ಪುಸ್ತಕ ಸಂಪದ

  • ಪ್ರಚಂಡ ಚೋರ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ ಬಾಳಿದವರು. 

    ೬೦-೭೦ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಯನ್ನು ಅದೂ ಪತ್ತೇದಾರಿ ಸಾಹಿತ್ಯವನ್ನು ಬರೆದು ಜನರಿಗೆ ಓದುವುದರ ಚಟವನ್ನು ಹಿಡಿಸಿದವರು ನರಸಿಂಹಯ್ಯನವರು. ಇವರು…

  • ಕಳೆದ ಹಲವಾರು ವರ್ಷಗಳಿಂದ ಅಮೇರಿಕದಲ್ಲಿರುವ ಬರಹಗಾರ ಮೈ ಶ್ರೀ ನಟರಾಜ ಅವರು ಬರೆದ ವಿಡಂಬನಾತ್ಮಕ ಕವಿತೆಗಳ ಸಂಗ್ರಹವೇ ‘ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ’ ಎಂಬ ಕೃತಿ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಅಂಕಣಕಾರ, ಲೇಖಕ ಜೋಗಿಯವರು. “ಸರಸಮಯ ಶೈಲಿ, ಲಯಬದ್ಧತೆ, ತುಸು ವ್ಯಂಗ್ಯ ಮತ್ತು ನಿರಾಳ ಕನ್ನಡದ ಈ ಕವಿತೆಗಳು ಕಷ್ಟ ಕೊಡುವುದಿಲ್ಲ. ಕವಿಯ ಸಕಾರಣ ಸಿಟ್ಟನ್ನು ತೋರುವಾಗಲೂ ಈ ಕವಿತೆಗಳು ಗದ್ದಲ ಮಾಡುವುದಿಲ್ಲ. ಅಣಕವಾಡು, ಸಾಂದರ್ಭಿಕ ರಚನೆ, ಪ್ರತಿಕ್ರಿಯೆ - ಹೀಗೆ ಮೂರು ಬಗೆಯ ಪದ್ಯಗಳು ಇಲ್ಲಿವೆ. ಇವು ಅರ್ಥ ಮಾಡಿಕೊಳ್ಳಲು ತಿಣುಕಾಡಬೇಕಾದ ರಚನೆಗಳಲ್ಲ. ಬದಲಾಗಿ ಮನಸ್ಸನ್ನು ಮುದಗೊಳಿಸಿ, ಮುಗುಳ್ನಗು ತುಳುಕಿಸುವಂಥ ಸಜ್ಜನ ಕವಿತೆಗಳು" ಎಂದಿದ್ದಾರೆ ಜೋಗಿ.

  • ‘ನಾವು ನಮ್ಮ ಸಾಧಕರು' ಮಾಲಿಕೆಯ ೧೭ನೇ ಕೃತಿಯಾಗಿ ಹೊರಬಂದಿದೆ ಅನುಸೂಯ ಯತೀಶ್ ಅವರ ‘ರಾಗಂ-ಬರಹ ಬೆರಗು'. ಈ ಕೃತಿಯಲ್ಲಿ ಅನುಸೂಯ ಯತೀಶ್ ಅವರು ‘ರಾಗಂ’ ಅಂದರೆ ಡಾ. ರಾಜಶೇಖರ ಮಠಪತಿ ಎನ್ನುವ ಪ್ರಬುದ್ಧ ಸಂವೇದನಾಶೀಲ ಲೇಖಕರ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಇವರ ಕಥೆ, ಕಾವ್ಯ, ಕಾದಂಬರಿ, ಅಂಕಣ, ಅನುವಾದ, ನಾಟಕ, ಸಂಶೋಧನೆ ಮತ್ತು ವಿಮರ್ಶೆಗಳೆಂದರೆ ಒಂದು ರೀತಿಯ ಬೆರಗು ಎಂದು ಬೆನ್ನುಡಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ ಲೇಖಕಿಯಾದ ಅನುಸೂಯ ಯತೀಶ್. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಉಪನ್ಯಾಸಕಿ ಹಾಗೂ ಸಾಹಿತಿಯಾದ ಶೋಭಾ ಪ್ರಭು. ಇವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ಇಲ್ಲಿವೆ...

    “‘ರಾಗಂ ಬರಹ ಬೆರಗು” ಶ್ರೀಮತಿ…

  • ‘ಮಲೆನಾಡಿನ ರೋಚಕ ಕಥೆಗಳು' ಎಂಬ ಸರಣಿಗಳ ಮೂಲಕ ಪ್ರಸಿದ್ಧಿಯನ್ನು ಪಡೆದಿರುವ ಕಾದಂಬರಿಕಾರರಾದ ಗಿರಿಮನೆ ಶ್ಯಾಮರಾವ್ ಅವರು ಬರೆದ ಮನೋವೈಜ್ಞಾನಿಕ ಕಾದಂಬರಿ ‘ಅನಾಥ ಹಕ್ಕಿಯ ಕೂಗು'. ಮಲೆನಾಡಿನ ರೋಚಕ ಕಥೆಗಳು ಬಹುತೇಕ ಪರಿಸರಕ್ಕೆ ಸಂಬಂಧಿಸಿದ ಕಥನಗಳಾದರೆ ‘ಅನಾಥ ಹಕ್ಕಿಯ ಕೂಗು’ ಎಂಬ ಕೃತಿ ಪತಿ, ಪತ್ನಿ ಮತ್ತು ಮಕ್ಕಳ ಮನಸ್ಸಿನ ತೊಳಲಾಟದ ಬಗ್ಗೆ ಬರೆದಿರುವ ಮನೋವೈಜ್ಞಾನಿಕ ಕಾದಂಬರಿ. 

    ಗಿರಿಮನೆಯವರೇ ತಮ್ಮ ಬೆನ್ನುಡಿಯಲ್ಲಿ ಬರೆದಿರುವಂತೆ “ ‘ಅನಾಥ ಹಕ್ಕಿಯ ಕೂಗು' ಒಂದು ಮನೋವೈಜ್ಞಾನಿಕ ಕಾದಂಬರಿ. ಹೆತ್ತವರಿದ್ದೂ ತಬ್ಬಲಿಯಾದ ಮಗುವಿನ ಬದುಕು ಸಂಕಟಕ್ಕೆ ಬಿದ್ದರೆ ಅದರ ನೋವು ತಟ್ಟುವುದು ಕೊನೆಗೂ ಹೆತ್ತವರಿಗೇ. ಅದರಲ್ಲೂ ಅಮ್ಮನಿಗೆ ! ಏಕೆಂದರೆ ಒಂಬತ್ತು ತಿಂಗಳು…

  • ನಿವೃತ್ತ ಮುಖ್ಯ ಶಿಕ್ಷಕಿ, ಸಾಹಿತಿ ರತ್ನಾ ಕೆ ಭಟ್ ಅವರು ಬರೆದ ಕವನಗಳ ಸಂಕಲನವೇ ‘ಹೊನ್ನರಶ್ಮಿ'. ಕವಯತ್ರಿ ವಿವಿಧ ಸಂದರ್ಭಗಳಲ್ಲಿ ಬರೆದ ಕವನಗಳನ್ನು ಒಟ್ಟು ಸೇರಿಸಿ ‘ಹೊನ್ನರಶ್ಮಿ' ಎನ್ನುವ ಸಂಕಲನ ಹೊರತಂದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಗಝಲ್ ಕವಿ, ವೈದ್ಯರೂ ಆಗಿರುವ ಡಾ. ಸುರೇಶ ನೆಗಳಗುಳಿ. ಇವರು ತಮ್ಮ ‘ನೆಗಳಗುಳಿ ಮುಮ್ಮಾತುಗಳು' ಇದರಲ್ಲಿ ಬರೆದಂತೆ “ ಹೊನ್ನರಶ್ಮಿ ಕವನ ಸಂಕಲನವು ಹಲವು ವಿಧದ ಕಾವ್ಯ ಪ್ರಕಾರ ಸಹಿತವಾದ ಒಂದು ಕಾವ್ಯ ಗುಚ್ಛ. ಇದರಲ್ಲಿ ಹಲವಾರು ಮಜಲಿನ ಕವನಗಳನ್ನು ಕಾಣಬಹುದು. ಆಕರ್ಷಕವಾದ ಪುಷ್ಪವನ್ನು ಕೇಂದ್ರವಾಗಿರಿಸಿ ಆರಂಭವಾಗುವ ಸಂಕಲನವು ಹೂವಿನ ವಿವಿಧ ಪ್ರಕಾರಗಳ ಸ್ಥಾನಮಾನವನ್ನು ನೆನಪಿಸುತ್ತಾ ‘ಮೋಹಕ ಹೂವು ಮುಡಿಗೆ ದೇವಿಗೆ' ಎನ್ನುತ್ತಾ ಡಿ ವಿ…

  • ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಹಲವು ಹಾಡುಗಳು ಹೋರಾಟದ ಕಿಚ್ಚು ಹಚ್ಚಿಸುತ್ತಿದ್ದವು. ಸಭೆಗಳಲ್ಲಿ, ಪ್ರತಿಭಟನೆಗಳಲ್ಲಿ, ಮೆರವಣಿಗೆಗಳಲ್ಲಿ ಜನಸಾಮಾನ್ಯರೂ ಮುಕ್ತಕಂಠದಿಂದ ಹಾಡುತ್ತಿದ್ದ ಗೀತೆಗಳು ನೂರಾರು. ದೀರ್ಘ ಹೋರಾಟದ ಅವಧಿಯಲ್ಲಿ ಜನರ ಉತ್ಸಾಹ ಹೆಚ್ಚುವಂತೆ ಮಾಡುವಲ್ಲಿ ಇಂತಹ ಗೇಯಪದಗಳ ಕೊಡುಗೆಗೆ ಬೆಲೆ ಕಟ್ಟಲಾಗದು. ಕೆಲವು ಗೇಯಪದಗಳಂತೂ ಕೆಲವೇ ನಿಮಿಷಗಳಲ್ಲಿ ಹಾಡುತ್ತಿದ್ದವರ ಮೈಮನಗಳಲ್ಲಿ ರೋಮಾಂಚನ ಹುಟ್ಟಿಸುತ್ತಿದ್ದವು. ಗುಂಪಿನಲ್ಲಿ ಹಾಡುವಾಗಲಂತೂ ಪ್ರತಿಯೊಬ್ಬರಿಗೂ ಹಾಡು ಹಾಡುತ್ತಾ ಭೀಮಬಲ ಬಂದಂತೆ ಅನಿಸುತ್ತಿತ್ತು.

    ಕಾಲ ಸರಿದಂತೆ ಅಂತಹ ಅದ್ಭುತ ಗೇಯಪದಗಳು ಸಮುದಾಯದ ನೆನಪಿನಿಂದ ಮರೆಯಾಗುತ್ತಿವೆ. ಆದರೆ, ಅಂದಿನ ಹೋರಾಟದ, ತ್ಯಾಗದ, ಬಲಿದಾನದ ನೆನಪುಗಳನ್ನು ಜೀವಂತವಾಗಿರಿಸಲು ಆ ಗೇಯಪದಗಳನ್ನು ಸಮುದಾಯದ…

  • ಸಾರಿಕ ಶೋಭಾ ವಿನಾಯಕ ಎನ್ನುವ ಕವಯತ್ರಿ ‘ಬೆಳಕ ಬೆನ್ನ ಹಿಂದೆ' ಎನ್ನುವ ಚುಟುಕು ಮತ್ತು ಕವನಗಳ ಸಂಕಲನವನ್ನು ಹೊರತಂದಿದ್ದಾರೆ. ಈ ಕೃತಿಗೆ ಮೈಸೂರು ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಆದ ಡಾ. ಎಸ್ ಎನ್ ಮಂಜುನಾಥ ಇವರು ಬೆನ್ನುಡಿಯನ್ನು ಬರೆದು ಪ್ರೋತ್ಸಾಹ ತುಂಬಿದ್ದಾರೆ. ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ನಿಮ್ಮ ಓದಿಗಾಗಿ...

    “ಸಾರಿಕ ಅವರು ಮೂಲತಃ ದಾವಣಗೆರೆ ಹತ್ತಿರದ ಹರಪನಹಳ್ಳಿಯವರು. ವಿಜಯನಗರ ಜಿಲ್ಲೆಗೆ ಸೇರಿದವರು. ಈಗ ಸಾಪ್ಟವೇರ್ ಇಂಜಿಯರ್ ವೃತ್ತಿಯಲ್ಲಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಶಿಕ್ಷಣ ಮತ್ತು ವೃತ್ತಿ ವಲಯಗಳು ಸಾಹಿತ್ಯಕ್ಕೆ…

  • ಸಂತೋಷಕುಮಾರ ಮೆಹೆಂದಳೆ ಅವರ ಕೃತಿಗಳಲ್ಲಿ ಒಂದು ವಿಶೇಷತೆ ಸದಾ ಇರುತ್ತದೆ. ಅವರು ಆಯ್ದುಕೊಳ್ಳುವ ವಿಷಯ ಮತ್ತು ಅದನ್ನು ಪ್ರಸ್ತುತ ಪಡಿಸುವ ರೀತಿ ಎರಡೂ ಅದ್ಭುತ. ಅವರು ಯಾವ ವಿಷಯ ಆಯ್ದುಕೊಂಡರೂ ಅದರ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಾರೆ. ಅದು ಕಾಶ್ಮೀರದ ಉಗ್ರವಾದವಾಗಲೀ, ಅಘೋರಿಗಳ ವಿಸ್ಮಯ ಲೋಕವಾಗಲೀ, ವೈಜಯಂತಿಪುರದ ರಾಜಮನೆತನವಾಗಲಿ ಅದರ ವಿಷಯ ಸಂಗ್ರಹಣೆಯ ಹಿಂದಿನ ಶ್ರಮ ಮೆಹೆಂದಳೆ ಅವರಿಗೇ ಗೊತ್ತು. ಈ ಕಾರಣದಿಂದಲೇ ಅವರ ಕೃತಿಗಳನ್ನು ಓದುವಾಗ ನಮಗೆ ಖುದ್ದು ಆ ಜಾಗಗಳಲ್ಲಿ ಓಡಾಡಿದ ಅನುಭವವಾಗುತ್ತದೆ. ಘಟನೆಗಳು ನಮ್ಮ ನಡುವೆಯೇ ನಡೆದಂತಾಗುತ್ತದೆ. ಇದು ಮೆಹೆಂದಳೆ ಅವರ ಬರವಣಿಗೆಯ ಶಕ್ತಿ.

    ಉಗ್ರಗಾಮಿಗಳ ಬಗ್ಗೆ, ಉಗ್ರವಾದದ ಬಗ್ಗೆ ಮೆಹೆಂದಳೆಯವರು ‘ಅಬೋಟ್ಟಾಬಾದ್'…

  • ಭಾವರೇಖೆ ( ಒಂದು ಅನಂತ ಭಾವ) ನಂಕು ( ನಂದನ ಕುಪ್ಪಳ್ಳಿ) ಅವರ ಕವನಸಂಕಲನವಾಗಿದೆ. ಇದಕ್ಕೆ ಡಾ. ಶಿವಲಿಂಗೇಗೌಡ ಡಿ. ಅವರ ಬೆನ್ನುಡಿ ಬರಹವಿದೆ; ಈ ಕವನಸಂಕಲನದ ಕವಿತೆಗಳು ಪ್ರೀತಿಯ ಧ್ಯಾನದಲ್ಲಿ ಹುಟ್ಟಿದಂತವು. ಪ್ರೀತಿ, ಪ್ರೇಮ, ವಿರಹಗಳ ಸುತ್ತ ಹೆಣೆದಿರುವ ಈ ಕವಿತೆಗಳು ಪ್ರೀತಿಯ ಹುಡುಕಾಟದಲ್ಲಿ ತೊಡಗಿವೆ. ಪ್ರೀತಿಗಾಗಿ ಹಂಬಲಿಸುವ ಕನವರಿಸುವ, ಕಾತರಿಸುವ ಕವಿ ಎಲ್ಲದರಲ್ಲಿಯೂ ಪ್ರೀತಿಯನ್ನಲ್ಲದೆ ಬೇರೇನನ್ನೂ ಕಾಣಲಾರ. ಕೊನೆಗೆ ಪ್ರೀತಿಯನ್ನಲ್ಲದೆ ಬೇರೇನನ್ನೂ ನೀಡಲಾರ. ಮೇಲ್ನೋಟಕ್ಕೆ ಹೆಣ್ಣಿನ ಪ್ರೀತಿಯ ಹಂಬಲದಿಂದ ಹುಟ್ಟಿದ ಕವಿತೆಗಳಂತೆ ಕಂಡರೂ ಆ ಸೀಮಿತ ನೆಲೆಗೆ ನಿಲ್ಲದೆ ವಿಶ್ವಪ್ರೀತಿಯ ನೆಲೆಗೆ ವಿಸ್ತಾರಗೊಳ್ಳುವುದು ಇಲ್ಲಿನ ಕವಿತೆಗಳ ವಿಶೇಷ. ಕವಿಗೆ ಪ್ರೀತಿ ಎಂದರೆ 'ಬೆಳಕು'. ಆ ಬೆಳಕಿನ ಹುಡುಕಾಟ,…

  • ವೃತ್ತಿಯಲ್ಲಿ ಪತ್ರಕರ್ತರಾಗಿರುವ ಗಿರೀಶ್ ತಾಳಿಕಟ್ಟೆ ಇವರು ಜಗತ್ತಿನ ಪೋಲೀಸ್ ಚರಿತ್ರೆಯಲ್ಲಿ ಇದುವರೆಗೆ ಪತ್ತೆಯಾಗದ ರೋಚಕ, ನಿಗೂಢ ಪ್ರಕರಣಗಳನ್ನು ಪತ್ತೇದಾರಿ ಕಥೆಗಳಂತೆ ಈ ಕೃತಿಯಲ್ಲಿ ಅನಾವರಣ ಮಾಡಿದ್ದಾರೆ. ಇವರ ಬಗ್ಗೆ ಆರಕ್ಷಕ ಲಹರಿ ಮಾಸ ಪತ್ರಿಕೆಯ ಸಂಪಾದಕರೂ, ಗಿರೀಶ್ ತಾಳಿಕಟ್ಟೆ ಅವರ ‘ಬಾಸ್’ ಆಗಿರುವ ನಿವೃತ್ತ ಡಿಐಜಿಪಿ ಡಾ. ಡಿ.ಸಿ.ರಾಜಪ್ಪ ಅವರು ಸೊಗಸಾದ ಬೆನ್ನುಡಿ ಬರೆದಿದ್ದಾರೆ. ನಮ್ಮ ಸಹೋದ್ಯೋಗಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ “ ಪತ್ರಕರ್ತ ಗಿರೀಶ್ ತಾಳಿಕಟ್ಟೆಯವರು ಆರಕ್ಷಕ ಲಹರಿ ಮಾಸಪತ್ರಿಕೆಯಲ್ಲಿ ಬರೆಯುತ್ತಿದ್ದ ‘ಪೋಲೀಸ್ ಫೈಲ್ಸ್' ಎಂಬ ಅಂಕಣದ ಬರಹಗಳು ಈಗ ಕೃತಿಯ ರೂಪ ಪಡೆದು ಓದುಗರ ಕೈಸೇರುತ್ತಿರುವುದು ಖುಷಿಯ ವಿಚಾರ. ಬೇರೆ ಬೇರೆ ಕಾಲಘಟ್ಟದಲ್ಲಿ, ಜಗತ್ತಿನ ಬೇರೆ ಬೇರೆ…