ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಕ್ಕಳಿಗೆ ರಜೆಯ ಓದು (ಭಾಗ ೧) - ಜಾತಕ ಕಥೆಗಳು

ನಾವು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ ದೂರದರ್ಶನ, ಮೊಬೈಲ್ ಗಳ ಹಾವಳಿ ಇಲ್ಲದ ಕಾರಣ ನಮಗೆ ಪುಸ್ತಕಗಳೇ ಅಚ್ಚುಮೆಚ್ಚಿನ ಸಂಗಾತಿಯಾಗಿದ್ದವು. ಶನಿವಾರ ಅರ್ಧ ದಿನದ ಶಾಲೆ ಮುಗಿಸಿ ನಾನು ಮತ್ತು ನನ್ನ ಗೆಳೆಯರು ಪುಸ್ತಕದ ಅಂಗಡಿಗೆ ಹೋಗಿ ಮಕ್ಕಳ ಕಥಾ ಪುಸ್ತಕವನ್ನು ಕೊಂಡು ತರುತ್ತಿದ್ದೆವು. ಸರದಿ ಪ್ರಕಾರ ಓದಿ ಅದರಲ್ಲಿರುವ ನೀತಿ, ಹಾಸ್ಯ, ಸಾಹಸ ಎಲ್ಲವನ್ನೂ ವಿಮರ್ಶೆ ಮಾಡಿಕೊಳ್ಳುತ್ತಿದ್ದೆವು.

Image

ಮ್ಯಾಸಬೇಡರ ಚಾರಿತ್ರಿಕ ಕಥನ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಪ್ರಹ್ಲಾದ ಡಿ ಎಂ
ಪ್ರಕಾಶಕರು
ಆನಂದಿ ಪ್ರಕಾಶನ, ಪೋರ್ಟ್ ಮೊಹಲ್ಲಾ, ಮೈಸೂರು
ಪುಸ್ತಕದ ಬೆಲೆ
ರೂ. ೪೦೦.೦೦, ಮುದ್ರಣ: ೨೦೨೫

ಡಾ. ಪ್ರಹ್ಲಾದ ಡಿ.ಎಂ ಅವರ ‘ಮ್ಯಾಸಬೇಡರ ಚಾರಿತ್ರಿಕ ಕಥನ’ ಎಂಬ ಕೃತಿಯು ಮ್ಯಾಸಬೇಡರ ಕುಲಮೂಲ, ಸಾಂಸ್ಕೃತಿಕ ವೀರರು, ಮಾತೃದೈವಗಳು ಮತ್ತು ಆ ಕುಲದ ಚಾರಿತ್ರಿಕ ಕಾವ್ಯಗಳನ್ನು ಕುರಿತಂತೆ ಅಧ್ಯಯನ ನಡೆಸಿದ ಕೃತಿಯಾಗಿದೆ. ಈ ಕೃತಿಯ ಲೇಖಕರಾದ ಡಾ.ಡಿ.ಎಂ. ಪ್ರಹ್ಲಾದ್ ಅವರು ಬಹಳ ಶ್ರಮಪಟ್ಟು ಆಕರಗಳನ್ನು ಸಂಗ್ರಹಿಸಿ ಬಹಳ ತಾಳ್ಮೆಯಿಂದ ವಿಶ್ಲೇಷಿಸಿದ್ದಾರೆ.

ಜಾತಿ ಎಂಬ ಹುಚ್ಚು ಪರಿಕಲ್ಪನೆ ಮತ್ತು ಶ್ರೇಷ್ಠತೆಯ ವ್ಯಸನ

ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಕನಕದಾಸರು, 

Image

ಸ್ಟೇಟಸ್ ಕತೆಗಳು (ಭಾಗ ೧೨೯೫) - ಆಳ

ಅವನು ಪಾಠ ಹೇಳುತ್ತಿದ್ದ. ಅವನ ಪಾಠ ಕೇಳುವುದಕ್ಕಂತಲೇ ಹಲವು ಜನ ವಿದ್ಯಾರ್ಥಿಗಳು ಪಕ್ಕದಲ್ಲಿ ಕುಳಿತು ಕಿವಿ  ಆನಿಸಿ ಕೇಳುತ್ತಿದ್ದರು. ಯಾಕೆಂದರೆ ಅವನು ಮಾತಾಡುವ ಪ್ರತಿ ವಿಚಾರದಲ್ಲೂ ಅವರ ಜೀವನಕ್ಕೆ ಬೇಕಾಗುವ ಯಾವುದೇ ಒಂದು ವಿಚಾರ ಸಿಗ್ತಾಯಿತ್ತು.ಆದರೆ ಮನೆಯಲ್ಲಿ ಅವನ ಮಗ ಇವನ ಮಾತನ್ನು ಒಂದು ದಿನವೂ ಕೇಳಿದವನಲ್ಲ.

Image

‘ಮಿಸ್ಟರ್ ಭಾರತ್’ ನೆನಪಿನಲ್ಲಿ…

ನಿಮಗೂ ನೆನಪಿರಬಹುದು, ೮೦ ಹಾಗೂ ೯೦ರ ದಶಕದಲ್ಲಿ ದೂರದರ್ಶನಗಳು (ಟಿವಿ) ನಮ್ಮ ನಮ್ಮ ಮನೆಯನ್ನು ಹೊಕ್ಕಿದ್ದವಷ್ಟೇ. ನಿರ್ಧಾರಿತ ಸಮಯಕ್ಕೆ ಮಾತ್ರ ಕಾರ್ಯಕ್ರಮಗಳು. ಈಗಿನಂತೆ ನೂರಾರು ಚಾನೆಲ್ ಗಳ ಭರಾಟೆ ಇಲ್ಲ. ದೂರದರ್ಶನ ಎನ್ನುವ ಸರಕಾರಿ ಚಾನೆಲ್. ಅವರು ತೋರಿಸಿದ್ದನ್ನು ನಾವು ನೋಡಬೇಕು.

Image

ಆಂತರಿಕ ಭದ್ರತೆಗೆ ಸವಾಲು

ಬಾಂಗ್ಲಾದೇಶದ ನುಸುಳುಕೋರರೇ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ವಿಚಾರ ಆತಂಕ ಮೂಡಿಸುವಂಥದ್ದು. ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ನೆಪದಲ್ಲಿ ಬಂಗಾಳದ ಮುರ್ಶಿದಾಬಾದ್ ಪ್ರದೇಶದಲ್ಲಿ ಹಿಂಸಾಚಾರ ಏರ್ಪಟ್ಟು, ಮೂವರು ಪ್ರಾಣ ಕಳೆದುಕೊಂಡರು. ಅಲ್ಲದೆ, ಹಲವರ ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಕಲ್ಲು ತೂರಲಾಗಿದೆ.

Image

ಎನ್ ಕೌಂಟರ್, ಜಾತಿ ಜನಗಣತಿ, ವಕ್ಫ್ ತಿದ್ದುಪಡಿ...

ಈ ವಿಷಯಗಳ ಬಗ್ಗೆ ಒಂದು ನಿರ್ದಿಷ್ಟ, ಸ್ಪಷ್ಟ ತೀರ್ಮಾನ ಕೈಗೊಳ್ಳುವುದು ಅಷ್ಟು ಸುಲಭವಲ್ಲ. ಸಹಜವಾಗಿ ಆ ಕ್ಷಣದ ಸತ್ಯ ಅಥವಾ ಭಾವನಾತ್ಮಕತೆ ಅಥವಾ ಆಗಿನ ನಮ್ಮ ಮನಸ್ಥಿತಿ ಆಧಾರದ ಮೇಲೆ ಮೇಲ್ನೋಟಕ್ಕೆ ಒಂದು ತೀರ್ಪು ಕೊಡಬಹುದು.

Image

ಬ್ರೆಡ್ ಉಪ್ಪಿಟ್ಟು

Image

ಬ್ರೆಡ್ಡಿನ ಬದಿಯನ್ನು ತೆಗೆಯಿರಿ. ಬಿಳಿಭಾಗವನ್ನು ಒಂದು ಇಂಚುಗಳ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ. ಒಂದು ದೊಡ್ಡ ಬಾಣಲೆಯಲ್ಲಿ ಒಗ್ಗರಣೆಗೆ ಎಣ್ಣೆ ಬಿಸಿ ಮಾಡಿ. ಸಾಸಿವೆ ಸಿಡಿಸಿ. ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಕರಿಬೇವಿನ ಸೊಪ್ಪು ಸೇರಿಸಿ ಕೆಂಪಾಗುವ ತನಕ ಹುರಿಯಿರಿ.

ಬೇಕಿರುವ ಸಾಮಗ್ರಿ

ಬ್ರೆಡ್ ಹಾಳೆಗಳು (ಸ್ಲೈಸ್) ೫, ಹೆಚ್ಚಿದ ಈರುಳ್ಳಿ ಅರ್ಧ ಕಪ್, ಹೆಚ್ಚಿದ ಟೊಮೆಟೋ ಅರ್ಧ ಕಪ್, ಶುಂಠಿ ತರಿ ಅರ್ಧ ಚಮಚ, ಹೆಚ್ಚಿದ ಹಸಿರು ಮೆಣಸಿನಕಾಯಿ ೪, ಕೆಂಪು ಮೆಣಸಿನ ಹುಡಿ, ಅರಸಿನ ಹುಡಿ, ಸಾಸಿವೆ, ಜೀರಿಗೆ ತಲಾ ಅರ್ಧ ಚಮಚ, ಕರಿಬೇವು ಸೊಪ್ಪು ೬ ಎಸಳು, ಹೆಚ್ಚಿದ ಕೊತ್ತಂಬರಿ ಸೊಪ್ಪು ೩ ಚಮಚ, ಲಿಂಬೆ ರಸ, ೨ ಚಮಚ, ಎಣ್ಣೆ ೪ ಚಮಚ, ಉದ್ದಿನ ಬೇಳೆ ೨ ಚಮಚ, ಕಡಲೆ ಬೇಳೆ ೨ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಸ್ಟೇಟಸ್ ಕತೆಗಳು (ಭಾಗ ೧೨೯೪) - ಮುಂದೆ

ಭಯವು ಬದುಕಿನ ಭಾಗವಾಗಿ ಬಿಟ್ಟಿದೆ ಅಂತ ನಿನಗೆ ಅನ್ನಿಸ್ತಾ ಇಲ್ವಾ. ಯಾಕೆಂದರೆ ನಿನ್ನ ನಂಬಿದವರು ನಿನ್ನ ಹಿಂದೆ ಹಲವರಿದ್ದಾರೆ. ನೀನೀಗ ಬದುಕುತ್ತಾ ಇರುವ ರೀತಿ ಇದು ಸದ್ಯದ ಮಟ್ಟಿಗೆ ನಿನ್ನನ್ನು ಉಸಿರಾಡುವಂತೆ ಮಾಡುತ್ತದೆ. ಆದರೆ ಇನ್ನು ಮುಂದೆ ಸಾಗ್ತಾ ಸಾಗ್ತಾ ಹೆಜ್ಜೆಗಳು ದೃಢವಾಗಿ ಬೇಕಾಗಬಹುದು.

Image