ಬಿರು ಬೇಸಗೆಯ ಒಂದು ದಿನ ರಾಮು ಮತ್ತು ಶಾಮುಗೆ ಅವರ ಹೆತ್ತವರು ಸಮುದ್ರ ತೀರಕ್ಕೆ ಹೋಗಲು ಬೇಗ ತಯಾರಾಗ ಬೇಕೆಂದು ಹೇಳಿದರು.
"ನಾವು ನಮ್ಮ ಟೆಡ್ಡಿ ಕರಡಿಗಳನ್ನು ಒಯ್ಯಬಹುದೇ?” ಕೇಳಿದ ರಾಮು. “ನೀವು ಅವುಗಳ ಮೇಲೆ ಕಣ್ಣಿಡುತ್ತೀರಿ ಎಂದಾದರೆ ಮಾತ್ರ ಒಯ್ಯಬಹುದು" ಎಂದರು ಅಪ್ಪ. “ಯಾಕೆಂದರೆ, ನೀವೇನಾದರೂ ಅವನ್ನು ಕಳೆದುಕೊಂಡರೆ, ಸಂಜೆಯ ವರೆಗೆ ಹುಡುಕುತ್ತಾ ಇರಲು ನಮ್ಮಿಂದ ಸಾಧ್ಯವಿಲ್ಲ” ಎಂದು ಅವರು ವಿವರಿಸಿದರು.
ರಾಮು ಮತ್ತು ಶಾಮು ತಾವು ಹೋಗುವಲ್ಲಿಗೆಲ್ಲ ತಮ್ಮ ಟೆಡ್ಡಿ ಕರಡಿಗಳನ್ನು ಒಯ್ಯುತ್ತಿದ್ದರು. ಆದರೆ ಅವರು ಯಾವಾಗಲೂ ತಮ್ಮ ಟೆಡ್ಡಿ ಕರಡಿಗಳನ್ನು ಕಳೆದುಕೊಳ್ಳುತ್ತಿದ್ದರು ಮತ್ತು ಅವನ್ನು ಹುಡುಕುವುದೇ ದೊಡ್ಡ ಕೆಲಸವಾಗುತ್ತಿತ್ತು. ನಿಜ ಸಂಗತಿ ಏನೆಂದರೆ, ಯಾರೂ ನೋಡುತ್ತಿಲ್ಲ ಎಂದಾದಾಗ, ಅವರ ಟೆಡ್ಡಿ ಕರಡಿಗಳು ಸಾಹಸ ಮಾಡಬೇಕೆಂದು ಮೆಲ್ಲನೆ ಹೊರಟು ಹೋಗುತ್ತಿದ್ದವು.
ಇವತ್ತು ಹಾಗೆಯೇ ಆಯಿತು. ಅವರ ಕುಟುಂಬ ಸಮುದ್ರ ತೀರಕ್ಕೆ ಬಂದು ತಮ್ಮ ಸಾಮಾನು ಸರಂಜಾಮುಗಳನ್ನೆಲ್ಲ ಬಿಡಿಸಿಟ್ಟಿತು. ಅಪ್ಪ ಒಂದು ವಾರ್ತಾಪತ್ರಿಕೆ ಮತ್ತು ಅಮ್ಮ ಒಂದು ಪುಸ್ತಕ ಓದಲು ಶುರು ಮಾಡಿದರು. ರಾಮು ಮತ್ತು ಶಾಮು ಮರಳಿನ ಕೋಟೆ ಕಟ್ಟ ತೊಡಗಿದರು. ಹೀಗೆ ಯಾರೂ ತಮ್ಮನ್ನು ನೋಡುತ್ತಿಲ್ಲ ಎಂದಾದಾಗ ರಾಮು ಮತ್ತು ಶಾಮುವಿನ ಟೆಡ್ಡಿ ಕರಡಿಗಳು ಹೊರಕ್ಕೆ ಜಿಗಿದು, ಸಮುದ್ರ ತೀರದಲ್ಲಿ ದೂರಕ್ಕೆ ಓಡಿ ಹೋದವು.
“ಅಲ್ಲೊಂದು ಗವಿ ಕಾಣಿಸುತ್ತಿದೆ, ಅಲ್ಲಿಗೆ ಹೋಗೋಣ" ಎಂದಿತು ದೊಡ್ಡ ಟೆಡ್ಡಿ ಕರಡಿ. ಎರಡೂ ಟೆಡ್ಡಿ ಕರಡಿಗಳು ದೂರದಲ್ಲಿದ್ದ ಕಲ್ಲುಗಳ ನಡುವಿನ ಗವಿಯನ್ನು ಹೊಕ್ಕವು. “ಇಲ್ಲಿ ಕತ್ತಲಾಗಿದೆ, ನನಗೆ ಹೆದರಿಕೆಯಾಗುತ್ತದೆ” ಎಂದಿತು ಸಣ್ಣ ಟೆಡ್ಡಿ ಕರಡಿ.
“ಏನೇನೋ ಮಾತನಾಡಬೇಡ. ನೀನೊಂದು ಕರಡಿ. ಕರಡಿಗಳಿಗೆ
ಮುಂದೆ ಓದಿ...