ಭಾರತೀಯ ಇಂಗ್ಲಿಷ್ ಸಾಹಿತ್ಯದ ಅಗ್ರ ಲೇಖಕರಲ್ಲಿ ಒಬ್ಬರಾದ ಆರ್.ಕೆ. ನಾರಾಯಣ್ ಅವರ ಜಗತ್ಪ್ರಸಿದ್ಧ ಕೃತಿ “ಸ್ವಾಮಿ ಮತ್ತು ಅವನ ಸ್ನೇಹಿತರು”. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಚ್.ವೈ. ಶಾರದಾ ಪ್ರಸಾದ್. 19 ಅಧ್ಯಾಯಗಳಿರುವ ಈ ಕೃತಿಗೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಮನೋಭೀರಾಮ್ ಚಕ್ರವರ್ತಿ.
ಈ ಕೃತಿಯನ್ನು ಓದುತ್ತಾ ಹೋದಂತೆ, 1950-70ರ ದಶಕಗಳಲ್ಲಿ ಭಾರತದ ಹಳ್ಳಿಗಳಲ್ಲಿ ಹಾಗೂ ಸಣ್ಣ ಪಟ್ಟಣಗಳಲ್ಲಿ ಹುಟ್ಟಿ ಬೆಳೆದ ಎಲ್ಲರಿಗೂ ತಮ್ಮ ಬಾಲ್ಯಕಾಲಕ್ಕೆ ಹೋದಂತೆ ಅನಿಸುತ್ತದೆ. ಅಂದಿನ ದಿನಗಳ ಗ್ರಾಮೀಣ ಭಾರತದ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ ಇಲ್ಲಿನ ಅಧ್ಯಾಯಗಳು. ಆ ಬದುಕನ್ನು ನೋಡುವುದು ಸ್ವಾಮಿ ಎಂಬ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯ ದೃಷ್ಟಿಯಿಂದ. ಅವನ ಮುಗ್ಧತೆ, ಪೆದ್ದುತನ, ಗೊಂದಲಗಳು, ತುಂಟಾಟಗಳು…