ಸ್ವಾತಂತ್ರ್ಯೋತ್ತರ ಅಮೃತ ವರ್ಷದ ಸಂದರ್ಭದಲ್ಲಿ ವಿಶ್ರಾಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಪಿ.ಅನಂತಕೃಷ್ಣ ಭಟ್ ಇವರು ಬರೆದ ‘ಭಾರತ ಸಂವಿಧಾನ’ -ಒಂದು ಸುಂದರ ಪಕ್ಷಿ ನೋಟ ಸಂವಿಧಾನದ ಕುರಿತಾದ ಕುತೂಹಲಕರವಾದ ಮಾಹಿತಿ ನೀಡುತ್ತದೆ. ವಿಶ್ವದ ಸುದೀರ್ಘ ಸಂವಿಧಾನ ಎಂಬ ಹೆಗ್ಗಳಿಕೆಯ ರಾಜ್ಯಾಂಗ ಘಟನೆ ನಮ್ಮದು. ವಿಶ್ವ ಇತಿಹಾಸದ ಸಂದಿಗ್ಧತೆಯಿಂದ, ಸ್ವಾತಂತ್ರ್ಯ ಹೋರಾಟದ ಅಗ್ನಿ ಮುಖದಿಂದ, ರಾಷ್ಟ್ರಪ್ರೇಮದ ಜ್ವಲಂತ ಏರುಗತಿಯಿಂದ ಉದಿಸಿ ಬಂದ ಚಾರಿತ್ರಿಕ ದಾಖಲೆಯೇ ನಮ್ಮ ಸಂವಿಧಾನ. ವಿಶ್ವದ ಜನಸಂಖ್ಯಾತ್ಮಕವಾದ ಪ್ರಥಮ ಪ್ರಜಾತಂತ್ರ ರಾಷ್ಟ್ರವೆನಿಸಿದ ನಮ್ಮ ಭಾರತದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಭದ್ರ ಬುನಾದಿಯನ್ನು ರಚಿಸಿದ ಹೊತ್ತಗೆಯೇ ನಮ್ಮ ಭಾರತ ಸಂವಿಧಾನ.
…