ ಆಗಿತ್ತು ಆಗಲೇ ಮಕ್ಕಳು ಓಡೋಡಿ ಬಂದರು. ಏನಾಯಿತು ಎಂದು ಗಾಬರಿಯಿಂದ ಕೇಳಿದರೆ “ ಅಲ್ಲಿ ನಾವು ಕೈ ತೊಳೆಯುವ ಜಾಗದ ಹತ್ತಿರ ಆ ಕಡೆ ಮರಗಳು ಇವೆಯಲ್ಲ ಆ ಕೊನೇಯ ಅರಳೀ ಮರದಲ್ಲಿ ದೊಡ್ಡದೊಂದು ಗಿಡುಗ ಕೂತಿದೆ. ಮಾಮೂಲಿ ಗಿಡುಗ ಅಲ್ಲ ಸಾರ್.‌ ಅದಕ್ಕಿಂತಲೂ ದೊಡ್ಡದಾಗಿದೆ” ಎಂದರು.

Image

‘ಝಿರೋ ಫಿಗರ್’ ಎಂಬ ಹುಚ್ಚು ಕುದುರೆಯ ಹಿಂದೆ…

ಈಗಿನ ಯುವ ಜನಾಂಗಕ್ಕೆ ಹೆಚ್ಚಾಗಿ ಹದಿಹರೆಯದ ಹುಡುಗಿಯರಿಗೆ ತಮ್ಮ ಫಿಗರ್ ಬಗ್ಗೆ ವಿಪರೀತ ಕಾಳಜಿ. ಅದಕ್ಕಾಗಿ ಸರಿಯಾದ ಸಮಯಕ್ಕೆ ಪೌಷ್ಟಿಕವಾದ ಆಹಾರವನ್ನೂ ಸೇವಿಸದೇ, ತಮಗೆ ಬೊಜ್ಜು ಬಾರದೇ ಇರಲಿ ಎಂದು ವಿಪರೀತ ಎನಿಸುವಷ್ಟು ಡಯಟ್ ಮತ್ತು ವ್ಯಾಯಾಮ ಮಾಡುತ್ತಾರೆ. ಇದರಿಂದ ನಿಮ್ಮ ದೇಹವು ಚೆನ್ನಾದ ಆಕಾರ ಪಡೆದು ಹೊರಗಿನಿಂದ ಸುಂದರವಾಗಿ ಕಂಡರೂ, ಒಳಗೆ ಕುಸಿಯುತ್ತಾ ಹೋಗುತ್ತದೆ.

Image

ಅನ್ ಬಾಕ್ಸಿಂಗ್ ಬೆಂಗಳೂರು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಮಾಲಿನಿ ಗೋಯಲ್ ಮತ್ತು ಪ್ರಶಾಂತ್ ಪ್ರಕಾಶ್, ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ.೬೯೫.೦೦, ಮುದ್ರಣ: ೨೦೨೪

ಬಹುವೇಗದಲ್ಲಿ ಬೆಳೆಯುತ್ತಿರುವ ನಗರ ಎಂದೇ ಹೆಸರಾದ ಬೆಂಗಳೂರು ಬಗ್ಗೆ ಮಾಲಿನಿ ಗೋಯಲ್ ಹಾಗೂ ಪ್ರಶಾಂತ್ ಪ್ರಕಾಶ್ ಅವರು ಆಂಗ್ಲಭಾಷೆಯಲ್ಲಿ ಬರೆದ ‘ಅನ್ ಬಾಕ್ಸಿಂಗ್ ಬೆಂಗಳೂರು’ ಎನ್ನುವ ಕೃತಿಯು ಅದೇ ಹೆಸರಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಖ್ಯಾತ ಲೇಖಕಿ ಪ್ರತಿಭಾ ನಂದಕುಮಾರ್. ಬೆಂಗಳೂರು ನಗರವನ್ನು ಹೊಸ ಆರಂಭಗಳ ನಗರ ಎಂದು ಹೆಸರಿಸಿದ್ದಾರೆ.

ಅಭಿವೃದ್ಧಿಯ ರೂಪ ಮತ್ತು ಪರಿಣಾಮ

ಜನವರಿ 26 ರ ಗಣರಾಜ್ಯೋತ್ಸವದ ಸನಿಹದಲ್ಲಿ… ಪ್ರಕೃತಿ ವಿಕೋಪ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸದಿದೆಯೇ ? ಅನಾರೋಗ್ಯ ಮತ್ತು ಅಭಿವೃದ್ಧಿ ಜೊತೆಗಾರರೇ ? ಅಪಘಾತ ಅಸಹನೆ ವಂಚನೆ ಮಾನಸಿಕ ರೋಗ ಅಭಿವೃದ್ಧಿಯ ಭಾಗವೇ? ಇದು ಅನಿವಾರ್ಯವೇ ? ಅನಿರೀಕ್ಷಿತವೇ ? ಸ್ವೀಕಾರಾರ್ಹವೇ ?

Image

ಸ್ಟೇಟಸ್ ಕತೆಗಳು (ಭಾಗ ೧೨೧೧) - ಅರ್ಥ

ನಿನಗ ಅರ್ಥವಾಗುವುದು ಯಾವಾಗ? ತಯಾರಾಗದ ನೆಲದ ಮೇಲೆ ಎಂತಹದೇ ಅದ್ಭುತ ಬೀಜ ಬಿದ್ದರೂ ಅದರಿಂದ ಫಲ ಸಿಗೋದಿಲ್ಲ. ಮೊದಲು ನೆಲವನ್ನ ತಯಾರು ಮಾಡುವ ಕೆಲಸಕ್ಕೆ ಕೈ ಹಾಕು, ಆ ನಂತರ ಬೀಜಗಳನ್ನ ಆಯ್ದುಕೊಂಡು ಯಾವ ನೆಲಕ್ಕೆ ಯಾವ ಬೀಜ ಸೂಕ್ತ ಅನ್ನೋದನ್ನ ತಿಳಿದುಕೊಂಡು ಮುಂದುವರೆದರೆ ಅದ್ಭುತವಾದ ಫಸಲು ನಿನ್ನದಾಗುತ್ತೆ.

Image