ಕಥೆಗಾರ ಗುರುರಾಜ ಕೋಡ್ಕಣಿ ಬರೆದ ‘ಪ್ಯಾರಾನಾರ್ಮಲ್’ ಎನ್ನುವ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬ ಹಿಂದಿನಿಂದಲೂ ಅತಿಮಾನುಷತೆಯ ಬಗ್ಗೆ ಕತೆಗಳು ಇದ್ದವಾದರೂ ಆಗ ಸರಿಯಾದ ಸಾಕ್ಷಿಗಳಿಲ್ಲದೇ ಅವೆಲ್ಲವೂ ಕೇವಲ ಕತೆಗಳಾಗಿ ಉಳಿದು ಹೋಗಿದ್ದವು. ಆದರೆ ಈಗ ಹಾಗಲ್ಲ, ಪ್ಯಾರಾನಾರ್ಮಲ್ ಕ್ಷೇತ್ರವೆನ್ನುವುದು ಸಾಕಷ್ಟು ಬೆಳವಣಿಗೆ ಕಂಡಿದೆ. ತಾರ್ಕಿಕ ವಿಶ್ಲೇಷಣೆ, ಸಂಶೋಧನಾ ಸಾಮರ್ಥ್ಯ ಮತ್ತು ಅಧ್ಯಯನಗಳಿಂದಾಗಿ ಒಂದು ಕಾಲಕ್ಕೆ ಕೇವಲ ಭ್ರಮೆಯಷ್ಟೇ ಎನ್ನಿಸುವಂತಿದ್ದ ಕೆಲವು ವಿಷಯಗಳು ಈಗ, ಕೇವಲ ಭ್ರಮೆಯಲ್ಲ, ಭ್ರಮೆಯನ್ನು ಮೀರಿದ್ದು ಇನ್ನೇನೋ ಇದೆ ಎನ್ನುವ ಭಾವನೆಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿವೆ. ಸರಿಯಾಗಿ ಗಮನಿಸಿದರೆ ಪ್ಯಾರಾನಾರ್ಮಲ್ ಕ್ಷೇತ್ರ ಕೂಡ, ಸೈಕಾಲಜಿ, ಭೌತಶಾಸ್ತ್ರ ಪರಿಸರ ವಿಜ್ಞಾನ…
ಪುಸ್ತಕ ಸಂಪದ
“ನೀಲಿ ಬೆಳೆಯ ಮಧ್ಯೆ ಗಾಂಧೀಜಿಗೆ ಸಿಕ್ಕ ನೀಲನಕ್ಷೆ ಗಾಂಧೀಜಿ ಎಂಬ ಮಹಾನ್ ಚೇತನ ಮೊಗ್ಗಾಗಿ ಮೂಡಿದ್ದು ದಕ್ಷಿಣ ಆಫ್ರಿಕದಲ್ಲಾದರೂ ಅದು ಹೂವಾಗಿ ಅರಳಿದ್ದು ಬಿಹಾರದ ಚಂಪಾರಣ್ಯದಲ್ಲಿ. ಅಂದಿನ ಕಾಲದ ಇತರ ನೇತಾರರ ದೃಷ್ಟಿಯೆಲ್ಲ ಬ್ರಿಟಿಷ್ ರಾಜಸತ್ತೆಯನ್ನು ಮಣಿಸುವ ಕಡೆ ಇತ್ತು. ಗಾಂಧೀಜಿ ಚಂಪಾರಣ್ಯಕ್ಕೆ ಕಾಲಿಟ್ಟಾಗಲೇ ಅವರಿಗೆ ನಿಜವಾದ ಭಾರತದ ಸ್ಪಷ್ಟ ಚಿತ್ರಣ ಸಿಕ್ಕಿತು. ಇಲ್ಲಿನ ರೈತರ ಮತ್ತು ತಳಸಮುದಾಯದ ಅಜ್ಞಾನ, ಶೋಷಣೆ ಮತ್ತು ದಯನೀಯ ಬದುಕಿಗೆ ಬ್ರಿಟಿಷರಷ್ಟೇ ಅಲ್ಲ, ಸ್ಥಳೀಯ ಕುಲೀನರೂ ಕಾರಣವೆಂಬುದು ಅರಿವಿಗೆ ಬರುತ್ತಲೇ ಗಾಂಧೀಜಿಯವರ ಮನೋಭೂಮಿಕೆ ಬದಲಾಯಿತು. ಬ್ರಿಟಿಷ ರೊಂದಿಗೆ ಮುಖಾಮುಖಿ ಆಗಲೆಂದು ಬಂದ ಮಹಾತ್ಮನ ಆದ್ಯತೆಯೇ ಬದಲಾಯಿತು. ರಾಜಕೀಯ ಸ್ವಾತಂತ್ರ್ಯಕ್ಕೆ ಹೋರಾಡುವಷ್ಟೇ ತನ್ಮಯತೆ…
`ಬೀದಿಯ ಬದುಕು’ ಜಯರಾಮ ಹೆಗಡೆ ಅವರ ಜೀವನ ಕಥನ. ಸುಮಾರು ಇಪ್ಪತ್ತು ವರ್ಷಗಳ ಹಿಂದಿನಿಂದಲೂ ತೊಡಗಿಕೊಂಡ ಈ ಬರಹ ಗಜಗರ್ಭವೇ ಆಗಿದ್ದಂತೂ ಸತ್ಯದ ಸಂಗತಿ. ಜಯರಾಮ ಹೆಗಡೆ ಅವರ ಹಿನ್ನೆಲೆ ಅವರ ಜೀವನದಲ್ಲಾದ ಆಗು ಹೋಗುಗಳು ಅವರ ಊರು ಕೇರಿ ಅಲ್ಲಿಯ ಜನ ಹೀಗೆ ಪೂರ್ತಿ ಜೀವನದಲ್ಲಿ ಘಟಿಸಿದ ಘಟನೆಗಳನ್ನು ಒಗ್ಗೂಡಿಸಿ ಈ ಕೃತಿಯ ಮೂಲಕ ಓದುಗರ ಮುಂದಿಟ್ಟಿದ್ದಾರೆ.
ಲೇಖಕರಾದ ಜಯರಾಮ ಹೆಗಡೆಯವರು ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ.. “ಬೀದಿಯ ಬದುಕು ಎಂದು ಬರೆದುಕೊಂಡೆ. ಬರೆಯುವಾಗ ಒಮ್ಮೆಗೇ ಕುಳಿತು ಬರೆದ ಕಥೆಯಲ್ಲ. ಬರೆದು ಕಾಲ ಬಹಳ ಸಂದಿದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದಿನಿಂದಲೂ ತೊಡಗಿಕೊಂಡ ಈ ಬರಹ ಗಜಗರ್ಭವೇ ಆಗಿದ್ದಂತೂ ಸತ್ಯದ ಸಂಗತಿ. ಇಷ್ಟು ದೀರ್ಘ ಕಾಲ…
ಈ ಕೃತಿಯಲ್ಲಿ ‘ಕು. ಗೋ. ಎಂಬ ವಿಸ್ಮಯ’ ಎಂಬ ಅಧ್ಯಾಯದಲ್ಲಿ ಲೇಖಕರು ಹೇಳುತ್ತಾರೆ “ ಬರೆವ, ಬರೆಸುವ, ಮಾತನಾಡುವ, ಮಾತನಾಡಿಸುವ, ಪುಸ್ತಕಗಳನ್ನು ಮಾರುವ, ಓದುವವರನ್ನು ಹುಡುಕಿಕೊಂಡು ಹೋಗಿ ಪುಸ್ತಕಗಳನ್ನು ಹಂಚುವ, ಲೇಖಕರನ್ನು ಪ್ರೋತ್ಸಾಹಿಸುವ, ಓದುಗರನ್ನು ಪ್ರೀತಿಸುವ, ಅಕ್ಷರ ಸಂಸ್ಕೃತಿಯ ಹರಿಕಾರ, ಪುಸ್ತಕ ಸಂಸ್ಕೃತಿಯ ಪರಿವ್ರಾಜಕ ಕು. ಗೋ. ಯಾನೆ ಉಡುಪಿಯ ಹೆರ್ಗ ಗೋಪಾಲಭಟ್ಟರು ಅಕ್ಷರಶಃ ಒಂದು ವಿಸ್ಮಯ.
ವಿಸ್ಮಯ ಯಾಕೆಂದರೆ, ಸ್ವತಃ ಬರೆವವರು ಬೇರೆಯವರ ಪುಸ್ತಕಗಳ ಕುರಿತು ಒಳ್ಳೆಯ ಮಾತನಾಡುವುದು ಕಡಿಮೆ. ತಾನು ಬರೆದು ಪ್ರಕಟಿಸಿದುದೇ ಮನೆಯಲ್ಲಿ ರಾಶಿ ಬಿದ್ದಿರುವಾಗ, ಬೇರೆಯವರ ಪುಸ್ತಕಗಳ ಪ್ರಕಟಣೆಗೆ ಮುಂದಾಗುವುದು ಕಡಿಮೆ. ಪುಸ್ತಕ ಮಾರಲಿಕ್ಕೆ ಹೊರಟವರು ಒಳ್ಳೆಯ…
“ಪೂರ್ಣಿಮಾ ಸುರೇಶ್ ಅವರ "ಸಂತೆಯೊಳಗಿನ ಏಕಾಂತ" ಕವನ ಸಂಕಲನದುದ್ದಕ್ಕೂ ಕೇಳಿಸುವುದು ಕವಿತೆಗಳ ಎದೆಬಡಿತ. ಈ ಕವಿತೆಗಳು ಕವಿಕಟ್ಟಿದ ಪದಮಹಲ್ ಅಲ್ಲ, ಅವು ಗರ್ಭಕಟ್ಟಿ ಹುಟ್ಟಿದ ಗರ್ಭಗುಡಿಗಳು, ಒಳಗೆ ಮೂರ್ತಿಗಳು, ಪ್ರತಿಮೆಗಳು. ಕವನ ಸಂಕಲನದಲ್ಲಿ ಅರ್ಥಕ್ಕಿಂತ ಅನುಭೂತಿಗೇ ಪ್ರಾಮುಖ್ಯತೆ.
ಇಲ್ಲಿನ ಕಾವ್ಯತಂತ್ರ, ಕೆ. ವಿ. ತಿರುಮಲೇಶ್ ಅವರು ಗಮನಿಸಿದಂತೆ, ಅಪೂರ್ಣ ವಾಕ್ಯಗಳ ಮಾಲೆಗಳು.
ಈ ಮಾರ್ಗ ಪೂರ್ಣಿಮಾ ಅವರ ನ್ಯಾಚುರಲ್ ಮಾರ್ಗ. ನಾಟಕಗಳಲ್ಲಿ ವಾಕ್ಯಗಳ ನಡುವಿನ ಅರ್ಧವಿರಾಮಗಳು ಸೂಚಿಸುವಷ್ಟು, ನಿಟ್ಟುಸಿರುಗಳು ಹೇಳಿದಷ್ಟು, ಬಿಕ್ಕಳಿಕೆಯ ಬಿಂದುಗಳು ಪ್ರತಿಫಲಿಸಿದಷ್ಟು ಅರ್ಥ, ಪೂರ್ಣವಾಕ್ಯಗಳು ಹೇಳಲಾರವು. ಇಲ್ಲಿನ ಕವಿತೆಗಳೂ ಅಷ್ಟೇ, ಸಾಕಷ್ಟು…“ನನ್ನ ಬರವಣಿಗೆಯ ಆರಂಭ ಸಣ್ಣ ಕತೆಗಳಿಂದಲೇ ಆಗಿದ್ದರೂ ಮೊದಲಿಗೆ ಪ್ರಕಟವಾದದ್ದು ಕವಿತೆಗಳು. ಕಳೆದ ಹತ್ತು ವರ್ಷಗಳಿಂದ ಇತ್ತೀಚಿನವರೆಗೆ ಬರೆದ ಆಯ್ದ ಕತೆಗಳ ಸಂಕಲನ ‘ಎಲ್ಲೆಗಳ ದಾಟಿದವಳು’. ಕತೆ ಹೇಳುವ ಮತ್ತು ಕೇಳುವ ಆಸಕ್ತಿ ಚಿಕ್ಕಂದಿನಿಂದಲೇ ಬಂದದ್ದು, ಅಂತಹ ಆಸಕ್ತಿಯಿಂದಲೇ ಈ ಕತೆಗಳು ಸಹ ಬರೆಸಿಕೊಂಡಿವೆ. ಕತೆಗಳ ಓದು ಎಷ್ಟು ಮುದ ನೀಡುವ ಸಂಗತಿಯೋ ಬರೆಯುವುದು ಅಷ್ಟೇ ಕಷ್ಟ ಎಂಬುದು ನನ್ನ ಅನುಭವ. ಆದರೆ ಎಷ್ಟೋ ಹೊರ ಜಗತ್ತಿನ ಮತ್ತು ಒಳಗಿನ ಅನುಭವಗಳನ್ನು ಹೇಳಿಕೊಳ್ಳಲು ಕಥೆಗಳು ನೆರವಾಗಿವೆ” ಎನ್ನುವುದು ‘ಎಲ್ಲೆಗಳ ದಾಟಿದವಳು’ ಕಥಾ ಸಂಕಲನದ ಕಥೆಗಾರ್ತಿ ಶ್ರುತಿ ಬಿ.ಆರ್ ಅವರ ಮಾತುಗಳು.
ಈ ಸಂಕಲನದ ಬಗ್ಗೆ ತಮ್ಮ ಅನಿಸಿಕೆಯನ್ನು ಮುನ್ನುಡಿಯಲ್ಲಿ…
`ನಮ್ಮೊಳಗೆ ಬುದ್ದನೊಬ್ಬʼ ಅರವು ಮತ್ತು ಬದುಕಿನ ಚಿಂತನೆಗಳು ಮಹಾದೇವ ಬಸರಕೋಡ ಅವರ ಕೃತಿಯಾಗಿದೆ. ಮಹಾದೇವ ಬಸರಕೋಡರ ಈ ಕೃತಿಯ ಪ್ರತಿ ಲೇಖನವೂ ಕಿರಿದೇ, ಆದರೆ ಒಳಗಿನ ಹೂರಣ ಘನ. ಬಸರಕೋಡರ ಕ್ಯಾನ್ಸಾಸ್ ಚಿಕ್ಕದೇ, ಆದರೂ ಅಲ್ಲೊಂದು ದೃಷ್ಟಾಂತವನ್ನಿಟ್ಟು ಮಾತಾಡಲು ಮರೆಯುವುದಿಲ್ಲ ಅವರು. ಹೀಗಾಗಿ ಈ ಬರಹಗಳು ಹೆಚ್ಚು ಆಪ್ತವಾಗುತ್ತವೆ ಕೂಡ. ಓದಲು ವೇಳೆಯಿಲ್ಲ ಅನ್ನುವವರ ಕಾಲವಿದು. ಆದರೆ ಈ ಕಿರು ಬರಹಗಳು ಬದುಕ ಪಾಠ ಅವಿತಿಟ್ಟ ಪುಟಾಣಿ ಗುಳಿಗೆಗಳಂತಿವೆ. ಇಲ್ಲಿ ಸೋತ ಮನಕ್ಕೆ ಸಂತೈಕೆ ಇದೆ, ಗೆಲುವಿನ ಹಾದಿ ತೋರುವ ಕೈಮರಗಳೂ ಇವೆ, ಒಳಗನ್ನು ತಿಳಿಗೊಳಿಸುವ ಸಂತನ ನುಡಿಮಾತೂ ಇದೆ. ಇಲ್ಲಿ ಹೇಳಿರುವ ಎಲ್ಲವೂ ನಮ್ಮೊಳಗೇ ಇವೆ, ಆದರೂ ಏನೂ ಇಲ್ಲವೆಂಬಂತೆ ನಾವು ಇದ್ದೇವೆ. ಅವುಗಳನ್ನು ತೆರೆದು ತೋರುವ ಪಯಣವೇ ಈ…
“ಕಲ್ಲು ನೆಲದ ಹಾಡುಪಾಡು” ಕೃತಿಯ ಬಗ್ಗೆ ಮಾಹಿತಿ ಪೂರ್ಣ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ ಸಂಧ್ಯಾರಾಣಿ. ಅವರು ತಮ್ಮ ಅನಿಸಿಕೆಯಲ್ಲಿ “ಕಲ್ಲು ನೆಲದ ಹಾಡುಪಾಡು’ ಎಂಬ ಜೆ ಎಂ ಕಟ್ ಸೆ (JM Coetzee) ಬರೆದ “In the heart of the Country” ಪುಸ್ತಕವನ್ನು ಎಚ್ ಎಸ್ ರಾಘವೇಂದ್ರ ರಾವ್ ಅವರು ಕನ್ನಡಕ್ಕೆ ತಂದಿದ್ದಾರೆ. ನುಡಿ ಪ್ರಕಾಶನ ಅದನ್ನು ಪ್ರಕಟಿಸಿದೆ. ಇಡೀ ಪುಸ್ತಕ ಓದಿದ ಮೇಲೆ, ಅದಕ್ಕೆ ಎಚ್ಎಸ್ಆರ್ ಕೊಟ್ಟ ಕನ್ನಡದ ಹೆಸರು ಪುಸ್ತಕಕ್ಕೆ ಮತ್ತೊಂದು ಆಯಾಮ ಕೊಟ್ಟಿದೆ ಅನ್ನಿಸುತ್ತದೆ. ಪುಸ್ತಕವನ್ನು ಓದುವಾಗ ಅಲ್ಲಲ್ಲಿ ನಿಲ್ಲಿಸಿದ್ದೇನೆ, ಯೋಚಿಸಿದ್ದೇನೆ, ಮುಂದೆ ಓದಲಾಗದ ಸಂಕಟ ಅನುಭವಿಸಿದ್ದೇನೆ.
ಒಂದು ಒಂಟಿತನದ ನಿಟ್ಟುಸಿರು ಅದೆಷ್ಟು…
‘ಪರ್ವತವಾಣಿ ಅವರ ಇಷ್ಟಾರ್ಥ ಮತ್ತು ಇತರ ನಾಟಕಗಳು’ ಎನ್ನುವ ಕೃತಿಯನ್ನು ಸಂಪಾದಿಸಿದ್ದಾರೆ ಕೆ ಎಂ ವಿಜಯಲಕ್ಷ್ಮಿ. ಈ ಪುಸ್ತಕದಲ್ಲಿ ಅವರು ಪರ್ವತವಾಣಿಯವರ ಇಷ್ಟಾರ್ಥ ಸೇರಿದಂತೆ ಮುಕುತಿ ಮೂಗುತಿ, ಆಶೀರ್ವಾದ, ಸತಿ ಸಾವಿತ್ರಿ ಎನ್ನುವ ನಾಲ್ಕು ಕಾದಂಬರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸಂಪಾದಕಿಯಾದ ಕೆ ಎಂ ವಿಜಯಲಕ್ಷ್ಮಿ ಅವರು ತಮ್ಮ ಮಾತಿನಲ್ಲಿ… “ಸಂಗೀತ, ನಟನೆ, ನಿರ್ದೇಶನ ಕಲೆ ಮತ್ತು ನಾಟಕ ರಚನೆ - ಈ ಎಲ್ಲವೂ ಮೇಲೈಸಿದ 'ಪರ್ವತವಾಣಿ' ಎಂಬ ಕಾವ್ಯನಾಮದ ಪಿ. ನರಸಿಂಗರಾವ್ ಅವರು ಕನ್ನಡ ನವೋದಯ ಸಾಹಿತ್ಯದ ಆಧುನಿಕ ನಾಟಕಕಾರರಲ್ಲಿ ಒಂದು ಮಹತ್ವದ ಹೆಸರಾಗಿ ಬಹುಕಾಲ ಮಿಂಚಿದವರು. ಪರ್ವತವಾಣಿಯವರ ಹೆಸರಿನ ಜೊತೆ ಜೊತೆಗೇ ಅವರನ್ನು ಬಲ್ಲವರಿಗೆ ನೆನಪಾಗುವುದು ಅವರ ಹಾಸ್ಯ. ಹಾಸ್ಯ ಮತ್ತು ವಿಡಂಬನೆಗಳ ಮೂಲಕ…
ಹಿರಿಯ ಸಾಹಿತಿ ನಾ. ದಾಮೋದರ ಶೆಟ್ಟಿಯವರ 'ಕರಿಮಾಯಿ ಗುಡ್ಡ' ಕಾದಂಬರಿ ಸಾಂಸಾರಿಕ, ಸಂಶೋಧನಾತ್ಮಕ ಹಾಗೂ ಪತ್ತೇದಾರಿಯ ಗುಣಗಳನ್ನು ಹೊಂದಿದೆ. ಆಧುನಿಕ ಬದುಕಿಗೆ ಸಮೀಪವಾದ ಕಥಾವಸ್ತುವನ್ನೊಳಗೊಂಡಿದ್ದು ರೋಚಕ ತಿರುವುಗಳಿಂದ ಕೂಡಿ, ಕುತೂಹಲ ಕೆರಳಿಸುತ್ತ ಸಾಗುವ ಕಾದಂಬರಿ ಚೇತೋಹಾರಿ ಶೈಲಿಯಿಂದ ಕೂಡಿದೆ. ಇಂಗ್ಲಿಷ್ ಸಾಹಿತ್ಯದಲ್ಲಿ ಇರಬಹುದಾದ ಇಂಥ ಕಥಾನಕಗಳು ಕನ್ನಡದಲ್ಲಿ ಅಪರೂಪ.
ಎಸ್ಟೇಟ್ ಮಧ್ಯದ ಸಿರಿವಂತರ ಬದುಕಿನ ನಿಗೂಢ ಘಟನೆಯೊಂದನ್ನು ನಾದಾ ಅವರು ರೋಚಕವಾಗಿ ಹೆಣೆದಿದ್ದಾರೆ. ಎಸ್ಟೇಟು ಬಂಗಲೆಯಲ್ಲಿ ನಡೆಯುವ ಈ ಕಥೆಯು ಪ್ರೀತಿ, ದ್ವೇಷ, ಅಸೂಯೆ. ವಂಚನೆ ಮುಂತಾದ ಹಲವು ಭಾವಗಳ ಸಮ್ಮಿಲನವಾಗಿದೆ. ವಿನಾಕಾರಣ ಕೊಲೆಯಾಗುವ ಓರ್ವ ಅಮಾಯಕ ಹೆಣ್ಣಿನ ಮನಸ್ಸನ್ನು…