`ಕಪ್ಪು ಹಲ್ಲಿನ ಕಥೆ’ ಉಮೇಶ್ ತೆಂಕನಹಳ್ಳಿ ಅವರ ಕಾದಂಬರಿಯಾಗಿದೆ. ಕೃತಿಯಲ್ಲಿ ಲೇಖಕರು ಹೀಗೆ ಹೇಳಿದ್ದಾರೆ; ನಮ್ಮ ಹಿರಿಯರಿಗೆ ಎಲ್ಲಕ್ಕಿಂತ ಮುಖ್ಯವಾಗಿ ಅನುಭವದ ಜ್ಞಾನ ಹೆಚ್ಚಾಗಿತ್ತು. ಅದಕ್ಕೆ ಇಂದಿಗೂ ಜೀವಂತ ನಿದರ್ಶನಗಳು ಕಣ್ಣ ಮುಂದೆ ನಿಲ್ಲುತ್ತವೆ. ಕೆರೆ ಕಟ್ಟೆಗಳ ಪರಿಕಲ್ಪನೆ, ಎಲ್ಲರೂ ಎಲ್ಲರಿಗೋಸ್ಕರ ಎಂಬ ಸಂತೆಯ ಪರಿಕಲ್ಪನೆ. ದೇಶವಾರು, ಪ್ರಾಂತ್ಯವಾರು ಆಹಾರ ಪದ್ಧತಿ ಇರಬಹುದು. ಹವಾಮಾನಕ್ಕೆ ಅನುಗುಣವಾಗಿ ನಮ್ಮ ಉಡುಗೆ ತೊಡಿಗೆಗಳು, ಕಾಲಕ್ಕೆ ತಕ್ಕಂತೆ ಸಂಪ್ರದಾಯಗಳ ಆಚರಣೆಗಳು, ಊರಿಗೊಂದು ಅರಳಿ ಕಟ್ಟೆ, ಆಯುರ್ವೇದದ ವೈದ್ಯಕೀಯ ಪದ್ಧತಿ, ಅಧಿಕೃತ ಆಹ್ವಾನ ಇಲ್ಲದೆ ಸುತ್ತ ಮುತ್ತಲಿನ ನೂರಾರು ಹಳ್ಳಿಯ ಲಕ್ಷಾಂತರ ಜನರನ್ನು ಒಗ್ಗೂಡಿಸಿ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಜಾತ್ರೆಗಳ ಪರಿಕಲ್ಪನೆ,…
ಪುಸ್ತಕ ಸಂಪದ
ಮಂಡ್ಯದ ಡಾ. ಬೆಸಗರಹಳ್ಳಿ ರಾಮಣ್ಣ ಕನ್ನಡದ ಹೆಸರುವಾಸಿ ಕತೆಗಾರರು. ಇದು ಅವರ ಎರಡನೆಯ ಕಥಾಸಂಕಲನ. ಅವರು 1985ರ ನಂತರ ಬರೆದ ಕತೆಗಳು ಈ ಸಂಕಲನದಲ್ಲಿವೆ (“ಕನ್ನಂಬಾಡಿ” ಎಂಬ ಮೊದಲನೆಯ ಸಂಕಲನದಲ್ಲಿ ಅವರಿ 1962ರಿಂದ 1985ರ ಅವಧಿಯಲ್ಲಿ ಬರೆದ ಸಣ್ಣ ಕತೆಗಳು ಪ್ರಕಟವಾಗಿದ್ದವು.) ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಪ್ರಕಟವಾದ ಸಂಕಲನ ಇದು.
ಕಥಾಸಂಕಲನದ ಬೆನ್ನುಡಿಯಲ್ಲಿ ಯು. ಆರ್. ಅನಂತಮೂರ್ತಿಯವರು ಬರೆದ ಮಾತುಗಳು ಹೀಗಿವೆ: ಬೆಸಗರಹಳ್ಳಿ ರಾಮಣ್ಣನವರ ಕತೆಗಳ ವಸ್ತು: ನಿಸರ್ಗಕ್ಕೆ ಪರಕೀಯರಾಗದೆ ಉಳಿದ ಒಕ್ಕಲು ಮಕ್ಕಳ ನಿತ್ಯಜೀವನದ ಸುಖದುಃಖ, ಸಣ್ಣತನ, ಅಸೂಯೆ, ಔದಾರ್ಯ ಇತ್ಯಾದಿ. ಇವು ದಟ್ಟವಾದ ಅನುಭವದಿಂದ ಹುಟ್ಟಿದ ಕಥೆಗಳಾದ್ದರಿಂದ ಭಾವಾತಿರೇಕಕ್ಕಾಗಲಿ, ಸುಳ್ಳು ಆದರ್ಶಗಳಿಗಾಗಲಿ…
ಡಾ. ಅಜಿತ್ ಹರೀಶಿ ಅವರ ನೂತನ ಕವನ ಸಂಕಲನ ‘ತೇಲಿಬಿಟ್ಟ ಆತ್ಮ ಬುಟ್ಟಿ’ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಗೀತಾ ವಸಂತ. ತಮ್ಮ ಬೆನ್ನುಡಿಯಲ್ಲಿ
“ಅವರು ಹೇಗೆ ಹುಟ್ಟೀತು ಪದ್ಯ
ಅಲೆಗಳೇಳದ ಕೊಳದ ಮಧ್ಯಎಂದು ಕವಿತೆಯಲ್ಲಿ ಕನವರಿಸುವ ಅಜಿತ್ ಹರೀಶಿಯವರು ಕಾವ್ಯವನ್ನು ಕಾದು ಧೇನಿಸಿ ಕಟ್ಟುವ ಕಸುಬುಗಾರರು. ಹಾಗೆ ಕಟ್ಟಲು ಬೇಕಾದ ದ್ರವ್ಯವಿರುವುದು ನಮ್ಮೊಳಗೇ ಎಂಬ ದಟ್ಟ ಅರಿವು ಅವರ ಬರಹದಲ್ಲಿದೆ. ಒಡಲ ನೂಲಿನಿಂದಲೇ ಜೇಡ ಜಾಲ ನೇಯುವಂತೆ ಒಡಲಲ್ಲಿ ಗುಪ್ತನಿಧಿಯಂತೆ ಅವಿತಿರುವ ನೆನಪುಗಳನ್ನು ಅವರ ಕವಿತೆಗಳು ತಮ್ಮ ಕಸುವಾಗಿ ಮಾರ್ಪಡಿಸಿ ಕೊಂಡಿವೆ. ಬದುಕಿನ ಅಸಂಗತತೆ, ಅನೂಹ್ಯ…
“ಪೌಝಿಯಾ ಸಲೀಂರವರ 'ಕುಚುಕು' ಕಥೆ ಹೆಸರಿನಲ್ಲಿಯೇ ಇದೆ. ಸ್ನೇಹಿತರ ಸಾಲುಗಳಲ್ಲಿ ಭಾವನೆಗಳ ಜೊತೆ ಉಕ್ಕಿದ, ಅನುಮಾನದ ನೆರಳಿನಲ್ಲಿ ಮನಸ್ಸನ್ನು ಚಂಚಲಿಸುವ ಗೋಡೆಗಳಿಗೆ ಕಡಿವಾಣ ಹಾಕದೆ ಬದುಕನ್ನು ಬರಡು ಮಾಡಿಕೊಳ್ಳುವುದರ ಜೊತೆಗೆ ಮನಸನ್ನು ಮೌನವಾಗುವ ಪ್ರಶ್ನೆಗಳಾಗಿ ಉಳಿದುಕೊಂಡಿರುತ್ತವೆ. ಈ ಕಥೆಯಲ್ಲಿ ಬರುವ ಸನ್ನಿವೇಶಗಳು ಹೃದಯದ ಅಂತರಂಗಕ್ಕೆ ಹೋಗಿ ಬಡಿಯುವ ಅಲೆಗಳಂತಿವೆ. ಓದುಗರ ಮನಸ್ಸಿನಲ್ಲಿ ಹಾಗೇ ಉಳಿದು ಬಿಡುವ ಪಾತ್ರಗಳು ಯೋಚನೆ ಮಾಡದೆ ತೆಗೆದುಕೊಂಡ ನಿರ್ಧಾರ ಅಂತ್ಯದ ದಾರಿಗೆ ಹತ್ತಿರ... ಮೋಸದ ಪ್ರೀತಿಯ ಬಲೆಯಲ್ಲಿ ಬೀಳುವ ಮೊದಲು ಸಾವಿರ ಬಾರಿ ಯೋಚಿಸುವ ಅಗತ್ಯ ಪ್ರತಿಯೊಬ್ಬರಿಗೂ ಬೇಕು. ಈಗಿನ ಪ್ರಪಂಚಕ್ಕೆ ಇದು ತುಂಬಾ ಹತ್ತಿರವಾದ ಕಥೆ ಎಂದರೂ ತಪ್ಪಾಗಲಾರದು.
ಇಂಥದೊಂದು ಪಯಣದಲಿ ಕಥೆಗಾರರ…ಚೆನ್ನಭೈರಾದೇವಿ, ಪುನರ್ವಸು ಅಂತಹ ಕಾದಂಬರಿಗಳನ್ನು ರಚಿಸಿದ ಅದ್ಭುತ ಕಾದಂಬರಿಕಾರ ಡಾ ಗಜಾನನ ಶರ್ಮ ಅವರು ಮಹಾಮಾಪನದ ಅಪೂರ್ವ ಕಥನವನ್ನು ‘ಪ್ರಮೇಯ’ ಎನ್ನುವ ಕಾದಂಬರಿ ಮೂಲಕ ಹೇಳಲು ಹೊರಟಿದ್ದಾರೆ. ಗಜಾನನ ಶರ್ಮ ಅವರು ಬರೆಯುವ ಕಾದಂಬರಿಗಳು ಇತಿಹಾಸದ ಯಾವುದೋ ಒಂದು ಮೂಲೆಯಲ್ಲಿ ಅಡಗಿರುವ ಸತ್ಯ ಕಥೆಯನ್ನು ಕಾಲ್ಪನಿಕವಾಗಿ ಚಿತ್ರಿಸುತ್ತಾ ಬರುತ್ತವೆ. ಇದೇ ಅವರ ಹೆಗ್ಗಳಿಕೆ. ಈ ಕಾರಣದಿಂದ ಅವರು ಬರೆಯುವ ಕಾದಂಬರಿಗಳು ಕೇವಲ ಅಂಕಿ ಅಂಶಗಳ ಪ್ರಬಂಧವಾಗದೇ, ಸ್ವಾರಸ್ಯಕರವಾದ ಕಾದಂಬರಿಯಾಗುತ್ತದೆ. ಇದೇ ಸಾಲಿಗೆ ಸೇರುವ ಕಾದಂಬರಿ ‘ಪ್ರಮೇಯ’ ಇದು ಆಳಿದವರ ಕಥೆಯಲ್ಲ ಅಳೆದವರ ಕಥೆ…
ಮಹಾಮಾಪನದ ಅಪೂರ್ವ ಕಥನದ ಕಾದಂಬರಿಗೆ ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕರಾದ…
ತಮ್ಮ ವಾಯು ಸೇನೆಯಲ್ಲಿನ ಸೇವೆಯ ದಿನಗಳನ್ನು ಪೂರ್ಣಿಮಾ ಮಾಳಗಿಮನಿಯವರು ‘ಆಕಾಶ ಇಷ್ಟೇ ಯಾಕಿದೆಯೋ’ ಎನ್ನುವ ಆತ್ಮ ಕಥೆಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ಕೃತಿಗೆ ಹೆಸರಾಂತ ಅಂಕಣಕಾರ, ಲೇಖಕ ‘ಜೋಗಿ’ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಜೋಗಿಯವರು ಬರೆದ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ…
“ವೃತ್ತಿ ಜೀವನದ ನೆನಪುಗಳು ಗಾಢವಾಗಿರುತ್ತವೆ. ಅದರಾಚೆಗಿನ ಬದುಕಿನ ಘಟನೆಗಳಲ್ಲಿ ಅಂಥ ವೈಶಿಷ್ಟವೇನೂ ಇರುವುದಿಲ್ಲ. ಹುಟ್ಟು, ಸಾವುಗಳ ನಡುವೆ ಬಂದುಹೋಗುವ ಗೆಳೆಯರು, ಕುಟುಂಬಸ್ಥರು, ಪರಿವಾರದವರ ಜತೆಗಿನ ಒಡನಾಟದಲ್ಲಿ ಸಂತೋಷ ಕಾಣಬಹುದು. ಆದರೆ ಸಾರ್ಥಕತೆ ಕಾಣುವುದಕ್ಕೆ ವೃತ್ತಿ ಜೀವನ ಅತ್ಯಗತ್ಯ. ಅನೇಕರ ಆತ್ಮಚರಿತ್ರೆಗಳಲ್ಲಿ ಅವರ ವೃತ್ತಿ ಬದುಕಿನ ವಿವರಗಳೇ…
“ಯೀಟ್ ದಿನ ಕತ್ಲು ಕೋಣ್ಯಾಗೆ ಬುಡ್ಡಿ ದೀಪದ್ ಮಬ್ಬು ಬೆಳ್ಕಲ್ಲಿ ಯಾರ್ ಯಾರಿಗೋ ಸೆರಗಾಸಿ ; ಮೈನ ಅವರಿಗೊಪ್ಸಿದ್ ಕೈಗಳು, ಇವತ್ತು ಕುವೆಂಪು ಸರ್ಕಲ್ನಾಗೆ, ಶಂಕರ್ ನಾಗ್ ಆಟೋ ಸ್ಟಾಂಡ್ ರೋಡ್ನಾಗೆ , ಸಂತ್ಯಾಗಿರೋ ನಾಕ್ ಮಂದಿ ತಾವ್ ನಿಂತು. ಕನ್ನಡ ಪುಸ್ತಕಗಳನ್ನ ಕೈಲಿಡ್ದು “ ಅಣ್ಣೋ ತೇಜಸ್ವಿಯವರ್ದು ಕರ್ವಾಲೋ, ಮಾದ್ಹೇವಣ್ಣಂದು ಎದೆಗೆ ಬಿದ್ದ ಅಕ್ಷರ, ಕುವೆಂಪುರವರದ್ದು ಮಂತ್ರ ಮಾಂಗಲ್ಯ, ಬೇಂದ್ರೆ ಅಜ್ಜಂದು ನಾಕುತಂತಿ. ಇವೆಲ್ಲಾ ಕನ್ನಡ ಪುಸ್ತಕಗಳು ಕಣಣ್ಣ, ಒಂದೇ ಒಂದ್ ಪುಸ್ತಕ ತಗೋ ಬಾ ಅಣ್ಣ, ಬಾರಕ್ಕ, ಸಾರ್, ಮೇಡಂ ಅಂತ ಕೂಗಿ -ಕೂಗಿ ಕರ್ದು, ನಾನಾ ನಮೂನಿ ಕನ್ನಡ ಸಾಹಿತ್ಯ ಪುಸ್ತಕಗಳನ್ನ ಮಾರಿ ಇಂದು ಬದ್ಕ ಕಟ್ಕೊಂಡಿವ್ನಿ. ಅವತ್ ನಾನು ಸೂಳೆ ದಿಟ, ಆದ್ರೆ ಇವತ್ ನಾನ್ ಸೂಳೆ ಅಲ್ಲ ಕನ್ರಪ್ಪೋ ಅಂತ…
“ವೈಚಿತ್ರ್ಯಗಳಿಂದ ಕೂಡಿದ ಬದುಕೇ ಒಂದು ಬವಣೆಯ ಯಾತ್ರಾ-ಅಯನದಂತೆ! ಅಲಿಯುವುದು, ಅರಸುವುದು, ತೊಳತೊಳಲಿ ನೆಲೆಗಾಣದೇ ಅಂತಿಮ ಅಳಿದು ಹೋಗುವುದು. ಪ್ರಾಯಶಃ ಇದುವೇ ಜೀವನಕ್ರಮವೇ! ಅಥವಾ ಜೀವಿತಾವಧಿಗೆ ಹಿಡಿದ ಕೈಗನ್ನಡಿಯ ಮಾದರಿಯೇ? ಅರ್ಥವಾಗದ ನಿರೀಕ್ಷಣವಿದು. ಕೇಳಲು ತಾತ್ವಿಕ ವಿಷಯ ವಾದರೂ; ಯಾಂತ್ರಿಕ ಗುಣಧರ್ಮದಲ್ಲಿನ ಮನುಷ್ಯ-ಪಾತ್ರವು ಕೇವಲ ತೃಣು-ಅಣು- ಕಣವಾಗಿಯೇ ಇರಿಸಿ, ನಶಿಸಿ ಅಸುನೀಗಿಸುವುದು. ಇದು ಪ್ರಾಕೃತಿಕ-ವಿಕಲ್ಪವಲ್ಲದಿದ್ದರೂ ಸುಕೃತದೊಳಗಿನ ಸೂಕ್ಷ್ಮ ಸಂವೇದನೆಯ ವೈರುಧ್ಯವೂ ಹೌದು! ಇಂಥ ನಿಂತ ನೆಲವೇ ಅವಿರತ ಅಸ್ತಿತ್ವದ ಬುನಾದಿಯನ್ನರಿಸಿರುವಾಗ; ಅಸ್ಮಿತೆಯ ಪ್ರಶ್ನೆ ಧುತ್ತೆಂದು ಮೆದುಳನ್ನೇರಿ ಅನ್ಯವಿಚಾರಗಳಿಗೆ…
ಕಿತ್ತೂರು ಇತಿಹಾಸವನ್ನು ಕುರಿತು ಈವರೆಗೆ ಬಂದಿರುವ ಕಾದಂಬರಿಗಳನ್ನು ಗಮನಿಸಿದಾಗ, ಕಣ್ಣು ಹಾಯಿಸಿದಾಗ ಈ ಮಂಚೆ ಬಂದಿರುವುಗಳಿಗಿಂತ ಉತ್ಕೃಷ್ಟ ಮಟ್ಟದ, ವಾಸ್ತವಿಕ ಐತಿಹಾಸಿಕ ತಳಹದಿಯ ಮೂಲಕ ರಾಣಿ ಚೆನ್ನಮ್ಮಾಜಿ ಮತ್ತು ಸಮಕಾಲಿನ ಪಾತ್ರಗಳನ್ನು ಜೀವಂತವಾಗಿರಿಸುವ ಎಲ್ಲಾ ಯತ್ನಗಳು ಮಂಜುನಾಥ ಅವರಿಂದ ನಡೆದಿದೆ. ಸುಮಾರು ಏಳು ವರ್ಷಗಳ ನಿರಂತರ ಅಧ್ಯಯನ ಪ್ರವಾಸ ಕಲಿಕೆಯ ಮೂಲಕ ಗಂಡು ಮೆಟ್ಟಿನ ರಾಣಿ ದಿಟ್ಟ ಚೆನ್ನಮ್ಮನ ಗಟ್ಟಿ ಕಥೆ ಹೊರಹೊಮ್ಮಿದೆ. ಇಲ್ಲಿಯವರೆಗಿನ ಕಿತ್ತೂರು ಇತಿಹಾಸ ಸಂಶೋಧನೆಯ ಲೋಪವೆಂದರೆ ಕಿತ್ತೂರು ಎಂದರೆ ಕೇವಲ ಚೆನ್ನಮ್ಮ ಮತ್ತು ಬ್ರಿಟಿಷರ ಮಧ್ಯೆ ನಡೆದ ಕಾಳಗ ಎಂಬಂತಾಗಿರುವುದು. ಇದು ಸತ್ಯವೂ ಹೌದು ಇದಷ್ಟೇ ಎನ್ನುವುದು ಅಸತ್ಯವೂ ಹೌದು. ಇಲ್ಲಿಯವರೆಗಿನ ಸಂಶೋಧನೆಯಲ್ಲಿ ಅರಮನೆ ಮತ್ತು…
ಸರ್ ಆರ್ಥರ್ ಕಾನನ್ ಡಾಯ್ಲ್ ತನ್ನ ಪತ್ತೇದಾರಿ ಕಾದಂಬರಿಗೋಸ್ಕರ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಎನ್ನುವ ಪತ್ತೇದಾರನ ಪಾತ್ರವನ್ನು ಕಾಲ್ಪನಿಕ ಪಾತ್ರ ಎಂದು ಓದುಗರು ನಂಬಲೇ ಇಲ್ಲ. ಅಂತಹ ಒಂದು ಕಾಲ್ಪನಿಕ ಪಾತ್ರ ಬಿಡಿಸಿದ ೭ ರೋಚಕ ಸಾಹಸ ಕಥೆಗಳು ಈ ಕೃತಿಯಲ್ಲಿವೆ.
ಅಂಗಿಯ ಗುಂಡಿ, ಚಪ್ಪಲಿಗಂಟಿದ ಕೆಸರು, ಮೇಜನ್ನು ತಯಾರಿಸಲು ಬಳಸಿದ ಮರ, ವ್ಯಕ್ತಿಯೊಬ್ಬ ಪೆನ್ನನ್ನು ಹಿಡಿಯುವ ರೀತಿ, ನಡಿಗೆಯಲ್ಲಿರುವ ಚೂರೇ ಚೂರು ವಕ್ರತೆ, ಕೋಣೆಯಲ್ಲಿನ ಪರಿಮಳ, ಕರವಸ್ತ್ರಕ್ಕಂಟಿದ ಕಣ್ಣೀರು- ನಾವೆಲ್ಲ ನಿರ್ಲಕ್ಷಿಸಿ ಮುನ್ನಡೆಯಬಹುದಾದ ಇಂಥ ಸಣ್ಣ ವಿಷಯಗಳೇ ಷರ್ಲಾಕ್ ಹೋಮ್ಸ್ ನನ್ನು ಹಿಡಿದು ನಿಲ್ಲಿಸುತ್ತಿದ್ದವು. ಅಪರಾಧದ ಸ್ಥಳದಲ್ಲಿ ಕಂಡ ನಗಣ್ಯವೆನ್ನುವಂತೆ ತೋರುವ…