‘ಸುವರ್ಣ ಸಂಪುಟ' (ಭಾಗ ೧೧೪) - ಪಿ. ಧೂಲಾ
1 day 5 hours ago - Ashwin Rao K P
ಪಿ. ಧೂಲಾ ಎಂದೇ ಹೆಸರಾದ ಧೂಲಾ ಪಾಟೀಲ ಸಾಹೇಬ ಅಥವಾ ಕಾಸೀಮ ಸಾಹೇಬರು ಹುಟ್ಟಿದ್ದು ೧೯೦೧ರಲ್ಲಿ. ಇವರ ತಂದೆ ಹುಸೇನ ಖಾನ. ತಾಯಿ ಚಾಂದ ಬೀಬಿ. ಪಾರ್ಸಿ ಭಾಷೆಯಲ್ಲಿ “ಧೂಲ್ಹಾ” ಎಂದರೆ ಮದುಮಗ. ಆದರೆ ಧೂಲಾ ಸಾಹೇಬರು ಜೀವನ ಪರ್ಯಂತ ಬ್ರಹ್ಮಚಾರಿಯಾಗಿಯೇ ಉಳಿದರು. ಇವರನ್ನು ಎಲ್ಲರೂ ಪ್ರೀತಿಯಿಂದ ‘ಧೂಲಾ’ ಎಂದೇ ಕರೆದರು. ಇದೇ ಅವರ ಅನ್ವರ್ಥ ನಾಮವೂ ಆಗಿ ಹೋಯಿತು.
ಧೂಲಾ ಸಾಹೇಬರು ಓದಿದ್ದು ಮೂರನೇಯ ತರಗತಿಯವರೆಗೆ ಮಾತ್ರ. ಆದರೆ ಖ್ಯಾತ ಸಾಹಿತಿ ಮಧುರ ಚೆನ್ನ ಅವರ ಬಾಂಧವ್ಯಕ್ಕೆ ಕಟ್ಟುಬಿದ್ದು ಮೂಲಕೀ (ಮೂಲ್ಕಿ) ಪರೀಕ್ಷೆಯನ್ನು ಬರೆದು ಉತ್ತೀರ್ಣರಾದರು. ಮಧುರ ಚೆನ್ನರ ಸಾಂಗತ್ಯದಿಂದ ಇವರು ಸಾಹಿತ್ಯ ಕ್ಷೇತ್ರವನ್ನೂ ಪ್ರವೇಶಿಸಿದರು. ಹಲಸಂಗಿ ಗೆಳೆಯರು ಪ್ರಾರಂಭಿಸಿದ ‘ಮೊಗ್ಗು' ಮತ್ತು ವಿಶ್ವಾಮಿತ್ರ' ಎಂಬ ಕೈಬರಹದ ಪತ್ರಿಕೆಗಳಿಗೆ ನಿಯಮಿತವಾಗಿ ಬರೆಯುತ್ತಿದ್ದರು. ‘ಕವಿ ಕರ್ಣ' ಎಂಬ ಕಾವ್ಯನಾಮದಿಂದ ಹಲವಾರು ಲಾವಣಿಗಳನ್ನೂ ಬರೆದರು. ನಂತರದ ದಿನಗಳಲ್ಲಿ ‘ಜಯ ಕರ್ನಾಟಕ’ ಪತ್ರಿಕೆಯಲ್ಲಿ ಬರಹಗಳು ಪ್ರಕಟವಾಗತೊಡಗಿದವು. ಇವರು ‘ಆನಂದ ಕಂದ. ಕವಿಕರ್ಣ, ಕಾಡಹಕ್ಕಿ' ಎಂಬ ಹಲವಾರು ಹೆಸರುಗಳಲ್ಲಿ ತಮ್ಮ ಬರಹವನ್ನು ರಚಿಸಿದ್ದಾರೆ. ಲಾವಣಿಗಳು ಇವರ ಅಚ್ಚುಮೆಚ್ಚಿನ ಪ್ರಕಾರವಾಗಿತ್ತು.
ಧೂಲಾ ಸಾಹೇಬರು ಬರೆದ ಏಕೈಕ ಗ್ರಂಥ ‘ವೀರ ಪಥಿಕ' ಈ ಗ್ರಂಥ ಗಾತ್ರದಲ್ಲಿ ಚಿಕ್ಕದಾದರೂ ಬಹಳ ಅಮೂಲ್ಯವಾದದ್ದು. ಧೂಲಾ ಸಾಹೇಬರು ಹುಟ್ಟಿನಿಂದ ಮುಸ್ಲಿಮರಾದರೂ ಬೆಳೆದದ್ದು ಹಿಂದೂ ಪರಿಸರದಲ್ಲಿ. ಈ ಕಾರಣದಿಂದ ಅವರ ಬರಹಗಳಲ್ಲಿ ಹಿಂದೂ ಧರ್ಮದ ಛಾಯೆ ಕಾಣಸಿಗುತ್ತದೆ. ‘ಅರೇಬಿಯಾದ ಅಭಿಮನ್ಯು' ಇವರ ಖಂಡ ಕಾವ್ಯ. ಇದು ವೀರ ಕಾಸೀಮನ (ಅರೇಬಿಯಾದ ಐತಿಹಾಸಿಕ ಪಾತ್ರ) ಶೌರ್ಯವನ್ನು ಚಿತ್ರಿಸುವ ಕವನ. ಇದರಲ್ಲಿ ಎರಡೂ ಭಾಗಗಳಿವೆ. ಒಂದ… ಮುಂದೆ ಓದಿ...