ಪುಸ್ತಕ ಸಂಪದ

  • ಯಕ್ಷಗಾನ, ಚಿತ್ರಕಲೆ, ವಿಜ್ಞಾನ ಸಾಹಿತ್ಯ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಮಹತ್ವದ ಕೃತಿಗಳನ್ನು ರಚಿಸಿದವರು ಡಾ. ಕೆ. ಶಿವರಾಮ ಕಾರಂತರು. ಐವತ್ತಕ್ಕೂ ಮಿಕ್ಕಿ ಕಾದಂಬರಿಗಳನ್ನು ಬರೆದವರು. “ಕಡಲತಡಿಯ ಭಾರ್ಗವ” ಎಂದು ಹೆಸರಾದವರು. ತಮ್ಮ ಅಧ್ಯಯನಶೀಲತೆ ಮತ್ತು ಪ್ರತಿಭೆಯಿಂದ ಕನ್ನಡದ ಅಗ್ರಗಣ್ಯ ಸಾಹಿತಿಗಳಲ್ಲಿ ಒಬ್ಬರೆನಿಸಿದವರು.

    ಅವರು ಬರೆದಿರುವ ಕೆಲವೇ ಪ್ರವಾಸ ಕಥನಗಳಲ್ಲೊಂದು “ಪಾತಾಳಕ್ಕೆ ಪಯಣ”. ಇದರ ಬಗ್ಗೆ ಮುನ್ನುಡಿಯಲ್ಲಿ ಡಾ. ಕಾರಂತರು ಹೀಗೆನ್ನುತ್ತಾರೆ: “ನನ್ನೀ ಬರಹದಲ್ಲಿ ನಾನು ನೋಡಿದ ಬೃಹತ್ ದೇಶವಾದ ಯುನೈಟೆಡ್ ಸ್ಟೇಟ್ಸಿನ ಅಲ್ಪ ಪರಿಚಯವು ನಿಮಗೆ ಆದೀತು. ನನಗೆ ಇರುವುದೂ ಅದರ ಅಲ್ಪ ಪರಿಚಯವೇ! ನಾನು ಅಲ್ಲಿ ಇದ್ದ ಕಾಲ ಬಲು ಸ್ವಲ್ಪ; ಅಲ್ಲಿನ ಜನಗಳ ಪರಿಚಯವನ್ನು ಬೆಳೆಯಿಸುವ ಅವಕಾಶವಂತೂ ಆಗಿರಲೇ ಇಲ್ಲ. ಇದೊಂದು…

  • ಹೆಸರಿಗೆ ತಕ್ಕಂತೆ ಕವಿಯಾಗಿರುವ ‘ಕವಿರಾಜ್’ ಅವರ ಸಿನೆಮಾ ಸಾಹಿತ್ಯದ ೨೫ ವರ್ಷಗಳ ಪಯಣದ ಆಗು ಹೋಗುಗಳನ್ನು ಅವರೇ ತಮ್ಮದೇ ಆದ ಬರಹದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಮುನ್ನುಡಿ, ಬೆನ್ನುಡಿಯ ಹಂಗೇ ಬೇಡ ಎನ್ನುತ್ತಿದ್ದ ಕವಿರಾಜ್ ಕೊನೆಗೆ ತಮ್ಮ ವೃತ್ತಿ ಜೀವನದ ಮೊದಲ ಸಂದರ್ಶನ ಮಾಡಿದ ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು ಅವರಿಂದ ಮುನ್ನುಡಿ ಬರೆಯಿಸಿಕೊಂಡಿದ್ದಾರೆ. ಕವಿರಾಜ್ ಅವರಿಗೆ ಅಭಿನಂದನೆ ತಿಳಿಸುತ್ತಾ ಗಣೇಶ್ ಕಾಸರಗೋಡು ತಮ್ಮ ಮುನ್ನುಡಿಯಲ್ಲಿ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ…

    “ಕವಿರಾಜ ಮಾರ್ಗದಲ್ಲಿ' ಪುಸ್ತಕಕ್ಕೊಂದು ಮುನ್ನುಡಿ ಬರೆದು ಕೊಡಿರೆಂದು ಲೇಖಕ ಕವಿರಾಜ್ ವಿನಂತಿಸಿಕೊಂಡಾಗ ನಾನು ಕೇಳಿದ ಮೊದಲ ಪ್ರಶ್ನೆ…

  • ಒಂಬತ್ತು ದಶಕಗಳ ಕನ್ನಡ ಚಿತ್ರರಂಗದಲ್ಲಿ ಸುಮಾರು ಐದು ಸಾವಿರ ಚಿತ್ರಗಳು ಬಿಡುಗಡೆಯಾಗಿವೆ. ಬಹುಶಃ ಬೇರೆ ಯಾವುದೇ ಭಾಷೆಯಲ್ಲೂ ಬಿಡುಗಡೆಯಾಗದಷ್ಟು ಅತೀ ಹೆಚ್ಚು ಪೌರಾಣಿಕ ಚಿತ್ರಗಳು, ಐತಿಹಾಸಿಕ ಸಿನಿಮಾಗಳು, ಸಾಹಿತ್ಯಾಧಾರಿತ, ಕಲಾತ್ಮಕ, ಮಕ್ಕಳ, ಉಪಭಾಷೆಯ ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗಿವೆ. ಕನ್ನಡ ಸಾಹಿತ್ಯ ಲೋಕದ ಹಲವು ದಿಗ್ಗಜರು ಚಿತ್ರರಂಗದಲ್ಲಿ ಪ್ರತ್ಯಕ್ಷವಾಗಿ ತೊಡಗಿಸಿಕೊಂಡಿದ್ದಾರೆ. ಹಲವರ ಕಥೆ, ಕಾದಂಬರಿಗಳು ಚಿತ್ರಗಳಾಗಿವೆ. ಕಾವ್ಯಗಳು ಹಾಡುಗಳಾಗಿವೆ. ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪೈಕಿ ಮೂವರು ಚಿತ್ರ ನಿರ್ದೇಶನ ಮಾಡಿದ್ದಾರೆ. ಸಂಭಾಷಣೆಯೇ ಇಲ್ಲದ ಚಿತ್ರಗಳು, ಒಂದೇ ಟೇಕ್‌ನಲ್ಲಿ ತಯಾರಾದ ಚಿತ್ರಗಳು, ಅತ್ಯಂತ ಕಡಿಮೆ ಅವಧಿಯಲ್ಲಿ ಚಿತ್ರೀಕರಣವಾದ ಚಿತ್ರಗಳು, ಅಂತಾರಾಷ್ಟ್ರೀಯ…

  • “ಎಲ್ಲರಿಗೂ ಈ ಜೀವನದಲ್ಲಿ ಪ್ರಮುಖವಾಗಿ ಬೇಕಿರುವುದು ಸಕಾರಾತ್ಮಕವಾಗಿ ಸ್ವೀಕರಿಸುವ ಮತ್ತು ಆಗಾಗ ನಮ್ಮನ್ನೇ ನಾವು RE-START ಮಾಡಿಕೊಳ್ಳುವ ಗುಣ. ಸಾಧಿಸಿದವರ ಜೀವನದ ಅನುಭವಗಳನ್ನೇ ಈ ಪುಸ್ತಕದಲ್ಲಿ ಹೇಳಿದ್ದೇನೆ. ಇನ್ಯಾವುದೋ ಬುದ್ಧಿ ಮಾತು, ಆದರ್ಶ, ಗೆಲುವಿನ ಸೀಕ್ರೆಟ್‌, ಕಣ್ಣಿಗೆ ಕಾಣದ ರಹಸ್ಯ ವಿಷಯಗಳನ್ನು ಇಲ್ಲಿ ಹೇಳಿಲ್ಲ. ಹಾಗೇ ಸುಮ್ಮನೆ ಈ ಜೀವನದಲ್ಲಿ ಎಲ್ಲರೂ ಎದುರಿಸುವ, ಈ ಲೈಫ್‌ ಅಲ್ಲಿ ಒಂದಲ್ಲ ಒಂದು ರೀತಿ ನಡೆದಿರುವ ಘಟನೆಗಳನ್ನೇ ಸಹಜವಾಗಿ ತಿಳಿಸಿದ್ದೇನೆ. ಸೋತವರ ಕತೆ, ಗೆದ್ದವರ ರಹಸ್ಯ, ಅದರಲ್ಲಿಯೂ ಸೋತು ತಮ್ಮನ್ನೇ

    RE-START ಮಾಡಿಕೊಂಡು ಗೆಲ್ಲುವ ಸಾಹಸದ ಕತೆಗಳಲ್ಲಿ ಒಂದು ಥ್ರಿಲ್‌, ಮಾಂತ್ರಿಕತೆ ಇದೆ. ಸಾಮಾನ್ಯವಾಗಿ ಗೆದ್ದವರ ಸಾಹಸ…

  • ಉದಯೋನ್ಮುಖ ಕತೆಗಾರ ಅರ್ಜುನ್ ದೇವಾಲದಕೆರೆ ಅವರ ‘ಮಿಕ್ಸ್ & ಮ್ಯಾಚ್’ ಎನ್ನುವ ಸಣ್ಣ ಕತೆಗಳ ಸಂಕಲನವನ್ನು ವೀರಲೋಕ ಬುಕ್ಸ್ ಪ್ರಕಾಶನ ಸಂಸ್ಥೆ ಹೊರತಂದಿದೆ. ಪ್ರಕಾಶಕರಾದ ವೀರ ಲೋಕ ಬುಕ್ಸ್ ನ ಮಾಲಕ ವೀರಕಪುತ್ರ ಶ್ರೀನಿವಾಸ್ ಅವರು ಈ ಕೃತಿಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ…

    “ಸಣ್ಣ ಕತೆಗಳು ಪ್ರಪಂಚದಾದ್ಯಂತದ ಸಂಸ್ಕೃತಿಗಳಲ್ಲಿ ಬಹಳ ಹಿಂದಿನಿಂದಲೂ ಅಮೂಲ್ಯವಾದ ಸ್ಥಾನವನ್ನು ಹೊಂದಿವೆ. ಈಸೋಪನ ಕಥೆಗಳು, ಚಂದಮಾಮದ ಕತೆಗಳು, ರಾಮಾಯಣ, ಮಹಾಭಾರತದೊಳಗಿನ ಕತೆಗಳು ಇಂದಿಗೂ ಅತಿಹೆಚ್ಚು ಜನಪ್ರಿಯತೆಯನ್ನು ಪಡೆದವುಗಳೇ ಆಗಿವೆ. ಕತೆ ಎಂದ ತಕ್ಷಣ ಅದು ಒಳನೋಟಗಳಿಂದ ಕೂಡಿರಬೇಕು, ಸಂಕೀರ್ಣ ನಿರೂಪಣೆಯನ್ನು ಹೊಂದಿರಬೇಕು ಎಂಬುದನ್ನು ಸಾಹಿತ್ಯಲೋಕ ನಂಬಿ…

  • ಆರ್. ವೆಂಕಟರೆಡ್ಡಿ ಅವರ ‘ನೂರಕ್ಕೆ ನೂರು’ ಕಲಿಕೆ ಮತ್ತು ಅಂಕಗಳಿಕೆ ಕೃತಿಯು ವಿದ್ಯಾರ್ಥಿಗಳಿಗೆ ಮನೋವೈಜ್ಞಾನಿಕ ಸಲಹೆಗಳನ್ನು ನೀಡುವ ಸಂಕಲನವಾಗಿದೆ. ಕೃತಿಯ ಕುರಿತು ಬೆನ್ನುಡಿಯಲ್ಲಿ ಎಂ. ಬಸವಣ್ಣ ಅವರು ಹೀಗೆ ಹೇಳಿದ್ದಾರೆ; ಬಹಳ ಕಾಲದಿಂದಲೂ ಮನೋವಿಜ್ಞಾನವನ್ನು ಅಧ್ಯಯನ ಮಾಡುವವರಲ್ಲಿ ಎರಡು ಪ್ರಮುಖ ಗುಂಪುಗಳಿರುವುದು ಕಂಡುಬರುತ್ತದೆ. ಒಂದು ಗುಂಪಿನವರ ಅಧ್ಯಯನ ಮತ್ತು ಆಸಕ್ತಿ ಇರುವುದೆಲ್ಲ 'ಮನೋವಿಜ್ಞಾನವೆಂದರೆ ಏನು?” ಎನ್ನುವುದರ ಮೇಲೆ. ಇನ್ನೊಂದು ಗುಂಪಿನವರ ಆಸಕ್ತಿ ಇರುವುದು "ಮನೋವಿಜ್ಞಾನ ಯಾಕೆ ಬೇಕು?" ಎನ್ನುವಲ್ಲಿ. ಮೊದಲನೆಯ ಗುಂಪಿನವರು ವಿವರಣಾತ್ಮಕ ಮನೋವಿಜ್ಞಾನದ ನಿರ್ಮಾಪಕರು. ಎರಡನೆಯವರು ಅನ್ವಯಿಕ ಮನೋವಿಜ್ಞಾನದ ಪ್ರವರ್ತಕರು. ಇವೆರಡು ಮನೋವಿಜ್ಞಾನದ ಎರಡು ಕಣ್ಣುಗಳಿದ್ದಂತೆ. ಪ್ರಸ್ತುತ…

  • ಈ ವರ್ಷ ಓದಿದ ಮೊದಲ ಕಥಾಸಂಕಲನ ಅಶ್ವಿನಿ ಸುನಿಲ್ ಅವರ 'ಅತೀತಭವ'. ಕಳೆದವರ್ಷ ನಿತ್ಯೋತ್ಸವ ಅಭಿಯಾನದಲ್ಲಿ ವೀಣಾಮೇಡಂ ಅವರಿಂದ ಬಹುಮಾನವಾಗಿ ದೊರೆತ ಕೃತಿಯಿದು. ಸಣ್ಣಕತೆಗಳು ಯಾರಿಗೆ ತಾನೇ ಇಷ್ಟವಾಗುವುದಿಲ್ಲ! ಹದಿನೈದು ಸಣ್ಣಕತೆಗಳು ಈ ಸಂಕಲನದಲ್ಲಿವೆ. ಇಲ್ಲಿನ ಬಹುತೇಕ ಕತೆಗಳು ಐದಾರು ಪುಟಗಳಲ್ಲಿ ಮುಗಿದುಬಿಡುತ್ತವೆ. ಹೀಗಾಗಿ ಓದುಗನಿಗೆ ಒಂದೇ ಗುಕ್ಕಿನಲ್ಲಿ ನಾಲ್ಕಾರು ಕತೆಗಳನ್ನು ಒಮ್ಮೆಲೆ ಓದಲು ಸಾಧ್ಯವಾಗುತ್ತದೆ. ಹೆಚ್ಚಿನ ಕಥಾವಸ್ತುಗಳು ದೈನಂದಿನ ಜೀವನಕ್ಕೆ ಸಂಬಂಧಿಸಿದವೇ ಆದ್ದರಿಂದ, ಸರಳವಾಗಿ ಮತ್ತು ಸರಾಗವಾಗಿ ಕತೆಗಳು ಸಾಗುತ್ತವೆ. ನನಗೆ ವೈಯುಕ್ತಿಕವಾಗಿ ಯಾವ ಕತೆಯೂ ಧೀರ್ಘವೆನಿಸಲಿಲ್ಲ. ಆದರೆ ಜಾಹ್ನವಿ, ಅಪ್ಪ, ಗೋಲಿಸೋಡಾ, ಭ್ರಮೆ ಕತೆಗಳಲ್ಲಿ ಮನಸ್ಸಿನ ತಪ್ಪು ಕಲ್ಪನೆ, ಅಥವಾ ಪ್ರೇರಿತ…

  • ಹಿರಿಯ ಪತ್ರಕರ್ತರು ಮತ್ತು ಕತೆಗಾರರು ಆಗಿರುವ ಎಫ್.ಎಂ. ನಂದಗಾವ ಅವರ `ಘಟ ಉರುಳಿತು’ ಇದು ಇವರ ಎಂಟನೇ ಕಥಾ ಸಂಕಲನ. ವಿವಿಧ ವಾರ, ಮಾಸ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕತೆಗಳನ್ನು ಸಂಚಲನ ಪ್ರಕಾಶನ ಓದುಗರ ಮುಂದಿಟ್ಟಿದೆ. ಪತ್ರಕರ್ತನಾಗಿ ಅಪಾರ ಜೀವನಾನುಭವ ಇರುವ ನಂದಗಾವ ಅವರು ದಿನನಿತ್ಯ ನಡೆಯುವ ಸಾಮಾನ್ಯ ಘಟನೆಗಳನ್ನು ಕತೆಯನ್ನಾಗಿಸಿದ್ದಾರೆ. ಸಾಮಾನ್ಯ ಘಟನೆಗಳನ್ನು ಕತೆಯಾಗಿ ನಿರೂಪಿಸುವಾಗ ಅವುಗಳಿಗೆ ಸಾಕ್ಷಿ ಚಿತ್ರದ ಸ್ವರೂಪ ಬಂದುಬಿಡುತ್ತದೆ. ಕತೆಗಳಿಗಿರುವ ಕುತೂಹಲದಿಂದ ಓದಿಸಿಕೊಂಡು ಹೋಗುವ ಗುಣ, ಆಕಸ್ಮಿಕ ತಿರುವು ಮತ್ತು ಅನಿರೀಕ್ಷಿತ ಮುಕ್ತಾಯ ಇರುವುದಿಲ್ಲ. ಯಥಾವತ್ತಾಗಿ ಒಂದಾದ ಮೇಲೊಂದು ಘಟನೆಗಳನ್ನು ವಾಸ್ತವಕ್ಕೆ ಕುಂದುಂಟಾಗದೆ ಜೋಡಿಸಲಾಗಿರುತ್ತದೆ. ಇಂತಹ ಸಾಕ್ಷ್ಯ ಚಿತ್ರದ…

  • “ವಿವೇಕದಿಂದ ಆನಂದ” ದಲ್ಲಿ ಲೇಖಕರಾದ ಡಾ. ಎಸ್  ಎಸ್ ಓಂಕಾರ್ ಇವರು ಸ್ವಾಮಿ ವಿವೇಕಾನಂದರ ಜೀವನವನ್ನು ಮಾದರಿಯಾಗಿ ಇಟ್ಟುಕೊಂಡು ಪತಂಜಲಿ ಮಹರ್ಷಿಗಳ ಘನವಾದ 'ಯಮ' ಮತ್ತು 'ನಿಯಮ' ತತ್ತ್ವಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಯೋಗದ ಶಾರೀರಿಕ ಅಂಶಗಳಿಗೆ ಆಧುನಿಕ ದೃಷ್ಟಿಕೋನ ಹೆಚ್ಚು ಮಹತ್ವ ಕೊಟ್ಟಿದ್ದರೂ, ಈ ಮೂಲಭೂತ ತತ್ತ್ವಗಳು ಅತಿ ಮುಖ್ಯ ಹಾಗೂ ವಿವೇಕಪೂರ್ಣವಾದ, ಅರ್ಥಪೂರ್ಣವಾದ, ಸಮರಸದ ಜೀವನಕ್ಕೆ ಉತ್ತಮ ಮಾರ್ಗದರ್ಶಿ. ಈ ಪುಸ್ತಕದ ಒಂದೊಂದು ಅಧ್ಯಾಯವೂ ಈ ತತ್ತ್ವಗಳ ಆಳಕ್ಕೆ ಇಳಿದು ಅವುಗಳ ಅರ್ಥ, ಪರಿಣಾಮ ಹಾಗೂ ವ್ಯಾವಹಾರಿಕ ಉಪಯೋಗಗಳನ್ನು ಶೋಧಿಸುತ್ತದೆ. ಪತಂಜಲಿಯವರು ವಿವರಿಸಿದಂತೆ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಶೌಚ, ಸಂತೋಷ, ತಪಸ್‌, ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ…

  • ಮೂರು ಸಾಹಿತಿಗಳು ಸೇರಿ ಬರೆದ ಗಝಲ್ ಗಳ ಸಂಕಲನವೇ ‘ಕಡಲ ಹನಿ ಒಡಲ ಧ್ವನಿ. ಪುಸ್ತಕದ ಬೆನ್ನಿಗೆ ಹಿಮ್ಮಾತು ಹೀಗಿದೆ “ನಾವು ಮೂವರು ನೆರೆಕರೆಯವರು ರತ್ನಾ ಟಿ ಭಟ್ಟ, ಪುತ್ತೂರು, ಹಾ ಮ ಸತೀಶ ಬೆಂಗಳೂರು ಮತ್ತು ನಾನು ಡಾ ಸುರೇಶ ನೆಗಳಗುಳಿ ಒಟ್ಟು ಸೇರಿ ನಮ್ಮ ಹವ್ಯಾಸಗಳಲ್ಲಿ ಒಂದಾದ ಗಜಲ್ ರಚನೆಗಳನ್ನು ಪ್ರಕಾಶಿಸುವ ಇಚ್ಚೆ ಹೊಂದಿ ‘ಕಡಲ ದನಿ ಒಡಲ ಧ್ವನಿ’ ಎಂಬ ಶೀರ್ಷಿಕೆಯಡಿಯಲ್ಲಿ ತಲಾ ಮೂವತ್ತರಂತೆ ಒಟ್ಟು ತೊಂಬತ್ತು ವಿಭಿನ್ನ ರೀತಿಯ ಗಜಲ್ ಗಳನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ.”

    ಈ ಕೃತಿಗೆ ಕಲಬುರಗಿಯ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಮಲ್ಲಿನಾಥ ಎಸ್ ತಳವಾರ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ…