*ಸುಂದರ ಬಾರಡ್ಕರ "ಪೊಲದ್ಯೆ": ತುಳುವರ ಜನಪದೀಯ ಚಿಕಿತ್ಸಾ ಕ್ರಮಗಳ ಉನ್ನತ ಅಧ್ಯಯನಕ್ಕೆ ಅಡಿಗಲ್ಲು*
"ಪೊಲದ್ಯೆ", ಸುಂದರ ಬಾರಡ್ಕ ಅವರ ಮೂರನೇ ಪ್ರಕಟಿತ ಸಂಕಲನ. ತುಳು ಜನಪದ ಚಿಕಿತ್ಸೆ, ಆಚರಣೆ ಮತ್ತು ನಂಬಿಕೆಗಳ ಕುರಿತಾದ ಈ ಕೃತಿಯನ್ನು 2016ರಲ್ಲಿ ಬದಿಯಡ್ಕದ ಅಂಬೇಡ್ಕರ್ ವಿಚಾರ ವೇದಿಕೆ (ರಿ) ಪ್ರಕಾಶಿಸಿದೆ. 51 + 9 ಪುಟಗಳ ಕೃತಿಯ ಬೆಲೆ 70.00 ರೂಪಾಯಿ. ನಯನರಾಜ್ ಎನ್. ಬಿ. ಇವರ ಕಲಾತ್ಮಕ ಮುಖಪುಟವಿರುವ ಸಂಕಲನಕ್ಕೆ ಸಾಹಿತಿ ಆತ್ರಾಡಿ ಅಮೃತಾ ಶೆಟ್ಟಿಯವರ ಮುನ್ನುಡಿ ಮತ್ತು ಉಪನ್ಯಾಸಕರೂ, ಸಾಹಿತಿಯೂ ಆಗಿರುವ ಬಾಲಕೃಷ್ಣ ಬೇರಿಕೆ ಇವರ ಬೆನ್ನುಡಿ ಇದೆ.
"ಪೊಲದ್ಯೆ" ಎಂದರೆ ತುಳುನಾಡಿನಲ್ಲಿ ಬಾಣಂತಿಯರಿಗೆ ಮಾಡುವ ಜನಪದೀಯ ಔಷದೋಪಚಾರ. "ಒಂದು ಜೀವವನ್ನು ಹಡೆದು ಹುದುಗಿಕೊಂಡ ಚೈತನ್ಯವನ್ನು ಪುನರ್ಜೀವಿಸುವ ಮೂಲಕ…