ಭಾರತ ದೇಶ ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟ. ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ರಚನೆಯಾದ ಇದು ಕರ್ನಾಟಕ ರಾಜ್ಯ. 1,91,791 ಸ್ಕ್ವೇರ್ ಕಿಲೋಮೀಟರ್ ಭೂಪ್ರದೇಶದ ವಿಸ್ತಾರ ಹೊಂದಿದೆ. ಸುಮಾರು 7 ಕೋಟಿ ಜನಸಂಖ್ಯೆ ಇದೆ. ಕನ್ನಡ ಇಲ್ಲಿನ ತಾಯಿ ಭಾಷೆ.
ಇತಿಹಾಸದಲ್ಲಿ ಬಹುತೇಕ ವಿವಿಧ ರಾಜಪ್ರಭುತ್ವದ ಆಡಳಿತ ವ್ಯವಸ್ಥೆಯೇ ಇದ್ದಿತು. ಅನಂತರ ಅನೇಕ ವಿದೇಶಿ ದಾಳಿಕೋರರು, ಕೆಲವು ಸ್ಥಳೀಯ ರಾಜಮನೆತನಗಳು ಈ ಭೂಪ್ರದೇಶವನ್ನು ಆಕ್ರಮಿಸಿಕೊಂಡರು. ಜೊತೆಗೆ ಇಲ್ಲಿಯೂ ಕೂಡ ಅನೇಕ ರಾಜಮನೆತನಗಳು ಆಡಳಿತ ನಡೆಸಿವೆ. ಒಟ್ಟಿನಲ್ಲಿ ಇಡೀ ಭಾರತದ ಇತಿಹಾಸವೇ ರಾಜ ಸಂಘರ್ಷಗಳ ಹೋರಾಟ. ಅದಕ್ಕೆ ಕರ್ನಾಟಕವು ಹೊರತಲ್ಲ. ಒಬ್ಬರಿಗೊಬ್ಬರು ಸಾಮ್ರಾಜ್ಯ ವಿಸ್ತಾರಣೆಗಾಗಿ ಕೊಲ್ಲುವ ಆಟದಲ್ಲಿ ನಿರತರಾಗಿದ್ದರು.
ಇಂದಿನ ವ್ಯವಸ್ಥೆಗೆ ಹೋಲಿಸಿದಾಗ, ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಜನರ ಜೀವನಮಟ್ಟ, ಬದುಕಿನ ಸುಖ ಸಂತೋಷಗಳು, ರಕ್ಷಣೆ ಮುಂತಾದ ವಿಷಯದಲ್ಲಿ ಯಾವುದೇ ಖಚಿತತೆ ಇರುತ್ತಿರಲಿಲ್ಲ. ಬಹುತೇಕ ಅದೃಷ್ಟದ ಬೆಂಬಲದ ಮೇಲೇಯೇ ಜೀವನ. ಶಿಕ್ಷಣ ಆರೋಗ್ಯ ಎಲ್ಲವೂ ಅತ್ಯಂತ ಸೀಮಿತ. ಅಜ್ಞಾನ, ಬಡತನ, ಮೂಢನಂಬಿಕೆ, ದೌರ್ಜನ್ಯ, ಶೋಷಣೆ, ಜಾತಿ ಪದ್ದತಿ ಇವುಗಳ ನಡುವೆ ಒಂದು ಜೀವನ. ಯುದ್ದಗಳ ನಡುವೆ, ಪ್ರಾಕೃತಿಕ ವಿಕೋಪಗಳ ನಡುವೆ ಬದುಕು.
ಆದರೆ 1947 ರ ನಂತರ ಜನಜೀವನ ಸಾಕಷ್ಟು ಬದಲಾಯಿತು. ಶಿಕ್ಷಣ, ಆರೋಗ್ಯ, ರಕ್ಷಣೆ, ಪ್ರಯಾಣ, ಆಹಾರ, ಉದ್ಯೋಗ ಮುಂತಾದ ವಿಷಯಗಳಲ್ಲಿ ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಪ್ರಗತಿ ಕಂಡುಬಂದಿತು.
ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ಹಾಗು ಸೇವೆಗಳು ದೊರೆತವು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಇದು ಸಾಧ್ಯವಾಯಿತು. 1995 ರ ನಂತರ ಜಾಗತೀಕರಣದ ಪ…
ಮುಂದೆ ಓದಿ...