‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪) - ಶ್ರೀನಿವಾಸ
1 day 5 hours ago - Ashwin Rao K P
‘ಶ್ರೀನಿವಾಸ' ಎಂಬುದು ‘ರಾಜಸೇವಾಸಕ್ತ' ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯನಾಮ. ಮಾಸ್ತಿಯವರು ಎಂ ಎ ಪದವೀಧರರು. ಮೈಸೂರು ಸರಕಾರದ ದೊಡ್ದ ಹುದ್ದೆಯಲ್ಲಿದ್ದವರು. ಹೊಸಗನ್ನಡ ಸಾಹಿತ್ಯದ ಹೊಸ ಹಾದಿ ಹಾಕಿಕೊಟ್ಟ ಹಿರಿಯರಲ್ಲಿ ಅವರು ಅಗ್ರಪಂಕ್ತಿಗೆ ಸೇರಿದವರು. ಸಣ್ಣ ಕತೆಗಳು, ಕವನಗಳು, ನಾಟಕಗಳು, ಗೀತ ನಾಟಕಗಳು, ಕಾದಂಬರಿಗಳು, ಪ್ರಬಂಧಗಳು, ಜೀವನ ಚರಿತ್ರೆಗಳು, ವಿಮರ್ಶೆಗಳು - ಹೀಗೆ ಅವರ ಕೃತಿಗಳು ನೂರಾರು. ಎಲ್ಲವೂ ಮೇಲ್ಮಟ್ಟದವುಗಳೆಂದು ವಿದ್ವನ್ಮಣಿಗಳಿಂದ ಪ್ರಶಂಸಿತವಾಗಿವೆ. ಅವರ ಕೃತಿಗಳ ಸಂಕಲನವು ೧೦ ದೊಡ್ಡ ಸಂಪುಟಗಳಾಗಿ ಪ್ರಕಟವಾಗಿದೆ. ಒಟ್ಟು ೫ ಸಾವಿರ ಪುಟಗಳಾಗುತ್ತವೆ. ಅವರು ೧೯೨೯ರಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ ನ ಬೆಳಗಾವಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ‘ಜೀವನ' ಎಂಬ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು.
ಕಾವ್ಯಶ್ರೀ ಸಂಕಲನದಲ್ಲಿ ‘ಶ್ರೀನಿವಾಸ' ಅವರ ಒಂದು ಕವನ ಪ್ರಕಟವಾಗಿದೆ. ಅದನ್ನು ಸಂಗ್ರಹಿಸಿ ಪ್ರಕಟಿಸುತ್ತಿದ್ದೇವೆ,
ಕೋಗಿಲೆ
ಕೋಗಿಲೆ ! ಕೋಗಿಲೆ !
ಎಂಥ ಹೆಸರು ಊರಿಗೆ !
ಹೇಗೆ ಇಹುದೊ, ಎನಿತು ಸೊಗಸೊ,
ಇಂಥ ಹೆಸರ ಊರದು !
ಕೊಟಿಗೆಹರ ತೆರುವಿಗೆ
ಏಳುಕೂಗು ದೂರದೆ,
ಎಟುಕಿಸಿಕೊಳಬಹುವೊಲಿರುವ
ಮಾಲೆಯಾದ ಮಲೆಯೆಡೆ;
ಮೂರು ನೀರನುಳಿಯುತ
ಮಲೆಯ ತಲೆಯ ಮುಟ್ಟುತ
ಧೀರವಾಗಿ ಪಡುವಣಿಂದ
ಸುಳಿಯುವೆಲರೊಳಾಡುತ ;
ತಳಿರು ಹೂವು ಸೊಗಯಿಸೆ
ಪರಿಮಳಿಸುವ ವನದಲಿ ;
ಮಳೆಯ ನೀರು ಸೇರಿ ನಡೆವ
ಸರಳಿನೊಂದು ಬದಿಯಲಿ ;
ಅಲ್ಲಿ ಇಹುದು ಕೋಗಿಲೆ
ಎಂಥ ಸೊಗಸ ಊರದು !
ಮೆಲ್ಲನುಸುರು ಹೆಸರನು;
ಅಂತ ಸೊಗಸ ಹೆಸರದು.
ತಳಿರ ಮರೆಯೊಳಿರುತ ಕರೆದು
ಕಾಣದಿಹುದೆ ಕೋಗಿಲೆ ;
ಸಲುವಿದಿದೇ ಬಣ್ಣನೆ
ಜಾಣು ನಮ್ಮ ಊರಿಗೆ,
ಉಳಿದ ಊರು ಮನೆಯ ಗುಂಪು,
ಕಡೆಗೆ ಎರಡು ಮರಗಳು,
ಮಲೆಯ… ಮುಂದೆ ಓದಿ...