ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೧೨೦)- ಬಲೆ

ಅದೊಂದು ಪುಟ್ಟ ಕೋಣೆ. ಆ ಕೊಣೆಯೊಳಗಡೆ ಒಂದು ಮೂಲೆಯಲ್ಲಿ ಆತ ಕುಳಿತಿದ್ದಾನೆ. ಆ ಕೋಣೆಯಿಂದ ಹೊರಬರಲಾಗುತ್ತಿಲ್ಲ ಎಂದು ಚಡಪಡಿಸುತ್ತಿದ್ದಾನೆ. ಹೊರಗೆ ನಿಂತವರು ಬಾಗಿಲು ತೆಗೆಯುತ್ತೇನೆ ಎಂದರು ಆತ ಒಂದು ಹೆಜ್ಜೆ ಮುಂದಡಿ ಇಡುತ್ತಿಲ್ಲ. ಆತನ ಸುತ್ತ ಆತನೇ ಬಣ್ಣ ಬಣ್ಣದ ಪೆನ್ಸಿಲ್ ಗಳನ್ನು ಹಿಡಿದುಕೊಂಡು ವಿವಿಧ ರೀತಿಯ ಚಿತ್ರಗಳನ್ನು ಬಿಡಿಸಿದ್ದಾನೆ.

Image

ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿ

ಕಾವೇರಿ ಎಂದರೆ ಕನ್ನಡಿಗರ ಪಾಲಿಗೆ ಕೇವಲ ನದಿಯಲ್ಲ, ಜೀವನಾಡಿ, ಜೀವಜಲ ನೀಡುತ್ತಿರುವ ದೇವತೆ. ಇಂಥ ಕಾವೇರಿ ಉಗಮ ಸ್ಥಳವೆಂದೇ ತಲಕಾವೇರಿ ಪ್ರಖ್ಯಾತಿ, ಅಷ್ಟೇ ಅಲ್ಲ, ನವದಂಪತಿ ತಲಕಾವೇರಿಗೆ ಬಂದು ಹರಕೆ ಸಲ್ಲಿಸಲು ಇಷ್ಟಪಡುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಇಲ್ಲಿ ಗಂಡ ಮಳೆಯಾದರೆ, ಹೆಂಡತಿ ಭುವಿ, ಅವನು ಪ್ರೀತಿ ಸುರಿಸುತ್ತಾನೆ.

Image

ಚಾಕೊಲೇಟ್ ಬೇಸನ್ ಲಡ್ಡು

Image

ಕಡ್ಲೆ ಹುಡಿ ಹಾಗೂ ಗೋಧಿ ಹುಡಿಗಳನ್ನು ಚೆನ್ನಾಗಿ ಹುರಿದು ಕೊಳ್ಳಬೇಕು. ಪರಿಮಳ ಬರುವಷ್ಟು ಹುರಿಯಬೇಕು. ಅದಕ್ಕೆ ತುಪ್ಪವನ್ನು ಮಿಶ್ರ ಮಾಡಬೇಕು. ಅಮೇಲೆ ಸಕ್ಕರೆ, ಗೇರು ಬೀಜವನ್ನು ಮಿಶ್ರ ಮಾಡಿ ಚೆನ್ನಾಗಿ ಮಗುಚ ಬೇಕು. ತಣ್ಣಗಾಗುವ ಮೊದಲೆ ಉಂಡೆ ಮಾಡಬೇಕು

ಬೇಕಿರುವ ಸಾಮಗ್ರಿ

ತೆಳ್ಳಗೆ ಮಾಡಿದ ಡಾರ್ಕ್ ಚಾಕೊಲೇಟ್ ೪, ಕಡ್ಲೆ ಹುಡಿ, ಗೋಧಿ ಹುಡಿ ತಲಾ ಒಂದು ಕಪ್, ಹುರಿದಗೇರು ಬೀಜ ಸಣ್ಣದು ೪ ಚಮಚ, ಸಕ್ಕರೆ ಒಂದು ಮುಕ್ಕಾಲು ಕಪ್, ತುಪ್ಪ ೧ ಕಪ್.

ಲಾರ್ಡ್ಸ್ ಮೈದಾನ ‘ಕ್ರಿಕೆಟ್ ಕಾಶಿ' ಏಕೆ? (ಭಾಗ ೧)

ಕ್ರಿಕೆಟ್ ಆಡುವ ಪ್ರತಿಯೊಬ್ಬ ಆಟಗಾರನಿಗೂ ‘ಕ್ರಿಕೆಟ್ ಕಾಶಿ' ಲಾರ್ಡ್ಸ್ ಮೈದಾನದಲ್ಲಿ ಆಡಬೇಕು ಮತ್ತು ಶತಕ ಬಾರಿಸಬೇಕು ಎನ್ನುವುದು ಮಹದಾಸೆ. ಆದರೆ ನಿಮಗೆ ಗೊತ್ತಿದೆಯೋ ಇಲ್ಲವೋ ‘ಕ್ರಿಕೆಟ್ ದೇವರು' ಎಂದು ಅಭಿಮಾನಿಗಳಿಂದ ಕರೆಯಿಸಲ್ಪಟ್ಟ ಸಚಿನ್ ತೆಂಡೂಲ್ಕರ್ ಗೆ ಮಾತ್ರ ‘ಕ್ರಿಕೆಟ್ ಕಾಶಿ'ಯಲ್ಲಿ ಶತಕ ಬಾರಿಸಲು ಆಗಲೇ ಇಲ್ಲ.

Image

ಸದರ ಬಜಾರ್

ಪುಸ್ತಕದ ಲೇಖಕ/ಕವಿಯ ಹೆಸರು
ಡಿ ಎಸ್ ಚೌಗಲೆ
ಪ್ರಕಾಶಕರು
ವೀರಲೋಕ ಬುಕ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ : ೨೦೨೪

“ಡಿ. ಎಸ್. ಚೌಗಲೆ ಅವರ ಕಾದಂಬರಿ 'ಸದರಬಜಾರ್' ಹಲವು ವರ್ಗಗಳ ಓದುಗರಿಗೆ ಅಪರಿಚಿತವಾದ ಸಾಮಾಜಿಕ ಲೋಕವೊಂದನ್ನು ತೆರೆದಿಡುತ್ತದೆ. ಕರ್ನಾಟಕ ಮಹಾರಾಷ್ಟ್ರಗಳ ಗಡಿಭಾಗ, ಈಚಲ್‌ಕರಂಜಿ, ಅಬ್ದುಲ್‌ ಲಾಟ್ ಇವು ಜವಳಿ ಉದ್ಯಮ, ಸಕ್ಕರೆ ಕಾರಖಾನೆಗಳು ಇವುಗಳಿಂದ ಬೆಳೆದ ವಿಶಾಲವಾದ ಕಾರ್ಮಿಕರ ಕಾಲನಿಗಳಂತೆ ಬೆಳೆದ ಊರುಗಳು.

ನನ್ನನ್ನು ನಾನು ಹುಡುಕುತ್ತಾ ಈ ಬದುಕಿನ ಪಯಣದಲ್ಲಿ ಸಮಾಜದೊಂದಿಗೆ...

ನಾನು ಚಿಕ್ಕ ಮಗುವಾಗಿರುವಾಗ ಅಮ್ಮ ಎಲ್ಲರಿಗೂ ಹೇಳುತ್ತಿದ್ದಳು, ನನ್ನ ಮಗು ಸುರಸುಂದರಾಂಗ - ರಾಜಕುಮಾರ ಎಂದು. ಆದರೆ, ಪಕ್ಕದ ಮನೆ ಆಂಟಿ ನಾನು ಕೋತಿಮರಿ ತರಾ ಇದೇನೇ ಅಂತ ಯಾರಿಗೋ ಹೇಳುತ್ತಿದ್ದುದು ಕೇಳಿಸಿತು,

Image

ಸ್ಟೇಟಸ್ ಕತೆಗಳು (ಭಾಗ ೧೧೧೯)- ಬಾಲ ಸಭೆ

ಸಭೆಯಲ್ಲಿ ಎಲ್ಲರೂ ಆಸೀನರಾಗಿದ್ದರು. ಇದು ಅವರ 13ನೇ ಸಭೆ. ಈ ಸಭೆಯು ಆರಂಭವಾಗುವುದಕ್ಕೆ ಅವರಿಗೆ ಪ್ರೇರಣೆ ಸಿಕ್ಕಿದ್ದೇ ತಮ್ಮ ಮನೆಯಲ್ಲಿ ತಮ್ಮ ಸುತ್ತಮುತ್ತ ಆಗುತ್ತಿದ್ದ ಹಲವಾರು ವಿವಿಧ ರೀತಿಯ ಸಭೆಗಳನ್ನು ಕಂಡು.

Image

ನಿಷ್ಪಾಪಿ ಸಸ್ಯಗಳು (ಭಾಗ ೭೧) - ಹಸಿರು ಕನಕಾಂಬರ ಗಿಡ

ನವರಾತ್ರಿಯ ಸಡಗರ, ಸಂಭ್ರಮದಲ್ಲಿ ಖುಷಿ ಖುಷಿಯಾಗಿರಬೇಕಲ್ಲ! ನಮ್ಮ ಹಿರಿಯರು ಬದುಕಿನ ಏಕತಾನತೆ ಹೋಗಲಾಡಿಸಲು ಜೀವನಾವರ್ತ ಹಾಗೂ ಋತುಮಾನಗಳ ಹಬ್ಬಗಳ ಮೂಲಕ ಬದುಕಿಗೆ ಸಂತಸ, ಶಕ್ತಿ ತುಂಬಿದ್ದಾರೆ.

Image

ಪಯಣದ ಮಧ್ಯೆ ಸಿಕ್ಕ ಮಾದರಿ ತೋಟ

ಹಲವು ಬಾರಿ, ಬಸ್ ರೈಲ್ವೆ, ಕಾರು ಮೂಲಕ ಪ್ರಯಾಣದ ಮಧ್ಯೆ ಸುಂದರ, ಕೃಷಿ ಕ್ಷೇತ್ರ, ನದಿ, ಬೆಟ್ಟ, ಗುಡ್ಡಗಳನ್ನು ನೋಡುತ್ತ ಸಾಗುತ್ತಿರುತ್ತೇವೆ. ಅದು ಕೆಲ ದೂರದವರೆಗೆ ಮನಕ್ಕೆ ತಂಪು ಎರಚುತ್ತಿರುತ್ತದೆ. ಕೆಲವನ್ನಾದರೂ ಪ್ರತ್ಯಕ್ಷ ವೀಕ್ಷಣೆ ಮಾಡುವುದುಂಟು. ಅಂತವುಗಳಲ್ಲಿ ಒಂದಾದ ಸುಂದರ ಅಡಿಕೆ ಜೊತೆ ಕಾಳುಮೆಣಸಿನ ತೋಟ. ಇದು ಕಾಣಸಿಗುವುದು ಎಲ್ಲಿ ಗೊತ್ತಾ?

Image