‘ಅರಿವಿನ ಜಾಡು' ಎಂಬ ಲೇಖನಗಳ ಸಂಗ್ರಹವನ್ನು ಬರೆದವರು ದಾವಲಸಾಬ ನರಗುಂದ. ಇವರ ಬರವಣಿಗೆಯ ಬಗ್ಗೆ ಸ್ವತಃ ನರಗುಂದರ ಗುರುಗಳಾದ ಧನವಂತ ಹಾಜವಗೋಳ ಇವರು ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ. ಆ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...
“ಸ್ನಾತಕೋತ್ತರ ಕನ್ನಡ ಎಂ.ಎ ಮಾಡುವಾಗ ದಾವಲಸಾಬ ನರಗುಂದ ಅವರು ನನ್ನ ವಿದ್ಯಾರ್ಥಿ ಅಂತಿಮ ವರ್ಷದಲ್ಲಿ ಆಂಶಿಕ ಅಂಕಗಳಿಗಾಗಿ ಸಿದ್ಧಪಡಿಸುವ ಕಿರುಪ್ರಬಂಧ ರಚನೆಯ ಸಂದರ್ಭದಲ್ಲಿ ನಾನು ಇವರಿಗೆ ಮಾರ್ಗದರ್ಶಕ, 'ಮುಳಗುಂದ ಪರಿಸರದ ಜಾನಪದ ಅಧ್ಯಯನ' ಎಂಬ ಇವರ ಕಿರುಪ್ರಬಂಧ ನೋಡಿ ತುಂಬಾ ಖುಷಿಪಟ್ಟಿದ್ದೆ. ಇವರು ತುಂಬಾ ಪ್ರತಿಭಾವಂತ ಮತ್ತು ಪರಿಶ್ರಮ ಪಡುವ ವಿದ್ಯಾರ್ಥಿ, ಸರಳ ಸಜ್ಜನಿಕೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡ…