ಪುಸ್ತಕ ಸಂಪದ

  • “ಹರಯದ ದಿನಗಳಲ್ಲಿ ಕವಿತೆಯ ಮೂಲಕ ಬರವಣಿಗೆ ಆರಂಭಿಸುವುದು ಮಾಮೂಲು. ನಂತರದ ದಿನಗಳಲ್ಲಿಯೂ ಕವಿತೆ ಕೈ ಹಿಡಿದರೆ ಬರವಣಿಗೆ ಮುಂದುವರೆಯುತ್ತದೆ, ಇಲ್ಲವಾದರೆ ಇಲ್ಲ. ಆದರೆ ಮಕ್ಕಳ ಸಾಹಿತ್ಯದ ಮೂಲಕ ಸಾಹಿತ್ಯ ಪ್ರವೇಶಿಸಿದ ಎಡೆಯೂರು ಪಲ್ಲವಿ ಅವರು 'ಭೂಮ್ತಾಯಿ ಅಜ್ಜಿ ಆದ್ಲಾ' ಮಕ್ಕಳ ಕತೆಗಳ ಸಂಕಲನ ಪ್ರಕಟಣೆಯ ಮೂಲಕ ತಾವು ಬೇರೆಯವರಿಗಿಂತ ಭಿನ್ನ ಎಂದು ಸಾಬೀತು ಪಡಿಸಿದ್ದರು. ಈಗ ಪ್ರಕಟವಾಗುತ್ತಿರುವ 'ಕುಂಡದ ಬೇರು ಕಥೆಗಳು' ಸಂಕಲನ ಪಲ್ಲವಿ ಅವರ ಸಾಹಿತ್ಯ ಚಟುವಟಿಕೆಗಳ ವಿಸ್ತರಣೆಯಂತಿದೆ. ಈ ಸಂಕಲನದ ಒಂಬತ್ತೂ ಕತೆಗಳು ಒಂದಕ್ಕಿಂತ ಮತ್ತೊಂದು ಭಿನ್ನವಾಗಿವೆ. ಈ ಭಿನ್ನತೆಯು ಕೇವಲ ಕತೆಗಳ ವಸ್ತುವಿಗೆ ಮಾತ್ರ ಸೀಮಿತವಾಗಿಲ್ಲ. ಕತೆ ಹೇಳುವುದಕ್ಕಾಗಿ ಬಳಸಿದ ತಂತ್ರ ಮತ್ತು ಕಟ್ಟುವುದಕ್ಕಾಗಿ ಬಳಸಿದ ಭಾಷೆಯಲ್ಲಿಯೂ…

  • ಗಝಲ್ ಪ್ರಿಯರಿಗಾಗಿ ‘ಕಂಸ’ ಹೊರ ತಂದಿರುವ ‘ನನ್ನವಳು ನಕ್ಕಾಗ’ ಸಂಕಲನಕ್ಕೆ ಮುನ್ನುಡಿಯನು ಬರೆದಿದ್ದಾರೆ ಆನಂದ ಭೋವಿ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವೊಂದು ಅನಿಸಿಕೆಗಳು ಇಲ್ಲಿವೆ…

    “ಅರೇಬಿಕ್ ಕಾವ್ಯದಲ್ಲಿ ಹುಟ್ಟಿಕೊಂಡ ಗಝಲ್ ಇಂದು ಕನ್ನಡದಲ್ಲಿ ಅಭಿವ್ಯಕ್ತಿಯಾಗಿ ಬೆಳೆಯುತ್ತಿದೆ. ಶೇರ್ ಎಂದು ಕರೆಯುವ ದ್ವಿಪದಿಗಳು ಪ್ರಾಸಬದ್ಧ ಕಾವ್ಯನಾತ್ಮಕ ಸೃಜನಶೀಲ ನುಡಿಗಳ ಮಿಶ್ರಣದಿಂದ ಕೇಳುಗರ ಓದುಗರ ಹೃದಯ ತಟ್ಟುವ ಜನಪ್ರಿಯವಾಗುವ ಮಟ್ಟಕ್ಕೆ ಬೆಳೆದು ನಿಂತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯದ ಕವಿತೆ ಕಟ್ಟುವ ಯುವ ಕವಿಗಳು ಗಝಲ್ ಕಾರರಾಗಿ ಗುರುತಿಸಿಕೊಳ್ಳುತ್ತಿರುವುದು ಸೋಜಿಗವೇ ಆಗಿದೆ. ಮಕ್ತಾ ಎಂದು ಕರೆಯುವ ಗಝಲ್ ನ ಕೊನೆಯ…

  • “ಪ್ರಧಾನಿ ನೆಹರೂ ಆಗ ಮಾಡಿದ ಎರಡು ತಪ್ಪುಗಳು ಐತಿಹಾಸಿಕ ಪ್ರಮಾದಕ್ಕೆ ಕಾರಣವಾದವು. ಝೀಲಂ ನದಿಯನ್ನು ದಾಟಿ ಮುಂದೆ ಹೋಗದಂತೆ ನೆಹರೂ ಮಿಲಿಟರಿಗೆ ಆದೇಶಿಸಿದರು. ನುಸುಳುಕೋರರನ್ನು ಹೊಡೆದು ಓಡಿಸುವ ಬದಲು ವಿಶ್ವಸಂಸ್ಥೆಯನ್ನು ಮಧ್ಯಸ್ಥಿಕೆಗೆ ಕರೆದರು. ಸಂಚುಕೋರರು ತೋಡಿದ ಹಳ್ಳಕ್ಕೆ ನೆಹರೂ ಬಿದ್ದರು, ದೇಶವೂ ಬಿತ್ತು. ಯಾವತ್ತೂ LoC is not a legally recognised border. ಮೂರುಮೂರು ಬಾರಿ ಯುದ್ಧಗಳಾದವು, ಮೂರು ಮೂರು ಬಾರಿ ದೇಶ ವಿಭಜನೆಯಾಯಿತು. ತಾಷ್ಕೆಂಟ್ ಒಪ್ಪಂದ, ಸಿಮ್ಲಾ ಒಪ್ಪಂದ ಅಂತ ಸಹಿಯ ಮೇಲೆ ಸಹಿ ಹಾಕಲಾಯಿತು. ಎಲ್ ಒ ಸಿ ವಿಚಾರ ಹಾಗೇ ಉಳಿಯಿತು. ಪಿಒಕೆ ಅಲ್ಲೇ ಉಳಿಯಿತು. ಭಯೋತ್ಪಾದಕರ ಹೆಬ್ಬಾಗಿಲು ಇನ್ನೂ ಈಗಲೂ ತೆರೆದೇ ಇದೆ.” ಈ ಕೃತಿಯ ಬೆನ್ನುಡಿಯಲ್ಲಿ ಕಂಡ ಸಾಲುಗಳಿವು.

  • ೧೯೩೦ ರಿಂದ ೧೯೭೫ರವರೆಗಿನ ಸಮಯದಲ್ಲಿ ದಕ್ಷಣ ಕನ್ನಡ ಜಿಲ್ಲೆಯಲ್ಲಿ ಉಂಟಾದ ಬದಲಾವಣೆಗಳೇ ‘ಉತ್ತರಾಧಿಕಾರ’ ಕಾದಂಬರಿಯ ಕಥಾನಕ. ಡಾ. ಜನಾರ್ದನ ಭಟ್ ಅವರ ಈ ಕಾದಂಬರಿಗೆ ೨೦೧೨ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಕಾಲದ ತುಳುನಾಡಿನ ಜನರ ಜೀವನ ಶೈಲಿ, ಅವರ ಬದುಕಿನಲ್ಲಿ ಸಂಭವಿಸಿದ ಏರಿಳಿತಗಳೇ ಈ ಕಾದಂಬರಿಯ ಜೀವಾಳ. ವಾಸ್ತವಿಕತೆಯನ್ನು ಮನಮುಟ್ಟುವ ಶೈಲಿಯಲ್ಲಿ ತೆರೆದಿಡುವ ಮೂಲಕ ಜನಮನ್ನಣೆ ಗಳಿಸಿದೆ.

    ಕನ್ನಡ ಸಾಹಿತ್ಯ ವಲಯದಲ್ಲಿ ಚಿರಪರಿಚಿತ ಹೆಸರು ಡಾ.ಜನಾರ್ದನ ಭಟ್ ಅವರದ್ದು. ಕಥೆ, ಕಾದಂಬರಿ, ವಿಮರ್ಶೆ, ಸಾಹಿತ್ಯದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೋಸ್ಕರ ಪರಾಮರ್ಶನ ಗ್ರಂಥಗಳ ರಚನೆ -ಹೀಗೆ ನಿರಂತರವಾಗಿ…

  • ಕನ್ನಡ ಸಾಹಿತ್ಯದಲ್ಲಿ ಕೆ. ಸತ್ಯನಾರಾಯಣರ ಕಾದಂಬರಿಗಳು ತಮ್ಮ ವಿಶಿಷ್ಟ ಶೈಲಿಯಿಂದಲೇ ಗುರುತಿಸಿಕೊಂಡಿವೆ. ಅವರ ಕಾದಂಬರಿಗಳು ಕೇವಲ ಕಥೆಯನ್ನು ಹೇಳುವುದಕ್ಕಿಂತಲೂ, ಮನುಷ್ಯನ ಜೀವನದ ಆಳವಾದ ಭಾವನೆಗಳನ್ನು, ಸಂಕೀರ್ಣ ಸಂಬಂಧಗಳನ್ನು, ಮತ್ತು ಸಮಾಜದ ವೈರುಧ್ಯಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತವೆ. ಈ ಕಾದಂಬರಿಯು ಒಬ್ಬ ವೃದ್ಧೆಯ ಕಥೆಯಿಂದ ಆರಂಭವಾಗಿ, ಆಕೆಯ ಜೀವನದ ಕೆಲವು ನೋವಿನ ಕ್ಷಣಗಳ ಜಾಡಿನಿಂದ ಸಮಾಜದ ವಿವಿಧ ಆಯಾಮಗಳನ್ನು ತೆರೆದಿಡುವ ಕಾದಂಬರಿಯಾಗಿ ರೂಪುಗೊಳ್ಳುತ್ತದೆ.

    ಕಥೆಯ ಸಾರಾಂಶ: ಒಬ್ಬ ಹಿರಿಯಾಕೆಯ ಕೆಲವು ಮಾತುಗಳಿಂದ ಆರಂಭವಾಗುವ ಈ ಕಥೆ, ಆಕೆಯ ಸಂಬಂಧಿಕರ ಜೀವನದ ವಿವಿಧ ಘಟ್ಟಗಳನ್ನು ಸಾಹಿತಿಯೊಂದಿಗೆ ಸಂಪರ್ಕಕ್ಕೆ ತಂದು, ಒಂದು ಸಂಪೂರ್ಣ ಚಿತ್ರಣವನ್ನು…

  • “ಭೂತದ ಕೋಳಿ” ಕಥಾ ಸಂಕಲನದ ಲೇಖಕರಾದ ರಾಘವೇಂದ್ರ ಬಿ. ರಾವ್ ಅವರು “ಅನು ಬೆಳ್ಳೆ” ಎಂದೇ ಪರಿಚಿತರು. ಕಾರ್ಕಳ ತಾಲೂಕಿನ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರು. ಇವರ ಸಣ್ಣ ಕತೆಗಳು ಉದಯವಾಣಿ, ಪ್ರಜಾವಾಣಿ, ಕನ್ನಡ ಪ್ರಭ, ಸುಧಾ, ತರಂಗ, ಮಯೂರ, ತುಷಾರ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

    ಹನ್ನೆರಡು ಸಣ್ಣ ಕಥೆಗಳಿರುವ ಈ ಸಂಕಲನ “ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ” ಪಡೆದಿದೆ. ಅನು ಬೆಳ್ಳೆ ಅವರಿಗೆ ಪಾತ್ರಗಳು ಮತ್ತು ಸಂದರ್ಭ ಸೃಷ್ಟಿಯ ಕಲೆ ಸಿದ್ಧಿಸಿದೆ. ಇಲ್ಲಿನ ಕತೆಗಳ ವಿವಿಧ ಪಾತ್ರಗಳು ಮನುಷ್ಯರ ವರ್ತನೆಗಳನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುತ್ತವೆ. ಇವು ವಾಸ್ತವದ ನೆಲೆಗಟ್ಟಿನಲ್ಲಿ ಬರೆದ ಕತೆಗಳಾದ ಕಾರಣ ಓದುಗರ ಮನಸ್ಸನ್ನು ತಟ್ಟುತ್ತವೆ.

    ಮೊದಲ ಕತೆ “ಗೋಲಿ ಸೋಡಾ”ದ…

  • ‘ಕನ್ನಡ ಪತ್ರಿಕಾ ಲೋಕ’ದ ಎರಡೂ ಮಾಲಿಕೆಗಳನ್ನು ಇತ್ತೀಚೆಗೆ ಓದಿದೆನು. ತುಂಬಾ ಖುಷಿಯಾಯಿತು. ಕನ್ನಡ ನಿಯತಕಾಲಿಕಗಳನ್ನು ನಿಯಮಿತವಾಗಿ ಓದುವ ಓದುಗರಿಗೆ ಇವೆರಡೂ ಪುಸ್ತಕಗಳು ‘ಅಮೂಲ್ಯ ರತ್ನಗಳು’ ಎಂದೇ ಹೇಳಬಹುದು. ಈ ಎರಡೂ ಪುಸ್ತಕಗಳಲ್ಲಿ ಒಟ್ಟು ೧೦೪ ಪತ್ರಿಕೆಗಳ ಬಗ್ಗೆ ಮಾಹಿತಿ ನೀಡಿದ್ದು ಸಂತಸದ ವಿಷಯ. ಪ್ರತಿ ಪತ್ರಿಕೆಯ ಮಾಹಿತಿ ನೀಡುವಾಗ, ಆ ಪತ್ರಿಕೆಯು ಪ್ರಕಟಗೊಳ್ಳುತ್ತಿದ್ದ ಊರು, ಅದರ ಸಂಪಾದಕರು, ಪ್ರಕಾಶಕರು ಮತ್ತು ಅದರ ಮುಖಬೆಲೆ ನೀಡುವುದರ ಜೊತೆಗೆ ಆ ಪತ್ರಿಕೆಯು ಯಾವ ಯಾವ ವಿಷಯಗಲನ್ನು ಒಳಗೊಂಡಿತ್ತು ಎಂಬ ಬಗ್ಗೆ ವಿವರವಾದ ಮಾಹಿತಿ ನೀಡಲಾಗಿದೆ. ಇಲ್ಲಿ ಪರಿಚಯಿಸಿದ ಎಷ್ಟೋ ಪತ್ರಿಕೆಗಳು ಈಗ ನಿಂತು ಹೋಗಿವೆ. ಆದರೂ ಕೂಡ ಆ ಪತ್ರಿಕೆಯ ಮಾಹಿತಿ ಓದಿದಾಗ ಮನಸ್ಸು ಅರಳುತ್ತದೆ. ಇಂಥ ಒಂದು ಪತ್ರಿಕೆ…

  • ಥ್ರಿಲ್ಲರ್ ಕಾದಂಬರಿಗಳನ್ನು ಬರೆಯುವಲ್ಲಿ ಸಿದ್ಧ ಹಸ್ತರಾಗಿರುವ ವಾಸುದೇವ್ ಮೂರ್ತಿಯವರ ನೂತನ ಕಾದಂಬರಿ ‘ಹಾವು ಏಣಿ ಆಟ’ ಈ ರೋಚಕ ಕಾದಂಬರಿಯು ಓದಿ ಮುಗಿಸುವ ತನಕ ಓದುಗರನ್ನು ತುದಿಗಾಲಿನಲ್ಲಿ ನಿಲ್ಲಿಸುವಲ್ಲಿ ಸಫಲವಾಗಿದೆ. ಈ ಕಾದಂಬರಿಯ ಬಗ್ಗೆ ಲೇಖಕರಾದ ವಾಸುದೇವ್ ಮೂರ್ತಿಯವರು ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ “ಹಾವು ಏಣಿ ಆಟ ಒಂದು ವಿಶಿಷ್ಟ ಕಥಾವಸ್ತು ಹೊಂದಿರುವ ಕಾದಂಬರಿ. ಕನ್ನಡ ಕಾದಂಬರಿ ಲೋಕದಲ್ಲಿ ಒಂದು ಹೊಸ ಪ್ರಯತ್ನ. ಇದೊಂದು "ಮೆಡಿಕೋ ಲೀಗಲ್ ಥ್ರಿಲ್ಲರ್" ಔಷಧ ವಿಜ್ಞಾನದ ಪರ ಮತ್ತು ವಿರುದ್ಧದ ಕಾನೂನಿನ ಹೋರಾಟದ ಕಥೆ. ಈ ಕಾದಂಬರಿಯಲ್ಲಿ ಒಂದು ಕೊಲೆಯ ತನಿಖೆಯಿದೆ. ಅದರ ಹಿಂದಿರುವ ಭಯಾನಕ ಸತ್ಯದ ಅನಾವರಣವಿದೆ. ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಅವ್ಯಕ್ತವಾಗಿ ಪ್ರವೇಶಿಸಿ,…

  • ಡಾ. ಅರುಣಾ ಯಡಿಯಾಳ್ ಬರೆದ ಎರಡು ಪುಟ್ಟ ಕಾದಂಬರಿಗಳ ಸಂಕಲನವೇ ‘ಮನಸೆಂಬ ಮಾಯಾಮೃಗ’. ೧೮೧ ಪುಟಗಳ ಈ ವಿಶಿಷ್ಟ ಜಂಟಿ ಕಾದಂಬರಿಗೆ ಲೇಖಕಿ ಬರೆದ ಮುನ್ನುಡಿಯ ಎರಡು ಸಾಲುಗಳು ಹೀಗಿವೆ…

    “ಮನಸ್ಸು ಎಂಬುದೊಂದು ದಟ್ಟ ಕಾನನ. ಅಲ್ಲಿ ವೈವಿಧ್ಯವಾದ ಭಾವ ಜೀವಿಗಳ ವಾಸ. ಕೆಲವೊಮ್ಮೆ ಅದ್ಯಾವುದೋ ವಿಶಿಷ್ಟ ಭಾವನೆ ಮಾಯಾಜಿಂಕೆಯಂತೆ ಮಿಂಚಿ ಮಾಯವಾಗುತ್ತೆ. ಈ ಭಾವನೆಗಳೇ ಅತಿರೇಕವಾಗಿ, ವಿಚಿತ್ರ ರೂಪ ತಾಳಿ, ಮನಸ್ಸೇ ಮಾಯಾಮೃಗವಾಗಿ, ವ್ಯಕ್ತಿಯನ್ನು, ವ್ಯಕ್ತಿತ್ವವನ್ನು, ವಾಸ್ತವಿಕ ಹಾಗು ನೈತಿಕ ನೆಲೆಗಳ ಎಲ್ಲೆ ಮೀರಿ ಹೋಗುವಂತೆ ಮಾಡಿಬಿಡುತ್ತದೆ. ಮನೋವ್ಯಾಕುಲತೆಗಳು ಮನವನ್ನು ಕಾಡಿದಾಗ, ಹೀಗಾಗುವುದು ನಿರೀಕ್ಷಿತವೇ! ಈ ಹಿನ್ನಲೆಯಲ್ಲಿ, ಎಲ್ಲರ ಅಚ್ಚು ಮೆಚ್ಚಿನ ಮನೋತಜ್ಞೆಯಾದ, ಡಾ…

  • ಖ್ಯಾತ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರ ಆತ್ಮ ಕಥೆ ‘ಪತ್ರಕರ್ತನ ಪಯಣ’ ಇತ್ತೀಚೆಗೆ ಬಿಡುಗಡೆಯಾಗಿದೆ. ಪತ್ರಕರ್ತರಾಗಿ ತಾವು ಕಂಡ, ಅನುಭವಿಸಿದ ಘಟನೆಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ಈ ಕೃತಿಯ ಬೆನ್ನುಡಿಯಲ್ಲಿ ಮಹನೀಯರಾದ ಪ್ರೊ. ಓಂಕಾರ ಕಾಕಡೆ ಮತ್ತು ಡಾ. ಬಿ.ಕೆ.ರವಿ ಅವರು ಲಕ್ಷ್ಮಣ ಕೊಡಸೆ ಅವರ ಬಗ್ಗೆ ಅಭಿಪ್ರಾಯಗಳನು ತಿಳಿಸಿದ್ದಾರೆ. “ನಾನು ಅದೆಷ್ಟೋ ಸಲ ನನ್ನಲ್ಲಿಯೇ ಅಂದುಕೊಂಡದ್ದಿದೆ. ಪ್ರತಿಭೆ ಮತ್ತು ಕಠಿಣ ಶ್ರಮ ಎರಡೂ ಒಟ್ಟಿಗೇ ಸೇರಿದರೆ ಏನಾಗಬಹುದು ಎಂಬುದಕ್ಕೆ ನೀವೊಂದು ತಾಜಾ ಉದಾಹರಣೆಯಾಗಿ ನಿಲ್ಲಬಲ್ಲಿರಿ! ನೀವು ಪತ್ರಿಕಾ ಕ್ಷೇತ್ರದಲ್ಲಿ ನಿಮ್ಮ ಬರವಣಿಗೆಯಿಂದ, ಪ್ರಾಮಾಣಿಕ ಕೆಲಸದಿಂದ, ಕರ್ತೃತ್ವಶಕ್ತಿಯಿಂದ, ಜಾಣ್ಯ, ದಕ್ಷತೆಗಳಿಂದ, ಹುರುಪು, ಹುಮ್ಮಸ್ಸಿನಿಂದ, ನಿರಂತರ…