ಪುಸ್ತಕ ಸಂಪದ

  • ಶ್ರೀನಿವಾಸ ವೈದ್ಯರು ಧಾರವಾಡದಲ್ಲಿ ಎಂ.ಎ. ಪದವಿ ಗಳಿಸಿದ ನಂತರ, 1959ರಲ್ಲಿ ಮುಂಬಯಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದರು. ಮುಂಬಯಿ, ಬೆಂಗಳೂರು ಇತ್ಯಾದಿ ಸ್ಥಳಗಳಲ್ಲಿ 37 ವರುಷ ಸೇವೆ ಸಲ್ಲಿಸಿ, ಉನ್ನತ ಹುದ್ದೆಗೇರಿ 1996ರಲ್ಲಿ ಬೆಂಗಳೂರಿನಲ್ಲಿ ನಿವೃತ್ತರಾದರು. ಈ ಸೇವಾವಧಿಯ ಹಲವಾರು ಅನುಭವಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಎಂಟು ಪುಸ್ತಕಗಳನ್ನು ಬರೆದಿರುವ ಶ್ರೀನಿವಾಸ ವೈದ್ಯರು “ಹಳ್ಳ ಬಂತು ಹಳ್ಳ” ಕಾದಂಬರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು.

    ನಿವೃತ್ತಿಯ ನಂತರ ತಮ್ಮ ಸೇವಾವಧಿಯ ಸಿಂಹಾವಲೋಕನ ಮಾಡಿ, ನೆನಪಿನಲ್ಲಿ ಅಚ್ಚಳಿಯದೆ ಉಳಿದ ಅನುಭವಗಳನ್ನು ಓದುಗರ ಮನಮುಟ್ಟುವಂತೆ ಬರೆದಿರುವುದು ವೈದ್ಯರ ಹೆಚ್ಚುಗಾರಿಕೆ. ಯಾವುದೇ ಅತಿರೇಕವಿಲ್ಲದೆ ಮಾನವೀಯ ಸಂಬಂಧಗಳ ನಿರೂಪಣೆ…

  • ಅನಿಲ್ ಗುನ್ನಾಪೂರ ಅವರ ನೂತನ ಕಥಾ ಸಂಕಲನ ಸರ್ವೆ ನಂಬರ್ ೯೭. ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಪತ್ರಕರ್ತರಾದ ರಘುನಾಥ ಚ.ಹ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ನಿಮ್ಮ ಓದಿಗಾಗಿ…

    “ಏನನ್ನೋ ಹಂಬಲಿಸುತ್ತ ಯಾವುದರ ಹುಡುಕಾಟದಲ್ಲೋ ನಿರತನಾಗಿರುವುದು ಎಲ್ಲ ಕಾಲದ ಮನುಷ್ಯ ಜೀವನದ ಪ್ರಮುಖ ಲಕ್ಷಣವಾಗಿದೆ. ಆ ಹುಡುಕಾಟವೇ ಬದುಕಿನ ಗುರಿಯೂ ಆಗಿರುತ್ತದೆ. ಹಾಗೆ ಹುಡುಕುವುದು ಸಿಗಬಹುದು ಇಲ್ಲವೇ ಸಿಗದಿರಬಹುದು. ಹುಡುಕುತ್ತಿದ್ದುದು ದೊರೆತಾಗ, ಕೆಲವರಿಗೆ ಸಂತೋಷವಾಗಬಹುದು; ಮತ್ತೆ ಕೆಲವರಿಗೆ, ಈವರೆಗೂ ನಾವು ಹುಡುಕುತ್ತಿದ್ದುದು ಅರ್ಥಹೀನವಾಗಿ ಕಾಣಿಸಿ, ಹುಡುಕಾಟವೇ ನಿರರ್ಥಕವೆನ್ನಿಸಿ ನಿರಾಶೆಯಾಗಬಹುದು. ಹಲವರಿಗೆ ತಾವು ಏನನ್ನು…

  • ಭಾರತದ ರಾಷ್ಟಪತಿಗಳಾಗಿದ್ದ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಬಗ್ಗೆ ಹಲವಾರು ಪುಸ್ತಕಗಳು ಬಂದಿವೆ. ‘ಅಬ್ದುಲ್ ಕಲಾಂ ಅವರು ನಿಮಗೆ ಗೊತ್ತೇ?’ ಎಂಬ ಕೃತಿಯು ಮಕ್ಕಳಿಗೆ ಅತ್ಯಂತ ಉಪಯುಕ್ತವಾಗಿದೆ. ದೊಡ್ಡ ದೊಡ್ಡ ಆಕಾರದ ಅಕ್ಷರಗಳನ್ನು ಬಳಸಿಕೊಂಡು, ಸರಳವಾದ ಭಾಷೆಯಲ್ಲಿ ಮಾಹಿತಿಯನ್ನು ನೀಡಿರುವುದರಿಂದ ಮಕ್ಕಳಿಗೆ ಓದಿ ಮನನ ಮಾಡಲು ಅನುಕೂಲ. ಈ ಕೃತಿಯು ‘ಅಬ್ದುಲ್ ಕಲಾಂ ಯಾರು?’ ಎನ್ನುವ ಅಧ್ಯಾಯದಿಂದ ಪ್ರಾರಂಭವಾಗುತ್ತದೆ. ಈ ಅಧ್ಯಾಯದಲ್ಲಿ ಕಲಾಂ ಅವರ ಹುಟ್ಟು, ಬಾಲ್ಯ, ಊರು, ಅವರ ವೃತ್ತಿ ಅವರಿಗೆ ಸಂದ ಗೌರವಗಳು, ಉಪಗ್ರಹ ಉಡಾವಣಾ ವಾಹನ ತಂತ್ರಜ್ಞಾನ ಮೊದಲಾದುವುಗಳ ಬಗ್ಗೆ ವಿವರಿಸಲಾಗಿದೆ. 

    ನಂತರದ ಅಧ್ಯಾಯವಾದ ‘ಆರಂಭಿಕ ಬದುಕು’ ನಲ್ಲಿ ಕಲಾಂ ಅವರ ಬಾಲ್ಯದ ದಿನಗಳ…

  • ಮಾಧ್ಯಮ ಕ್ಷೇತ್ರದಲ್ಲಿರುವ ಅನೈತಿಕ ಪೈಪೊಟಿಯು ಮಾಧ್ಯಮ ವೃತ್ತಿ ಮಾಡುವವರನ್ನು ವಿಪರೀತ ಒತ್ತಡದಲ್ಲಿ ಸಿಲುಕಿಸಿದೆ. ಸುದ್ದಿ ಮತ್ತು ಜಾಹೀರಾತುಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ. ಎಲೆಕ್ಟ್ರಾನಿಕ್ ಮಾಧ್ಯಮವು ಮುದ್ರಣ ಮಾಧ್ಯಮದ ಮೇಲೆ ಪ್ರಭಾವ ಬಿರುತ್ತಿದೆ. ರಾಜಕೀಯ ಪಕ್ಷಗಳ ಮುಖಂಡರು ಮಾಧ್ಯಮ ಸಂಸ್ಥೆಗಳ ಒಡೆಯರಾಗುತ್ತಿದ್ದಾರೆ. ಈ ವಿದ್ಯಮಾನಗಳು ಮಾಧ್ಯಮ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಮುಡಿಸುತ್ತದೆ. ಇಂದಿನ ಮಾಧ್ಯಮ ಪೀಳಿಗೆಗೆ ಭಾಷಾ ಜ್ಞಾನದ ಕೊರತೆ ಎದ್ದು ಕಾಣುತ್ತಿದೆ. ಇಂಥ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳ ಮೂಲಕ ಕಿರಿಯ ಮಾಧ್ಯಮ ಮಿತ್ರರಿಗೆ ಮತ್ತು ಈ ಕ್ಷೇತ್ರಕ್ಕೆ ಪ್ರವೇಶ ಮಾಡುತ್ತಿರುವ ಪತ್ರಕರ್ತರಿಗೆ ತಮ್ಮ ಅನುಭವನ್ನು ವಿವರಿಸಿದ್ದಾರೆ.

  • ಭರವಸೆಯ ಕವಯತ್ರಿ ವಾಣಿ ಭಂಡಾರಿಯವರ ಹೊಸ ಕವನ ಸಂಕಲನ ‘ಖಾಲಿ ಜೋಳಿಗೆಯ ಕನವರಿಕೆಗಳು’ ತಮ್ಮ ಮನದಾಳದ ಮಾತಿನಲ್ಲಿ ವಾಣಿಯವರು ತಾವು ಬರೆದ ಕವನಗಳ ಬಗ್ಗೆ, ಕವನಗಳು ತಮ್ಮೊಳಗೆ ಚಿಗುರೊಡೆದ ಬಗ್ಗೆ ಹೇಳುವುದು ಹೀಗೆ

    “ಮನದ ಭಾವ ಹಾಡಾದಾಗ”

    “ಮುಳ್ಳಿನ ಮೇಲಿನ ಸಿಟ್ಟಿಗೆ
    ಬೇಲಿಗೆ ಬೆಂಕಿ ಹಾಕಬೇಡ
    ಸಾವಿರ ಮುಳ್ಳುಗಳ ನಡುವೆ
    ಒಂದು ಹೂ ಅರಳಿತು”
    (ಗಾಲೀಬ)

    ಕವಿತೆ ಬರೆಯುವುದೆಂದರೆ ಮನದ ಭಾವಕ್ಕೆ ಹೆಪ್ಪು ಹಾಕಿ ಮಸೆದು ಕಾಯಿಸಿ ಘಮಗುಡಿಸಿ ತುಪ್ಪವಾಗಿಸುವ ಕೆಲಸ. ಇಂತಹ ಮಹತ್ಕಾರ್ಯವು ಯಾಕೆ ಏನು ಹೇಗೆ ಎಲ್ಲಿ ಉಧ್ಭವಿಸುತ್ತವೆ ಎಂಬುದು ಕವಿಯ ಆ ಕ್ಷಣದ ಭಾವದೊರೆತೆಗೂ ಕೂಡ…

  • ಉದಯೋನ್ಮುಖ ಚಿತ್ರ ನಿರ್ದೇಶಕ, ಕತೆಗಾರ ಕೌಶಿಕ್ ರತ್ನ ಅವರ ನೂತನ ಕಥಾ ಸಂಕಲನ ‘ನಿಧಿ’. ಈ ಕೃತಿಗೆ ಅವರು ಬರೆದ ಲೇಖಕರ ಮಾತುಗಳ ಆಯ್ದ ಭಾಗ ಇಲ್ಲಿದೆ…

    “ಖಾಲಿ ಜೇಬಲ್ಲಿ ಕೋಟಿಗಟ್ಟಲೆ ದೊಡ್ಡ ಕನಸುಗಳನ್ನು ತುಂಬಿಕೊಂಡು ಊರು, ಮನೆ, ಪ್ರೀತಿ, ಓದು, ಕೆಲಸ ಎಲ್ಲವನ್ನೂ ಬಿಟ್ಟು ರಂಗಭೂಮಿಯ ಮಡಿಲು ಸೇರಿ ನಾಟಕಗಳನ್ನು ಮಾಡುತ್ತಾ, ಧಾರಾವಾಹಿ- ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಅನುಭವಿಸುತ್ತಾ, ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಕಿರು ಚಿತ್ರಗಳನ್ನು ಮಾಡುತ್ತಾ, ನಟರಾಗುವ, ನಿರ್ದೇಶಕರಾಗುವ ಕನಸು ಹೊತ್ತು ಆಡಿಷನ್‌ಗಳಿಗಾಗಿ, ಅವಕಾಶಗಳಿಗಾಗಿ ಅಲೆದಾಡಿದಾಗಲೇ ಗೊತ್ತಾಗಿದ್ದು, ಸಿನಿಮಾ ಮಾಡಲು ಬೇಕಾಗಿರುವುದು ಕೇವಲ ಕಲೆಯಲ್ಲ ಕೈತುಂಬಾ ಕಾಸು.

  • ಬರಹಗಾರ್ತಿ, ಪತ್ರಕರ್ತೆ ಪ್ರಿಯಾ ಕೆರ್ವಾಶೆ ತಮ್ಮ ಬಾಲ್ಯದ ನೆನಪುಗಳನ್ನು ‘ಪುಟ್ಟ ಹೆಜ್ಜೆ ದೊಡ್ಡ ಕಣ್ಣು’ ಪುಸ್ತದ ಮೂಲಕ ಹರಡಿದ್ದಾರೆ. ಈ ಕೃತಿಯಲ್ಲಿ ಬಹು ಮುಖ್ಯವಾಗಿ ತುಳುನಾಡಿನಲ್ಲಿ ನಡೆಯುವ ಭೂತದ ಆರಾಧನೆ,ಭೂತ, ಗುಳಿಗ ಮೊದಲಾದುವುಗಳ ಬಗ್ಗೆ ಅವರ ಬಾಲ್ಯದ ನೆನಪುಗಳನ್ನು ಬರೆದು ‘ಇದು ಭೂತ ಕಾಲ’ ಎಂದು ನಿವೇದಿಸಿದ್ದಾರೆ. ಈ ಕೃತಿಗೆ ಸುಂದರವಾದ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಅಂಕಣಕಾರ ಜೋಗಿ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಬರಹದ ಕೆಲವು ಸಾಲುಗಳು ಇಲ್ಲಿವೆ…

    “ಅಪ್ಪನೊಂದಿಗೆ ಮಗಳು ಆಡುವ ಮಾತುಕತೆ ಎಂಬಂತೆ ನಿರೂಪಿತವಾಗಿರುವ ಈ ಬರಹಗಳು ಚಳಿಗಾಲದ ಮುಂಜಾನೆಯ ಮಂಜು ಹೊದ್ದುಕೊಂಡ ಹುಲ್ಲಿನ ಗರಿಗಳಂತೆ ತಾಜಾ ಆಗಿವೆ. ನಿರೂಪಣೆಯ ಕ್ರಮ, ಯೋಚಿಸುವ ರೀತಿ,…

  • ಗೋವಾದ ಮೀನುಗಾರ ದಂಪತಿಗಳ ಮಗ ಜುಜೆ ಎಂಬಾತನ ಬದುಕಿನ ಘಟನೆಗಳ ಮೂಲಕ ಗೋವಾದ ಸ್ವಾತಂತ್ರ್ಯ ಹೋರಾಟದ ಕತೆ ಹೇಳುವ ಪುಸ್ತಕ ಇದು. ಸುರೇಖಾ ಪನಂಡಿಕರ್ ಬರೆದಿರುವ ಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಕೆ. ಸುಧಾ ರಾವ್.

    ಅಲ್ಲಿನ ಸಮುದ್ರತೀರದಲ್ಲಿ ಆಟವಾಡುತ್ತಾ, ಅಪ್ಪ ಪೆಡ್ರೊ ಮತ್ತು ಅಮ್ಮ ಮರಿಯಾಳಿಗೆ ಬೆಳಗ್ಗೆ ಮೀನು ವಿಂಗಡಿಸುವ ಕೆಲಸದಲ್ಲಿ ಸಹಾಯ ಮಾಡುತ್ತಾ ದಿನಗಳೆಯುತ್ತಿದ್ದ ಜುಜೆ. ಶಾಲೆಗೆ ಹೋಗಬೇಕೆಂಬುದು ಅವನ ಕನಸು. ಅದು ಕನಸಾಗಿಯೇ ಉಳಿಯಲು ಕಾರಣ ಅವನ ಹೆತ್ತವರ ಬಡತನ. ಹತ್ತಿರದ ಶಾಲೆಯ ಶುಲ್ಕ ಪಾವತಿಸಲು ಅವರಿಗೆ ಸಾಧ್ಯವಿರಲಿಲ್ಲ.

    ಒಮ್ಮೆ ವಯಸ್ಕರೊಬ್ಬರು ಸಮುದ್ರತೀರಕ್ಕೆ ಬರುತ್ತಾರೆ. ಅಲ್ಲಿ ಅಡ್ಡಾಡುತ್ತಿದ್ದ ಜುಜೆಗೆ ವಿವಿಧ ಸಮುದ್ರ ಚಿಪ್ಪುಗಳ ಬಗ್ಗೆ ತಿಳಿಸಿ, ಅವನ್ನು ಸಂಗ್ರಹಿಸಬೇಕೆಂದೂ ಅವನ್ನೆಲ್ಲ…

  • ‘ಉರಿಯ ಗದ್ದುಗೆ’ ಬಿ.ಆರ್. ಪೊಲೀಸ್ ಪಾಟೀಲ ಅವರ ಕಾದಂಬರಿಯಾಗಿದೆ. ಇದಕ್ಕೆ ಶಶಿಕಾಂತ ಪಟ್ಟಣ ಅವರ ಬೆನ್ನುಡಿ ಬರಹವಿದೆ; ವಿರಕ್ತಪೀಠ ಪರಂಪರೆಯ ತಾಯಿಬೇರು ಎಡೆಯೂರು ತೋಂಟದ ಸಿದ್ದಲಿಂಗ ಶಿವಯೋಗಿಗಳು. ಅವರ ಬಳಿವಿಡಿದು ಬಂದ ಮಠ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ. ಈ ಮಠದ ೧೯ನೇ ಪೀಠಾಧಿಕಾರಿಗಳಾಗಿ ೧೯೭೪ ಜುಲೈ ೨೯ ರಂದು ಅಧಿಕಾರ ವಹಿಸಿಕೊಂಡ ಪೂಜ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಮೊದಲ ದಿನದಿಂದಲೇ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಪೀಠಕ್ಕೆ ಬರುವ ಮೊದಲು ಹೊಯ್ದಾಟವಿದ್ದರೂ ಬಂದು ಹೊಣೆಹೊತ್ತ ಮೇಲೆ ದೃಢ ನಿಶ್ಚಯ ತಾಳಿ ಈ ಮಠದ, ಭಕ್ತರ ಶ್ರೇಯೋಭಿವೃದ್ಧಿಗೆ ಅಹರ್ನಿಶಿಯಾಗಿ ಶ್ರಮಿಸಿದ್ದಲ್ಲದೆ ಅಶಕ್ತ, ಅವಕಾಶವಂಚಿತ ಅನೇಕ ಸಮುದಾಯಗಳ ಉನ್ನತಿಗಾಗಿ, ನಾಡು, ನುಡಿ, ಗಡಿ ಸಂವರ್ಧನೆಗಾಗಿ,…

  • ವಿಜಯನಗರದ ಸಾಮ್ರಾಟರಾಗಿದ್ದ ಕೃಷ್ಣ ದೇವರಾಯರಿಗೆ ಭಾರತದ ಇತಿಹಾಸದಲ್ಲಿ ತಮ್ಮದೇ ಆದ ಸ್ಥಾನವಿದೆ. ಇವರ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿದ್ದರೂ ಸು ರುದ್ರಮೂರ್ತಿಯವರು ಬರೆದ ‘ಶ್ರೀ ಕೃಷ್ಜದೇವರಾಯ’ ಮರೆಯಲಾಗದ ಸಾಮ್ರಾಜ್ಯದ ಸಾಮ್ರಾಟ ಎನ್ನುವ ಕಾದಂಬರಿ ಅವರ ಬಗ್ಗೆ ಹೊಸ ಲೋಕವನ್ನೇ ತೆರೆದಿಡುತ್ತದೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಬರಹಗಾರರಾದ ಆರ್ ಶೇಷಶಾಸ್ತ್ರಿ. ಅವರು ಬರೆದ ಮುನ್ನುಡಿಯಿಂದ ಆಯ್ದ ಭಾಗ ನಿಮ್ಮ ಓದಿಗಾಗಿ…

    “ಭಾರತದ ಅರಸರುಗಳಲ್ಲಿ ಶ್ರೀಕೃಷ್ಣದೇವರಾಯನಿಗೆ ವಿಶಿಷ್ಟವಾದ ಸ್ಥಾನವಿದೆ. ಸಮರ್ಥ ಆಡಳಿತಗಾರ, ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದ ಪರಾಕ್ರಮಿ; ಕಲೆ, ಸಾಹಿತ್ಯ ರಂಗಗಳ ಪೋಷಕ; ತಾನು ವೈಷ್ಣವ ಧರ್ಮವನ್ನು…