ಪುಸ್ತಕ ಸಂಪದ

  • ವೀರಣ್ಣ ಮಡಿವಾಳರ ಇವರು ಬರೆದ ‘ನಾಗರ ನುಂಗಿದ ನವಿಲುʼ ಸಂಕಲನದಲ್ಲಿ ೫೪ ಕವಿತೆಗಳಿವೆ. ಈ ೧೨೦ ಪುಟಗಳ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಪುರುಷೋತ್ತಮ ಬಿಳಿಮಲೆ ಇವರು. ಇವರ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

    “ವೀರಣ್ಣ ಮಡಿವಾಳರ ಬಹಳ ತೀವ್ರತೆಯಿಂದ ಬರೆಯುತ್ತಿರುವ ಕವಿ. ಅವರಿಗೆ ಬರವಣಿಗೆ ಎಂಬುದು ಬದುಕಲು ಬೇಕಾದ ಒಂದು ಉತ್ಕೃಷ್ಟ ಬದ್ಧತೆ. ಉಸಿರಾಡಲು ಬೇಕಾದ ಗಾಳಿ ಮತ್ತು ಸಂಭ್ರಮಿಸಲು ಬೇಕಾದ ಒಂದು ವಸ್ತು. ಹಾಗಾಗಿ ಎಲ್ಲಿಯೂ ಅವರ ಅಕ್ಷರಗಳು ಲೋಲುಪತೆಯಿಂದ ನರಳುವುದಿಲ್ಲ. ಕೆಲವು ತಿಂಗಳುಗಳ ಹಿಂದೆ ಸರಕಾರೀ ಶಾಲೆಗಳ ವಿಲೀನ ಕ್ರಮ ವಿರೋಧಿಸಿ ವೀರಣ್ಣನವರು ಬಹಳ ದಿಟ್ಟವಾಗಿ ವಾಸ್ತವದ ಬಗ್ಗೆ ಬರೆದಿದ್ದರು. ಸರಕಾರವು…

  • ಖ್ಯಾತ ಮರಾಠಿ ಲೇಖಕ ಅಶೋಕ ಪವಾರ್ ಅವರ ಆತ್ಮಕಥನವು ‘ಬಿಡಾರ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಭಾಷಾಂತರವಾಗಿದೆ. ಖ್ಯಾತ ಅನುವಾದಕರಾದ ಚಂದ್ರಕಾಂತ ಪೋಕಳೆ ಇವರು ಕನ್ನಡಕ್ಕೆ ತಂದಿದ್ದಾರೆ. ಸುಮಾರು ೨೫೦ ಪುಟಗಳ ಈ ಕಾದಂಬರಿಯ ಆಯ್ದ ಭಾಗ ಮತ್ತು ಅನುವಾದಕರಾದ ಚಂದ್ರಕಾಂತ ಪೋಕಳೆ ಅವರ ಮಾತುಗಳು ಇಲ್ಲಿವೆ...

    ಚಂದ್ರಕಾಂತರು ಕಂಡಂತೆ “ಮರಾಠಿಯಲ್ಲಿ ದಲಿತ ಆತ್ಮಕಥೆಗಳಿಗೆ ವಿಶಿಷ್ಟ ಸ್ಥಾನವಿದೆ. ಮರಾಠಿಯ ಹಲವು ಆತ್ಮಕಥೆಗಳು ಕಾದಂಬರಿಯ ಸ್ವರೂಪವನ್ನು ಹೊಂದಿ ರಸವತ್ತಾಗಿ ಓದಿಸಿಕೊಂಡು ಹೋಗುತ್ತವೆ. ಮರಾಠಿ ಆತ್ಮಕಥೆಗಳ ವೈಶಿಷ್ಟ್ಯವೆಂದರೆ, ವಿವಿಧ ವ್ಯವಸಾಯದಲ್ಲಿ ತೊಡಗಿದ ವಿವಿಧ ಜಾತಿ ಸಮುದಾಯದವರೂ ಆತ್ಮಕಥೆಯ ರಚನೆಯಲ್ಲಿ ತೊಡಗಿದ್ದು. ಎಪ್ಪತ್ತರ ದಶಕದಲ್ಲಿ ಆತ್ಮಕಥೆಗಳಿಗೆ…

  • ಕಾಲ ಬದಲಾದಂತೆ ಯಕ್ಷಗಾನ ಕಲೆಯ ಸ್ವರೂಪವೂ ಬದಲಾಗುತ್ತಾ ಸಾಗಿದೆ. ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನ ಪ್ರಸಂಗವು ಕಾಲಮಿತಿಗೆ ಒಳಪಟ್ಟು, ಈಗ ನಡುರಾತ್ರಿಯವರೆಗೆ ಮಾತ್ರ ನಡೆಯುತ್ತಿದೆ. ಇದೇ ಸಮಯದಲ್ಲಿ ಪ್ರಸಂಗಗಳ ಸ್ವರೂಪ, ಕಲಾವಿದರ ಬವಣೆಗಳನ್ನು ಸವಿವರವಾಗಿ ತಿಳಿಸುವ ಹೊತ್ತಗೆಯೊಂದು ಬಿಡುಗಡೆಯಾಗಿದೆ. ಯಕ್ಷಪ್ರೇಮಿ ಲೇಖಕರಾದ ಸೃಜನ್ ಗಣೇಶ್ ಹೆಗಡೆ ಅವರು ಬರೆದ ‘ಉತ್ಕಟ' ಎಂಬ ೯೮ ಪುಟಗಳ ಈ ಪುಟ್ಟ ಪುಸ್ತಕದಲ್ಲಿ ಯಕ್ಷಗಾನ, ಕಲಾವಿದರ ಬದುಕು, ಉಳಿದುಕೊಂಡ ಮೂಲ ಸತ್ವ ಬಗ್ಗೆ ಬಹಳ ಸೊಗಸಾದ ಬರವಣಿಗೆ ಇದೆ. ಸೃಜನ್ ಅವರು ತಮ್ಮ ಪುಸ್ತಕದಲ್ಲಿ ಬರೆದ ಲೇಖಕರ ಮಾತಿನಿಂದ ಆಯ್ದ ಭಾಗ ಇಲ್ಲಿದೆ...

    “ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಮಲೆನಾಡಿನ ಮೂಲೆ ಮೂಲೆಯಲ್ಲಿಯೂ…

  • ಚಂದ್ರಕಾಂತ್ ಕೆ.ಎಸ್. ಇವರು ‘ಮಹಾಭಾರತದ ಜೀವನ ಸಂದೇಶ' ಎಂಬ ಪುಟ್ಟ ಪುಸ್ತಕದಲ್ಲಿ ನಮ್ಮ ಜೀವನಕ್ಕೆ ಅಗತ್ಯವಾದ ಹಲವಾರು ವಿಷಯಗಳನ್ನು ಕಟ್ಟಿಕೊಟ್ಟಿದ್ದಾರೆ. ಸುಮಾರು ೮೬ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಜಗದೀಶ ಶರ್ಮಾ ಇವರು. ಇವರು ತಮ್ಮ ಮುನ್ನುಡಿಯಲ್ಲಿ ಬರೆದ ವಿಷಯಗಳನ್ನು ಆಯ್ದು ಇಲ್ಲಿ ನೀಡಲಾಗಿದೆ. ಓದುವಿರಾಗಿ...

    “ಮಹಾಭಾರತವನ್ನು ವಿಶ್ವಕೋಶ ಎಂದು ಕರೆಯಬೇಕು. ಅದರಲ್ಲಿ ಅಷ್ಟು ವಿಷಯಗಳು ಆಡಕವಾಗಿವೆ. ವಿಶೇಷವೆಂದರೆ ಅಂದೆಂದೋ ರಚಿತವಾದ ಆ ಕೃತಿ ಇಂದಿಗೂ ಸಮೃತವಾಗುವಂತಿದೆ. ಹಾಗಾಗಿಯೇ ಇದು ಮುಂದಕ್ಕೂ ಸಲ್ಲುತ್ತದೆ. ಮಹಾಭಾರತದ ಈ ಗುಣವೇ ಅದು ಇಂದಿಗೂ ಅಸ್ತಿತ್ವದಲ್ಲಿ ಉಳಿಯುವುದಕ್ಕೆ ಕಾರಣ. ಭಾರತದ ಉದ್ದಗಲದ ಮಾತುಕತೆಗಳಲ್ಲಿ,…

  • ‘ಪ್ರೇಮಾಯತನ’ ಜಬೀವುಲ್ಲಾ ಎಂ.ಅಸದ್ ಅವರ ಕವನ ಸಂಕಲನ. ಈ ಕೃತಿಗೆ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರು ಬೆನ್ನುಡಿ ಬರಹ ಬರೆದಿದ್ದಾರೆ. ಏಕಾಂಗಿಯ ಕನವರಿಕೆಗಳು ಮೂಲಕ ಕಾವ್ಯಲೋಕ ಪ್ರವೇಶಿಸಿದ ಅವರ ಆಧ್ಯಾತ್ಮಿಕ ಸ್ಪರ್ಶ ಪಡೆದ ಎರಡನೆ ಸಂಕಲನ ಗಾಳಿಗೆ ಕಟ್ಟಿದ ಗೆಜ್ಜೆಯ ಮೂಲಕ ಧೃಡವಾದ ಹೆಜ್ಜೆಯೂರಿ ಬೆಳೆಯುತ್ತಿದ್ದಾರೆ. ಅವರ ಕಾವ್ಯಾಭಿವ್ಯಕ್ತಿ ಮಾಗಿದೆ. ಅವರೊಳಗಿದ್ದ ಚಿತ್ರಕಾರ, ವಿಮರ್ಶಕ ಹೊರಬಂದು ಅವರ ಬರವಣಿಗೆಗೆ ಹೊಸ ಆಯಾಮ ನೀಡುತ್ತಿರುವುದು ವಿಶೇಷ ಎಂದಿದ್ದಾರೆ ಡಾ. ಮೀರಾಸಾಬಿಹಳ್ಳಿ ಶಿವಣ್ಣ.

    ಪ್ರೇಮಾಯತನ ಕೃತಿಗೆ ಮುನ್ನುಡಿಯನ್ನು ಬರೆದಿದಾರೆ ಲೇಖಕರಾದ ನಟರಾಜ್ ಕೆ ಪಿ ಇವರು. ಇವರು ತಮ್ಮ ಮುನ್ನುಡಿಯಲ್ಲಿ ಅಭಿಪ್ರಾಯ ಪಟ್ತಂತೆ “ಯುವ ವಿಮರ್ಶಕ ಜಬಿವುಲ್ಲಾ ಎಂ…

  • ಗಜಲ್ ಗಳನ್ನು ಆಸ್ವಾದಿಸಬಲ್ಲ ಗಜಲ್ ಪ್ರೇಮಿಗಳಿಗಾಗಿ ಮಲ್ಲಿನಾಥ ಶಿ ತಳವಾರ ಇವರು ‘ಗಜಲ್ ಗುಲ್‍ಮೊಹರ್’ ಎಂಬ ಬಹಳ ಸೊಗಸಾದ ಕೃತಿಯನ್ನು ಹೊರತಂದಿದ್ದಾರೆ. ಆಕರ್ಷಕ ಮುಖಪುಟದ ಸುಮಾರು ೨೬೦ ಪುಟಗಳ ಈ ಪುಸ್ತಕವು ಗಜಲ್ ಪ್ರೇಮಿಗಳಿಗೆ ಖಂಡಿತಾ ಇಷ್ಟವಾಗುವ ಕೃತಿ. ಪುಸ್ತಕದ ಮುನ್ನುಡಿಯಲ್ಲಿ ಕಂಡ ಕೆಲ ಸಾಲುಗಳು ಹೀಗಿವೆ...
    ಯಾವ ಪ್ರೇಮಿಯೂ ತನ್ನ ಎದೆಗಾದ ಗಾಯವು ಬೇಗ ಗುಣವಾಗಲಿ ಎಂದು ಬಯಸಲಾರ - ಆ ಮಧುರ ಯಾತನೆಯೇ ಗಜಲ್.
    ಗಜಲ್, ನೋವಿನ ಜನ್ದಾಜ್ ಹೊತ್ತು ನಡೆಯುತ್ತಿರುವ ಹೃದಯವಂತ.
    ಗಜಲ್, ಹೆಣ್ಣು: ಆಕೆಯ ಬಳುಕು-ಬಾಗು, ಉರ್ದು ಹೊರತುಪಡಿಸಿ ಬೇರೆ ಯಾವ ಭಾಷೆಗೂ ದಕ್ಕಿಲ್ಲ
    ಗಜಲ್, ಉರ್ದು, ಅರಬ್‍ನ ಕೋಹಿನೂರು. ಬೆಳಕಿನ ಮಲೆ.
    ಗಜಲ್, ಇಡೀ ಜಾಗತಿಕ ವಲಯವನ್ನೇ ಪರವಶಗೊಳಿಸುವ ಅರಬ್…

  • ಪತ್ರಕರ್ತ, ಲೇಖಕರಾದ ಕೃಷ್ಣಮೂರ್ತಿ ಹೆಬ್ಬಾರ ಇವರು ಸಂಪಾದಿಸಿದ ಕೃತಿಯೇ ‘ಜನವಾಣಿ' ಅವರ ಪ್ರಕಾರ ಸಾಕಷ್ಟು ದೇಶಗಳಲ್ಲಿ ಅಗ್ನಿಪಥದಂತಹ ಯೋಜನೆಗಳಿವೆ. ಅಮೇರಿಕಾ ಸಹಿತ ಕೆಲವು ದೇಶಗಳು ತನ್ನ ಎಲ್ಲಾ ಪ್ರಜೆಗಳಿಗೆ ಎರಡು ವರ್ಷ ಸೈನ್ಯದಲ್ಲಿ ಸೇವೆಯನ್ನು ಕಡ್ಡಾಯ ಮಾಡಿದೆ. ಆದರೆ ಭಾರತ ದೇಶದಲ್ಲಿ ಈ ರೀತಿಯ ಕಾನೂನು ಇಲ್ಲ. ಅವರ ‘ಜನವಾಣಿ’ ನುಡಿನೋಟಗಳ ಆಯ್ದಭಾಗ ನಿಮ್ಮ ಓದಿಗಾಗಿ...

    ಮಾಧ್ಯಮಿಕ, ಪದವಿ ಶಿಕ್ಷಣ ಮುಗಿಸಿ ಖಾಲಿ ತಿರುಗುತ್ತಿರುವ ಯುವಕ, ಯುವತಿಯರಲ್ಲಿ ಅರ್ಹರನ್ನು ಆಯ್ದು ಅವರಿಗೆ ಶಿಸ್ತು, ದೇಶಭಕ್ತಿ ಕಲಿಸುತ್ತ ಕೈತುಂಬ ಸಂಬಳ ಕೊಡುವ ನಾಲ್ಕು ವರ್ಷಗಳ ನಂತರ ಒಂದಿಷ್ಟು ಹಣ ಕೈಗಿಟ್ಟು ಬೇರೆ ಉದ್ಯೋಗ ಮಾಡುವ ಅಥವಾ ಸೈನ್ಯದಲ್ಲೇ ಮುಂದುವರಿಯುವ ಅಪೂರ್ವ ಅಗ್ನಿಪಥ…

  • “ಅಪ್ಪ ಕಾಣೆಯಾಗಿದ್ದಾನೆ” ಕಥಾ ಸಂಕಲನವು ಒಟ್ಟು ಹತ್ತು ಕಥೆಗಳನ್ನು ಒಳಗೊಂಡಿದೆ. ಬಹು ಪಾಲು ಈ ಕಥೆಗಳಲ್ಲಿ ಅಪ್ಪನಂತಹ ಗಂಡಸು ಪ್ರಾಣಿಗಳು ಕಾಣೆಯಾಗಿಯೇ ಹೋಗಿದ್ದಾರೆ, ಅಪ್ಪ ಇಲ್ಲಿ ಪ್ರತಿಮೆ ಮಾತ್ರ ಆಗಿದ್ದಾನೆ ಎನ್ನುವುದು ನನ್ನ ಅಭಿಮತ. ಲೇಖಕರಾದ ಬೇಲೂರು ರಘುನಂದನ್ ಅವರ ಈ ಕಥಾ ಸಂಕಲನ ಓದಿದ ಬಳಿಕ ನನಗನಿಸಿದ್ದು...

    “ಕವಿಯೊಬ್ಬ ಸಾಮಾನ್ಯರಿಗಿಂತ ಭಿನ್ನವಾಗುವುದು ಹೇಗೆ? ಇದು ಮಿಲಿಯನ್ ಡಾಲರ್ ಪ್ರಶ್ನೆ.ಬಹುಶಃ ಕವಿ ತನ್ನ ಅನುಭವಗಳನ್ನು ಪದಗಳಲ್ಲಿ ಕಟ್ಟಿಕೊಡುವ ಪ್ರತಿಭೆ ಹೊಂದಿರುತ್ತಾನೆ. ಯಾರು ಅದನ್ನು ಮತ್ತೆ-ಮತ್ತೆ ದುಡಿಸಿಕೊಳ್ಳುತ್ತಾರೊ ಆತ ಅದ್ಭುತ ಕವಿಯಾಗುತ್ತಾನೆ. ಪದಗಳು ಸಂತೆಯಲ್ಲಿ ಸಿಗುವುದಿಲ್ಲ ಓದಿನಲ್ಲಿ ಸಿಗುತ್ತವೆ. ಜನರ ಮಧ್ಯದ ಒಡನಾಟದಲ್ಲಿ…

  • ವೃತ್ತಿಯಲ್ಲಿ ಶಿಕ್ಷಕರಾದ ಉದಯೋನ್ಮುಖ ಬರಹಗಾರರಾದ ಗುರುಪ್ರಸಾದ್ ಕಂಟಲಗೆರೆ ಅವರು ತಮ್ಮ ಹಾಸ್ಟೆಲ್ ದಿನಗಳ ಅನುಭವಗಳನ್ನು ಬಹಳ ಸೊಗಸಾಗಿ ‘ಟ್ರಂಕು ತಟ್ಟೆ' ಎಂಬ ಪುಸ್ತಕದ ಮೂಲಕ ಹೊರತಂದಿದ್ದಾರೆ. ೧೩೬ ಪುಟಗಳ ಪುಟ್ಟ ಪುಸ್ತಕದಲ್ಲಿ ಬರೆದಿರುವ ಗುರುಪ್ರಸಾದ್ ಇವರ ಹಾಸ್ಟೆಲ್ ಅನುಭವಗಳು ಬಹಳಷ್ಟು ಹಾಸ್ಟೇಲ್ ವಾಸಿಗಳ ಅನುಭವವೂ ಆಗಿರಬಹುದು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ಹೀಗಿವೆ...  

    “ನಮ್ಮ ಅಮೂಲ್ಯ ಬಾಲ್ಯವನ್ನ ಸರ್ಕಾರಿ ಹಾಸ್ಟೆಲ್‍ನಲ್ಲಿ ಒಟ್ಟಿಗೆ ಕಳೆದಿದ್ದ ನಾವು, ಬೆಳೆದು ದೊಡ್ಡವರಾದ ಮೇಲೆ ಅಲ್ಲಿನ ಸ್ವಾರಸ್ಯಕರ ಬದುಕನ್ನ ಸಿಕ್ಕಿದಾಗಲೆಲ್ಲ ಅಗಿದು ಜಗೆಯುತ್ತಿದ್ದೆವು. ಮತ್ತೆ ಮತ್ತೆ ನೆನೆದು ಪುಳಕಗೊಳ್ಳುತ್ತಿದ್ದೆವು. ಅಲ್ಲಿನ ಕೆಲ…

  • ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯವರ ಸೌಜನ್ಯದಿಂದ ಪ್ರಕಟವಾದ ಪುಸ್ತಕ ‘ಹೊಸಗನ್ನಡ ಕಾವ್ಯಶ್ರೀ’. ಈ ಪುಸ್ತಕದ ಮುದ್ರಣವಾಗಿ ಈಗಾಗಲೇ ಆರು ದಶಕಗಳು ಸಂದಿವೆ. ಆದರೂ ಅಂದಿನ ಕವಿಗಳ ಹೊಸಗನ್ನಡ ಕಾವ್ಯಗಳು ಮನಸ್ಸಿಗೆ ಮುದ ನೀಡುತ್ತಿವೆ. ಅಂದಿನ ಸಮಯದ ಭಾಷಾ ಪ್ರಯೋಗ, ವಿಷಯ ವಸ್ತುಗಳು ಹೊಸ ಕವಿಗಳಿಗೆ ಇನ್ನಷ್ಟು ಕಲಿಯುವ ಹುಮ್ಮಸ್ಸು ಮೂಡಿಸುತ್ತದೆ. ಈ ಕೃತಿಯ ಕವನಗಳನ್ನು ಸಂಗ್ರಹಿಸಿದವರು ‘ವರಕವಿ’ ದ ರಾ ಬೇಂದ್ರೆ ಹಾಗೂ ಸಾಹಿತಿ ಎಂ. ಮರಿಯಪ್ಪ ಭಟ್ ಇವರು. 

    ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಅಂದಿನ ಮದರಾಸಿನ ಶ್ರೇಷ್ಟ ನ್ಯಾಯಾಲಯದ ಪ್ರಧಾನ ಕಾರ್ಯದರ್ಶಿಗಳಾದ ಪಿ ವಿ ರಾಜಮನ್ನಾರ್ ಇವರು. ಅವರು ತಮ್ಮ ಮುನ್ನುಡಿಯಲ್ಲಿ “ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿಯೂ…