ಪುಸ್ತಕ ಸಂಪದ

  • ಕನ್ನಡದ ಪ್ರಸಿದ್ಧ ಜನಪದ ಸಾಹಿತ್ಯ ಸಂಗ್ರಾಹಕರೂ ಕಾದಂಬರಿಕಾರರೂ ಆಗಿರುವ ಕೃಷ್ಣಮೂರ್ತಿ ಹನೂರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಸಂಗ್ರಹಿಸಿದ ಆರು ಜನಪದ ರಮ್ಯ ನೀಳ್ಗತೆಗಳು ಈ ಸಂಕಲನದಲ್ಲಿವೆ. ಇವು ಕನ್ನಡದ ಸಮೃದ್ಧ ಜನಪದ ಸಾಹಿತ್ಯದ ಸೂಚಿಯಾಗಿವೆ.

    ಇದರಲ್ಲಿನ ಆರು ಕತೆಗಳನ್ನು ಮತ್ತು ಇದರಲ್ಲಿ ಪ್ರಕಟವಾಗದ ಇನ್ನು ನಾಲ್ಕು ಕತೆಗಳನ್ನು ಹೇಳಿದವರು ಕ್ಯಾತಗಾನಹಳ್ಳಿ ಗಿರಿಯಯ್ಯ. ಈ ಗೊಲ್ಲಗೌಡನನ್ನು ಹನೂರರ ಮಿತ್ರ ರಾಮಚಂದ್ರಪ್ಪ ಕರೆದುಕೊಂಡು ಬಂದಿದ್ದರು. ತನಗೆ ಯಾವುದೋ ಒಂದು “ಹೆಣ್ಣರಸಿಯರ ಪಟ್ಟಣದ ಕತೆ” ಬರುವುದೆಂದು ಹೇಳಲಿಕ್ಕೆ ಶುರು ಮಾಡಿದ ಗಿರಿಯಯ್ಯ ಹಗಲೆಲ್ಲ ಅದೊಂದೇ ಕತೆಯನ್ನು ಹೇಳುತ್ತಾ ಹೋದ! “ಕಥೆ ಹೇಳುವಾಗಿನ ಆತನ ಭಾಷಾಶೈಲಿ, ನಾಟಕೀಯವಾಗಿ ನಿರೂಪಿಸುವ ರೀತಿ ಇವು ಆ ಕಥೆಯನ್ನು ಕುತೂಹಲದಿಂದ ಕೇಳುವಂತೆ…

  • ಉತ್ತಮ ಕಥೆಗಾರ ಎಂದು ಹೆಸರುವಾಸಿಯಾಗಿರುವ ವಿನಾಯಕ ಅರಳಸುರಳಿಯವರು ಬರೆದ ಕಥೆಗಳ ಸಂಕಲನ ‘ಮರ ಹತ್ತದ ಮೀನು’. ಓದುಗರನ್ನು ಆವರಿಸಿಕೊಳ್ಳುವಂಥ ಗುಣ ಕಥೆಗಳಿಗೆ ದಕ್ಕಬೇಕಾದರೆ ಕಥೆಗಾರ ಹಲವು ಅನುಭವಗಳಿಗೆ ಈಡಾಗಬೇಕಾಗುತ್ತದೆ, ಎಷ್ಟೋ ಸಂದರ್ಭಗಳಿಗೆ ಸಾಕ್ಷಿಯಾಗಬೇಕಾಗುತ್ತದೆ. ಕೆಲವೊಮ್ಮೆ ತಾನೇ ಪಾತ್ರವಾಗಬೇಕಾಗುತ್ತದೆ, ಕಷ್ಟವನ್ನು, ಕೆಡುಕುಗಳನ್ನು ನೋಡಬೇಕಾಗುತ್ತದೆ. ಅನುಭವಿಸಬೇಕಾಗುತ್ತದೆ. ಮತ್ತೆ ಕೆಲವೊಮ್ಮೆ ಮರೆಯಲ್ಲಿ ನಿಂತ ನಿರೂಪಕನಂತೆ ಕಥೆ ಹೇಳಬೇಕಾಗುತ್ತದೆ. ಇದೆಲ್ಲವನ್ನು ವಿನಾಯಕ ಅರಳಸುರಳಿ ಅವರು ಅನುಭವಿಸಿದ್ದಾರೆ ಅದರ ಪರಿಣಾಮ ಈ ಸಂಕಲನದ ಕಥೆಗಳಲ್ಲಿ ಡಾಳಾಗಿ ಕಾಣಿಸುತ್ತದೆ. ಒಂದೊಂದು ಕಥೆಯನ್ನು ಓದಿ ಮುಗಿಸಿದಾಗಲೂ, ಇಂಥದೇ ಪ್ರಸಂಗ ಅಲ್ಲೆಲ್ಲೋ ನಡೆದಿತ್ತಲ್ಲವಾ ಎಂದು ಯೋಚಿಸುವಂತಾಗುತ್ತದೆ.…

  • ಕವಿ, ಸಾಹಿತಿ, ಅಧ್ಯಾಪಕರಾದ ಶ್ರೀ ಹಾ.ಮ.ಸತೀಶ(ಹಾಲುಮಜಲು ಸತೀಶ) ಇವರ ಪುಸ್ತಕ ‘ಪರಸ್ಪರ’ ವೈಚಾರಿಕ ಲೇಖನಗಳನ್ನೊಳಗೊಂಡ ಹೊತ್ತಗೆಯನ್ನು ನಾನು ಓದಿರುವೆನು. ಒಟ್ಟು ೨೭ ಲೇಖನಗಳು ಶ್ರೀ ಯುತರ ಕೈಯಿಂದ ಬರೆಯಲ್ಪಟ್ಟಿದೆ.

    ಮಾನವ- ಮೊದಲು ಮಾನವನಾಗು, ಮನಸ್ಸನ್ನು ನಿರ್ಮಲವಾಗಿಟ್ಟುಕೊ, ಮೂರು ದಿನದ ಬಾಳ್ವೆಯಲಿ ಹಗರಣವೇತಕೆ? ರಗಳೆ ಬಾರದಿರಲಿ. ಮನುಜಾ ವಿಶ್ವ ಮಾನವನಾಗು, ಜಗದಗಲ ಪಸರಿಸು ಎಂಬ ಸಂದೇಶ ಮನಸೆಳೆಯಿತು, ಎಲ್ಲರಿಗೂ ಮಾದರಿ. ಮಾ ಎಂದರೆ ತಾಯಿ, ನವ ಎಂದರೆ ಹೊಸ. ತಾಯ ಗರ್ಭದಿಂದ ನವ ಮೂಡಿ, ಬುವಿಗೆ ಬಿದ್ದು, ಅಲ್ಲಿಯೂ ನವ, ಹೊಸಬೆಳಕನ್ನು ನೋಡಿ, ಪ್ರಕೃತಿ ಯ ತಾಯ ಎರಡೂ ಮಡಿಲಲ್ಲಿ ಆಡಿ,ಕೂಡಿ ಬೆಳೆದು ಮಾನವತ್ವವ ಪ್ರತಿಪಾದಿಸಿ ಬದುಕು ಮಾನವ ಎಂಬ ಸಂದೇಶ.

  • ವೃತ್ತಿಯಲ್ಲಿ ರೇಡಿಯೋ ಜಾಕಿ (RJ) ಆಗಿರುವ ನಯನಾ ಶೆಟ್ಟಿಯವರ ಚೊಚ್ಚಲ ಕೃತಿ ‘ಈ ಪಯಣ ನೂತನ’. ಈ ಕೃತಿಯ ಮೂಲಕ ನಯನಾ ಶೆಟ್ಟಿ ನಮ್ಮನ್ನೆಲ್ಲಾ ‘ನಗುವ ನಾಳೆಗಳ ಕಡೆಗೆ’ ಕರೆದೊಯ್ಯುವ ಸಾಹಸ ಮಾಡಿದ್ದಾರೆ. ಬಿಡಿ ಬಿಡಿ ಬರಹಗಳನ್ನು ಲಹರಿ ರೂಪದಲ್ಲಿ ಬರೆದು ಓದುಗರನ್ನು ಸೆಳೆಯುವ ಪ್ರಯತ್ನ ಶ್ಲಾಘನೀಯ. ಈ ಕೃತಿಗೆ ಮುನ್ನುಡಿಯನ್ನು ಬರೆದು ಶುಭ ಹಾರೈಸಿದ್ದಾರೆ ಪತ್ರಕರ್ತ, ಅಂಕಣಕಾರ ‘ಜೋಗಿ’. ಅವರು ತಮ್ಮ ಮುನ್ನುಡಿ ‘ಅಕ್ಷರಯಾನಕ್ಕೆ ಹ್ಯಾಪಿ ಜರ್ನಿ’ ಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…

    “ಮಾತನ್ನೇ ನೆಚ್ಚಿಕೊಂಡಿರುವ ವೃತ್ತಿಯಲ್ಲಿ ಇರುವವರು ಬರೆಯುವುದು ಕಡಿಮೆ. ಓದುವುದು ಇನ್ನೂ ಕಡಿಮೆ. ಬರಹಕ್ಕಿಂತ ಮಾತು ಬೇಗ ತಲುಪುತ್ತದೆ ಎಂದು ಎಲ್ಲರೂ ನಂಬಿರುವ ಯುಗದಲ್ಲಿ…

  • ಲೇಖಕರಾದ ಗಿರೀಶ ಶ್ರೀಪಾದ ಮೇವುಂಡಿ ಇವರು ‘ಓಯಸಿಸ್’ ಎನ್ನುವ ಬದುಕು-ಭಾವನೆ-ಯಶಸ್ಸು ಬಿಂಬಿಸುವ ೨೩ ಸ್ಫೂರ್ತಿಯ ಚಿಲುಮೆಗಳನ್ನು ಒಳಗೊಂಡ ಕೃತಿಯನ್ನು ಪ್ರಕಟಿಸಿದ್ದಾರೆ. ಈ ಬಗ್ಗೆ ಅವರು “ಮಾನವನ ವಿಕಾಸದ ಹಾದಿಯಿಂದ ಹಿಡಿದು ಇತ್ತೀಚಿನ ಆಧುನಿಕತೆಯ ಪ್ರಗತಿಯ ಪಥವನ್ನು ಅವಲೋಕಿಸಿದಾಗ ಈ ಅಗಾಧವಾದ ಬೆಳವಣಿಗೆಯಿಂದ ಮೂಲತಃ ನಾವೆಲ್ಲರೂ ಬದುಕಲು ಅಗತ್ಯವಿರುವ ಮೂಲಭೂತ ಅವಶ್ಯಕತೆಗಳನ್ನು ಹೊಂದಿ ಈ ವಿಕಸಿತ ಬುದ್ಧಿಯ ಪ್ರಭಾವದಿಂದ ಈ ಮೂಲಭೂತ ಅಗತ್ಯತೆಗಳಾಚೆ ಚಿಂತಿಸಿ ಇದರ ಪರಿಣಾಮವು ನಮ್ಮ ಬದುಕನ್ನು ಇನ್ನಷ್ಟು ಸರಳ ಹಾಗೂ ಸಂತೃಪ್ತಗೊಳಿಸಿ ತನ್ಮೂಲಕ ಹೆಚ್ಚಿನ ನೆಮ್ಮದಿಯಿಂದ ಕೂಡಿದ ಬದುಕನ್ನು ಸಂಭ್ರಮಿಸುವಂತಾಗಬೇಕಿತ್ತು! ಆದರೆ ಇಂದು ನಮ್ಮೆಲ್ಲರ ಬದುಕು ಇದಕ್ಕೆ ವ್ಯತಿರಿಕ್ತವಾದ ಮಾರ್ಗದಲ್ಲಿ ಸಾಗುತ್ತಿದೆ.…

  • ಹಣ ಗಳಿಸುವುದಕ್ಕಿಂತ ಗಳಿಸಿದ ಹಣವನ್ನು ಉಳಿಸಿಕೊಳ್ಳುವುದು. ಸುಮ್ಮನೇ ಹಣ ಮನೆಯಲ್ಲಿ ಭದ್ರವಾಗಿರಿಸಿಕೊಂಡರೆ ಅದು ಉಪಯೋಗಕ್ಕೆ ಬರುವುದಿಲ್ಲ. ಅದನ್ನು ಸರಿಯಾದ ಕಡೆ ಬಳಸಿಕೊಳ್ಳುವುದು, ವಿನಿಯೋಗಿಸುವುದು ಬಹು ಮುಖ್ಯ. ಹಣವನ್ನು ಬಳಸಲು ಕಲಿತವ ಕೋಟ್ಯಾಧೀಶನಾಗುತ್ತಾನೆ. ಪ್ರತಿಯೊಬ್ಬರಿಗೂ ಅಗತ್ಯವಾದ ಹಣಕಾಸಿನ ದಾರಿಯನ್ನು ಹುಡುಕಲು ಸಹಾಯ ಮಾಡಿದ್ದಾರೆ ಲೇಖಕಿ ಕಾಂಚನಾ ಹೆಗಡೆ. ಇವರು ‘ಮೈ ಮನಿ ಮ್ಯಾಪ್’ ಎನ್ನುವ ೧೪೦ ಪುಟಗಳ ಸೊಗಸಾದ ಕೃತಿಯನ್ನು ಬರೆದು ಪ್ರಕಟಿಸಿದ್ದಾರೆ.

    ‘ಮೈ ಮನಿ ಮ್ಯಾಪ್’ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಬರಹಗಾರ, ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ. ಇವರು ತಮ್ಮ ಬೆನ್ನುಡಿಯಲ್ಲಿ “ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆ"ಗಾಗಿ…

  • “ಸಮಾಜದ ಒತ್ತಡಗಳು, ಕುಟುಂಬದ ಬೇಡಿಕೆಗಳು ಹೊಸದಾಗಿ ಏನನ್ನಾದರೂ ಪ್ರಾರಂಭಿಸಲು ವಯಸ್ಸನ್ನು ದೊಡ್ಡ ತಡೆ ಎಂಬಂತೆ ನೋಡುತ್ತವೆ ಮತ್ತು ಈ ನಿರುತ್ಸಾಹಿ ವಾತಾವರಣದಲ್ಲೂ ಹೇಗೆ ಮನಸ್ಸನ್ನು ಸ್ವಸ್ಥವಾಗಿರಿಸಿಕೊಂಡು ಯಾವ ವಯಸ್ಸಿನಲ್ಲಾದರೂ ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತ ಹೋಗಬಹುದು ಎಂಬುದಕ್ಕೊಂದು ಸ್ಫೂರ್ತಿಯುತ ಉದಾಹರಣೆ ಈ ಪುಸ್ತಕ. ಪ್ರತಿ ಪಯಣವೂ ವಿಶಿಷ್ಟವಾದದ್ದು ಎಂಬ ಸರಳವಾದ ಆದರೆ ಬಹಳ ಮಂದಿ ಅರ್ಥ ಮಾಡಿಕೊಳ್ಳಲು ಸೋತಿರುವ ಸತ್ಯವನ್ನು ಅರ್ಥ ಮಾಡಿಸುವ ಪ್ರಯತ್ನವಿದು.

    ಆರಂಭಿಕ ಸೋಲುಗಳಿಂದ, ಹಣಕಾಸಿನ ತೊಂದರೆಯಿಂದ, ಸಮಾಜದ ಚುಚ್ಚು ಮಾತುಗಳಿಂದ ತಮ್ಮಿಂದ ಏನೂ ಸಾಧ್ಯವಿಲ್ಲ ಎಂಬ ನೇತ್ಯಾತ್ಮಕ ಅಭಿಪ್ರಾಯವನ್ನು ತಮ್ಮ ಬಗ್ಗೆ ತಾವೇ ತುಂಬಿಕೊಂಡು ಸಣ್ಣ ಪುಟ್ಟ ಕನಸು…

  • “ಸುಧಾ ಆಡುಕಳ ಅವರ ಕತೆ, ಕವನ, ನಾಟಕ ಹಾಗು ಪತ್ರಗಳನ್ನು ಓದುತ್ತಲೇ ಬೆಳೆದ ನನಗೆ ಈ ಕಥಾ ಸಂಕಲನ ಅವರ ಬರಹ ಮತ್ತು ಬದುಕಿನ ಅನನ್ಯತೆಯ ಉತ್ತಮ ನಿದರ್ಶನ ಅಂತೆನಿಸಿದೆ. ಇಲ್ಲಿ ವಿಜ್ಞಾನ ಶಿಕ್ಷಕಿಯಾಗಿ ವೈಜ್ಞಾನಿಕ ಮನೋಧರ್ಮದ ಕುರಿತಾದ ಅವರ ಬದ್ಧತೆ ಮತ್ತು ಬದುಕನ್ನು ರೂಪಕಗಳ ಮೂಲಕ ಹುಡುಕಹೊರಟಿರುವ ಕವಿಯ ಆದರ್ಶ ಬೇರೆಬೇರೆಯಾಗುವುದೇ ಇಲ್ಲ. ಇವೆರಡನ್ನೂ ಪಾಕಮಾಡುತ್ತ ಥಟ್ಟನೆ ಓದುಗರನ್ನು ಹೊಸ ದರ್ಶನಕ್ಕೆ ಒಡ್ಡುವ ಅವರ ನಾಟಕೀಯ ಸಮಯದ ಜಾಣ್ಮೆ ನನಗೆ ಅತಿ ಪ್ರಿಯವಾದದ್ದು. ಅವರ ಸಾಮಾಜಿಕ ಪ್ರಜ್ಜೆ ಮತ್ತು ಕಳಕಳಿ ಅವರನ್ನು ಅನೇಕ ಸೂಕ್ಷ್ಮ ಮತ್ತು ಹೆಚ್ಚಾಗಿ ಕನ್ನಡ ಸಾಹಿತ್ಯ ಪ್ರಜ್ಞೆಯ ಆಚೆಗೇ ಉಳಿದ ಸ್ತ್ರೀ ತಲ್ಲಣಗಳ ಅನ್ವೇಷಣೆಗೆ ಹಚ್ಚುತ್ತವೆ. ಕೆಳ-ಮಧ್ಯಮ ವರ್ಗದ ಹೆಣ್ಣಿನ ಸುತ್ತ ಹೆಣದಿರುವ 'ಒಂದು ಶೌಚಾಲಯದ…

  • ತಮ್ಮ ವೃತ್ತಿ ಜೀವನದ ಅನುಭವಗಳನ್ನು ದಾಖಲಿಸುವವರು ತೀರಾ ವಿರಳ. ಇದರಿಂದಾಗಿ, ಸಾವಿರಾರು ಸಮರ್ಥ ಅಧಿಕಾರಿಗಳ ಹಾಗೂ ಉನ್ನತ ಹುದ್ದೆಗಳಲ್ಲಿ ಅಪಾರ ಅನುಭವ ಗಳಿಸಿದವರ ಜೀವನಾನುಭವದ ಪಾಠಗಳು ಮುಂದಿನ ತಲೆಮಾರಿನವರಿಗೆ ಸಿಗದಂತಾಗಿದೆ. ಇದಕ್ಕೆ ಅಪವಾದವೆಂಬಂತೆ, ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ಪ್ರಿನ್ಸಿಪಾಲರಾಗಿ, ಹಲವಾರು ಸವಾಲುಗಳಿದ್ದರೂ ಅವನ್ನೆಲ್ಲ ಎದುರಿಸಿ ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಡಾ.ಉದಯ ಕುಮಾರ್ ಇರ್ವತ್ತೂರು ತಮ್ಮ ಅಮೂಲ್ಯ ಅನುಭವಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

    ಇಂತಹ ಬರಹಗಳು ಯಾಕೆ ಬೇಕು? ಎಂಬುದರ ಬಗ್ಗೆ ಮುನ್ನುಡಿಯಲ್ಲಿ ಪುರುಷೋತ್ತಮ ಬಿಳಿಮಲೆ ಅವರು ಬರೆದಿರುವ ಮಾತುಗಳು ಗಮನಾರ್ಹ: “....ಈ ಬಗೆಯ ಬರಹಗಳು ನಮಗೀಗ ಬಹಳ ಅಗತ್ಯ. ಏಕೆಂದರೆ ಇವು ಪರೋಕ್ಷವಾಗಿ ನಮ್ಮ ಶಿಕ್ಷಣ ಕ್ಷೇತ್ರದ…

  • ಕನ್ನಡ ಚಿತ್ರರಂಗದ ಸಾಹಿತಿ ಪ್ರಮೋದ್ ಮರವಂತೆ ಅವರ ಚೊಚ್ಚಲ ಕಾದಂಬರಿ ‘ತೊಂಡೆ ಚಪ್ಪರ’. ಈ ಕಾದಂಬರಿಯ ಬಗ್ಗೆ ಪ್ರಮೋದ್ ಮರವಂತೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ…

    ಬಾಲ್ಯದಲ್ಲಿ "ಬಾಲಮಂಗಳ", "ತುಂತುರು", "ಚಂಪಕ"ದಂತ ಬಣ್ಣಬಣ್ಣದ ಪುಸ್ತಕಗಳನ್ನು ಅಂಗೈ ಮೇಲಿರಿಸಿಕೊಂಡಾಗ ಮನದಾಳದಲ್ಲಿ ಹುಟ್ಟಿದ ರೋಮಾಂಚನ ಮುಂದೆ ಬಿಡದೆ ಓದಿನತ್ತ ಸೆಳೆಯುತ್ತಲೆ ಸಾಗಿತು. ಕೆಲವು ವರ್ಷಗಳ ಕಾಲ ಪಠ್ಯಪುಸ್ತಕಗಳ ಒಳಗೆ ಬಂಧಿಯಾದ ನಾನು ಮತ್ತೆ ಕಣ್ಣರಳಿಸಿ ಅರಸಿದ್ದೆ ಕಥೆ, ಕಾದಂಬರಿ ಪುಸ್ತಕಗಳನ್ನು.

    ಓದು ನನ್ನ ಅಂತರಂಗಕ್ಕೆ ಅಂಟಿಕೊಂಡಿರುವ ಒಂದು ದಿವ್ಯ ವ್ಯಸನವಾಗಿ ಸದಾ ನನ್ನನ್ನು ಕೈಹಿಡಿದು ಬರವಣಿಗೆಯ ಕ್ಷೇತ್ರಕ್ಕೆ "ದುಬಕ್" ಎಂದು…