“ದೇವುಡು” ಎಂದೇ ಪ್ರಸಿದ್ಧರಾದ ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ದೇವುಡು ನರಸಿಂಹ ಶಾಸ್ತ್ರಿಗಳು ಬರೆದಿರುವ 22 ಸಣ್ಣ ಕತೆಗಳು ಈ ಸಂಕಲನದಲ್ಲಿವೆ. ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಕಟವಾದ ಈ ಕೃತಿಯ ಸಂಪಾದಕರು ಲಿಂಗರಾಜು.
ಬಹುಮುಖ ಪ್ರತಿಭೆಯ ದೇವುಡು (1896-1962) ಅವರು ಕನ್ನಡನಾಡಿನಲ್ಲಿ ಮನೆಮಾತಾಗಿರುವುದು ಅವರ “ಮಹಾ…” ಸರಣಿಯ ಈ ಮೂರು ಬೃಹತ್ ಕಾದಂಬರಿಗಳಿಂದಾಗಿ: “ಮಹಾಕ್ಷತ್ರಿಯ”, ಮಹಾಬ್ರಾಹ್ಮಣ” ಮತ್ತು “ಮಹಾದರ್ಶನ”. ಇವು ಭಾರತದ ವೈದಿಕ ಸಂಸ್ಕೃತಿಯ ಮೂಲವನ್ನು ಹೊಸತನದಲ್ಲಿ ಕಟ್ಟಿಕೊಡುತ್ತವೆ. ಕನ್ನಡ, ಸಂಸ್ಕೃತ, ಇಂಗ್ಲಿಷ್ ಹಾಗೂ ತೆಲುಗು ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ ದೇವುಡು ಮಹಾನ್ ವಿದ್ವಾಂಸರು. ಜೊತೆಗೆ, ವೇದ, ವೇದಾಂತ, ಭಗವದ್ಗೀತೆ, ರಾಮಾಯಣ, ಮಹಾಭಾರತ, ಉಪನಿಷತ್ತು ಮತ್ತು ಮೀಮಾಂಸ…