ನಿವೃತ್ತ ಮುಖ್ಯ ಶಿಕ್ಷಕಿಯಾಗಿರುವ ಕವಯತ್ರಿ, ಲೇಖಕಿ, ಯಕ್ಷಗಾನ ಕಲಾವಿದೆ ಶ್ರೀಮತಿ ರತ್ನಾ ಕೆ ಭಟ್, ತಲಂಜೇರಿ ಅವರ ನೂತನ ಸುವಿಚಾರ ಬರಹಗಳ ಸಂಗ್ರಹ ‘ನಲ್ನುಡಿ ರತ್ನಹಾರ’ ಹೊರಬಂದಿದೆ. ಈ ಕೃತಿಯಲ್ಲಿ ೧೧೬ ನಲ್ನುಡಿಗಳಿವೆ. ಪ್ರತೀ ಪುಟಕ್ಕೆ ಒಂದು ಅಥವಾ ಎರಡರಂತೆ ಪ್ರಕಟವಾಗಿರುವ ನಲ್ನುಡಿಯನ್ನು ಓದುವುದೇ ಒಂದು ಚೆಂದ.
‘ನಲ್ನುಡಿ ರತ್ನಹಾರ' ಮುನ್ನುಡಿಯನ್ನು ಬರೆದಿದ್ದಾರೆ ಹಿರಿಯ ಗಝಲ್ ಕವಿ, ವೈದ್ಯರಾದ ಡಾ. ಸುರೇಶ ನೆಗಳಗುಳಿ. ಅವರು ತಮ್ಮ ಮುನ್ನುಡಿಯಲ್ಲಿ “ಡಿ ವಿ ಗುಂಡಪ್ಪನವರ ಆಧುನಿಕ ಭಗವದ್ಗೀತೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅವರ ಕಗ್ಗದ ಸ್ಪೂರ್ತಿ ನನ್ನಿಂದ ಧೀರತಮ್ಮನ ಕಬ್ಬ ಎಂಬ ತದ್ ರೂಪಿ ಮುಕ್ತಕ ಗಳನ್ನು ಬರೆಸಿದ್ದನ್ನು ನೆನಪಿಸುತ್ತ ಕಲ್ಲಾಗು…