ಪುಸ್ತಕ ಸಂಪದ

  • ಹಿರಿಯ ಪತ್ರಕರ್ತರು ಮತ್ತು ಕತೆಗಾರರು ಆಗಿರುವ ಎಫ್.ಎಂ. ನಂದಗಾವ ಅವರ `ಘಟ ಉರುಳಿತು’ ಇದು ಇವರ ಎಂಟನೇ ಕಥಾ ಸಂಕಲನ. ವಿವಿಧ ವಾರ, ಮಾಸ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕತೆಗಳನ್ನು ಸಂಚಲನ ಪ್ರಕಾಶನ ಓದುಗರ ಮುಂದಿಟ್ಟಿದೆ. ಪತ್ರಕರ್ತನಾಗಿ ಅಪಾರ ಜೀವನಾನುಭವ ಇರುವ ನಂದಗಾವ ಅವರು ದಿನನಿತ್ಯ ನಡೆಯುವ ಸಾಮಾನ್ಯ ಘಟನೆಗಳನ್ನು ಕತೆಯನ್ನಾಗಿಸಿದ್ದಾರೆ. ಸಾಮಾನ್ಯ ಘಟನೆಗಳನ್ನು ಕತೆಯಾಗಿ ನಿರೂಪಿಸುವಾಗ ಅವುಗಳಿಗೆ ಸಾಕ್ಷಿ ಚಿತ್ರದ ಸ್ವರೂಪ ಬಂದುಬಿಡುತ್ತದೆ. ಕತೆಗಳಿಗಿರುವ ಕುತೂಹಲದಿಂದ ಓದಿಸಿಕೊಂಡು ಹೋಗುವ ಗುಣ, ಆಕಸ್ಮಿಕ ತಿರುವು ಮತ್ತು ಅನಿರೀಕ್ಷಿತ ಮುಕ್ತಾಯ ಇರುವುದಿಲ್ಲ. ಯಥಾವತ್ತಾಗಿ ಒಂದಾದ ಮೇಲೊಂದು ಘಟನೆಗಳನ್ನು ವಾಸ್ತವಕ್ಕೆ ಕುಂದುಂಟಾಗದೆ ಜೋಡಿಸಲಾಗಿರುತ್ತದೆ. ಇಂತಹ ಸಾಕ್ಷ್ಯ ಚಿತ್ರದ…

  • “ವಿವೇಕದಿಂದ ಆನಂದ” ದಲ್ಲಿ ಲೇಖಕರಾದ ಡಾ. ಎಸ್  ಎಸ್ ಓಂಕಾರ್ ಇವರು ಸ್ವಾಮಿ ವಿವೇಕಾನಂದರ ಜೀವನವನ್ನು ಮಾದರಿಯಾಗಿ ಇಟ್ಟುಕೊಂಡು ಪತಂಜಲಿ ಮಹರ್ಷಿಗಳ ಘನವಾದ 'ಯಮ' ಮತ್ತು 'ನಿಯಮ' ತತ್ತ್ವಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಯೋಗದ ಶಾರೀರಿಕ ಅಂಶಗಳಿಗೆ ಆಧುನಿಕ ದೃಷ್ಟಿಕೋನ ಹೆಚ್ಚು ಮಹತ್ವ ಕೊಟ್ಟಿದ್ದರೂ, ಈ ಮೂಲಭೂತ ತತ್ತ್ವಗಳು ಅತಿ ಮುಖ್ಯ ಹಾಗೂ ವಿವೇಕಪೂರ್ಣವಾದ, ಅರ್ಥಪೂರ್ಣವಾದ, ಸಮರಸದ ಜೀವನಕ್ಕೆ ಉತ್ತಮ ಮಾರ್ಗದರ್ಶಿ. ಈ ಪುಸ್ತಕದ ಒಂದೊಂದು ಅಧ್ಯಾಯವೂ ಈ ತತ್ತ್ವಗಳ ಆಳಕ್ಕೆ ಇಳಿದು ಅವುಗಳ ಅರ್ಥ, ಪರಿಣಾಮ ಹಾಗೂ ವ್ಯಾವಹಾರಿಕ ಉಪಯೋಗಗಳನ್ನು ಶೋಧಿಸುತ್ತದೆ. ಪತಂಜಲಿಯವರು ವಿವರಿಸಿದಂತೆ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಶೌಚ, ಸಂತೋಷ, ತಪಸ್‌, ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ…

  • ಮೂರು ಸಾಹಿತಿಗಳು ಸೇರಿ ಬರೆದ ಗಝಲ್ ಗಳ ಸಂಕಲನವೇ ‘ಕಡಲ ಹನಿ ಒಡಲ ಧ್ವನಿ. ಪುಸ್ತಕದ ಬೆನ್ನಿಗೆ ಹಿಮ್ಮಾತು ಹೀಗಿದೆ “ನಾವು ಮೂವರು ನೆರೆಕರೆಯವರು ರತ್ನಾ ಟಿ ಭಟ್ಟ, ಪುತ್ತೂರು, ಹಾ ಮ ಸತೀಶ ಬೆಂಗಳೂರು ಮತ್ತು ನಾನು ಡಾ ಸುರೇಶ ನೆಗಳಗುಳಿ ಒಟ್ಟು ಸೇರಿ ನಮ್ಮ ಹವ್ಯಾಸಗಳಲ್ಲಿ ಒಂದಾದ ಗಜಲ್ ರಚನೆಗಳನ್ನು ಪ್ರಕಾಶಿಸುವ ಇಚ್ಚೆ ಹೊಂದಿ ‘ಕಡಲ ದನಿ ಒಡಲ ಧ್ವನಿ’ ಎಂಬ ಶೀರ್ಷಿಕೆಯಡಿಯಲ್ಲಿ ತಲಾ ಮೂವತ್ತರಂತೆ ಒಟ್ಟು ತೊಂಬತ್ತು ವಿಭಿನ್ನ ರೀತಿಯ ಗಜಲ್ ಗಳನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ.”

    ಈ ಕೃತಿಗೆ ಕಲಬುರಗಿಯ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಮಲ್ಲಿನಾಥ ಎಸ್ ತಳವಾರ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ…

  • ಗಝಲ್ ಕವಿ ಸಿದ್ಧರಾಮ ಹೊನ್ಕಲ್ ಅವರ ನೂತನ ಗಝಲ್ ಸಂಕಲನ ‘ಇದು ಪ್ರೇಮ ಮಹಲ್’ ಪ್ರಕಟವಾಗಿದೆ. ಪ್ರೇಮೋನ್ಮಾದದ ಆಯ್ದ ನೂರು ಗಝಲ್ ಗಳ ಸಂಗ್ರಹ ಈ ಕೃತಿಯಲ್ಲಿದೆ. ಇದಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಕವಿ ಅಬ್ದುಲ್ ಹೈ ತೋರಣಗಲ್ಲು. ಇವರು ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ…

    “ಭಯೋತ್ಪಾದನೆ ಒಂದು ಭೂತ
    ಖಂಡ ಖಂಡಾಂತರಗಳ ಪ್ರಶ್ನೆ
    ಶವಗಳು ಬದುಕುತ್ತಿವೆ!
    ಕರೀಮ್ !
    ಯಾಕೋ ಮನುಷ್ಯರೇ ಮರಣಿಸುತ್ತಿದ್ದಾರೆ.

    ಅಬಾಬಿಯ ಈ ಸಂದೇಶ ಧರ್ಮದ ಹೆಸರಲ್ಲಾಗುವ ಮನುಷ್ಯರ ಕೊಲೆಯನ್ನ, ಮಾನವೀಯತೆಯ ಕಗ್ಗೋಲೆಯನ್ನು ಸಾಂಕೇತಿಸಿ ಸಾಗುತ್ತಿದೆ. ದೇಶವೀಗ ಕೋಮುವಾದ, ಮತೀಯವಾದ ಮತ್ತು ಧರ್ಮದ…

  • ಭಾರತೀಯ ಇಂಗ್ಲಿಷ್ ಸಾಹಿತ್ಯದ ಅಗ್ರ ಲೇಖಕರಲ್ಲಿ ಒಬ್ಬರಾದ ಆರ್.ಕೆ. ನಾರಾಯಣ್ ಅವರ ಜಗತ್ಪ್ರಸಿದ್ಧ ಕೃತಿ “ಸ್ವಾಮಿ ಮತ್ತು ಅವನ ಸ್ನೇಹಿತರು”. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಚ್.ವೈ. ಶಾರದಾ ಪ್ರಸಾದ್. 19 ಅಧ್ಯಾಯಗಳಿರುವ ಈ ಕೃತಿಗೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಮನೋಭೀರಾಮ್ ಚಕ್ರವರ್ತಿ.

    ಈ ಕೃತಿಯನ್ನು ಓದುತ್ತಾ ಹೋದಂತೆ, 1950-70ರ ದಶಕಗಳಲ್ಲಿ ಭಾರತದ ಹಳ್ಳಿಗಳಲ್ಲಿ ಹಾಗೂ ಸಣ್ಣ ಪಟ್ಟಣಗಳಲ್ಲಿ ಹುಟ್ಟಿ ಬೆಳೆದ ಎಲ್ಲರಿಗೂ ತಮ್ಮ ಬಾಲ್ಯಕಾಲಕ್ಕೆ ಹೋದಂತೆ ಅನಿಸುತ್ತದೆ. ಅಂದಿನ ದಿನಗಳ ಗ್ರಾಮೀಣ ಭಾರತದ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ ಇಲ್ಲಿನ ಅಧ್ಯಾಯಗಳು. ಆ ಬದುಕನ್ನು ನೋಡುವುದು ಸ್ವಾಮಿ ಎಂಬ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯ ದೃಷ್ಟಿಯಿಂದ. ಅವನ ಮುಗ್ಧತೆ, ಪೆದ್ದುತನ, ಗೊಂದಲಗಳು, ತುಂಟಾಟಗಳು…

  • ‘ಲಾಲ್ ಬಾಗ್ ಕಲ್ಲಿನೊಂದಿಗೆ ಸಲ್ಲಾಪ’ ಎನ್ನುವುದು ಡಾ. ಟಿ ಆರ್ ಅನಂತರಾಮು ಅವರ ಆಯ್ದ ಪ್ರಬಂಧಗಳ ಸಂಕಲನ. ವಿಜ್ಞಾನ ಲೇಖಕರಾಗಿ ಅನಂತರಾಮು ಅವರು ನಾಡಿಗೆ ನೀಡಿದ ಕೊಡುಗೆ ಅಪಾರ. ಅವರ ಆಯ್ದ ಪ್ರಬಂಧಗಳನ್ನು ಸಂಪಾದಿಸುವ ಕಾರ್ಯ ಮಾಡಿದ್ದಾರೆ ಡಾ. ಸುಕನ್ಯಾ ಸೂನಗಹಳ್ಳಿ. ಈ ಕೃತಿಯಲ್ಲಿರುವ ಪ್ರಬಂಧ ‘ಲಾಲ್‌ಬಾಗ್ ಕಲ್ಲಿನೊಂದಿಗೆ ಸಲ್ಲಾಪ’ದಲ್ಲಿ “ಲಾಲ್‌ಬಾಗ್‌ನ ನಿತ್ಯ ಸಂತೆಯಲ್ಲಿ ನೀವೂ ಧ್ಯಾನಾಸಕ್ತರಾಗಬಹುದು. ಗೋಪುರದಲ್ಲಿ ಚಿತ್ರಿಸಿರುವ ಪುರಾಣ ಪ್ರಸಿದ್ಧರನ್ನು ನೆನೆದೋ ಅಥವಾ ಕಲಿಯುಗವನ್ನು ತೊರೆದು ದ್ವಾಪರವನ್ನೂ ದಾಟಿ ತ್ರೇತಾಯುಗವನ್ನೂ ಮೀಟಿ ಹಿಂದೆ ಸರಿಯಬಹುದು. ಈ ಲೋಕದ ರಂಪಗಳು ನಿಮ್ಮ ಏಕಾಂತತೆಗೆ ಭಂಗತಂದರೆ ಬೇಸರಪಡಬೇಡಿ, ಗುಡ್ಡದ ಯಾವ ಭಾಗದಲ್ಲಾದರೂ ಕಾಲು ಚೆಲ್ಲಿ, ನಿಮ್ಮ ಕಾಲಡಿಯಿರುವುದು ಈ ಯುಗ…

  • ಮಂಗಳ ಟಿ ಎಸ್ ತುಮರಿ ಅವರ ಸಣ್ಣ ಕಥೆಗಳ ಸಂಗ್ರಹ ‘ಹಿನ್ನೀರ ದಂಡೆಯ ಸಿತಾಳೆದಂಡೆ’ ಎನ್ನುವ ಕೃತಿ ಪ್ರಕಟವಾಗಿದೆ. ಬೆನ್ನುಡಿಯಲ್ಲಿ ಕಂಡು ಬಂದ ಓದುಗರಿಬ್ಬರ ಅನಿಸಿಕೆಗಳು ಹೀಗಿವೆ…

    “ಸಣ್ಣ ಸಣ್ಣ ಸಂಗತಿಗಳನ್ನು ಸಾಂದ್ರವಾಗಿ ಭಾವಪೂರ್ಣವಾಗಿಸುವ ಇಲ್ಲಿನ ಕಥೆಗಳು; ಚಂದದ ಬದುಕೊಂದಕ್ಕಾಗಿ ಹಂಬಲಿಸಿದಂತಿವೆ. ಹಿನ್ನೀರದಂಡೆಯಿಂದ ಮಹಾನಗರದ ಮಧ್ಯಕ್ಕೆ ತಂದು ನಿಲ್ಲಿಸಿದ ಕಥೆಗಾರ್ತಿಯ ಜೀವನಾನುಭವಗಳೇ ಕಥೆಗಳ ಹೂರಣವೆನಿಸುತ್ತದೆ. ಸಮಕಾಲೀನ ಸಂದಿಗ್ಧತೆಗಳ ಸೂಕ್ಷ್ಮ ಪದರುಗಳನ್ನು ಸಾವಧಾನದಿಂದ ಕಂಡರಸುವ ಕತೆಗಳು; ವಾಸ್ತವವನ್ನು ತದೇಕಚಿತ್ತದಿಂದ ದಿಟ್ಟಿಸಿವೆ. ಹೆಣ್ಣಿನ ಒಳತೋಟಿಗಳು ಆಧುನಿಕ ಅವಸ್ಥಾಂತರದ ಗರಡಿಯಲ್ಲಿ ಪಳಗಿ ಗಟ್ಟಿಪಾತ್ರಗಳಾಗಿ ಅರಳಿ ಹೊರಳಿವೆ. ಕನ್ನಡ…

  • ಕರ್ನಾಟಕದ ಅಧಿಕೃತ ಭಾಷೆ ಕನ್ನಡವೇ ಆದರೂ ಹಲವಾರು ಬಗೆಯ ಕನ್ನಡ ಮಾತನಾಡುವ ಜನರಿದ್ದಾರೆ. ಉತ್ತರ ಕರ್ನಾಟಕದ ಕನ್ನಡ, ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಅರೆ ಭಾಷೆ ಕನ್ನಡ, ಕುಂದಾಪುರದಲ್ಲಿ ಮಾತನಾಡುವ ಕುಂದಪ್ರ ಕನ್ನಡ ಹೀಗೆ ಹತ್ತು ಹಲವು ವಿಧಗಳಿವೆ. ಪ್ರತಿಯೊಂದು ಕನ್ನಡದ ಸೊಗಡೇ ಅದ್ಭುತ. ಕುಂದಾಪ್ರ ಕನ್ನಡದಲ್ಲಿನ ಪದಗಳ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡುವ ಕನ್ನಡ ನಿಘಂಟನ್ನು ಖ್ಯಾತ ವ್ಯಂಗ್ಯ ಚಿತ್ರಕಾರರಾದ ಪಂಜು ಗಂಗೊಳ್ಳಿಯವರು ಸಂಪಾದಿಸಿದ್ದಾರೆ.

    ‘ಕುಂದಾಪ್ರ ಕನ್ನಡ ನಿಘಂಟು’ ಈ ಕೃತಿಯು ವ್ಯಂಗ್ಯಚಿತ್ರಕಾರ  ಲೇಖಕ ಪಂಜು ಗಂಗೊಳ್ಳಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಪ್ರೊ-ಡಿಜಿ ಪ್ರಿಂಟಿಂಗ್ ಪ್ರಕಾಶನದಿಂದ ಪ್ರಕಟವಾಗುತ್ತಿರುವ ಈ ಕೃತಿ…

  • ಉದಯೋನ್ಮುಖ ಕಥೆಗಾರ್ತಿ ಶುಭಶ್ರೀ ಭಟ್ಟ ಅವರ ನೂತನ ಕಥಾ ಸಂಕಲನ ‘ಬಿದಿಗೆ ಚಂದ್ರಮನ ಬಿಕ್ಕು’ ಬಿಡುಗಡೆಯಾಗಿದೆ. ಈ ಕೃತಿಗೆ ಖ್ಯಾತ ಬರಹಗಾರ ವಿಕಾಸ ನೇಗಿಲೋಣಿ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯ ಕೆಲವು ಸಾಲುಗಳು …

    “ಮನುಷ್ಯ ಸೂಕ್ಷ್ಮವಾಗುತ್ತಾ ಆಗುತ್ತಾ ಅಸೂಕ್ಷ್ಮವನ್ನು ಗ್ರಹಿಸಬಲ್ಲವನಾಗುತ್ತಾನೆ. ಬೇಕಿದ್ದರೆ ಸುಮ್ಮನೇ ಯೋಚನೆ ಮಾಡಿ, ಒಬ್ಬ ಸೂಕ್ಷ್ಮ ವ್ಯಕ್ತಿಗೆ ಎಲ್ಲವೂ ಕಾಣಿಸತೊಡಗುತ್ತದೆ. ತೀರಾ ನಾಟಕೀಯತೆಯನ್ನೂ, ಕ್ರೌರ್ಯ ಮರೆಸಿ ತೋರುವ ಕಪಟ ಮಾನವತೆಯನ್ನೂ ಗ್ರಹಿಸಬಲ್ಲ. ಸೂಕ್ಷ್ಮ ವ್ಯಕ್ತಿ ಒಂದು ಮನೆ ಹೊಕ್ಕೊಡನೆ ಅಲ್ಲಿ ಮರೆಮಾಚಿಟ್ಟಿರುವ ಎಲ್ಲವನ್ನೂ ಗ್ರಹಿಸಬಲ್ಲ, ಮರೆಮಾಚಿಟ್ಟು ನಗುಮುಖದಲ್ಲಿ ವ್ಯವಹರಿಸುವ ಮನುಷ್ಯರನ್ನೂ ಗ್ರಹಿಸಬಲ್ಲ.…

  • ಅದೂರು ಕೆಳಗಿನಮನೆ ಅಪ್ಪೋಜಿರಾವ್ ಜಾದವ್ ಸಂಕಲಿಸಿದ ‘ಪುರಾಣ ಕಥಾಕೋಶ’ ಎನ್ನುವ ಕೃತಿಯನ್ನು ರಚಿಸಿದ್ದಾರೆ ಮೋಹನ ಕುಂಟಾರ್. ಪುರಾಣದ ಕಥೆಗಳ ಬಗ್ಗೆ ಎಷ್ಟೇ ತಿಳಿದುಕೊಂಡರೂ ಇನ್ನಷ್ಟು ತಿಳಿಯಲು ಇದ್ದೇ ಇರುತ್ತದೆ. ಪುರಾಣದ ಯಾವುದೇ ಪಾತ್ರವನ್ನು ಬೇಕಾದರೂ ನೀವು ತೆಗೆದುಕೊಳ್ಳಿ, ಅದಕ್ಕೊಂದು ಸೂಕ್ತವಾದ ಹಿನ್ನಲೆ, ಕಥೆ ಇದ್ದೇ ಇರುತ್ತದೆ. ಈ ರೀತಿಯ ಪುರಾಣ ಕಥೆಗಳನ್ನು ಓದಲು ಬಹಳ ಚೆನ್ನಾಗಿರುತ್ತದೆ. ಈ ಕೃತಿಯ ಬಗ್ಗೆ ಖ್ಯಾತ ಬರಹಗಾರ ಹಾಗೂ ವಿಮರ್ಶಕ ಡಾ. ತಾರಾನಾಥ ವರ್ಕಾಡಿಯವರು ಸೊಗಸಾದ ಬೆನ್ನುಡಿ ಬರೆದಿದ್ದಾರೆ.

    ವರ್ಕಾಡಿಯವರ ಬೆನ್ನುಡಿ ‘ಕೆಳಗಿಡುವ ಮುನ್ನ..’ ದಲ್ಲಿ ಅವರು ಬರೆದ ಕೆಲವು ಸಾಲುಗಳು… “ತನ್ನ ಅಜ್ಜ ಬರೆದ ಕಥೆಗಳು ಕಾಲನ ಕುಲುಮೆಯಲ್ಲಿ ಕರಗಿ ಹೋದಗಂತೆ…