ಪುಸ್ತಕ ಸಂಪದ

  • ‘ನಾಡವರ್ಗಳ್’ ಸಂಪನ್ನರ ನಡೆನುಡಿ ಎನ್ನುವ ನೂತನ ಕೃತಿಯನ್ನು ಅಗ್ರಹಾರ ಕೃಷ್ಣಮೂರ್ತಿಯವರು ಹೊರತಂದಿದ್ದಾರೆ. ಈ ಮೂಲಕ ತಾವು ನಡೆದು ಬಂದ ದಾರಿಯಲ್ಲಿ ದಾರಿದೀಪಗಳಂತಿದ್ದ ಗುರು ಹಿರಿಯರಿಗೆ ನುಡಿ ನಮನ ಸಲ್ಲಿಸಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕ ಡಾ. ಬಂಜಗೆರೆ ಜಯಪ್ರಕಾಶ್. ಇವರ ‘ನಲ್ನುಡಿ’ ಯಲ್ಲಿ ಕಂಡ ಸಾಲುಗಳು… 

    “ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದ್ದ 'ನೀರು ಮತ್ತು ಪ್ರೀತಿ' ಕಾದಂಬರಿ ಓದಿದ ಕಾಲದಿಂದಲೂ ಅಗ್ರಹಾರ ಕೃಷ್ಣಮೂರ್ತಿ ನನ್ನ ಪ್ರೀತಿಯ ಲೇಖಕರಲ್ಲೊಬ್ಬರಾಗಿ ಉಳಿದಿದ್ದಾರೆ. ಅವರು ಬರೆದಿರುವ ೨೭ ವ್ಯಕ್ತಿಚಿತ್ರಗಳಿರುವ ಈ ಕೃತಿಗೆ ನಾಲ್ಕು ಮಾತು ಬರೆಯುವಾಗಲೂ ಅದೇ ಪ್ರೀತಿಯ ಭಾವ ನನ್ನೊಳಗೆ…

  • ಮಲಯಾಳಂ ಭಾಷೆಯ ಪ್ರಮುಖ ಕಥೆಗಾರ ಟಿ. ಪದ್ಮನಾಭನ್ ಅವರ 12 ಕಥೆಗಳ ಸಂಕಲನವಿದು. ಡಾ. ಅಶೋಕ್ ಕುಮಾರ್ ಇವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

    ಪದ್ಮನಾಭನ್ ಅವರ ಕತೆಗಳಲ್ಲಿ ಶೋಷಿತರ, ನೊಂದವರ, ಅಸಹಾಯಕರ ಬದುಕಿನ ಚಿತ್ರಣವಿದೆ. ಕತೆಗಳ ಸನ್ನಿವೇಶ, ಪಾತ್ರಚಿತ್ರಣ, ಸಂವಾದ ಹಾಗೂ ಭಾವತೀವ್ರತೆ ಓದುಗರ ಮನತಟ್ಟುತ್ತವೆ.

    ಟಿ. ಪದ್ಮನಾಭನ್ ಅವರ ಜನನ 1931ರಲ್ಲಿ ಕೇರಳದ ಕಣ್ಣೂರಿನಲ್ಲಿ. ಮಂಗಳೂರಿನ ಸರಕಾರಿ ಕಲಾ ಕಾಲೇಜಿನಿಂದ           1952ರಲ್ಲಿ ಬಿ. ಎ. ಪದವಿ ಮತ್ತು ಮದ್ರಾಸಿನ ಕಾನೂನು ಕಾಲೇಜಿನಿಂದ 1955ರಲ್ಲಿ ಕಾನೂನು ಪದವಿ ಪಡೆದರು. ಒಂದು ದಶಕ ಕಾಲ ಕಣ್ಣೂರಿನಲ್ಲಿ ವಕೀಲರಾಗಿ ಕೆಲಸ ಮಾಡಿದ ನಂತರ 1966ರಲ್ಲಿ ಅಲುವಾದಲ್ಲಿರುವ ಫ್ಯಾಕ್ಟ್ ಸಂಸ್ಥೆಗೆ ಸೇರಿದರು. ಅದರಿಂದ 1989ರಲ್ಲಿ ಡೆಪ್ಯುಟಿ ಮ್ಯಾನೇಜರಾಗಿ…

  • ‘ಸತ್ಯಮೇವ ಜಯತೆ’ ಮೇ ೨೦೧೨ರಿಂದ ಅಕ್ಟೋಬರ್ ೨೦೧೪ರವರೆಗೆ ದೂರದರ್ಶನದಲ್ಲಿ ಪ್ರಸಾರವಾದ ೨೫ ಎಪಿಸೋಡುಗಳ ಅತ್ಯಂತ ಜನಪ್ರಿಯವಾದ ಒಂದು ಟಾಕ್ ಶೋ ಆಗಿತ್ತು. ದೇಶವನ್ನು ಕಾಡುತ್ತಿರುವ ಹಲವಾರು ವಿಷಯಗಳ ಕುರಿತು ಈ ಸರಣಿಯು ಆಳವಾದ ಸಂಶೋಧನೆ ಸಾಕ್ಷ್ಯ ಮತ್ತು ಸಂಬಂಧಿತ ಜನರ ಭಾಗವಹಿಸುವಿಕೆಯನ್ನು ಒಳಗೊಂಡಿತ್ತು. ಈ ಸರಣಿಯ ಸೀಸನ್ ೧, ಎಪಿಸೋಡ್ ೮ರ ‘ವಿಷಯುಕ್ತ ಆಹಾರ’ ಎನ್ನುವ ಕಾರ್ಯಕ್ರಮವು ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಕೀಟನಾಶಕಗಳು, ರೈತರು ಅವುಗಳನ್ನು ಬಳಸಲೇ ಬೇಕಾಗಿ ಬಂದ ಅನಿವಾರ್ಯತೆ, ಅವುಗಳಿಂದ ಆಗುವ ವಿನಾಶ, ಉತ್ಪಾದಕರ ದಬ್ಬಾಳಿಕೆ, ಸರಕಾರಗಳ ಉಪೇಕ್ಷೆ - ಇಂಥ ಎಲ್ಲ ಮಗ್ಗಲುಗಳನ್ನು ವಸ್ತುನಿಷ್ಟವಾಗಿ, ಪರಿಣಾಮಕಾರಿಯಾಗಿ ನಿರೂಪಿಸುತ್ತದೆ.

  • ಸುಭಾಷ್ ರಾಜಮಾನೆಯವರ ಲೇಖನಗಳ ಸಂಗ್ರಹವು ‘ಕಂಡದ್ದು ಕಾಣದ್ದು’ ಎನ್ನುವ ಹೆಸರಿನಿಂದ ಬಿಡುಗಡೆಯಾಗಿದೆ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಡಾ. ಕೆ ವಿ ನಾರಾಯಣ. ಇವರು ತಮ್ಮ ಬೆನ್ನುಡಿಯಲ್ಲಿ “ಕಿರಿಯ ಗೆಳೆಯ ಸುಭಾಷ್ ರಾಜಮಾನೆ ಈ ದಿನಮಾನಗಳಲ್ಲಿ ಕಾಣೆಯಾಗುತ್ತಿರುವ ಪುಸ್ತಕಮೋಹಿಗಳ ಪರಂಪರೆಗೆ ಸೇರಿದವರು. ರಾಶಿ ರಾಶಿ ಹೊತ್ತಗೆಗಳನ್ನು ಕೂಡಿಡುವುದರ ಜೊತೆಗೆ ಓದುವ ಹೊಣೆಯನ್ನೂ ಹೊತ್ತಿರುವವರು. ತಾವು ಓದಿದ್ದನ್ನು ಇತರರ ಜೊತೆಗೆ ಹಂಚಿಕೊಳ್ಳಲು ಉತ್ಸುಕರಾಗಿರುವವರು. ಹಾಗೆ ಅವರು ಬರೆದ ಕೆಲವು ಲೇಖನಗಳು ಇಲ್ಲಿ ಸಂಕಲಿತವಾಗಿವೆ.

    ತಾವು ಓದಿ ಮೆಚ್ಚಿಕೊಂಡ, ಒಪ್ಪಿಕೊಂಡ ಕೃತಿಗಳು, ಕೃತಿಕಾರರು ಇತರ ಓದುಗರಲ್ಲೂ ನೆಲೆಗೊಳ್ಳಬೇಕೆಂಬ ಹಂಬಲ ಇವರ ಬರಹಗಳಲ್ಲಿ…

  • ಎರಡನೆಯ ವಿಶ್ವಯುದ್ಧ ಕಾಲದ ನೋವು, ನಲಿವು ಮತ್ತು ಗೆಲುವಿನ ಸತ್ಯ ಕಥೆಯ ಎಳೆಯನ್ನು ಹಿಡಿದುಕೊಂಡು ಅದಕ್ಕೆ ತಮ್ಮದೇ ಆದ ಕಲ್ಪನೆಯನ್ನು ಬೆರೆಸಿ ಹದವಾಗಿ ರುಚಿಕರವಾದ ಪಾಕ ಮಾಡಿ ನಮಗೆ ಉಣ ಬಡಿಸಿದ್ದಾರೆ ‘ನಿಗೂಢ ನಾಣ್ಯ' ಖ್ಯಾತಿಯ ಕಾದಂಬರಿಕಾರ ವಿಠಲ್ ಶೆಣೈ. ಈ ಕಾದಂಬರಿಗೆ ಅವರು ಇಟ್ಟ ಹೆಸರು ‘ಹನುಕಿಯಾ - ಆರಿ ಹೋಗದ ದೀಪ' ಎಂದು. ಈ ಕಾದಂಬರಿಯಲ್ಲಿರುವ ಘಟನೆಗಳು ನಡೆಯುವುದು ೧೯೩೯ ರಿಂದ ೨೦೧೫ರ ಕಾಲಘಟ್ಟದಲ್ಲಿ. ‘ಹನುಕಿಯಾ’ ಎನ್ನುವುದು ಯಹೂದಿಗಳ ಪವಿತ್ರ ದೀಪ. ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಪೋಲಾಂಡ್ ನ ಯಹೂದಿಗಳ ಮೇಲೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನಡೆಸಿದ ದೌರ್ಜನ್ಯಗಳ ಕಥನ ಇದು. ಈ ಕಾದಂಬರಿಯಲ್ಲಿ ತಂದೆ - ತಾಯಿ- ಅಣ್ಣ- ತಂಗಿಯರ ನೋವಿದೆ, ನಲಿವಿದೆ, ತಂದೆಯ ಆಸೆ ತೀರಿಸಲು ಹೊರಟ ಮಗಳ ಸಾಹಸದ…

  • ಐಲಾ ಮಲಿಕಾಳ ಪವಿತ್ರ ಪೆಟ್ಟಿಗೆ ಎನ್ನುವುದು ಖ್ಯಾತ ಬರಹಗಾರರಾದ ಬೋಳುವಾರು ಮೊಹಮ್ಮದ್ ಅವರು ಬರೆದ ಪ್ರವಾಸ ಕಥನ. ಈ ಪ್ರವಾಸ ಕಥನದಲ್ಲಿ ಬೋಳುವಾರು ಅವರು ನಮ್ಮನ್ನು ಮೆಕ್ಕಾ, ಅಬಿಸೀನಿಯಾ, ತೆಹರಾನ್, ಲಾರ್, ಅಲ್ ಮಸ್ತಾನ್, ಬಗ್ದಾದ್, ಕುವೈತ್, ದುಬೈ, ಮುತ್ತುಪ್ಪಾಡಿ, ಕಾನ್ಪುರ್, ದೆಹಲಿ, ನ್ಯೂಜರ್ಸಿ, ನ್ಯೂಯಾರ್ಕ್, ಸಿಯಾಟಲ್, ಸ್ಯಾನ್ ಫ್ರಾನ್ಸಿಸ್ಕೋ, ಸ್ಯಾನ್ ಹೊಸೆ, ಕುಪರ್ಟಿನೋ ಮೊದಲಾದ ಸ್ಥಳಗಳ ಪರಿಚಯ ಮಾಡಿಕೊಡುತ್ತಾರೆ. ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ ಎನ್ ಎ ಎಂ ಇಸ್ಮಾಯಿಲ್ ಅವರು ಬೆನ್ನುಡಿ ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…

    “ಮೂರು ಭೂಖಂಡಗಳೊಳಗಿನ ಆರು ದೇಶಗಳನ್ನೂ ಏಳನೇ ಶತಮಾನದಿಂದ ಆರಂಭಿಸಿ…

  • ಲಂಕೇಶ್ ಪತ್ರಿಕೆಯಲ್ಲಿ ಪ್ರತೀ ವಾರ ಮೂಡಿ ಬರುತ್ತಿದ್ದ ‘ಕಟ್ಟೆ ಪುರಾಣ’ ಎಂಬ ವಿಡಂಬನಾತ್ಮಕ ಅಂಕಣ ಬಹು ಜನಪ್ರಿಯವಾಗಿತ್ತು. ಅದನ್ನು ಬರೆಯುತ್ತಿದ್ದವರು ಬಿ.ಚಂದ್ರೇಗೌಡರು. ಇತ್ತೀಚೆಗೆ ‘ಕಟ್ಟೆ ಪುರಾಣ’ ದಿಂದ ಉತ್ತಮವಾದ ಬರಹಗಳನ್ನು ಆಯ್ದು ‘ಬೆಸ್ಟ್ ಆಫ್ ಕಟ್ಟೆ ಪುರಾಣ’ ಎನ್ನುವ ಹೆಸರಿನಲ್ಲಿ ಪುಸ್ತಕವೊಂದನ್ನು ಹೊರ ತಂದಿದ್ದಾರೆ. ಈ ಕೃತಿಗೆ ನಟರಾಜ್ ಹುಳಿಯಾರ್ ಬಹಳ ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ. ಲೇಖಕರಾದ ಬಿ.ಚಂದ್ರೇಗೌಡರು ತಮ್ಮ ಪುಸ್ತಕ ಮತ್ತು ಬರಹದ ಬಗ್ಗೆ ಬರೆದ ಕೆಲವು ಸಾಲುಗಳು…

    “ಲಂಕೇಶ್ ಪತ್ರಿಕೆಗೆ ಸತತವಾಗಿ ಒಂದು ದಶಕ ಹುಬ್ಬಳ್ಳಿಯಾಂವ ಕಾಲಂ ಬರೆದ ಪುಂಡಲೀಕ್ ಶೇಟ್, ಬಸ್ ಅಪಘಾತದಲ್ಲಿ ಅಕಾಲ ಮರಣಕ್ಕೆ ತುತ್ತಾದರು. ಇದರಿಂದ ಆಘಾತಗೊಂಡ…

  • ಎಸ್ ಜಯಶ್ರೀನಿವಾಸ್ ರಾವ್ ಅವರು ಎಸ್ಪೋನಿಯಾ, ಲ್ಯಾಟ್ವಿಯಾ, ಲಿಥುವೇನಿಯಾ ದೇಶದ ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ‘ಬಾಲ್ಟಿಕ್ ಕಡಲ ಗಾಳಿ’ ಎನ್ನುವ ಹೆಸರಿನ ಈ ಕೃತಿಗೆ ಖ್ಯಾತ ಬರಹಗಾರ ಕೇಶವ ಮಳಗಿ ಅವರು ಮುನ್ನುಡಿಯನ್ನು ಬರೆದು ಹುರಿದುಂಬಿಸಿದ್ದಾರೆ. ಅವರು ಬರೆದ ಮುನ್ನುಡಿಯಿಂದ ಆಯ್ದ ಸಾಲುಗಳು…

    “ಕಾವ್ಯಾನುವಾದದಲ್ಲಿ ಸಾಹಸಿ ಮನೋಭಾವದ ಎಸ್‌. ಜಯಶ್ರೀನಿವಾಸ ರಾವ್‌ ಆ ಗುಣದಿಂದಾಗಿಯೇ ಇಷ್ಟವಾಗುವ ಕವಿ ಮತ್ತು ಅನುವಾದಕ. ಕನ್ನಡ ಓದುಗರು ಇನ್ನೂ ಮುಖಾಮುಖಿಯಾಗಿರದ ಹೊಸ ಹೊಸ ದೇಶಭಾಷೆಯ ಕವಿಗಳನ್ನು ಹುಡುಕಿ ಅವರು ಅನುವಾದಿಸುವ ಪರಿ ಅನುಕರಣೀಯ. ಮೂಲಕ್ಕೆ ನಿಷ್ಠರಾಗಿ ಅವರು ಅನುವಾದಿಸುವ ಪರಿ ಕೂಡ ಗಮನಾರ್ಹ. ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲರಾದ ಜಯ…

  • ‘ದಲಿತರಿಗೆ ಗಾಂಧೀಜಿ ಮಾಡಿದ ಚಾರಿತ್ರಿಕ ವಂಚನೆ’ ಎನ್ನುವ ಹಣೆ ಪಟ್ಟಿ ಹೊತ್ತುಕೊಂಡು ಬಂದಿರುವ ‘ಪೂನಾ ಒಪ್ಪಂದ’ ಎನ್ನುವ ಕೃತಿಯು ೧೯೩೨ರ ಸೆಪ್ಟೆಂಬರ್ ೨೪ರಂದು ನಡೆದ ಒಪ್ಪಂದದ ಬಗ್ಗೆ ಸವಿವರವಾದ ಮಾಹಿತಿ ನೀಡುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರರ ಜೀವನದ ಎರಡು ಪ್ರಮುಖ ಘಟನೆಗಳಾಗಿ ಪೂನಾ ಒಪ್ಪಂದ ಮತ್ತು ಸಂವಿಧಾನ ರಚನೆಯ ಸಂದರ್ಭಗಳನ್ನು ಕಾಣಬಹುದು. ಲಂಡನ್ ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ, ‘ಅಸ್ಪೃಶ್ಯರು ಹಿಂದೂಗಳಲ್ಲ, ಅವರು ಮುಸ್ಲಿಮರಂತೆ ಪ್ರತ್ಯೇಕ ಅಸ್ಮಿತೆಯುಳ್ಳವರು ಎಂಬುದನ್ನು ಸಾಕ್ಷ್ಯಾಧಾರಗಳ ಸಮೇತ ಬಾಬಾಸಾಹೇಬರು ಸಾಬೀತು ಮಾಡಿದರು ಮತ್ತು ಸಾಮಾಜಿಕವಾಗಿ ವಿಭಿನ್ನರಾದ ಅಸ್ಪೃಶ್ಯರಿಗೆ, ತಮ್ಮ ಪ್ರತಿನಿಧಿಗಳನ್ನು ತಾವೇ ಆರಿಸಿಕೊಳ್ಳುವ ‘ಪ್ರತ್ಯೇಕ ಚುನಾಯಕಗಳು’ (Separate Electorates)…

  • ‘ಟಿಕೆಟ್ ಪ್ಲೀಸ್’ ವಿಕ್ರಂ ಚದುರಂಗ ಅವರ ಅನುವಾದಿತ ಕತೆಗಳಾಗಿವೆ. ಈ ಕೃತಿಯಲ್ಲಿ ಐದು ಕತೆಗಳಿದ್ದು, ನಮ್ಮ ಹೊರಜಗತ್ತಿನ ಮತ್ತು ದೈಹಿಕ ಅನುಭವದ ಮೂಲಕವೇ ತಲುಪಬಹುದಾದ ಒಳ ಅನುಭವಗಳನ್ನು, ಭಾವಲೋಕವನ್ನು ಓದುಗರಿಗೆ ಒಗ್ಗಿಸುವ ಅನುವಾದದ ಪ್ರಯತ್ನವಿಲ್ಲಿದೆ. ಇಲ್ಲಿನ ಟಿಕೆಟ್ ಪ್ಲೀಸ್ ಲಾರೆನ್ಸನ ಪ್ರಸಿದ್ಧ ಕತೆಯಾಗಿದ್ದು, ಹಲವಾರು ಭಾಷೆಗಳಿಗೂ ಕೂಡ ಅನುವಾದಗೊಂಡಿದೆ. ಮೊದಲ ಮಹಾಯುದ್ಧಾನಂತರದ ಕಾಲದಲ್ಲಿ ಈ ಕಥೆ ನಡೆಯುವಾಗಿನ ಯುರೋಪಿನ ಪಟ್ಟಣದ ಸ್ಥಿತಿಗತಿಗಳು, ಅಲ್ಲಿ ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಗಳು, ಯುದ್ಧಾನಂತರದ ಯುವಕರ ಕೊರೆತಯಿಂದಾಗಿ ಕೆಲಸ, ಕೈಗಾರಿಕೆ, ನಗರ ವ್ಯವಸ್ಥೆ ಇತ್ಯಾದಿಗಳಲ್ಲಿ ಉಂಟಾದ ಬದಲಾವಣೆಗೆ ತೆರೆದುಕೊಳ್ಳುತ್ತ ಹೋದ ಸ್ತ್ರೀಯರ ವೃತ್ತಿ ವೈವಿಧ್ಯಗಳು ಮತ್ತು ಈ ಬದಲಾವಣೆಗಳು…