ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎಲೆ ಹಕ್ಕಿಯ ಹುಡುಕಲು ಸಾಧ್ಯವೇ?

ನಾನೊಮ್ಮೆ  ನಮ್ಮ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆ. ಮಲೆನಾಡಿನ ಮಡಿಲಿನಲ್ಲಿರುವ ಅವರ ಮನೆಗೆ ಹೋದರೆ ಅವರ ತೋಟವನ್ನೆಲ್ಲ ಸುತ್ತುವುದು ನನಗೆ ಬಹಳ ಖುಷಿ ಕೊಡುವ ವಿಷಯ. ಸಮಯ ಸಿಕ್ಕಾಗಲೆಲ್ಲ ಅವರ ತೋಟದಲ್ಲಿ ಓಡಾಡುತ್ತಿದ್ದೆ. ಅವರಿಗೂ ನನ್ನ ಹಕ್ಕಿಗಳ ಬಗೆಗಿನ ಆಸಕ್ತಿಯ ಬಗ್ಗೆ ಕುತೂಹಲ ಇತ್ತು.

Image

ಶಿಲ್ಪ ವೈಭವಕ್ಕೆ ಹೆಸರಾದ ಸೇನೇಶ್ವರ ದೇವಸ್ಥಾನ

ಬೈಂದೂರಿನ ಸೇನೇಶ್ವರ ದೇವಸ್ಥಾನ ಶಿಲ್ಪ ವೈಭವಕ್ಕೆ ಹೆಸರಾಗಿದೆ. ದೇವಸ್ಥಾನದ ಸೊಬಗು ದೂರದಿಂದ ನೋಡುವಾಗ ಗೊತ್ತೇ ಆಗುವುದಿಲ್ಲ. ಆದರೆ ಒಳಹೊಕ್ಕು ನೋಡಿದರೆ ಶಿಲ್ಪ ಕಲಾ ಕೆತ್ತನೆಯು ದೇವ ಸಭೆಯಂತೆ ಅನಾವರಣಗೊಳ್ಳುತ್ತ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಕರಾವಳಿ ಪ್ರದೇಶದ ಬೇಲೂರು ಎಂದೇ ಇತಿಹಾಸ ತಜ್ಞರಿಂದ ಗುರುತಿಸಲ್ಪಟ್ಟಿರುವ ಸೇನೇಶ್ವರ ದೇವಸ್ಥಾನ ಪ್ರಸ್ತುತ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿದೆ.

Image

ಮಕ್ಕಳಿಗೆ ರಜೆಯ ಓದು (ಭಾಗ ೧) - ಜಾತಕ ಕಥೆಗಳು

ನಾವು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ ದೂರದರ್ಶನ, ಮೊಬೈಲ್ ಗಳ ಹಾವಳಿ ಇಲ್ಲದ ಕಾರಣ ನಮಗೆ ಪುಸ್ತಕಗಳೇ ಅಚ್ಚುಮೆಚ್ಚಿನ ಸಂಗಾತಿಯಾಗಿದ್ದವು. ಶನಿವಾರ ಅರ್ಧ ದಿನದ ಶಾಲೆ ಮುಗಿಸಿ ನಾನು ಮತ್ತು ನನ್ನ ಗೆಳೆಯರು ಪುಸ್ತಕದ ಅಂಗಡಿಗೆ ಹೋಗಿ ಮಕ್ಕಳ ಕಥಾ ಪುಸ್ತಕವನ್ನು ಕೊಂಡು ತರುತ್ತಿದ್ದೆವು. ಸರದಿ ಪ್ರಕಾರ ಓದಿ ಅದರಲ್ಲಿರುವ ನೀತಿ, ಹಾಸ್ಯ, ಸಾಹಸ ಎಲ್ಲವನ್ನೂ ವಿಮರ್ಶೆ ಮಾಡಿಕೊಳ್ಳುತ್ತಿದ್ದೆವು.

Image

ಮ್ಯಾಸಬೇಡರ ಚಾರಿತ್ರಿಕ ಕಥನ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಪ್ರಹ್ಲಾದ ಡಿ ಎಂ
ಪ್ರಕಾಶಕರು
ಆನಂದಿ ಪ್ರಕಾಶನ, ಪೋರ್ಟ್ ಮೊಹಲ್ಲಾ, ಮೈಸೂರು
ಪುಸ್ತಕದ ಬೆಲೆ
ರೂ. ೪೦೦.೦೦, ಮುದ್ರಣ: ೨೦೨೫

ಡಾ. ಪ್ರಹ್ಲಾದ ಡಿ.ಎಂ ಅವರ ‘ಮ್ಯಾಸಬೇಡರ ಚಾರಿತ್ರಿಕ ಕಥನ’ ಎಂಬ ಕೃತಿಯು ಮ್ಯಾಸಬೇಡರ ಕುಲಮೂಲ, ಸಾಂಸ್ಕೃತಿಕ ವೀರರು, ಮಾತೃದೈವಗಳು ಮತ್ತು ಆ ಕುಲದ ಚಾರಿತ್ರಿಕ ಕಾವ್ಯಗಳನ್ನು ಕುರಿತಂತೆ ಅಧ್ಯಯನ ನಡೆಸಿದ ಕೃತಿಯಾಗಿದೆ. ಈ ಕೃತಿಯ ಲೇಖಕರಾದ ಡಾ.ಡಿ.ಎಂ. ಪ್ರಹ್ಲಾದ್ ಅವರು ಬಹಳ ಶ್ರಮಪಟ್ಟು ಆಕರಗಳನ್ನು ಸಂಗ್ರಹಿಸಿ ಬಹಳ ತಾಳ್ಮೆಯಿಂದ ವಿಶ್ಲೇಷಿಸಿದ್ದಾರೆ.

ಜಾತಿ ಎಂಬ ಹುಚ್ಚು ಪರಿಕಲ್ಪನೆ ಮತ್ತು ಶ್ರೇಷ್ಠತೆಯ ವ್ಯಸನ

ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಕನಕದಾಸರು, 

Image

ಸ್ಟೇಟಸ್ ಕತೆಗಳು (ಭಾಗ ೧೨೯೫) - ಆಳ

ಅವನು ಪಾಠ ಹೇಳುತ್ತಿದ್ದ. ಅವನ ಪಾಠ ಕೇಳುವುದಕ್ಕಂತಲೇ ಹಲವು ಜನ ವಿದ್ಯಾರ್ಥಿಗಳು ಪಕ್ಕದಲ್ಲಿ ಕುಳಿತು ಕಿವಿ  ಆನಿಸಿ ಕೇಳುತ್ತಿದ್ದರು. ಯಾಕೆಂದರೆ ಅವನು ಮಾತಾಡುವ ಪ್ರತಿ ವಿಚಾರದಲ್ಲೂ ಅವರ ಜೀವನಕ್ಕೆ ಬೇಕಾಗುವ ಯಾವುದೇ ಒಂದು ವಿಚಾರ ಸಿಗ್ತಾಯಿತ್ತು.ಆದರೆ ಮನೆಯಲ್ಲಿ ಅವನ ಮಗ ಇವನ ಮಾತನ್ನು ಒಂದು ದಿನವೂ ಕೇಳಿದವನಲ್ಲ.

Image

‘ಮಿಸ್ಟರ್ ಭಾರತ್’ ನೆನಪಿನಲ್ಲಿ…

ನಿಮಗೂ ನೆನಪಿರಬಹುದು, ೮೦ ಹಾಗೂ ೯೦ರ ದಶಕದಲ್ಲಿ ದೂರದರ್ಶನಗಳು (ಟಿವಿ) ನಮ್ಮ ನಮ್ಮ ಮನೆಯನ್ನು ಹೊಕ್ಕಿದ್ದವಷ್ಟೇ. ನಿರ್ಧಾರಿತ ಸಮಯಕ್ಕೆ ಮಾತ್ರ ಕಾರ್ಯಕ್ರಮಗಳು. ಈಗಿನಂತೆ ನೂರಾರು ಚಾನೆಲ್ ಗಳ ಭರಾಟೆ ಇಲ್ಲ. ದೂರದರ್ಶನ ಎನ್ನುವ ಸರಕಾರಿ ಚಾನೆಲ್. ಅವರು ತೋರಿಸಿದ್ದನ್ನು ನಾವು ನೋಡಬೇಕು.

Image

ಆಂತರಿಕ ಭದ್ರತೆಗೆ ಸವಾಲು

ಬಾಂಗ್ಲಾದೇಶದ ನುಸುಳುಕೋರರೇ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ವಿಚಾರ ಆತಂಕ ಮೂಡಿಸುವಂಥದ್ದು. ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ನೆಪದಲ್ಲಿ ಬಂಗಾಳದ ಮುರ್ಶಿದಾಬಾದ್ ಪ್ರದೇಶದಲ್ಲಿ ಹಿಂಸಾಚಾರ ಏರ್ಪಟ್ಟು, ಮೂವರು ಪ್ರಾಣ ಕಳೆದುಕೊಂಡರು. ಅಲ್ಲದೆ, ಹಲವರ ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಕಲ್ಲು ತೂರಲಾಗಿದೆ.

Image