ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಪರಂಜ್ಯೋತಿ ಅವರ ಸಚಿತ್ರ ಲೇಖನಗಳ ಸಂಕಲನ “ಮನೆಯಂಗಳದ ಮಿತ್ರರು”. ಪರಂಜ್ಯೋತಿ ಎಂಬುದು ಕೆ.ಪಿ. ಸ್ವಾಮಿ ಅವರ ಕಾವ್ಯನಾಮ. ಇವರು ಕನ್ನಡದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ: ಕತೆಗಳು, ನೀಳ್ಗತೆಗಳು, ಮಕ್ಕಳ ಕತೆಗಳು, ಹಾಗೂ ಲೇಖನ ಸಂಕಲನಗಳು. “ಬೆಟ್ಟದ ಗಾಲಿ” ಇವರು ಬರೆದ ಕಾದಂಬರಿ ಮತ್ತು “ನೀಲಗಿರಿ: ಸಾಮಾಜಿಕ - ಸಾಂಸ್ಕೃತಿಕ ಕಣ್ಣೋಟ” ಕ್ಷೇತ್ರ ಅಧ್ಯಯನ ಆಧಾರಿತ ಬೃಹತ್ ಕೃತಿ.
ಲೇಖಕಿ ಶ್ರೀಮತಿ ಪದ್ಮಾ ಶ್ರೀರಾಮ್ ಅವರು ಮುನ್ನುಡಿಯಲ್ಲಿ ಬರೆದ ಕೆಲವು ಮಾತುಗಳು: “… ಕೆ. ಪಿ. ಸ್ವಾಮಿಯವರು ತಮಿಳುನಾಡಿನ ನೀಲಗಿರಿಯಲ್ಲಿ ಹುಟ್ಟಿ ಬೆಳೆದು ಅಲ್ಲಿನ ಪರಿಸರದೊಂದಿಗೆ ತಾದಾತ್ಮ್ಯ ಹೊಂದಿರುವವರಾದರೂ ಅವರ ಮೂಲ ಮಾತೃಭಾಷೆ (ಕನ್ನಡ), ನೆಲಗಳ ಬಗ್ಗೆ ಆದಮ್ಯ ಪ್ರೀತಿ ಇಟ್ಟುಕೊಂಡು ಅನೇಕ ದಶಕಗಳಿಂದ…