ಪುಸ್ತಕ ಸಂಪದ

  • ಲೇಖಕರಾದ ರಾಜು ಅಡಕಳ್ಳಿಯವರ ನೂತನ ಕೃತಿ ಹರಟೆ ಕಷಾಯ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕೃತಿಗೆ ಬೆನ್ನುಡಿ ಬರೆದು ಲೇಖಕರ ಬೆನ್ನು ತಟ್ಟಿದ್ದಾರೆ ಬಿಎಂಶ್ರೀ ಪ್ರತಿಷ್ಟಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ. ಈ ಕೃತಿಯ ಬಗ್ಗೆ ಲೇಖಕರಾದ ರಾಜು ಅಡಕಳ್ಳಿ ಇವರು ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ…

    “ಈ 'ಹರಟೆ ಕಷಾಯ'ವನ್ನು ಬರೆಯಲೇಬೇಕೆಂದು ಹಠಕ್ಕೆ ಬಿದ್ದು ಬರೆದಿದ್ದಲ್ಲ ಅಥವಾ ಒತ್ತಾಯಕ್ಕೆ ಬಸಿರಾಗಿ ಹೆತ್ತಿದ್ದೂ ಅಲ್ಲ. ಇದನ್ನು ತೀರಾ ಗಂಭೀರ ಕೃತಿ ಎಂದು ಭಾವಿಸುವುದಕ್ಕಿಂತಲೂ ಬದುಕಿನ ಸುಖ, ದುಃಖ, ಪ್ರೀತಿ, ನಗು, ಸಂಬಂಧ, ವಿಡಂಬನೆ, ಹಾಸ್ಯ, ಚೋದ್ಯ, ಚೊಗರು, ಚಿಗುರು, ಚೆಂದಗಳನ್ನು ಒಳಗೊಂಡಿರುವ ಕೋಸುಂಬರಿ ಎನ್ನಬಹುದೇನೋ.

  • ‘ದೇವರು ಹೊರಟನು’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕಾದಂಬರಿಯಾಗಿದೆ. ಕೃತಿಯ ಮೂಲ ಮರಾಠಿ ಲೇಖಕ ದಿ.ಬಾ. ಮೊಕಾಶಿ. ಈ ಕಾದಂಬರಿ ರಚಿಸಿ ಆರು ದಶಕಗಳು ಗತಿಸಿದರೂ ಇಂದಿಗೂ ಎಲ್ಲ ವಯಸ್ಸಿನವರಿಗೆ ಮೋಡಿ ಮಾಡುತ್ತದೆ. ಕಾರಣವೇನೆಂದರೆ ಲೇಖಕನು ಕಾದಂಬರಿಯ ಆರಂಭದಲ್ಲೇ 'ಯಾವುದಕ್ಕೆ ಆದಿಯಿಲ್ಲವೋ-ಅಂತ್ಯವಿಲ್ಲವೋ ಇದು ಅಂಥ ದೇವರ ಕಥೆಯಾಗಿದೆ' ಎನ್ನುತ್ತಾನೆ. ಸತ್ಯವೆಂದರೆ ದೇವರ ರೂಪವಾಗಿರುವ ಮನೆಯಲ್ಲಿಯ ಮುನ್ನೂರು ವರ್ಷಗಳ ನರಸಿಂಹನು, ಈ ಕಥೆಯ ಕೇವಲ ನಿಮಿತ್ತವಾಗಿದ್ದಾನೆ. ಆದರೆ ಈ ನರಸಿಂಹನ ಸಾಕಾರ ಮೂರ್ತಿಯ ಸುತ್ತಲೂ ಆಕಾರ ಪಡೆದ 'ಪಳಸಗಾಂವ' ಎಂಬ ಚಿಕ್ಕ ಊರಿನ ಒಂದು ದೊಡ್ಡ ಕುಟುಂಬದ ಭಾವ ಭಾವನೆಯ, ಒತ್ತಡ ತಲ್ಲಣಗಳ, ಆಕಾಂಕ್ಷೆ-ಉಪೇಕ್ಷೆಗಳ ಅನನ್ಯ ಚಿತ್ರಣವನ್ನು ಈ ಕಾದಂಬರಿಯ ಮೂಲಕ ಮೊಕಾಶಿಯವರು ಓದುಗರ ಮುಂದೆ…

  • ಮಕ್ಕಳಿಗಾಗಿ ಕಥೆ ಬರೆಯುವವರೇ ಕಡಿಮೆಯಾಗಿರುವಾಗ ಅಶ್ವಿನಿ ಶಾನಭಾಗ ಮಕ್ಕಳಿಗಾಗಿ ಸಾಹಸಮಯ ಕಥೆಯುಳ್ಲ ‘ಪುಟಾಣಿ ಪಂಟರ್ಸ್’ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಆಪರೇಷನ್ ಬೆಕ್ಕಿನ ಮರಿ ಎಂಬ ಕಥಾ ಹಂದರ ಹೊಂದಿರುವ ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಯಶಸ್ವಿನಿ ಎಸ್ ಎನ್. ಅವರು ತಮ್ಮ ಬೆನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ಹೀಗಿವೆ…”ನನಗೆ ಈ ಕತೆಯಲ್ಲಿ ಇಷ್ಟ ಆದ ಎರಡು ಮುಖ್ಯವಾದ ವಿಷಯಗಳು ಎಂದರೆ ಮಕ್ಕಳು ತೋರುವ ಕುತೂಹಲ ಮತ್ತು ಸಹಾನುಭೂತಿ. ಈ ಕತೆಯಲ್ಲಿ ಬರುವ ಮೂವರು ಮುಖ್ಯ ಪಾತ್ರಗಳು - ಆರ್ಯ, ಮೀರಾ ಮತ್ತು ಅಪ್ಪು ನಮ್ಮ ಮನೆಗಳಲ್ಲಿ ಅಥವಾ ಸುತ್ತಮುತ್ತ ನೋಡಿರುವ ಮಕ್ಕಳನ್ನು ನೆನಪಿಸುತ್ತಾರೆ. ಅವರು ಆಡುವ ಸ್ಕೂಟರ್ ಆತ, ಹಿರಿಯರಿಂದ ಬಚ್ಚಿಟ್ಟುಕೊಂಡು ಚಾಕಲೇಟ್ ತಿನ್ನೋದು, ಜೇಬಿನಲ್ಲಿ ಸದಾ…

  • ಕಥಾ ಸಂಕಲನಗಳಿಗೆ ಹೆಸರಿಡುವಾಗ ಬರೆದ ಕತೆಗಳಲ್ಲಿ ಇಷ್ಟದ ಅಥವಾ ಓದುಗರಿಗೆ ಇಷ್ಟವಾಗುವ ಒಂದು ಕತೆಯ ಹೆಸರನ್ನು ಪುಸ್ತಕದ ಹೆಸರಾಗಿ ಇಡುವುದು ವಾಡಿಕೆ. ಆದರೆ, ಈ ಕತಾಸಂಕಲನದಲ್ಲಿ ಇರುವ ಐದೂ ಕತೆಗಳಲ್ಲಿ ಯಾವುದಕ್ಕೂ "ಅವಳ ಹೆಜ್ಜೆ ಗುರುತು" ಎಂಬ ಹೆಸರಿಲ್ಲ ಮತ್ತೆ ಯಾಕೆ ಈ ಹೆಸರು ಎಂದು ಕೇಳಿದರೆ ಈ ಪುಸ್ತಕದ ಐದೂ ಕತೆಗಳಲ್ಲಿ ಬರುವ ಹಲವಾರು ಪಾತ್ರಗಳು ಒಂದಲ್ಲಾ ಒಂದು ರೀತಿಯಲ್ಲಿ ನನ್ನ ಹಾಗೂ ನಿಮ್ಮ ಜೀವನದಲ್ಲಿ ಗುರುತಾಗಿ ಉಳಿವವರು. ಪುಸ್ತಕ ಓದುವಾಗ ಇಲ್ಲಿನ ಕೆಲವು ಪಾತ್ರಗಳು ಅಮ್ಮನನ್ನು ಹೋಲಿದರೆ ಮತ್ತೆ ಕೆಲವು ಸ್ನೇಹಿತೆಯನ್ನೋ, ಹೆಂಡತಿಯನ್ನೋ, ಸಹೋದರಿಯನ್ನೋ, ಅಕ್ಕಪಕ್ಕದ ಮನೆಯವರನ್ನೋ ಅಥವಾ ಬಸ್ಸು ರೈಲಿನಲ್ಲಿ ಹೋಗುವಾಗ ಎದುರು ಕುಳಿತವರನ್ನೋ ಹೋಲುತ್ತದೆ. ಈ ಕತೆಯಲ್ಲಿ ಬರುವ ಎಲ್ಲರೂ ಬದುಕಿನ…

  • ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಾದ ಸ್ವಾಮಿ ಅಖಂಡಾನಂದ ಇವರು ಬಂಗಾಳಿ ಭಾಷೆಯಲ್ಲಿ ಬರೆದ ಪುಸ್ತಕವನ್ನು ಡಾ. ನರೇಂದ್ರನಾಥ ಬಿ. ಪಾಟೀಲ್ ಆಂಗ್ಲಭಾಷೆಗೆ (In the Lap of the Himalayas) ಅನುವಾದ ಮಾಡಿದ್ದರು. ಆ ಕೃತಿಯ ಮಹತ್ವ ಹಾಗೂ ಸಾರವನ್ನು ಕನ್ನಡ ಬಲ್ಲ ಓದುಗರಿಗಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಹೆಚ್. ರಾಮಚಂದ್ರಸ್ವಾಮಿ. ಸ್ವಾಮಿ ಅಖಂಡಾನಂದ ಅವರ ಹಿಮಾಲಯದ ಅನುಭವಗಳನ್ನು ನಿರೂಪಿಸುವ ಕೃತಿ ಇದು.

    ಗಂಗಾಧರ ಮಹಾರಾಜ್ ಎಂದೂ ಬಾಬಾ ಎಂದೂ ಆಪ್ತವಲಯದಲ್ಲಿ ಪ್ರಸಿದ್ಧರಾಗಿರುವ ಸ್ವಾಮಿ ಅಖಂಡಾನಂದರು ಮಹಾ ಗುರು ಶ್ರೀರಾಮಕೃಷ್ಣ ಪರಮಹಂಸರ ನೇರ ಸನ್ಯಾಸಿ ಶಿಷ್ಯರಲ್ಲಿ ಒಬ್ಬರು. ಮಹಾ ಗುರು ಇನ್ನಿಲ್ಲವಾದ ಸ್ವಲ್ಪ ಕಾಲಾನಂತರ, ೧೮೮೭ರಿಂದ, ಸ್ವಾಮಿ…

  • ಬಹುವೇಗದಲ್ಲಿ ಬೆಳೆಯುತ್ತಿರುವ ನಗರ ಎಂದೇ ಹೆಸರಾದ ಬೆಂಗಳೂರು ಬಗ್ಗೆ ಮಾಲಿನಿ ಗೋಯಲ್ ಹಾಗೂ ಪ್ರಶಾಂತ್ ಪ್ರಕಾಶ್ ಅವರು ಆಂಗ್ಲಭಾಷೆಯಲ್ಲಿ ಬರೆದ ‘ಅನ್ ಬಾಕ್ಸಿಂಗ್ ಬೆಂಗಳೂರು’ ಎನ್ನುವ ಕೃತಿಯು ಅದೇ ಹೆಸರಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಖ್ಯಾತ ಲೇಖಕಿ ಪ್ರತಿಭಾ ನಂದಕುಮಾರ್. ಬೆಂಗಳೂರು ನಗರವನ್ನು ಹೊಸ ಆರಂಭಗಳ ನಗರ ಎಂದು ಹೆಸರಿಸಿದ್ದಾರೆ. ಪ್ರತಿಭಾ ನಂದಕುಮಾರ್ ಅವರು ತಮ್ಮ ಅನುವಾದಕಿಯ ಮಾತುಗಳಲ್ಲಿ ಹೇಳಿದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…

    “ಮಾಲಿನಿ ಗೋಯಲ್ ಮತ್ತು ಪ್ರಶಾಂತ್ ಪ್ರಕಾಶ್ ಅವರ ಬೆಂಗಳೂರಿನ ಕುರಿತ ಈ ಪುಸ್ತಕ ಬೆಂಗಳೂರಿನ ಬಗ್ಗೆ ಇದುವರೆಗೆ ಬಂದ ಎಲ್ಲಾ ಪುಸ್ತಕಗಳಿಗಿಂತ ಭಿನ್ನವಾದುದು. ಇದು ಇತಿಹಾಸವನ್ನು ಹೇಳುವುದಿಲ್ಲ, ಬದಲಿಗೆ ಇದು ಭವಿಷ್ಯದ…

  • ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಮುಂಜಾವಿನ ರತ್ನಗಳು’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ನುಡಿಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು ಮಾಡಿದ್ದಾರೆ. ಕೆಲವೇ ಕೆಲವು ಸಾಲುಗಳಲ್ಲಿ ನಮಗೆ ಜೀವನ ಮೌಲ್ಯಗಳನ್ನು ಕಲಿಸಬಲ್ಲ ಶಕ್ತಿ ಈ ನುಡಿಗಳಿಗಿವೆ. ಕೆಲವು ನುಡಿಗಳು ೨ ವಾಕ್ಯದಲ್ಲೇ ಮುಗಿದರೆ, ಕೆಲವು ೧೫-೨೦ ವಾಕ್ಯಗಳಿಗೆ ಹಿಗ್ಗಿವೆ. ತಮ್ಮ ಮನದಾಳದ ನುಡಿಗಳನ್ನು ರತ್ನಾ ಭಟ್ ಅವರು ಹಂಚಿಕೊಂಡಿರುವುದು ಹೀಗೆ…

    “ ಮೊದಲಿನಿಂದಲೂ ಬರೆಯುವ ಹವ್ಯಾಸವಿಟ್ಟುಕೊಂಡಿದ್ದ ನನಗೆ ಸರಿಯಾದ ರೀತಿಯಲ್ಲಿ ಬರವಣಿಗೆಗೆ ಪ್ರೋತ್ಸಾಹ ದೊರೆತದ್ದು ವಾಟ್ಸಾಪ್ ಬಳಗದ ಓದುಗರು ಹಾಗೂ…

  • ನಾ. ಕಸ್ತೂರಿ ಅವರು ಕನ್ನಡದ ಸುಪ್ರಸಿದ್ಧ ಹಾಸ್ಯ ಲೇಖಕರು. ಅವರ ಪೂರ್ಣ ಹೆಸರು ಕಸ್ತೂರಿ ರಂಗನಾಥ ನಾರಾಯಣ ಶರ್ಮ. ಅವರ ಹಾಸ್ಯ ಬರಹಗಳು ಸುಲಭಲಭ್ಯವಿಲ್ಲದ ಸಮಯದಲ್ಲಿ, ಅವರ ಉತ್ತಮ ಹಾಸ್ಯಬರಹಗಳನ್ನು ವೈ. ಎನ್. ಗುಂಡೂರಾಯರು ಆಯ್ದು “ಬೆಸ್ಟ್ ಆಫ್ ಕಸ್ತೂರಿ” ಎಂಬ ಪುಸ್ತಕವಾಗಿ ಹಾಸ್ಯಪ್ರಿಯರ ಕೈಗಿತ್ತಿದ್ದಾರೆ.

    ಇದರಲ್ಲಿವೆ ನಾ. ಕಸ್ತೂರಿಯವರ ಹಾಸ್ಯ ಬರಹಗಳು, ಕವನಗಳು, ಅನರ್ಥಕೋಶ, ನಗೆ ಚಟಾಕಿಗಳು ಮತ್ತು ಒಂದು ನಾಟಕ.
    ಉದ್ಯೋಗ ಹುಡುಕಿ, ಕರ್ನಾಟಕಕ್ಕೆ ಬಂದ ನಾ. ಕಸ್ತೂರಿಯವರು ಕನ್ನಡ ಕಲಿತು, ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಮೋಘ. ಯಾರಿಗೂ ನೋವಾಗದಂತೆ ಹಾಸ್ಯ ಬರಹಗಳನ್ನು ಹೇಗೆ ಬರೆಯಬೇಕು ಎಂಬುದಕ್ಕೆ ಅವರ ಒಂದೊಂದು ಬರಹವೂ ಮಾದರಿ.

    ಡೊಂಕುಬಾಲ, ಅಲ್ಲೋಲಕಲ್ಲೋಲ, ಉಪಾಯ ವೇದಾಂತ, ಗಾಳಿಗೋಪುರ, ಶಂಖವಾದ್ಯ…

  • ತಮಿಳು ಭಾಷೆಯ ಖ್ಯಾತ ಕವಿ ಸೀನು ರಾಮಸಾಮಿಯವರ ಆಯ್ದ ಕವನಗಳನ್ನು ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಮಲರ್ ವಿಳಿ ಕೆ. ಮಧುಮಿತ. ಇವರ ಈ ಕವನ ಸಂಕಲನಕ್ಕೆ ಡಾ. ಶೀಲಾದೇವಿ ಎಸ್ ಮಳೀಮಠ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಭಾಗಗಳು…

    “ಸೀನು ರಾಮಸಾಮಿಯವರ ಕವಿತೆಗಳ ಅನುವಾದಿತ ಕವಿತೆಗಳು "ಮಳೆ ಕುಡಿವ ನಗರ" ಅನುವಾದಕಿ, ಡಾ.ಮಲರ್‌ವಿಳಿ.ಕೆ, ಮಧುಮಿತ ಅವರು ಅತ್ಯಂತ ಸರಳ ಸಜ್ಜನಿಕೆಯ ಕವಯತ್ರಿ. ಅವರ ಅನುವಾದದಲ್ಲಿ ಓದುಗರನ್ನು ಒಮ್ಮೆಲೆ ಸೆಳೆಯುವ ಸಂವೇದನಶೀಲತೆ ಎದ್ದು ಕಾಣುವಂತಹದ್ದು. ಇದಕ್ಕಾಗಿ ಇವರ ಈ ಕೃತಿಯನ್ನು ಓದಿದೆ. "ಪೂರ್ವ ಓದು" ಬರೆಯಬೇಕೆನಿಸಿತು. ಸಮೂಹ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಡಾ.ಮಲರ್‌ವಿಳಿಯವರು…

  • “ಸಾಮಾನ್ಯವಾಗಿ ಸಂಸ್ಕೃತ ವಿದ್ವಾಂಸರು ಸಂಸ್ಕೃತ ಲೇಖಕರೂ ಆದಲ್ಲಿ ಇತರ ಭಾಷೆಗಳ ಬಗೆಗೆ ಅದೊಂದು ಬಗೆಯಾದ ಉದಾಸೀನತೆಯಿರುವುದೆಂಬುದು ಲೋಕದಲ್ಲಿ ಪ್ರಚುರವಾದ ಪ್ರಥೆ. ಕೆಲಮಟ್ಟಿಗೆ ಅಪಪ್ರಥೆಯೂ ಹೌದು. ಒಂದು ವೇಳೆ ಅವರು ಸಂಸ್ಕೃತೇತರ ಭಾಷೆಗಳಲ್ಲಿ -ವಿಶೇಷತಃ ದೇಶ ಭಾಷೆಗಳಲ್ಲಿ -ಬರೆದಾಗ ಅವರ ನುಡಿಗಳಲ್ಲಿ ‘ಸಂಸ್ಕೃತ ಘಾಟು’ ಹೆಚ್ಚಾಗಿರುವುದೆಂಬುದು ಮತ್ತೊಂದು ಆಕ್ಷೇಪ. ಆದರೆ ಡಾ. ವಿಶ್ವಾಸ ಅವರು ಈ ಎರಡು ಆಕ್ಷೇಪಗಳಿಂದಲೂ ಮುಕ್ತರು. ಅವರ ಸಂಸ್ಕೃತ - ಕನ್ನಡಗಳೆರಡೂ ತುಂಬ ಪ್ರಸನ್ನ ಮಧುರ, ನಿಸರ್ಗ ಸುಂದರ. ಕೇವಲ ಭಾಷಾ ಸಂಬಂಧಿಯಾದ ಶಾಸ್ತ್ರೀಯ ಲೇಖನಕ್ಕಷ್ಟೇ ಅವರು ಸೀಮಿತರಾಗದೆ ಭಾವ ಸಂಬಂಧಿಯಾದ, ಬಹುಮುಖಿಯೂ ಆದ ಬರೆವಣಿಗೆಯನ್ನು ಉಭಯ ಭಾಷೆಗಳಲ್ಲಿಯೂ ನಡಸಿಕೊಂಡು ಬಂದಿರುವುದು ತುಂಬ ಮುದಾವಹ. ಅವರು ಕನ್ನಡ -…