ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೪೯ನೇ ಪುಸ್ತಕವೇ ಲಕ್ಸ್ಮಣ ಫಲ ಮತ್ತು ಸೀತಾಫಲ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ.
ಲಕ್ಸ್ಮಣ ಫಲ, ಸೀತಾಫಲ, ರಾಮಫಲ ಮುಂತಾದುವುಗಳು ಬಹು ಆರೋಗ್ಯಕರ ಹಾಗೂ ರುಚಿಕರ ಹಣ್ಣುಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. “ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಗೆ ಪರಿಣಾಮಕಾರಿ ಔಷಧಿಯೆಂದು ಪ್ರಚಾರವನ್ನು ಗಳಿಸಿರುವ ಲಕ್ಷ್ಮಣ ಫಲ ಮತ್ತು ಬಲು ಹಿಂದಿನಿಂದಲೂ ಜಗತ್ತಿನಾದ್ಯಂತ…