ತಕ್ಕಡಿ ಸಮಾನಾಂತರವಾಗಿಯೇ ನಿಲ್ಲಬೇಕಲ್ಲವೇ…?!
1 day 14 hours ago - Shreerama Diwana
ನ್ಯಾಯವೆಂಬುದು ಎಲ್ಲರಿಗೂ ಒಂದೇ ಆಗಿರಲಿ. ನಮ್ಮ ಮನಸ್ಸಿನ ಅನುಕೂಲಕ್ಕೆ ತಕ್ಕಂತೆ ವಿರೋಧಿಗಳ ಮೇಲಿನ ದ್ವೇಷಕ್ಕೆ ತಕ್ಕಂತೆ ಬದಲಾಗುವುದು ಬೇಡ. ಟೆಲಿಕಾಂ (2 G) ಎಂಬ ಬಹುದೊಡ್ಡ ಹಗರಣವನ್ನು ವಿರೋಧಿಸಿದ ಮನಸ್ಸುಗಳು, ಕಾಮನ್ವೆಲ್ತ್ ಕ್ರೀಡೆಯ ಭ್ರಷ್ಟಾಚಾರವನ್ನು ವಿರೋಧಿಸಿದ್ದ ಜನಗಳು, ಕಲಿದ್ದಲು ಗಣಿ ವಂಚನೆಯನ್ನು ವಿರೋಧಿಸಿದ್ದ ವ್ಯಕ್ತಿಗಳು, ಹರ್ಷದ್ ಮೆಹ್ತಾ ಷೇರು ಮಾರುಕಟ್ಟೆ ಮೋಸವನ್ನು ವಿರೋಧಿಸಿದ್ದ ಪ್ರಜೆಗಳು, ಸತ್ಯಂ ಕಂಪ್ಯೂಟರ್ಸ್ ರಾಮರಾಜು ಅವರ ಲೆಕ್ಕಪತ್ರ ಕಳ್ಳತನ ಟೀಕಿಸಿದ್ದ ಮಹಾನುಭಾವರು...
ಹೀಗೆ ಹಿಂದೆ ನಡೆದ ಹಲವಾರು ವಂಚನೆ ಪ್ರಕರಣಗಳನ್ನು ವಿರೋಧಿಸಿ - ಪ್ರತಿಭಟಿಸಿದ ಅನೇಕರು ಈಗ ಗೌತಮ್ ಅದಾನಿಯವರನ್ನು ಮೇಲ್ನೋಟಕ್ಕೆ ಸುಳ್ಳು ಲೆಕ್ಕಾಚಾರ ಇರುವುದು ಕಂಡು ಬಂದರೂ ಅದನ್ನು ಸಮರ್ಥಿಸುತ್ತಿರುವುದು ಆತ್ಮವಂಚಕ ಮನೋಭಾವದ ವ್ಯಾಪ್ತಿಗೆ ಬರುವುದಿಲ್ಲವೇ? ದೇಶ ಮೊದಲು ಎನ್ನುವ ಜನ, ಪಕ್ಷ ಮೊದಲು - ವ್ಯಕ್ತಿ ಮೊದಲು ಎಂದು ಮನಸ್ಸು ಬದಲಾಯಿಸಿದರೆ ಅದು ತಪ್ಪು ಎಂದು ಭಾವಿಸಬಾರದೇ?
ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ತಡೆಯಲು ದೇವರ ಚಿತ್ರಗಳನ್ನು ಗೋಡೆಗಳಿಗೆ ಅಂಟಿಸುವ ರೀತಿಯಲ್ಲಿ ವಂಚನೆ ಪ್ರಕರಣದಲ್ಲಿ ಧರ್ಮ, ರಾಷ್ಟ್ರೀಯತೆ, ಇನ್ನೊಂದು ವಂಚನೆ ತೋರಿಸಿ ಇದನ್ನು ಮರೆಮಾಚುವುದು ನ್ಯಾಯದ ಯಾವ ಪ್ರಕಾರ ಎಂದು ಅರ್ಥಮಾಡಿಕೊಳ್ಳಬೇಕು. ನ್ಯಾಯದ ದಂಡ ಯಾವಾಗಲೂ ಒಂದೇ ರೀತಿಯಲ್ಲಿ ಇರಬೇಕಲ್ಲವೇ. ತಕ್ಕಡಿ ಸಮಾನಾಂತರವಾಗಿಯೇ ನಿಲ್ಲಬೇಕಲ್ಲವೇ?
ವರ್ಷಕ್ಕೆ ಒಂದು ಲಕ್ಷ ಕೋಟಿಯಷ್ಟು ಆರೇಳು ವರ್ಷಗಳಿಂದ ನಿರಂತರ ಲಾಭ ಬರುವ ವ್ಯವಹಾರ ಭಾರತದಲ್ಲಿ ಬಹುಶಃ ಅಷ್ಟು ಸುಲಭವಲ್ಲ. ಅದೂ ಕೊರೋನಾ ಸಂದರ್ಭದಲ್ಲಿ ಇಷ್ಟು ಲಾಭ ಹೇಗೆ ಸಾಧ್ಯ. ಇಷ್ಟೊಂದು ವೇಗವಾಗಿ ಷೇರು ಬೆಲೆಗಳ ಏರಿಕೆಯ ಹಿಂದೆ ಅನ… ಮುಂದೆ ಓದಿ...