ಪುಸ್ತಕ ಸಂಪದ

  • ನಿವೃತ್ತ ಮುಖ್ಯ ಶಿಕ್ಷಕಿಯಾಗಿರುವ ಕವಯತ್ರಿ, ಲೇಖಕಿ, ಯಕ್ಷಗಾನ ಕಲಾವಿದೆ ಶ್ರೀಮತಿ ರತ್ನಾ ಕೆ ಭಟ್, ತಲಂಜೇರಿ ಅವರ ನೂತನ ಸುವಿಚಾರ ಬರಹಗಳ ಸಂಗ್ರಹ ‘ನಲ್ನುಡಿ ರತ್ನಹಾರ’ ಹೊರಬಂದಿದೆ. ಈ ಕೃತಿಯಲ್ಲಿ ೧೧೬ ನಲ್ನುಡಿಗಳಿವೆ. ಪ್ರತೀ ಪುಟಕ್ಕೆ ಒಂದು ಅಥವಾ ಎರಡರಂತೆ ಪ್ರಕಟವಾಗಿರುವ ನಲ್ನುಡಿಯನ್ನು ಓದುವುದೇ ಒಂದು ಚೆಂದ.

    ‘ನಲ್ನುಡಿ ರತ್ನಹಾರ' ಮುನ್ನುಡಿಯನ್ನು ಬರೆದಿದ್ದಾರೆ ಹಿರಿಯ ಗಝಲ್ ಕವಿ, ವೈದ್ಯರಾದ ಡಾ. ಸುರೇಶ ನೆಗಳಗುಳಿ. ಅವರು ತಮ್ಮ ಮುನ್ನುಡಿಯಲ್ಲಿ “ಡಿ ವಿ ಗುಂಡಪ್ಪನವರ ಆಧುನಿಕ ಭಗವದ್ಗೀತೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅವರ ಕಗ್ಗದ ಸ್ಪೂರ್ತಿ ನನ್ನಿಂದ ಧೀರತಮ್ಮನ ಕಬ್ಬ ಎಂಬ ತದ್ ರೂಪಿ ಮುಕ್ತಕ ಗಳನ್ನು ಬರೆಸಿದ್ದನ್ನು ನೆನಪಿಸುತ್ತ ಕಲ್ಲಾಗು…

  • 'ಲೋಕ ರಾವಣ' ಲಂಕಾಧಿಪತಿಯಾದ ದಶಕಂಠ ರಾವಣನನ್ನು ಕುರಿತ ಕಾದಂಬರಿ. ಲೋಕ ಲೋಕಗಳನ್ನು ನಡುಗಿಸಿದ. ಪರಸ್ತ್ರೀ ಅಪಹಾರಕನಾದ ದುಷ್ಟನೆಂದು ರಾಮಾಯಣದಲ್ಲಿ ಚಿತ್ರಣಗೊಂಡಿರುವ ಪಾತ್ರ ಅದು. ಹುಟ್ಟಿನಿಂದ ಮಹಾ ತಪಸ್ವಿಯಾದ ವಿಶ್ರವಸ್ಸಿನ ಮಗ, ವೇದಾದಿಗಳನ್ನು ಓದಿದವನು. ಬ್ರಹ್ಮ, ಪರಮೇಶ್ವರರ ಅನುಗ್ರಹಕ್ಕೆ ಪಾತ್ರನಾದವನು. ಶಿವಭಕ್ತ. ಇಷ್ಟಿದ್ದೂ ರಾವಣನಂತಹ ಮೇಧಾವಿ ಯಾಕೆ ದುಷ್ಟನಾದ? ಲೋಕಪೀಡಕನಾದ ಅದಕ್ಕೆ ಕಾರಣವಾದುದು ಅವನ ಹುಟ್ಟಿ? ಸಂಸ್ಕಾರವೆ? ಅವನಿಗಾದ ಕಹಿ ಅನುಭವಗಳೆ? ಅಥವಾ ಅವನ ವ್ಯಕ್ತಿತ್ವವೇ ಆ ರೀತಿಯೆ? ಅವನ ಅಂತರಂಗವನ್ನು ಪ್ರವೇಶಿಸದೆ ಉತ್ತರ ದೊರೆಯಲಾರದು. ರಾವಣನ ಅಂತರಂಗವನ್ನು ಬಗೆಯುವ ಅಂತಹ ಒಂದು ಪ್ರಯತ್ನವೇ ಈ ಕಾದಂಬರಿ.. 'ಲೋಕ ರಾವಣ'

    ರಾಧಾಕೃಷ್ಣ ಕಲ್ಚಾರ್…

  • ಆಕಾಶಬುಟ್ಟಿಯ ಲೇಖಕರಾದ ಪ್ರೊ. ನಟರಾಜ್ ಅರಳಸುರಳಿ, ತೀರ್ಥಹಳ್ಳಿ ತಾಲ್ಲೂಕಿನ ಪುಟ್ಟ ಗ್ರಾಮ ಅರಳಸುರಳಿಯ ನಿವಾಸಿ. ಮೂಲತಃ ವ್ಯಂಗ್ಯಚಿತ್ರಗಾರರಾಗಿರುವ ನಟರಾಜ್ ನಾಡಿನಾದ್ಯಂತ ವ್ಯಂಗ್ಯಚಿತ್ರಕಾರರಾಗಿ ಹೆಚ್ಚು ಜನ ಓದುಗರಿಗೆ ಪರಿಚಿತರಾದವರು. ಈವರೆಗೂ ಐದು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ಕನ್ನಡದ ಪ್ರಸಿದ್ದ ವಾರ, ಮಾಸ ಪತ್ರಿಕೆಗಳೆಲ್ಲೆಲ್ಲಾ ಇವರ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. ತೀರ್ಥಹಳ್ಳಿಯ ಪ್ರಸಿದ್ದ ಶಿಕ್ಷಣ ಸಂಸ್ಥೆಯಾದ ತುಂಗಾ ಮಹಾವಿದ್ಯಾಲಯದಲ್ಲಿ ಸರಿ ಸುಮಾರು ಮುವತ್ತೈದು ವರ್ಷಗಳ ಕಾಲ ಇಂಗ್ಲಿಷ್ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆಕಾಶಬುಟ್ಟಿ ನಟರಾಜ್ ಅರಳಸುರಳಿಯವರ ಚೊಚ್ಚಲ ಕೃತಿ.

    ‘…

  • ಸಿನೆಮಾ ಚಿತ್ರ ಕಥಾ ಬರಹಗಾರ ಪ್ರವೀಣ್ ಕುಮಾರ್ ಅವರು ಬರೆದ ಕಥಾ ಸಂಕಲನ ‘ಬಯಲು’. ಈ ಕಥಾ ಸಂಕಲನದ ಬಗ್ಗೆ ಮುನ್ನುಡಿಯಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ ಜಯಲಕ್ಷ್ಮಿ ಪಾಟೀಲ್. ಅವರು ಬರೆದ ಅನಿಸಿಕೆಗಳ ಆಯ್ದ ಭಾಗ…

    “ಸರಳತೆ ಮತ್ತು ತುಂಬಾ ಕಮ್ಮಿ ಆಕೃತಿಗಳ ಬಳಕೆಯಿಂದ ಬಯಲು ಮುಖಪುಟವೇ ಬಹಳ ಸೆಳೆಯುತ್ತದೆ. ಪ್ರವೀಣ್‌ ಅವರು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಬಯಲು ಕತೆಗಳಿಗೆ ಸಿನಿಮಾ ಆಗುವ ಗುಣ ಸಹಜವಾಗಿ ಬಂದಿದೆ. ಇಲ್ಲಿ ಬೇರೆ ಬೇರೆ ಬಗೆಯ ಜಾನರ್‌ನ ಕತೆಗಳಿವೆ. ಆಕ್ಶನ್‌, ಥ್ರಿಲ್ಲರ್‌, ಕಾಮಿಡಿ, ರೋಮಾನ್ಸ್ ಹೀಗೆ ಇನ್ನೂ ಹಲವು. ನಾನು ಹೇಳುತ್ತಿರುವುದು ಅತಿಶಯೋಕ್ತಿಯಾಗಿ ಅಲ್ಲ ಏನೆಂದರೆ, ಇಲ್ಲಿನ ಜಾರುಬಂಡೆ ಕತೆಯು ಸಿನಿಮಾ ಆಗಿ ಬಂದರೆ,…

  • “ತಿರುಗುವ ಬುಗರಿಯನ್ನೊಮ್ಮೆ ನೋಡಿದರೆ ತನ್ನ ಕಕ್ಷೆಯಲ್ಲಿ ಒಂದು ನಿರ್ದಿಷ್ಟ ವೇಗದಲ್ಲಿ ಪ್ರಾರಂಭವಾದ ಅದರ ಚಲನೆ ನಿಧಾನವಾಗಿ ವೇಗ ಹೆಚ್ಚಿಸಿಕೊಳ್ಳುತ್ತಾ, ಮತ್ತೆ ಅದರ ಉತ್ಕರ್ಷದ ಅವಧಿ ಮುಗಿಯುತ್ತಾ ಪುನಃ ಪ್ರಾರಂಭದ ಸ್ಥಿತಿಗೆ ಮರಳಿ ಸ್ತಬ್ಧವಾಗುತ್ತದೆ. ಹಾಗೇಯೇ ಹುಟ್ಟಿದ ಮಗು ಬೆಳೆಯುವ ಹಂತದಲ್ಲಿ ತೀವ್ರವಾಗಿರುವ ಬೆಳವಣಿಗೆ ನಂತರ ನಿಧಾನವಾಗಿ ತಾರುಣ್ಯ, ಪ್ರೌಢತೆಯ ಮಜಲುಗಳ ದಾಟುವಿಕೆಯಲಿ ಒಂದು ಸ್ಥಿರತೆಯ ವೇಗವನ್ನು ಹೊಂದಿ ಆನಂತರ ನಿಂತುಹೋಗುತ್ತದೆ. ಇನ್ನೂ ಈ ಬದುಕನ್ನು ಒಳಗೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಎಷ್ಟೆಲ್ಲಾ ಸಂಗತಿಗಳಿವೆ. ದೊಡ್ಡ ಸಂಗತಿಗಳಿಗಿಂತ ಸಣ್ಣ ಸಣ್ಣ ಸಂಗತಿಗಳಾಗಲೀ ವಿಚಾರಗಳೇ ಆಗಲಿ ಕಲಿಸುವ ಜೀವನ ಪಾಠ ನಮ್ಮ ನಿಮ್ಮೆಲ್ಲರ ಅನುಭವಕ್ಕೆ ಬಂದಿರುವುದೇ ಆಗಿದೆ. ನಮ್ಮ ಮನಸ್ಸಿನ ಅಂತರ್ಗತ…

  • ಜಗತ್ತೇ ಪಹಲ್ಗಾಮ್‌ ಕುರಿತು ಮಾತನಾಡುತ್ತಿದ್ದ ಹೊತ್ತಲ್ಲಿ ಇಷ್ಟೇ ಅಲ್ಲ, ಇದರ ಹಿಂದೆ ವರ್ಷಾನುಗಟ್ಟಲೆ ನಡೆದ ಕೃತ್ಯಗಳಿವೆ ಎಂಬ ಸತ್ಯವನ್ನು ಬಿಚ್ಚಿಟ್ಟ ಕೃತಿಯಿದು. ನಾವು ಶಾಲೆಯಲ್ಲಿ ಇತಿಹಾಸ ಓದುತ್ತೇವೆ. ಅದರಲ್ಲಿ ಯಾವುದು ಸತ್ಯ ಗೊತ್ತಿಲ್ಲ. ಅಥವಾ ಅದರಲ್ಲಿ ಎಲ್ಲ ಸತ್ಯವನ್ನು ಹೇಳಲಾಗಿದೆಯೆ ಎಂದರೆ ಇಲ್ಲ ಎನ್ನಬೇಕಿದೆ.

    ಭಾರತ ಪಾಕ್ ಕುರಿತಾಗಿ ಇಲ್ಲಿರುವ ಎಷ್ಟೋ ವಿಷಯಗಳು ನಮ್ಮ ಪಠ್ಯದಲ್ಲಾಗಲಿ ಅಥವಾ ಪಾಠ ಮಾಡುವಾಗಾಗಲಿ ನಮಗ್ಯಾರಿಗೂ ಹೇಳೇ ಇಲ್ಲ. ಪಠ್ಯ ಪುಸ್ತಕದಲ್ಲಿ ಹೇಳಿರುವುದರ ಜಾಡು ಹಿಡಿದು ಇನ್ನೇನಾಗಿದೆ ಎಂದು ತಿಳಿಯುವ ಪ್ರಯತ್ನವನ್ನು ನಾವೂ ಮಾಡಿಲ್ಲ.‌ ಹಾಗಾಗಿ ಈ ವಿಷಯಗಳು ಬೂದಿ ಮುಚ್ಚಿದ ಕೆಂಡದಂತಾಗಿದೆ. ಬೂದಿಯನ್ನು ಬದಿ ಸರಿಸುವ ಕೆಲಸವನ್ನು ಕುಂಟಿನಿಯವರು ಮಾಡಿದ್ದಾರೆ.

    ಇದು ಈಗಿನ ಸಮಯಕ್ಕೆ ಅತ್ಯಂತ…

  • ಹೆಸರಾಂತ ಬರಹಗಾರ್ತಿ ಆಶಾ ರಘು ಅವರ ನೂತನ ಕಾದಂಬರಿ ‘ಮಾರ್ಕೋಲು’ ಇತ್ತೀಚೆಗೆ ಬಿಡುಗಡೆಯಾಗಿದೆ. ಜಾನಪದ ಕಥಾ ಹಂದರ ಹೊಂದಿರುವ ಈ ಕಾದಂಬರಿಗೆ ಕಲಾವಿದ ಶ್ರೀನಿವಾಸ ಪ್ರಭು ಮುನ್ನುಡಿ ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಭಾವನೆಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ…

    “ಪ್ರಸಿದ್ಧ ಕಾದಂಬರಿಗಾರ್ತಿ ಆಶಾ ರಘು ಅವರ ಇತ್ತೀಚಿನ ಕಾದಂಬರಿ ʻಮಾರ್ಕೋಲು’. ಈಗಾಗಲೇ ಹಲವಾರು ಅರ್ಥಪೂರ್ಣ-ಸ್ವಾರಸ್ಯಕರ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಆಶಾ ರಘು ಅವರು ತಮ್ಮ ಪ್ರಯೋಗಶೀಲತೆಯಿಂದ, ಸೊಗಸಾಗಿ ಕಥೆ ಕಟ್ಟುವ ಸಂವಿಧಾನ ಕೌಶಲದಿಂದ, ಜಾನಪದದಿಂದ ಹಿಡಿದು ಕಾಲ್ಪನಿಕ-ಐತಿಹಾಸಿಕ-ಸಾಮಾಜಿಕ-ಪೌರಾಣಿಕದವರೆಗೆ ಹರಿದಾಡುವ ತಮ್ಮ ಕಾದಂಬರಿಗಳ…

  • ಕನ್ನಡದ ಪ್ರಸಿದ್ಧ ಜನಪದ ಸಾಹಿತ್ಯ ಸಂಗ್ರಾಹಕರೂ ಕಾದಂಬರಿಕಾರರೂ ಆಗಿರುವ ಕೃಷ್ಣಮೂರ್ತಿ ಹನೂರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಸಂಗ್ರಹಿಸಿದ ಆರು ಜನಪದ ರಮ್ಯ ನೀಳ್ಗತೆಗಳು ಈ ಸಂಕಲನದಲ್ಲಿವೆ. ಇವು ಕನ್ನಡದ ಸಮೃದ್ಧ ಜನಪದ ಸಾಹಿತ್ಯದ ಸೂಚಿಯಾಗಿವೆ.

    ಇದರಲ್ಲಿನ ಆರು ಕತೆಗಳನ್ನು ಮತ್ತು ಇದರಲ್ಲಿ ಪ್ರಕಟವಾಗದ ಇನ್ನು ನಾಲ್ಕು ಕತೆಗಳನ್ನು ಹೇಳಿದವರು ಕ್ಯಾತಗಾನಹಳ್ಳಿ ಗಿರಿಯಯ್ಯ. ಈ ಗೊಲ್ಲಗೌಡನನ್ನು ಹನೂರರ ಮಿತ್ರ ರಾಮಚಂದ್ರಪ್ಪ ಕರೆದುಕೊಂಡು ಬಂದಿದ್ದರು. ತನಗೆ ಯಾವುದೋ ಒಂದು “ಹೆಣ್ಣರಸಿಯರ ಪಟ್ಟಣದ ಕತೆ” ಬರುವುದೆಂದು ಹೇಳಲಿಕ್ಕೆ ಶುರು ಮಾಡಿದ ಗಿರಿಯಯ್ಯ ಹಗಲೆಲ್ಲ ಅದೊಂದೇ ಕತೆಯನ್ನು ಹೇಳುತ್ತಾ ಹೋದ! “ಕಥೆ ಹೇಳುವಾಗಿನ ಆತನ ಭಾಷಾಶೈಲಿ, ನಾಟಕೀಯವಾಗಿ ನಿರೂಪಿಸುವ ರೀತಿ ಇವು ಆ ಕಥೆಯನ್ನು ಕುತೂಹಲದಿಂದ ಕೇಳುವಂತೆ…

  • ಉತ್ತಮ ಕಥೆಗಾರ ಎಂದು ಹೆಸರುವಾಸಿಯಾಗಿರುವ ವಿನಾಯಕ ಅರಳಸುರಳಿಯವರು ಬರೆದ ಕಥೆಗಳ ಸಂಕಲನ ‘ಮರ ಹತ್ತದ ಮೀನು’. ಓದುಗರನ್ನು ಆವರಿಸಿಕೊಳ್ಳುವಂಥ ಗುಣ ಕಥೆಗಳಿಗೆ ದಕ್ಕಬೇಕಾದರೆ ಕಥೆಗಾರ ಹಲವು ಅನುಭವಗಳಿಗೆ ಈಡಾಗಬೇಕಾಗುತ್ತದೆ, ಎಷ್ಟೋ ಸಂದರ್ಭಗಳಿಗೆ ಸಾಕ್ಷಿಯಾಗಬೇಕಾಗುತ್ತದೆ. ಕೆಲವೊಮ್ಮೆ ತಾನೇ ಪಾತ್ರವಾಗಬೇಕಾಗುತ್ತದೆ, ಕಷ್ಟವನ್ನು, ಕೆಡುಕುಗಳನ್ನು ನೋಡಬೇಕಾಗುತ್ತದೆ. ಅನುಭವಿಸಬೇಕಾಗುತ್ತದೆ. ಮತ್ತೆ ಕೆಲವೊಮ್ಮೆ ಮರೆಯಲ್ಲಿ ನಿಂತ ನಿರೂಪಕನಂತೆ ಕಥೆ ಹೇಳಬೇಕಾಗುತ್ತದೆ. ಇದೆಲ್ಲವನ್ನು ವಿನಾಯಕ ಅರಳಸುರಳಿ ಅವರು ಅನುಭವಿಸಿದ್ದಾರೆ ಅದರ ಪರಿಣಾಮ ಈ ಸಂಕಲನದ ಕಥೆಗಳಲ್ಲಿ ಡಾಳಾಗಿ ಕಾಣಿಸುತ್ತದೆ. ಒಂದೊಂದು ಕಥೆಯನ್ನು ಓದಿ ಮುಗಿಸಿದಾಗಲೂ, ಇಂಥದೇ ಪ್ರಸಂಗ ಅಲ್ಲೆಲ್ಲೋ ನಡೆದಿತ್ತಲ್ಲವಾ ಎಂದು ಯೋಚಿಸುವಂತಾಗುತ್ತದೆ.…

  • ಕವಿ, ಸಾಹಿತಿ, ಅಧ್ಯಾಪಕರಾದ ಶ್ರೀ ಹಾ.ಮ.ಸತೀಶ(ಹಾಲುಮಜಲು ಸತೀಶ) ಇವರ ಪುಸ್ತಕ ‘ಪರಸ್ಪರ’ ವೈಚಾರಿಕ ಲೇಖನಗಳನ್ನೊಳಗೊಂಡ ಹೊತ್ತಗೆಯನ್ನು ನಾನು ಓದಿರುವೆನು. ಒಟ್ಟು ೨೭ ಲೇಖನಗಳು ಶ್ರೀ ಯುತರ ಕೈಯಿಂದ ಬರೆಯಲ್ಪಟ್ಟಿದೆ.

    ಮಾನವ- ಮೊದಲು ಮಾನವನಾಗು, ಮನಸ್ಸನ್ನು ನಿರ್ಮಲವಾಗಿಟ್ಟುಕೊ, ಮೂರು ದಿನದ ಬಾಳ್ವೆಯಲಿ ಹಗರಣವೇತಕೆ? ರಗಳೆ ಬಾರದಿರಲಿ. ಮನುಜಾ ವಿಶ್ವ ಮಾನವನಾಗು, ಜಗದಗಲ ಪಸರಿಸು ಎಂಬ ಸಂದೇಶ ಮನಸೆಳೆಯಿತು, ಎಲ್ಲರಿಗೂ ಮಾದರಿ. ಮಾ ಎಂದರೆ ತಾಯಿ, ನವ ಎಂದರೆ ಹೊಸ. ತಾಯ ಗರ್ಭದಿಂದ ನವ ಮೂಡಿ, ಬುವಿಗೆ ಬಿದ್ದು, ಅಲ್ಲಿಯೂ ನವ, ಹೊಸಬೆಳಕನ್ನು ನೋಡಿ, ಪ್ರಕೃತಿ ಯ ತಾಯ ಎರಡೂ ಮಡಿಲಲ್ಲಿ ಆಡಿ,ಕೂಡಿ ಬೆಳೆದು ಮಾನವತ್ವವ ಪ್ರತಿಪಾದಿಸಿ ಬದುಕು ಮಾನವ ಎಂಬ ಸಂದೇಶ.