ಚೆನ್ನಭೈರಾದೇವಿ, ಪುನರ್ವಸು ಅಂತಹ ಕಾದಂಬರಿಗಳನ್ನು ರಚಿಸಿದ ಅದ್ಭುತ ಕಾದಂಬರಿಕಾರ ಡಾ ಗಜಾನನ ಶರ್ಮ ಅವರು ಮಹಾಮಾಪನದ ಅಪೂರ್ವ ಕಥನವನ್ನು ‘ಪ್ರಮೇಯ’ ಎನ್ನುವ ಕಾದಂಬರಿ ಮೂಲಕ ಹೇಳಲು ಹೊರಟಿದ್ದಾರೆ. ಗಜಾನನ ಶರ್ಮ ಅವರು ಬರೆಯುವ ಕಾದಂಬರಿಗಳು ಇತಿಹಾಸದ ಯಾವುದೋ ಒಂದು ಮೂಲೆಯಲ್ಲಿ ಅಡಗಿರುವ ಸತ್ಯ ಕಥೆಯನ್ನು ಕಾಲ್ಪನಿಕವಾಗಿ ಚಿತ್ರಿಸುತ್ತಾ ಬರುತ್ತವೆ. ಇದೇ ಅವರ ಹೆಗ್ಗಳಿಕೆ. ಈ ಕಾರಣದಿಂದ ಅವರು ಬರೆಯುವ ಕಾದಂಬರಿಗಳು ಕೇವಲ ಅಂಕಿ ಅಂಶಗಳ ಪ್ರಬಂಧವಾಗದೇ, ಸ್ವಾರಸ್ಯಕರವಾದ ಕಾದಂಬರಿಯಾಗುತ್ತದೆ. ಇದೇ ಸಾಲಿಗೆ ಸೇರುವ ಕಾದಂಬರಿ ‘ಪ್ರಮೇಯ’ ಇದು ಆಳಿದವರ ಕಥೆಯಲ್ಲ ಅಳೆದವರ ಕಥೆ…
ಮಹಾಮಾಪನದ ಅಪೂರ್ವ ಕಥನದ ಕಾದಂಬರಿಗೆ ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕರಾದ…