ಪುಸ್ತಕ ಸಂಪದ

  • ಮಕ್ಕಳಿಗಾಗಿ ಮತ್ತೊಮ್ಮೆ ಶ್ರೀ ಕೃಷ್ಣನ ಕಥೆಯನ್ನು ಹೇಳಲು ಬರುತ್ತಿದ್ದಾರೆ ಹೆಸರಾಂತ ಸಾಹಿತಿ ಸಂಪಟೂರು ವಿಶ್ವನಾಥ್. ಇವರು ಮಕ್ಕಳಿಗಾಗಿ ಶ್ರೀ ಕೃಷ್ಣನ ಕಥೆಯನ್ನು ಬಹಳ ಸೊಗಸಾಗಿ ಹೇಳಿದ್ದಾರೆ. ಈ ಬಗ್ಗೆ ಅವರ ಮಾತುಗಳಲ್ಲೇ ಹೇಳುವುದಾದರೆ “ ಒಬ್ಬನೇ ವ್ಯಕ್ತಿ, ಬೇರೆ ಬೇರೆಯವರಿಗೆ, ಬೇರೆ ಬೇರೆ ಸಂದರ್ಭಗಳಲ್ಲಿ 'ಬೇರೆ ಬೇರೆ'ಯಾಗಿ ಕಾಣಿಸಿಕೊಳ್ಳುವಂತೆ, ಕೃಷ್ಣನು ಬೇರೆ ಬೇರೆ ಆದರ್ಶಗಳನ್ನು ಮೆರೆಯುವ ಮಗ, ಅಣ್ಣ, ತಮ್ಮ, ಶಿಷ್ಯ, ಸಹಪಾಠಿ, ಪ್ರಿಯಕರ, ಬುದ್ದಿ ಪ್ರಚೋದಕ, ವೇಣು ವಿಶಾರದ, ತಂಟೆಕೋರ, ಗೆಳೆಯ, ಶೂರ, ಮನೋಚಿಕಿತ್ಸಕ, ಪ್ರೇಮಿ, ಪತಿ, ಜನನಾಯಕ, ರಾಜ ನೀತಿಜ್ಞ, ಬಡವರ ಬಂಧು, ಅನಾಥರಕ್ಷಕ, ಆಪದ್ಭಾಂಧವ, ಕಪಟ ನಾಟಕ ಸೂತ್ರಧಾರಿ, ಪವಾಡ ಪುರುಷ, ಯೋಗಾಚಾರ್ಯ ಮುಂತಾದ ಹತ್ತಾರು ಮುಖಗಳನ್ನು ತನ್ನ ಲೀಲೆಗಳ…

  • ಕೋಟಿಗಾನಹಳ್ಳಿ ರಾಮಯ್ಯ ಅವರ ಆತ್ನಕಥೆಯ ಹೆಸರೇ ‘ದರ್ಗಾ ಮಾಳದ ಚಿತ್ರಗಳು’ ಇದನ್ನು ಸಂಪಾದಿಸಿದ್ದಾರೆ ಕೆ ಪಿ ಲಕ್ಷ್ಮಣ್ ಇವರು. “ನಾವು ಹೆಚ್ಚಿನ ಸಾರಿ ರಾಜಕಾರಣ, ಸರ್ವಾಧಿಕಾರ, ಇಕಾಲಜಿ, ಕಲೆ, ಜ್ಞಾನ, ಮಕ್ಕಳು, ಶಿಕ್ಷಣ, ಧರ್ಮ, ಪುರಾಣ ಇಂತ ಹಲವು ಸಂಕೀರ್ಣ ವಿಷಯಗಳನ್ನ ‘ಮೇಲಿನವರ’ ಮತ್ತು ‘ದೂರದ’ ಕಣೋಟದಿಂದ ನೋಡಿ ಗ್ರಹಿಸಲು ಪ್ರಯತ್ನಿಸುತ್ತೇವೆ. ಇಲ್ಲಿನ ಬರಹಗಳಲ್ಲಿ ರಾಮಯ್ಯನವರು ಇದರ ವಿರುದ್ಧವಾದ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಎಲ್ಲವನ್ನು ತನ್ನ ಸುತ್ತಲು ನಡೆಯುವ ಘಟನೆ, ಮಾತುಕತೆ, ಜಗಳಗಳಿಂದ ಹಿಡಿದಿಡಿದಲು ಪ್ರಯತ್ನಿಸಿದ್ದಾರೆ. ಅದು ಶನಿದೇವರ ದೇವಸ್ಥಾನದ ಮೈಕ್‌ಸೆಟ್‌ನಲ್ಲಿ ಕೇಳುವ ‘ಯುದ್ಧಕಾಂಡ’ದ ಹಾಡಿನಿಂದ ಹಿಡಿದು ಮಕ್ಕಳ ಕಣ್ಣಿಗೆ ಕಾಣದಾಗಿರುವ ಮಾವಿನ ಚಿಗುರಿನವರೆಗೂ; ಅದರ ಹಿಂದೆ…

  • `ಕುರು ದ್ವೀಪ’ ವೀಣಾ ರಾವ್ ಅವರ ಕಾದಂಬರಿ. ಒಂದು ಪ್ರಾಕೃತಿಕ ಆತಂಕವನ್ನು ಎದುರುಗೊಳ್ಳುವ ಈ ಕಥಾವಸ್ತು, ಕಾದಂಬರಿಯುದ್ದಕ್ಕೂ ದ್ವೀಪವಾದವರ ಬದುಕಿನ ಹಲವು ಹತ್ತು ಸಂಗತಿಗಳನ್ನು ಮಾನವೀಯ ನೆಲೆಯಿಂದ ಚಿತ್ರಿಸುತ್ತಾ ಸಾಗುತ್ತದೆ. ‘ಕುರುದ್ವೀಪ’ದಲ್ಲಿ ಕೇವಲ ಜನರ ಬದುಕು ಮಾತ್ರ ‘ದ್ವೀಪ’ವಾಗುವುದಿಲ್ಲ; ಪ್ರಕೃತಿ ಕೂಡ ಅಂತಹ ಒಂದು ಆತಂಕಕಾರೀ ದ್ವೀಪವೊಂದನ್ನು ಸೃಷ್ಟಿಸಿ ಮಾನವನ ಇಚ್ಛಾಶಕ್ತಿಯ ಪರಮೋಚ್ಛ ಬಳಕೆಯ ಬಗ್ಗೆ ಕರೆಕೊಟ್ಟು ಅದರಿಂದ ಹೊರಬರುವ ಮಾರ್ಗವನ್ನು ಅವರೇ ಸೃಷ್ಟಿಸಿಕೊಳ್ಳುವಂತೆ ಮಾಡುವಲ್ಲಿ ತಾನು ಸೂತ್ರಧಾರಿಯಾಗಿ ಆಟವಾಡುತ್ತಾ ಸಾಗುತ್ತದೆ. ಈಗಲೂ ಮುಳುಗುವ ಆತಂಕವನ್ನು ಹೊತ್ತು ನಿಂತ ಜನರ, ಅಂದರೆ ಕುಂದಾಪುರದ ಸಮೀಪದಲ್ಲಿರುವ ‘ಕುರುದ್ವೀಪ’ದ ಜನರ ಕಥೆಯಿದು. ಇಲ್ಲಿಯ ಜನರ ನಿತ್ಯ ಬವಣೆಯನ್ನು…

  • ಡಾ. ಪ್ರಹ್ಲಾದ ಡಿ.ಎಂ ಅವರ ‘ಮ್ಯಾಸಬೇಡರ ಚಾರಿತ್ರಿಕ ಕಥನ’ ಎಂಬ ಕೃತಿಯು ಮ್ಯಾಸಬೇಡರ ಕುಲಮೂಲ, ಸಾಂಸ್ಕೃತಿಕ ವೀರರು, ಮಾತೃದೈವಗಳು ಮತ್ತು ಆ ಕುಲದ ಚಾರಿತ್ರಿಕ ಕಾವ್ಯಗಳನ್ನು ಕುರಿತಂತೆ ಅಧ್ಯಯನ ನಡೆಸಿದ ಕೃತಿಯಾಗಿದೆ. ಈ ಕೃತಿಯ ಲೇಖಕರಾದ ಡಾ.ಡಿ.ಎಂ. ಪ್ರಹ್ಲಾದ್ ಅವರು ಬಹಳ ಶ್ರಮಪಟ್ಟು ಆಕರಗಳನ್ನು ಸಂಗ್ರಹಿಸಿ ಬಹಳ ತಾಳ್ಮೆಯಿಂದ ವಿಶ್ಲೇಷಿಸಿದ್ದಾರೆ. ಕುಲಮೂಲದ ಚರಿತ್ರೆ ಭಾಗದಲ್ಲಿ ಬಹಳ ಪುರಾತನವಾದ ಹಸ್ತಪ್ರತಿಯನ್ನು ಉಲ್ಲೇಖಿಸಿ ಅದರಲ್ಲಿ ವಿವರಿಸಿರುವ ತ್ರಿಮೂರ್ತಿಗಳ ಪೌರಾಣಿಕ ಪ್ರಸಂಗವನ್ನು ಮ್ಯಾಸಬೇಡರ ಕುಲಮೂಲಕ್ಕೆ ಕಾರಣವೆಂದೇ ಚರ್ಚೆಯನ್ನು ಆರಂಭಿಸಿದ್ದಾರೆ. ಮಂದರಾಜ, ಅವನ ವಿವಾಹ, ಅಂಭೋಜರಾಜ, ಶಿಶುಪಾಲ, ದಾನಸಾಲದೇವಿ, ಶುಕ್ಲಮಲ್ಲಿನಾಯಕ, ಪೆದ್ದಕ್ಕ ರಾಯಲದೇವಿ, ಸಂಚುಲಕ್ಷ್ಮೀ, ಭಾನುಕೋಟಿ ರಾಜ,…

  • ಚೆನ್ನಪ್ಪ ಅಂಗಡಿಯವರ ಕವನ ಸಂಕಲನ ‘ಇನ್ನು ಕೊಟ್ಟೆನಾದೊಡೆ’ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ೨೦೨೪ರ ಸಾಲಿನ ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ಲಭಿಸಿದೆ. ಈ ಕವನ ಸಂಕಲನಕ್ಕೆ ಆರ್. ತಾರಿಣಿ ಶುಭದಾಯಿನಿ ಇವರು ಮುನ್ನುಡಿಯನ್ನು ಬರೆದಿದ್ದು, ಅವರು ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗಗಳು…

    “ಚನ್ನಪ್ಪ ಅಂಗಡಿ ಅವರು ಕವಿ. ಕವಿಯಾದವನಿಗೆ ಒಳ್ಳೆಯ ಸದ್ದು, ರುಚಿ, ಸ್ಪರ್ಶ, ನೋಟ, ಗಂಧಗಳಿಗೆ ಸ್ಪಂದಿಸುವ ಗುಣವೇ ಪ್ರಧಾನವಾಗಿರುತ್ತದೆ ಎನ್ನುವುದು ಕಾವ್ಯ ಬಲ್ಲವರಿಗೆ ಗೊತ್ತು. ಆದರೆ ಕಾವ್ಯ ಎನ್ನುವುದು ಬರಿಯ ಇಂದ್ರಿಯ ವಿಹಾರಿಯೇ? ಎಂದರೆ ಅದನ್ನು ಮೀರಿದ ಇನ್ನೇನೊ ಇದೆ ಎನ್ನುವುದನ್ನು ಬೆನ್ನು ಹತ್ತುವುದು ಗೊತ್ತು. 'ರಸದೇವಗಂಗೆಯಲಿ ಮೀನಾಗುವ' ಎನ್ನುವ…

  • “ಇದೊಂದು ರೋಚಕ ಕತೆ. ಕೇವಲ ರೋಚಕ ಕತೆ ಮಾತ್ರವಲ್ಲ ಸತ್ಯ ಕತೆ. ಲೇಖಕ ಸುರೇಶ ಸೋಮಪುರ ಸ್ವತಃ ಕರ್ಣ-ಪಿಶಾಚಿನಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮನೆ-ಮಠ, ಹೆಂಡತಿ-ಮಕ್ಕಳು, ಬಂಧುಗಳು ಎಲ್ಲರನ್ನೂ ಬಿಟ್ಟು ದೀದಿ ಅಂಬಿಕಾದೇವಿಯ ಸಹಾಯದಿಂದ ಶ್ರೀ ಚೈತನ್ಯಾನಂದರನ್ನು ಭೇಟಿಯಾಗುತ್ತಾರೆ. ಅವರ ಮಾರ್ಗದರ್ಶನದಲ್ಲಿ ತಂತ್ರ-ಮಂತ್ರ, ಶವಸಾಧನೆ ಇತ್ಯಾದಿ ನಡೆಸುತ್ತಾರೆ. ಅಂತಿಮವಾಗಿ 'ಕರ್ಣ-ಪಿಶಾಚಿನಿ' ಅವರ ವಶವಾಗುತ್ತದೆ.

    ಯಾವುದೇ ಚಮತ್ಕಾರಕ್ಕೆ ಪಂಥಾಹ್ವಾನ ನೀಡುವುದು ಸುಲಭದ ಮಾತಲ್ಲ. ಈ ಕಾಲದಲ್ಲಿ ಅನೇಕ ಚಮತ್ಕಾರಿಗಳು ತಮ್ಮ ಚಮತ್ಕಾರದ ಮೂಲಕ ಮುಗ್ಧ ಜನರನ್ನು ಶೋಷಿಸಿ ಹಣ ಗಳಿಸುವ ಉದ್ದೇಶದಿಂದ ಚಮತ್ಕಾರದ ಅಂಗಡಿಗಳನ್ನು ತೆರೆದಿದ್ದಾರೆ. ಅಮಾಯಕ ಜನರನ್ನು ಮರುಳು ಮಾಡಿ…

  • ‘ಸಾಧನೆಯ ಸು‌ಗ್ಗಿ’ ನಾಗರಾಜು ಕೆಂಪಯ್ಯ ಅವರ ಕಾದಂಬರಿ. ಅಂತರ್ ಜಾತಿ ವಿವಾಹವಾದ ದಂಪತಿಗಳಿಗೆ ಜನಿಸಿದ ವ್ಯಕ್ತಿಯೋರ್ವನ ಜೀವನದ ಕಥೆ ಇಲ್ಲಿದೆ. ಆ ಹುಡುಗನ ಜೀವನ ವೃತ್ತಾಂತದ ಏಳು ಬೀಳುಗಳನ್ನು ಈ ಕೃತಿಯು ಒಳಗೊಂಡಿದೆ. ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ಊರ ಗೌಡರ ಮನೆಯ ಜೀತದಾಳಾಗಿ ದುಡಿಯುವ ಸಂತೋಷ ತನ್‌ನ ಸುತ್ತಲಿನ ವಿರೋಧಗಳನ್ನು ಎದುರಿಸುತ್ತಲೇ ಜೀವನವನ್ನು ರೂಪಿಸಿಕೊಳ್ಳುವ ಪರಿ ಇಲ್ಲಿ ವಿಶಿಷ್ಟವಾಗಿ ಮೂಡಿದೆ. ದ್ವೇಷ, ಅಸೂಯೆ, ಅಸಹಿಷ್ಣತೆ- ಇವೆಲ್ಲದರ ಮಧ್ಯೆ ಗಂಡು ಹೆಣ್ಣಿನ ಪ್ರೀತಿ ಇದೆ. ಹದಿಹರೆಯದ ಆಕರ್ಷಣೆ, ನಿಸ್ವಾರ್ಥವಾದ ಸ್ನೇಹ, ಬೆಂಕಿ ಹಾಯುವ ಸ್ಪರ್ಧೆ, ಕಬಡ್ಡಿ ಸ್ಪರ್ಧೆ, ಸ್ಪರ್ಧಾತ್ಮಕ ಪರೀಕ್ಷೆಯ ಸ್ಪರ್ಧೆಗಳೊಟ್ಟಿಗೆ ಜಾತಿ, ಮೇಲುಕೀಳು, ಬಡವ ಶ್ರೀಮಂತ ಎಂಬ ಸಮಾಜೋ- ಆರ್ಥಿಕ…

  • ‘ಪರೂಕಾಳಿ’ ಎನ್ನುವ ವಿಲಕ್ಷಣ ಕಾದಂಬರಿಯ ಲೇಖಕರ ಹೆಸರೂ ಅಷ್ಟೇ ವಿಚಿತ್ರವಾಗಿದೆ. ಈ ಕಾದಂಬರಿಯನ್ನು ಬರೆದ ಯುವ ಲೇಖಕ ಬಂಡು ಕೋಳಿ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ಶಾಂತಿನಾಥ ದಿಬ್ಬದ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವೊಂದು ಸಾಲುಗಳು ನಿಮ್ಮ ಓದಿಗಾಗಿ…

    “ಬಂಡು ಕೋಳಿ ಅವರ 'ಪರೂಕಾಳಿ' ಕಾದಂಬರಿ ಬಗ್ಗೆ ನಾಲ್ಕು ಮಾತು ಬರೆಯುವ ಅವಕಾಶ ನನಗೆ ಸಿಕ್ಕಿದ್ದು ಒಂದು ಆಕಸ್ಮಿಕ ಪ್ರಸಂಗವೇ ಸರಿ. ಸುಮಾರು ಎರಡು ತಿಂಗಳುಗಳ ಹಿಂದೆ ಹಿರಿಯರಾದ ಶ್ರೀ ಅರವಿಂದರಾವ್ ದೇಶಪಾಂಡೆ ಹಾಗೂ ಆತ್ಮೀಯರಾದ ಡಾ. ಬಾಳಾಸಾಹೇಬ ಲೋಕಾಪುರ ಅವರ ಅಪೇಕ್ಷೆಯ ಮೇರೆಗೆ ಅಥಣಿಯ ಶ್ರೀ ದೇಶಪಾಂಡೆ ಅವರ ಕಾಲೇಜಿನಲ್ಲಿ ವಿಶೇಷ ಉಪನ್ಯಾಸವೊಂದನ್ನು ಕೊಡಲು ಹೋದಾಗ ಶ್ರೀ ಬಂಡು ಕೋಳಿ…

  • ಆಲೂರು ದೊಡ್ಡನಿಂಗಪ್ಪನವರು ಬರೆದ ‘ಚಂದ್ರನ ಚೂರು’ ಕಾದಂಬರಿ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಪತ್ರಕರ್ತರಾದ ರಘುನಾಥ ಚ ಹ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ…”ಆಲೂರು ದೊಡ್ಡನಿಂಗಪ್ಪನವರ 'ಚಂದ್ರನ ಚೂರು' ಕಾದಂಬರಿಯ ಶಕ್ತಿ ಇರುವುದೇ ವರ್ತಮಾನದ ಕೇಡುಗಳನ್ನು ಎದುರು ಹಾಕಿಕೊಂಡಿರುವುದರಲ್ಲಿ. ಈ ದೇಶವನ್ನು ಶಾಪದಂತೆ ಕಾಡುತ್ತಿರುವ ಜಾತೀಯತೆಯ ಸ್ವರೂಪವನ್ನು ಚಿತ್ರಿಸುತ್ತಲೇ, ಅದಕ್ಕೆ ಪ್ರತಿಯಾಗಿ ಮಾನವೀಯ ಸ್ಪಂದನಗಳನ್ನು ಕಟ್ಟಿಕೊಡುವ ಹಂಬಲ ಕಾದಂಬರಿಯ ಜೀವದ್ರವ್ಯವಾಗಿದೆ.

    ಅತ್ಯಂತ ಕಡಿಮೆ ಪಾತ್ರಗಳನ್ನು ಬಳಸಿಕೊಂಡು ಕಥನವನ್ನು ನಿರೂಪಿಸಿರುವುದು ಕಾದಂಬರಿಯ ಗಮನಾರ್ಹ ಸಂಗತಿಗಳಲ್ಲೊಂದು.…

  • ಯಕ್ಷಗಾನ, ಚಿತ್ರಕಲೆ, ವಿಜ್ಞಾನ ಸಾಹಿತ್ಯ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಮಹತ್ವದ ಕೃತಿಗಳನ್ನು ರಚಿಸಿದವರು ಡಾ. ಕೆ. ಶಿವರಾಮ ಕಾರಂತರು. ಐವತ್ತಕ್ಕೂ ಮಿಕ್ಕಿ ಕಾದಂಬರಿಗಳನ್ನು ಬರೆದವರು. “ಕಡಲತಡಿಯ ಭಾರ್ಗವ” ಎಂದು ಹೆಸರಾದವರು. ತಮ್ಮ ಅಧ್ಯಯನಶೀಲತೆ ಮತ್ತು ಪ್ರತಿಭೆಯಿಂದ ಕನ್ನಡದ ಅಗ್ರಗಣ್ಯ ಸಾಹಿತಿಗಳಲ್ಲಿ ಒಬ್ಬರೆನಿಸಿದವರು.

    ಅವರು ಬರೆದಿರುವ ಕೆಲವೇ ಪ್ರವಾಸ ಕಥನಗಳಲ್ಲೊಂದು “ಪಾತಾಳಕ್ಕೆ ಪಯಣ”. ಇದರ ಬಗ್ಗೆ ಮುನ್ನುಡಿಯಲ್ಲಿ ಡಾ. ಕಾರಂತರು ಹೀಗೆನ್ನುತ್ತಾರೆ: “ನನ್ನೀ ಬರಹದಲ್ಲಿ ನಾನು ನೋಡಿದ ಬೃಹತ್ ದೇಶವಾದ ಯುನೈಟೆಡ್ ಸ್ಟೇಟ್ಸಿನ ಅಲ್ಪ ಪರಿಚಯವು ನಿಮಗೆ ಆದೀತು. ನನಗೆ ಇರುವುದೂ ಅದರ ಅಲ್ಪ ಪರಿಚಯವೇ! ನಾನು ಅಲ್ಲಿ ಇದ್ದ ಕಾಲ ಬಲು ಸ್ವಲ್ಪ; ಅಲ್ಲಿನ ಜನಗಳ ಪರಿಚಯವನ್ನು ಬೆಳೆಯಿಸುವ ಅವಕಾಶವಂತೂ ಆಗಿರಲೇ ಇಲ್ಲ. ಇದೊಂದು…