ಪುಸ್ತಕ ಸಂಪದ

  • ರಾಮಕೃಷ್ಣ ಹೆಗಡೆ ಇವರು ಬರೆದ 'ಒಲವ ಧಾರೆ' ಎನ್ನುವ ಕವನ ಸಂಕಲನ ಇತ್ತೀಚೆಗೆ ಕಾರ್ಕಳದ ಪುಸ್ತಕ ಮನೆ ಪ್ರಕಾಶನದ ಮುಖಾಂತರ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಯಲಕ್ಷ್ಮಿ ಕೆ. ಇವರು ತಮ್ಮ ಮುನ್ನುಡಿ ಬರಹದಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ... 

    “ನವೋದಯ-ನವ್ಯ ಸಾಹಿತ್ಯರಚನೆಯ ಈ ಕಾಲಘಟ್ಟದಲ್ಲಿ ಕವನಗಳನ್ನು ರಚಿಸಲು ನಿರ್ದಿಷ್ಟ ನಿಯಮಗಳೇನೂ ಇಲ್ಲವಾದರೂ ತೋಚಿದ್ದನ್ನೆಲ್ಲ ಗೀಚಿದರೆ ಅದು ಕವನ ಎನಿಸಿಕೊಳ್ಳುವುದಿಲ್ಲ. ಅನುಭವಗಳ ಸಾರವನ್ನು ಕಲ್ಪನೆಯ ಮೂಸೆಯಲ್ಲಿ ಎರಕ ಹೊಯ್ದಾಗ ಕವನಗಳ ಸೃಷ್ಟಿಯಾಗುತ್ತದೆ ಎನ್ನುವ ಮಾತಿದೆ. ಈ ನಿಟ್ಟಿನಲ್ಲಿ ರಾಮಕೃಷ್ಣ ಹೆಗಡೆಯವರ ಬಹುತೇಕ ಕವನಗಳು ಅವರ ಅನುಭವಗಳ ಸಾರವನ್ನು ನಮಗೆ ಮೊಗೆ-…

  • ಈಗಾಗಲೇ 2021 ರಲ್ಲಿ."ಮರುಳನ ಶಾಯಿರಿ‌ ಲೋಕ "ಎಂಬ ಶಾಯಿರಿ ಸಂಕಲನದ ಮೂಲಕ ಶಾಯಿರಿ ಕವಿಯಂದು ಹೆಸರಾದವರು ಹುಲಕೋಟಿಯ ಮರುಳಸಿದ್ದಪ್ಪ ದೊಡಮನಿಯವರು.ಅವರ "ಮರುಳನ ಶಾಯಿರಿ"  ಲೋಕದ ಗುಂಗು ಇನ್ನು ತಲೆಯಿಂದ ಮಾಸದಿರುವಾಗಲೇ,ಈ ಕವಿ ಎರಡನೆಯ  ಶಾಯಿರಿ ಸಂಕಲನವನ್ನು  ಓದುಗರ ಎದೆಗೆ ಇತ್ತಿದ್ದಾರೆ.ಅವರು ಸದಾ ಶಾಯಿರಿಯನ್ನೇ  ಉಸಿರಾಡಿಸುವದಕ್ಜೆ ಇದೊಂದು ನಿದರ್ಶನ. ಕನ್ನಡದಲ್ಲಿ ಶಾಂತರಸ,  ಇಟಗಿ ಈರಣ್ಣ‌ ,ಎಸ್ ಜಿ ಸ್ವಾಮಿ , ಅಸಾದುಲ್ಲಾ ಬೇಗ್,ಮೊದಲಾದ ಹಿರಿಯರಿಂದ ಬರೆಯಲು ಶುರು ಹಚ್ಚಿಕೊಂಡು ಈ ಕಾವ್ಯ ಪ್ರಕಾರ ದಲ್ಲಿ ನಂತರದಲ್ಲಿ ಶಹಾಪೂರದ ಡಾ ಗುರುರಾಜ ಅರಕೇರಿ, ಕೃಷ್ಣಮೂರ್ತಿ‌ ಕುಲಕರ್ಣಿ,ಡಾ.ಸಿದ್ದರಾಮ‌ ಹೊನ್ಕಲ್,,ಡಾ.ಮಲ್ಲಿನಾಥ ತಳವಾರ, ನೂರ್ ಅಹ್ಮದ ನಾಗನೂರ, ಮರುಳಸಿದ್ದಪ್ಪ…

  • ‘ಭೂಮಿ' ಎನ್ನುವುದು ಲೇಖಕ ಈರಣ್ಣ ಬೆಂಗಾಲಿ ಇವರು ಬರೆದ ಕಾದಂಬರಿ. ಈ ಕಾದಂಬರಿಯ ಬಗ್ಗೆ ಮುನ್ನುಡಿಯನ್ನು ಬರೆದಿದ್ದಾರೆ ಶೇಖರಗೌಡ ವೀ ಸರನಾಡಗೌಡರ್ ತಾವರಗೇರಾ ಇವರು. ತಮ್ಮ ಮುನ್ನುಡಿಯಲ್ಲಿ ಶ್ರೀಯುತರು ವ್ಯಕ್ತ ಪಡಿಸಿದ ಭಾವ ಇಲ್ಲಿದೆ...

    “ಬಿಸಿಲ ನಾಡು ಕಲ್ಯಾಣ ಕರ್ನಾಟಕದ ಒಂದು ಭಾಗ ರಾಯಚೂರು ಜಿಲ್ಲೆ. ಈ ಬಿಸಿಲ ನಾಡಿನಲ್ಲಿ ಅನೇಕ ಸಾಹಿತ್ಯ ದಿಗ್ಗಜರು ಕಲ್ಯಾಣ ಕರ್ನಾಟಕದ ಘನತೆ, ಗೌರವಗಳನ್ನು ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಬೆಳಗುವಂತೆ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಈಗಲೂ ಅನೇಕ ಹಿರಿಯ ಮತ್ತು ಕಿರಿಯ ಸಾಹಿತಿಗಳು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕರ್ನಾಟಕದಾದ್ಯಂತ ಮಿಂಚುತ್ತಿದ್ದಾರೆ. ಕಥೆ, ಕಾದಂಬರಿ, ಕಾವ್ಯ, ವಚನ ಸಾಹಿತ್ಯ, ದಾಸ…

  • ಯಶೋದಾ ಮೋಹನ್ ಅವರು ಬರೆದ ಚೊಚ್ಚಲ ಕಥಾ ಸಂಕಲನ ‘ಇಳಿ ಹಗಲಿನ ತೇವಗಳು' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಪುಸ್ತಕಕ್ಕಾಗಿ ಬರೆದ ಲೇಖಕಿಯ ಮಾತುಗಳ ಆಯ್ದ ಭಾಗ ಇಲ್ಲಿದೆ…

    “‘ಇಳಿ ಹಗಲಿನ ತೇವಗಳು' ನನ್ನ ಮೊದಲನೆಯ ಕಥಾ ಸಂಕಲನ ಮತ್ತು ಮೂರನೆಯ ಕೃತಿ. ವಿದ್ಯಾರ್ಥಿ ಜೀವನ ಕಳೆದು ಸುಮಾರು ಮೂವತ್ತು ವರ್ಷಗಳ ನಂತರ ಮತ್ತೊಮ್ಮೆ ಬರವಣಿಗೆಯನ್ನು ಆರಂಭಿಸಲು ಪ್ರೇರಣೆ ಸಿಕ್ಕಿದಾಗ ನನ್ನೊಳಗಿನ ಭಾವಗಳು ಬಿಡುಗಡೆಗೊಂಡ ಹಲವು ಬಗೆಗಳಲ್ಲಿ ಸಣ್ಣ ಕತೆಯೂ ಒಂದು. ಆಗೊಮ್ಮೆ ಈಗೊಮ್ಮೆ ಬರೆದ ಕೆಲವು ಕತೆಗಳು ಈ ಸಂಕಲನದಲ್ಲಿ ಸ್ಥಾನ ಪಡೆದುಕೊಂಡಿವೆ. ಸಾಧಾರಣ ಐವತ್ತು ವರ್ಷದ ನಂತರ ಬರೆದ ಕತೆಗಳಾಗಿರುವುದರಿಂದ ಇವು ನಿಜ ಅರ್ಥದ 'ಇಳಿ ಹಗಲಿನ ತೇವಗಳು'.

  • ೨೦೦೧ರಲ್ಲಿ ಬರೆದ ತಮ್ಮ ‘ಐಕ್ಯಗಾನ ಮೊಳಗಲಿ' (ನಾಡು-ನುಡಿ ಗೀತೆಗಳು) ಸಂಕಲನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಕವಿಗಳಾದ ಹಾ.ಮ.ಸತೀಶ ಇವರು ಒಟ್ಟು ಮೂವತ್ತು ಗೀತೆಗಳನ್ನು ಬರೆದಿದ್ದಾರೆ. ನಾಡು-ನುಡಿ ಗೀತೆಗಳನ್ನೇ ಒಂದಾಗಿಸಿ, ನಾಡಭಕ್ತಿ, ಪ್ರೇಮ ಮೆರೆದಿರುವುದು ಗೀತೆಯ ಸಾಲುಗಳಲ್ಲಿ ಪ್ರತಿಧ್ವನಿಸುತ್ತಿದೆ. ‘ಕನ್ನಡದ ಮಕ್ಕಳಿಗಾಗಿಯೇ’ ಬರೆದದ್ದು ಎನ್ನುವ ಮಾತು ತೂಕವುಳ್ಳದ್ದಾಗಿದೆ. ರಾಗ ಹಾಕಿ ಹಾಡು, ನೃತ್ಯ ಮಾಡುವಂತಿದೆ. ಈ ‘ಐಕ್ಯಗಾನ’ ನೋಡಲು ಪುಟ್ಟ ಪುಸ್ತಕವಾದರೂ ಪುಟಗಳ ಬಿಡಿಸುತ್ತಾ ಹೋದಂತೆ ವಿಷಯ ಬ್ರಹ್ಮಾಂಡವೇ ಇದೆ.ದೇಶಭಕ್ತಿ, ರಾಷ್ಟ್ರಪ್ರೇಮ, ಭಾವೈಕ್ಯತೆ ಸಂಕಲನದ ಸಂಗ್ರಹದಲ್ಲಿ ಇದೆ.

    ಪುಟ್ಟ…

  • ಯಾವುದೇ ಒಂದು ಪುಸ್ತಕಕ್ಕೆ ಉತ್ತಮ ವಿಮರ್ಶೆ ಕಲಶಪ್ರಾಯವಿದ್ದಂತೆ. ವಿಮರ್ಶೆ ಹೊಗಳಿಕೆಯಾಗಿರಲಿ, ತೆಗಳಿಕೆಯಾಗಿರಲಿ, ಸಲಹೆಯಾಗಿರಲಿ, ಟೀಕೆಯಾಗಿರಲಿ ಎಲ್ಲವೂ ಆ ಕೃತಿಯ ಲೇಖಕನಿಗೆ ಅತೀ ಮುಖ್ಯ. ವಿಮರ್ಶೆಗಳನ್ನು ಗಮನಿಸಿಯೇ ಆ ವ್ಯಕ್ತಿ ತನ್ನ ಮುಂದಿನ ಪುಸ್ತಕವನ್ನು ರೂಪಿಸಿಕೊಳ್ಳಬಹುದು. ಲೇಖಕರಾದ ನರೇಂದ್ರ ಪೈ ಅವರು ವಿಮರ್ಶೆಗಳ ಸಂಗ್ರಹವನ್ನೇ ಒಂದು ಕೃತಿಯನ್ನಾಗಿಸಿದ್ದಾರೆ. ಅದಕ್ಕೆ ಅವರಿಟ್ಟ ಹೆಸರು ‘ಸಾವಿರದ ಒಂದು ಪುಸ್ತಕ' ಈ ಬಗ್ಗೆ ಲೇಖಕರ ಮನದಾಳದ ಮಾತುಗಳು ಹೀಗಿವೆ...

    “ನಾವು ನಮ್ಮ ಮೌನದಲ್ಲಿ ನಮಗೇ ಹೇಳಿಕೊಂಡ ಮಾತು ಇನ್ನೊಬ್ಬರಿಗೂ ತಲುಪಲು ಯೋಗ್ಯವಾಗಿದೆ ಅನಿಸಿದಾಗ ನಾನು ಬರೆಯುತ್ತೇನೆ ಎಂದಿದ್ದರು ಡಾ| ಯು ಆರ್ ಅನಂತಮೂರ್ತಿ, ಬಹುಶಃ ಬರವಣಿಗೆಯ ಮೂಲ ಇರುವುದೇ…

  • ತಂತ್ರಜ್ಞಾನ ಬೆಳೆದಂತೆ ವಂಚಕರ ಯೋಚನೆ ಮತ್ತು ಯೋಜನೆಗಳೂ ವಿಭಿನ್ನ ರೀತಿಯಲ್ಲಿ ಬೆಳೆಯುತ್ತಿದೆ. ಈಗಿನ ಹೊಸ ಟ್ರೆಂಡ್ ಎಂದರೆ ಸೈಬರ್ ವಂಚನೆ. ಈ ವಂಚಕರು ಎಲ್ಲೋ ಕುಳಿತುಕೊಂಡು ಅಂತರ್ಜಾಲದ ಸಹಾಯದಿಂದ ಜನರ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇಂತವರನ್ನು ಗುರುತಿಸಿ ಶಿಕ್ಷೆ ನೀಡುವುದೂ ಬಹಳಷ್ಟು ಸಲ ಕಷ್ಟವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡುವ ಕೃತಿ ‘ಸೈಬರ್ ವಂಚನೆ'. ಇದನ್ನು ಬರೆದಿದ್ದಾರೆ ವಿಕ್ರಮ್ ಜೋಶಿ. ಈ ಅಂತರ ಜಾಲದ ಕರಾಳ ಮುಖವನ್ನು ಬಯಲು ಮಾಡಲು ಲೇಖಕರು ಬಹಳಷ್ಟು ಮಾಹಿತಿಗಳನ್ನು ಸಂಗ್ರಹ ಮಾಡಿದ್ದಾರೆ. ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಸರ್ವೋಚ್ಚನ್ಯಾಯಾಲಯದ ಭೂತಪೂರ್ವ ನ್ಯಾಯಾಧೀಶರಾದ ಬೆ ನಾ ಶ್ರೀಕೃಷ್ಣ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ಇಲ್ಲಿವೆ...…

  • ಎಲ್ಲರಿಗೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸಿಂಗಾಪುರ ಎಂಬ ದೇಶಕ್ಕೆ ಹೋಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಹಲವು ವರ್ಷಗಳ ಹಿಂದೆ ಸಿಂಗಾಪುರ ಎಂಬುದು ಈಗಿನಂತಿರಲಿಲ್ಲ. ಆದರೆ ಅದು ಬದಲಾದ ಪರಿ ಬಹಳ ಅಚ್ಚರಿ. ಈಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಗ್ರಗಣ್ಯ ದೇಶವಾಗಿ ಬದಲಾಗಿದೆ. ಪತ್ರಕರ್ತರಾದ ವಿಶ್ವೇಶ್ವರ ಭಟ್ ಅವರು ಹಲವು ಬಾರಿ ಸಿಂಗಾಪುರಕ್ಕೆ ಹೋಗಿ ಬಂದಿದ್ದಾರೆ. ಅವರು ಅಲ್ಲಿ ಕಂಡ, ಅನುಭವಿಸಿದ ವಿಷಯಗಳನ್ನು ಕೆಲವು ಟಿಪ್ಪಣಿಗಳ ಮೂಲಕ ಪುಸ್ತಕ ರೂಪದಲ್ಲಿ ಓದುಗರಿಗೆ ಉಣಬಡಿಸುವ ಮನಸ್ಸು ಮಾಡಿದ್ದಾರೆ. ಇದು ಸಿಂಗಾಪುರದ ಪರಿಚಯವಲ್ಲ. ಅಲ್ಲಿ ಕಂಡ ಕೆಲವೊಂದು ವಿಷಯಗಳ ಮಾಹಿತಿ. ವಿಶ್ವೇಶ್ವರ ಭಟ್ ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವೊಂದು ಸಾಲುಗಳು ನಿಮ್ಮ ಓದಿಗಾಗಿ.. 

  • “ರವಿ ಬೆಳಗೆರೆ ! ಅವರು ಕನ್ನಡಿಗರ ಮನೆ ಮಾತು. ಅತ್ಯಂತ ಹೆಚ್ಚು ಬರೆದ, ಓದಿಸಿಕೊಳ್ಳುವ ಲೇಖಕ, ಪತ್ರಕರ್ತ, ಕಾದಂಬರಿಕಾರ, ಅನುವಾದಕ. ಅವರ ಒಂದು ಹೊಸ ಪುಸ್ತಕ ಬಿಡುಗಡೆಯಾಗುತ್ತದೆ ಅಂದರೆ ಸಾವಿರಾರು ಓದುಗರು ಕರ್ನಾಟಕದಾದ್ಯಂತ ಅದಕ್ಕಾಗಿ ಕಾಯುತ್ತಿದ್ದರು. ಅವರು ಒಂದು ವಿಷಯ, ಒಂದು ಸಂಗತಿ ಅಥವಾ ಒಂದು ಸಬ್ಜೆಕ್ಟ್ ಇಟ್ಟುಕೊಂಡು ಬರೆದವರಲ್ಲ. ಮನುಷ್ಯ ಸಂಬಂಧಗಳು ಅವರ ಆಸಕ್ತಿಯ ಪ್ರಥಮ ವಿಷಯ. ಆದರೆ ಅವರು ಅತ್ಯಂತ ಆಸಕ್ತಿಯಿಂದ ದೇಶ, ಇತಿಹಾಸ, ಯುದ್ಧಗಳ ಬಗ್ಗೆ ಬರೆದಿದ್ದಾರೆ. ಯುದ್ಧಗಳ ಪ್ರತ್ಯಕ್ಷ ವರದಿ ಮಾಡಿದ್ದಾರೆ. ಕಾರ್ಗಿಲ್ ಕದನ ಭೂಮಿ, ಅಫಘಾನಿಸ್ತಾನ ಮತ್ತು ಪುಲ್ವಾಮಾದ ಮಹಾ ಯುದ್ಧರಂಗದಲ್ಲಿ ಓಡಾಡಿದ್ದಾರೆ. ಅಂತೆಯೇ ಅವರ ಕಾದಂಬರಿಗಳಲ್ಲಿ ಪ್ರೀತಿ, ತಂತ್ರ, ಅಂಡರ್ ವರ್ಲ್ದ್, ರಾಜಕಾರಣ, ಕಾಮ,…

  • ‘ವಯನಾಡು - ಸಾವು ಬಂದ ಹೊತ್ತಿಗೆ ಹೇಳದೇ ಉಳಿದ ಸತ್ಯಗಳು' ಎನ್ನುವ ಕೃತಿಯನ್ನು ಬರೆದಿದ್ದಾರೆ ಪತ್ರಕರ್ತರಾದ ಆಶಿಕ್ ಮುಲ್ಕಿ. ಈ ವರ್ಷದ ಬಹು ದೊಡ್ದ ದುರಂತವಾದ ವಯನಾಡು ಭೂಕುಸಿತ, ನೆರೆ ಬಗ್ಗೆ ಮತ್ತು ಕಳೆದು ಹೋದ, ಮೃತ ಪಟ್ಟ ಜನರ ಬಗ್ಗೆ ಬಹಳ ದುಃಖದಿಂದ ಮಾಹಿತಿ ನೀಡಿದ್ದಾರೆ. ಸ್ವತಃ ವಯನಾಡಿಗೆ ಹೋಗಿ ಈ ದುರಂತವನ್ನು ಕಣ್ಣಾರೆ ಕಂಡ ಆಶಿಕ್ ಮುಲ್ಕಿಯವರು ತಮ್ಮ ಜೊತೆಗೇ ವರದಿಗಾರಿಕೆ ಮಾಡುತ್ತಿದ್ದ ವಿಕ್ರಂ ಕಾಂತಿಕೆರೆಯವರಿಗೆ ಮುನ್ನುಡಿ ಬರೆಯುವ ಹೊಣೆಯನ್ನು ವಹಿಸಿದ್ದಾರೆ. ವಿಕ್ರಂ ಕಾಂತಿಕೆರೆಯವರು ತಮಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯಲ್ಲಿನ ಕೆಲವು ಸಾಲುಗಳು ನಿಮ್ಮ ಓದಿಗಾಗಿ..

    “ಪತ್ರಿಕೋದ್ಯಮ…