ಪುಸ್ತಕ ಸಂಪದ

  • ‘ಒಡಲ ಜೋಗುಳ' ಎಂಬುದು ವಿಶ್ವಪ್ರಿಯ ವಡ್ಡಮ್ಮ ತಾತನ ತತ್ವಪದಗಳ ಸಂಗ್ರಹದ ಮೊದಲ ಸಂಪುಟ. ಈ ಸಂಪುಟವನ್ನು ಸಂಪಾದನೆ ಮಾಡಿದ್ದಾರೆ ಡಾ. ಯಮನೂರಪ್ಪ ವಡಕಿ ಇವರು. ತಮ್ಮ ಸಂಪಾದಕೀಯದಲ್ಲಿ ಇವರು ಬರೆದ ಸಾಲುಗಳು ನಿಮ್ಮ ಓದಿಗಾಗಿ…

    “ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಾಟೂರಿನವರಾದ ಆದಯ್ಯಸ್ವಾಮಿ ಹಿರೇಮಠ ಅವರು ಬಾಲ್ಯದ ದಿನಗಳಿಂದಲೂ ಗಂಗಾವತಿ ನಗರದಲ್ಲಿ ವಾಸವಾಗಿದ್ದವರು. ಪ್ರಾಥಮಿಕ ಶಿಕ್ಷಣದಿಂದ ಪದವಿ ಪೂರ್ವ ಶಿಕ್ಷಣದವರೆಗೂ ಗಂಗಾವತಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ. ತಮ್ಮ ಬಾಲ್ಯದ ದಿನಗಳಿಂದಲೂ ಆಧ್ಯಾತ್ಮವನ್ನು ಮೈಗೂಡಿಸಿಕೊಂಡ ಇವರು ಸುಮಾರು ಮೂವತ್ತು ವರ್ಷಗಳಿಂದಲು ಸಮಾಜದಲ್ಲಿ ತಾವು ಕಂಡುಂಡ ಸತ್ಯ ಘಟನೆಗಳನ್ನು…

  • “ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಕತೆಗಳು, ಒಗಟುಗಳು ಮತ್ತು ಗಾದೆಗಳು” ಎಂಬುದು ಈ ಪುಸ್ತಕದ ಉಪಶೀರ್ಷಿಕೆ. ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಸಹಪ್ರಕಾಶನ ಕಾರ್ಯಕ್ರಮ (ಎ.ಸಿ.ಪಿ.)ದಲ್ಲಿ ಯುನೆಸ್ಕೋ ಆಶ್ರಯದಲ್ಲಿ ಹೊರತರಲಾದ ಈ ಪುಸ್ತಕವನ್ನು ಎನ್.ಬಿ. ಟ್ರಸ್ಟ್ ಮೂಲಕ ಏಷ್ಯನ್ ಕಲ್ಚರಲ್ ಸೆಂಟರ್ ಫಾರ್ ಯುನೆಸ್ಕೋ ಪ್ರಕಟಿಸಿದೆ.

    ಇದರಲ್ಲಿ 54 ಹಾಸ್ಯಭರಿತ ಕತೆಗಳು, 54 ಒಗಟುಗಳು, 23 ಗಾದೆಗಳು ಮತ್ತು ರೇಖಾಚಿತ್ರಗಳಿವೆ. ಉಲ್ಲೇಖಿತ ಪ್ರದೇಶದ 18 ದೇಶಗಳು ಈ ಕೊಡುಗೆ ನೀಡಿವೆ. ಜಗತ್ತಿನ ನಾನಾ ಭಾಷೆಗಳಿಗೆ ಈ ಪುಸ್ತಕ ಅನುವಾಗಿದೆ ಎಂಬುದು ಗಮನಾರ್ಹ.

    ಇದರ ಕತೆಗಳ ಓದು ಉಲ್ಲಾಸದಾಯಕ. ಮೊದಲನೆಯದು “ಅದೃಷ್ಟಶಾಲಿ ಬೇಟೆಗಾರ” ಎಂಬ ಜಪಾನಿ ಕತೆ. ತನ್ನ ಮಗನ ಏಳನೇ ಹುಟ್ಟುಹಬ್ಬದ ಔತಣಕ್ಕಾಗಿ ಪ್ರಾಣಿಗಳ ಬೇಟೆಯಾಡಲು ಒಬ್ಬ ಬೇಟೆಗಾರ…

  • ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೪೧ನೇ ಪುಸ್ತಕವೇ ಬಜೆ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ. 

    ಬಜೆ ಎನ್ನುವುದು ಬಹು ಆರೋಗ್ಯಕರ ಸಸ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. “ಪುಟ್ಟ ಮಕ್ಕಳ ನಾಲಿಗೆಗೆ ತೇಯ್ದ ಬಜೆಯನ್ನು ಲೇಪಿಸುವ ಸಂಪ್ರದಾಯ ನಮ್ಮಲ್ಲಿ ಇದೆ. ಇದರಿಂದ ಮಕ್ಕಳ ಮಾತನಾಡುವ ಶಕ್ತಿ ಮತ್ತು ಬುದ್ಧಿ ಬೆಳವಣಿಗೆಗೆ ನೆರವಾಗುತ್ತದೆಂಬ ನಂಬಿಕೆ ಇದೆ. ಆಯುರ್ವೇದದ ಅನೇಕ ಔಷಧಿಗಳಲ್ಲಿ ಬಳಕೆಯಾಗುವ ಬಜೆ…

  • “ಮಾತೊಂದ ಹೇಳುವೆ..’ ಗುರುಪಾದ ಬೇಲೂರು ಅವರ ‘ವಾರದ ಮಾತುಕತೆ’ಗಳ ಸಂಗ್ರಹವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಸಾಮಾನ್ಯವಾಗಿ ಬರವಣಿಗೆಗಳು ಚಲನಚಿತ್ರಗಳಂತಹ ದೃಶ್ಯ ಮಾಧ್ಯಮ ಗಳಾಗುತ್ತವೆ. ಆದರೆ ಇಲ್ಲಿ ಯೂಟ್ಯೂಬ್‌ನಲ್ಲಿ ಬಂದ ಅಂಕಣಗಳು ಅಕ್ಷರ ರೂಪಕ್ಕೆ ಇಳಿದಿವೆ. ಪುಸ್ತಕ ರೂಪದಲ್ಲಿ ಇದೀಗ ಓದುಗರಿಗೆ ಲಭ್ಯ. ಇಲ್ಲಿ ಜ್ಞಾನವಿದೆ. ವಿಜ್ಞಾನವಿದೆ, ಹಿರಿಯರ ಮೌಲಿಕ ಮಾತುಗಳಿವೆ. ಚಿಂತನೆಗೆ ಹಚ್ಚುವ ಅಸಾಮಾನ್ಯ ಸಾಮರ್ಥ್ಯ ಈ ಬರಹಗಳಿಗಿದೆ. ಪ್ರಪಂಚದ ಅನೇಕಾನೇಕ ವೈವಿಧ್ಯಗಳನ್ನು ಹಲವು ಮೂಲಗಳಿಂದ ಆಯ್ದು ತಂದು ಜ್ಞಾನದ ತೃಷೆಯನ್ನು ತಣಿಸುವ ಪ್ರಯತ್ನವಿದು. ಕೆಲವು ಬರಹಗಳು ಜಗತ್ತಿನ ಒಳಮುಖದರ್ಶನ ಮಾಡಿಸಿ ವ್ಯಾವಹಾರಿಕವಾಗಿ ನಮ್ಮ ಕಣ್ಣೆರೆಸುತ್ತವೆ. ವೈಜ್ಞಾನಿಕ ಸಿದ್ಧಾಂತಗಳ ಪರಿಚಯವಿದೆ.…

  • ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೧೨ನೇ ಪುಸ್ತಕವೇ ನೆಲ್ಲಿ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ. 

    ನೆಲ್ಲಿ ಎನ್ನುವುದು ಬಹು ಆರೋಗ್ಯಕರ ಸಸ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. “ಆಯುರ್ವೇದದಲ್ಲಿ ಮತ್ತು ಪಾರಂಪರಿಕ ವೈದ್ಯಕೀಯದಲ್ಲಿ ಅತ್ಯಂತ ಮಹತ್ವವಿರುವ ನೆಲ್ಲಿಯು ಅದ್ಭುತ ಔಷಧಗಳ ಆಗರವಾಗಿದೆ. ಆಯುರ್ವೇದದ ಆಚಾರ್ಯ ಪರಂಪರೆಯೇ ನೆಲ್ಲಿಯ ಗುಣಗಳನ್ನು ಹಾಡಿಹೊಗಳಿದೆ. ನೆಲ್ಲಿಯ ಔಷಧೀಯ ಗುಣಗಳ ಬಗೆಗೆ ಆಧುನಿಕ…

  • ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೭ನೇ ಪುಸ್ತಕವೇ ಲೋಳೆಸರ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ. 

    ಲೋಳೆಸರ ಎನ್ನುವುದು ಬಹು ಆರೋಗ್ಯಕರ ಸಸ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಲೆವೋರಾ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಈ ಸಸ್ಯವು ಸೌಂದರ್ಯಕ್ಕೂ-ಆರೋಗ್ಯಕ್ಕೂ ಸೈ ಎನ್ನಿಸುವಂತಹ ಗಿಡ. “ಈಗ ಜಗತ್ತಿನಾದ್ಯಂತ ಲೋಳೆ ಸರಕ್ಕೆ ಬೇಡಿಕೆ ಏರುತ್ತಿದೆ. ಹಲವಾರು ಬಗೆಯ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಈ…

  • ದೀಪದ ಮಲ್ಲಿ ಬರೆದಿರುವ ‘ಹುಣಸೇ ಚಿಗುರು ಮತ್ತು ಇತರ ಕಥೆಗಳು' ಎಂಬ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಉದಯೋನ್ಮುಖ ಕಥೆಗಾರ್ತಿಯಾಗಿ ಗುರುತಿಸಲ್ಪಡುತ್ತಿರುವ ದೀಪದ ಮಲ್ಲಿಯವರ ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ದಯಾ ಗಂಗನಘಟ್ಟ. ಇವರು ಈ ಕೃತಿಯಲ್ಲಿರುವ ಮೂಲ ಸೆಲೆ ಮಾನವೀಯ ಕಳಕಳಿ ಎಂದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ...

    “ಪರಂಪರೆ ಮತ್ತು ಆಧುನಿಕತೆ ಎರಡರ ಕಡೆಗೂ ಒಲವಿರುವ ದೀಪದಮಲ್ಲಿ ಅವರಿಗೆ ಹೊಸ ಹೊಸ ತಿಳುವಳಿಕೆಗಳ ಅಂದಂದಿನ ಪರಿಣಾಮಗಳ ಬಗ್ಗೆಯೂ ಪ್ರಜ್ಞೆ ಇದೆ. ಇವರ "ಹುಣಸೇ ಚಿಗುರು" ಕಥಾಸಂಕಲನದ ಕಥೆಗಳಲ್ಲಿ ಲೌಕಿಕದ ಹಲವು ಸಮಸ್ಯೆಗಳ ನಡುವೆಯೂ ಚಿಮ್ಮುವ ಜೀವನ ಪ್ರೀತಿ, ಇಲ್ಲಿಯ…

  • ‘ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ' ಎನ್ನುವುದು ಪ್ರಮೋದ ಕರಣಂ ಅವರ ಎರಡನೇ ಕೃತಿ. ೮೫ ಪುಟಗಳ ಪುಟ್ಟ ಕಾದಂಬರಿಯೇ ಆದರೂ ಇದು ಹೇಳುವ ಭಾವನೆಗಳು ಹಲವಾರು. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಎ.ಕೆ.ರಾಮೇಶ್ವರ. ಇವರು ತಮ್ಮ ಪುಟ್ಟ ಮುನ್ನುಡಿಯಲ್ಲೇ ಈ ಕಾದಂಬರಿಯ ಸಾರವನ್ನು ಕಟ್ಟಿಕೊಟ್ಟಿದ್ದಾರೆ. ಅವರ ಮುನ್ನುಡಿಯ ಆಯ್ದ ಭಾಗಗಳು ಇಲ್ಲಿವೆ…

    “‘ಪರಿಣಯ್' ಬಿಸಿಲು ನಾಡಿನ ಕಲಬುರುಗಿಯ ಯುವಕ, ಬೆಂಗಳೂರು ನಗರದಲ್ಲಿ ಕೆಲಸ. ‘ಪ್ರೀತಿ' ಬೆಂಗಳೂರು ಮೂಲದವಳು. ಬಿಸಿಲುನಾಡು ಕಲಬುರುಗಿಯಲ್ಲಿ ಕೆಲಸ. ಬೆಂಗಳೂರು ತಂಪು, ಕಂಪ್ಯ್ ನೀಡುವ ಆಹ್ಲಾದಕರ ವಾತಾವರಣ ಪರಿಣಯ್ ಮೆಚ್ಚಿಕೊಳ್ಳುತ್ತಾನೆ. ‘ಪ್ರೀತಿ' ಅಂತಹ ಆಹ್ಲಾದಕರ ವಾತಾವರಣದಿಂದ ಬಿಸಿಲುನಾಡು ಕಲಬುರುಗಿಗೆ…

  • ಜೀವ ಜಾತ್ರೆ’ ಮೌನೇಶ ಬಡಿಗೇರ ಅವರ ನೂತನ ಕಾದಂಬರಿಯಾಗಿದೆ. ಇದಕ್ಕೆ ಎಚ್. ಎಸ್. ರಾಘವೇಂದ್ರ ರಾವ್ ಅವರ ಬೆನ್ನುಡಿ ಬರಹವಿದೆ; ಕಥೆ, ಕವಿತೆ, ಕಾದಂಬರಿ ಮುಂತಾದ ಪ್ರಕಾರಗಳ ಸಾಧ್ಯತೆಗಳನ್ನು ಅರಸುವ ಕೆಲಸವು 'ಸೃಜನಶೀಲ ಕಲ್ಪನೆ' ಮತ್ತು 'ಮಾಧ್ಯಮ ಶೋಧನೆ'ಗಳನ್ನು ಅವಲಂಬಿಸಿರುತ್ತದೆ. ಇವುಗಳ ಜೊತೆಗೆ, ಜಡವಲ್ಲದ ಕೇವಲ ಬೌದ್ಧಿಕವಲ್ಲದ ತಾತ್ವಿಕ ಕುತೂಹಲ/ಚಿಂತನೆಯೂ ಅದಕ್ಕೆ ಅಗತ್ಯವಾದ ಇನ್ನೊಂದು ಗುಣ. ಇದೆಲ್ಲದರ ಸಂಗಡ ಕತೆಗಾರನಿಗೆ ಲೋಕವನ್ನು ಅದರ ಸ್ಥೂಲನೆಲೆಯಲ್ಲಿ ಮಾತ್ರವಲ್ಲ, ವಿವರಗಳಲ್ಲಿ ಕಾಣುವ ಗುಣವೂ ಬೇಕು. 'ಮೂರ್‍ತ' ಮತ್ತು 'ಅಮೂರ' ಒಟ್ಟಿಗೆ ಗ್ರಹಿಸುವ, ಒಟ್ಟಾಗಿ ಹೆಣೆಯುವ ಕೆಲಸ ಬಹಳ ಜಟಿಲವಾದುದು. ಮೌನೇಶ್ ಈ ಎಲ್ಲ ಶಕ್ತಿಗಳನ್ನೂ ಬೇರೆ ಬೇರೆ ಪ್ರಮಾಣದಲ್ಲಿ ಪಡೆದಿದ್ದಾರೆ ಎಂಬುವುದನ್ನು ಈ…

  • ಶಾಲಾ ಶಿಕ್ಷಕರಾಗಿರುವ ಜನಾರ್ದನ ದುರ್ಗ ಅವರ ಚೊಚ್ಚಲ ಕೃತಿ ‘ಶಾಂತೇಶ್ವರನ ವಚನಗಳು' ಬಿಡುಗಡೆಯಾಗಿದೆ. ಸಂತೋಷದ ಸಂಗತಿ ಎಂದರೆ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಚೊಚ್ಚಲ ಕೃತಿಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ಈ ಕೃತಿಯು ಪಡೆದುಕೊಂಡಿದೆ. ಹಲವಾರು ಸಮಯದಿಂದ ಸಾಮಾಜಿಕ ಜಾಲತಾಣಗಳು ಹಾಗೂ ವಾಟ್ಸಾಪ್ ಬಳಗಗಳಲ್ಲಿ ತಮ್ಮ ‘ಶಾಂತೇಶ್ವರನ ವಚನಗಳನ್ನು' ಹಂಚಿಕೊಳ್ಳುತ್ತಿದ್ದ ಜನಾರ್ದನ ದುರ್ಗ ಅವರು ತಾವು ಬರೆದ ವಚನಗಳಲ್ಲಿ ಅತ್ಯುತ್ತಮ ಎನಿಸಿದ ೨೦೦ ವಚನಗಳನ್ನು ಆಯ್ದು ಈ ಕೃತಿಗೆ ಬಳಸಿಕೊಂಡಿದ್ದಾರೆ. 

    ಡಾ. ವರದರಾಜ ಚಂದ್ರಗಿರಿ ಇವರು ಕೃತಿಯ ಹಾಗೂ ಕವಿಯ ಪರಿಚಯವನ್ನು ಮುನ್ನುಡಿಯಲ್ಲಿ ಬಹಳ ಸೊಗಸಾಗಿ ಮಾಡಿಕೊಟ್ಟಿದ್ದಾರೆ. ಅವರು ತಮ್ಮ…