ಡಾ. ಎಂ ಎಸ್ ಮಣಿ ಇವರು ಬರೆದ ‘ಗವಿ ಮಾರ್ಗ' ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದ್ದಾರೆ. ‘ಕತ್ತಲ ಹಾದಿಯ ಪಯಣ' ಎಂದು ಮುಖಪುಟದಲ್ಲೇ ಮುದ್ರಿಸಿ ಕೃತಿಯನ್ನು ಓದುವಂತೆ ಕುತೂಹಲ ಮೂಡಿಸಿದ್ದಾರೆ. ಈ ಕೃತಿಗೆ ಭಾರತದ ಸುಪ್ರೀಂ ಪೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ನ್ಯಾ. ವಿ.ಗೋಪಾಲ ಗೌಡ ಇವರು ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ. ಕೃತಿಗೆ ಪತ್ರಕರ್ತರಾದ ಬನ್ಸಿ ಕಾಳಪ್ಪ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ಇಲ್ಲಿವೆ...
“ಪ್ರಜಾಪ್ರಭುತ್ವದ ‘ವ್ಯವಸ್ಥೆ’ಯಲ್ಲಿ ಅನೇಕ ‘ಅವ್ಯವಸ್ಥೆ’ಗಳು ಅಂತರ್ಗತವಾಗಿವೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಮಾಧ್ಯಮ ಇವು ಜನ ತಂತ್ರ ವ್ಯವಸ್ಥೆಯ ನಾಲ್ಕು ಸ್ತಂಭಗಳು.…