ಪುಸ್ತಕ ಸಂಪದ

  • ಐಲಾ ಮಲಿಕಾಳ ಪವಿತ್ರ ಪೆಟ್ಟಿಗೆ ಎನ್ನುವುದು ಖ್ಯಾತ ಬರಹಗಾರರಾದ ಬೋಳುವಾರು ಮೊಹಮ್ಮದ್ ಅವರು ಬರೆದ ಪ್ರವಾಸ ಕಥನ. ಈ ಪ್ರವಾಸ ಕಥನದಲ್ಲಿ ಬೋಳುವಾರು ಅವರು ನಮ್ಮನ್ನು ಮೆಕ್ಕಾ, ಅಬಿಸೀನಿಯಾ, ತೆಹರಾನ್, ಲಾರ್, ಅಲ್ ಮಸ್ತಾನ್, ಬಗ್ದಾದ್, ಕುವೈತ್, ದುಬೈ, ಮುತ್ತುಪ್ಪಾಡಿ, ಕಾನ್ಪುರ್, ದೆಹಲಿ, ನ್ಯೂಜರ್ಸಿ, ನ್ಯೂಯಾರ್ಕ್, ಸಿಯಾಟಲ್, ಸ್ಯಾನ್ ಫ್ರಾನ್ಸಿಸ್ಕೋ, ಸ್ಯಾನ್ ಹೊಸೆ, ಕುಪರ್ಟಿನೋ ಮೊದಲಾದ ಸ್ಥಳಗಳ ಪರಿಚಯ ಮಾಡಿಕೊಡುತ್ತಾರೆ. ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ ಎನ್ ಎ ಎಂ ಇಸ್ಮಾಯಿಲ್ ಅವರು ಬೆನ್ನುಡಿ ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…

    “ಮೂರು ಭೂಖಂಡಗಳೊಳಗಿನ ಆರು ದೇಶಗಳನ್ನೂ ಏಳನೇ ಶತಮಾನದಿಂದ ಆರಂಭಿಸಿ…

  • ಲಂಕೇಶ್ ಪತ್ರಿಕೆಯಲ್ಲಿ ಪ್ರತೀ ವಾರ ಮೂಡಿ ಬರುತ್ತಿದ್ದ ‘ಕಟ್ಟೆ ಪುರಾಣ’ ಎಂಬ ವಿಡಂಬನಾತ್ಮಕ ಅಂಕಣ ಬಹು ಜನಪ್ರಿಯವಾಗಿತ್ತು. ಅದನ್ನು ಬರೆಯುತ್ತಿದ್ದವರು ಬಿ.ಚಂದ್ರೇಗೌಡರು. ಇತ್ತೀಚೆಗೆ ‘ಕಟ್ಟೆ ಪುರಾಣ’ ದಿಂದ ಉತ್ತಮವಾದ ಬರಹಗಳನ್ನು ಆಯ್ದು ‘ಬೆಸ್ಟ್ ಆಫ್ ಕಟ್ಟೆ ಪುರಾಣ’ ಎನ್ನುವ ಹೆಸರಿನಲ್ಲಿ ಪುಸ್ತಕವೊಂದನ್ನು ಹೊರ ತಂದಿದ್ದಾರೆ. ಈ ಕೃತಿಗೆ ನಟರಾಜ್ ಹುಳಿಯಾರ್ ಬಹಳ ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ. ಲೇಖಕರಾದ ಬಿ.ಚಂದ್ರೇಗೌಡರು ತಮ್ಮ ಪುಸ್ತಕ ಮತ್ತು ಬರಹದ ಬಗ್ಗೆ ಬರೆದ ಕೆಲವು ಸಾಲುಗಳು…

    “ಲಂಕೇಶ್ ಪತ್ರಿಕೆಗೆ ಸತತವಾಗಿ ಒಂದು ದಶಕ ಹುಬ್ಬಳ್ಳಿಯಾಂವ ಕಾಲಂ ಬರೆದ ಪುಂಡಲೀಕ್ ಶೇಟ್, ಬಸ್ ಅಪಘಾತದಲ್ಲಿ ಅಕಾಲ ಮರಣಕ್ಕೆ ತುತ್ತಾದರು. ಇದರಿಂದ ಆಘಾತಗೊಂಡ…

  • ಎಸ್ ಜಯಶ್ರೀನಿವಾಸ್ ರಾವ್ ಅವರು ಎಸ್ಪೋನಿಯಾ, ಲ್ಯಾಟ್ವಿಯಾ, ಲಿಥುವೇನಿಯಾ ದೇಶದ ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ‘ಬಾಲ್ಟಿಕ್ ಕಡಲ ಗಾಳಿ’ ಎನ್ನುವ ಹೆಸರಿನ ಈ ಕೃತಿಗೆ ಖ್ಯಾತ ಬರಹಗಾರ ಕೇಶವ ಮಳಗಿ ಅವರು ಮುನ್ನುಡಿಯನ್ನು ಬರೆದು ಹುರಿದುಂಬಿಸಿದ್ದಾರೆ. ಅವರು ಬರೆದ ಮುನ್ನುಡಿಯಿಂದ ಆಯ್ದ ಸಾಲುಗಳು…

    “ಕಾವ್ಯಾನುವಾದದಲ್ಲಿ ಸಾಹಸಿ ಮನೋಭಾವದ ಎಸ್‌. ಜಯಶ್ರೀನಿವಾಸ ರಾವ್‌ ಆ ಗುಣದಿಂದಾಗಿಯೇ ಇಷ್ಟವಾಗುವ ಕವಿ ಮತ್ತು ಅನುವಾದಕ. ಕನ್ನಡ ಓದುಗರು ಇನ್ನೂ ಮುಖಾಮುಖಿಯಾಗಿರದ ಹೊಸ ಹೊಸ ದೇಶಭಾಷೆಯ ಕವಿಗಳನ್ನು ಹುಡುಕಿ ಅವರು ಅನುವಾದಿಸುವ ಪರಿ ಅನುಕರಣೀಯ. ಮೂಲಕ್ಕೆ ನಿಷ್ಠರಾಗಿ ಅವರು ಅನುವಾದಿಸುವ ಪರಿ ಕೂಡ ಗಮನಾರ್ಹ. ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲರಾದ ಜಯ…

  • ‘ದಲಿತರಿಗೆ ಗಾಂಧೀಜಿ ಮಾಡಿದ ಚಾರಿತ್ರಿಕ ವಂಚನೆ’ ಎನ್ನುವ ಹಣೆ ಪಟ್ಟಿ ಹೊತ್ತುಕೊಂಡು ಬಂದಿರುವ ‘ಪೂನಾ ಒಪ್ಪಂದ’ ಎನ್ನುವ ಕೃತಿಯು ೧೯೩೨ರ ಸೆಪ್ಟೆಂಬರ್ ೨೪ರಂದು ನಡೆದ ಒಪ್ಪಂದದ ಬಗ್ಗೆ ಸವಿವರವಾದ ಮಾಹಿತಿ ನೀಡುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರರ ಜೀವನದ ಎರಡು ಪ್ರಮುಖ ಘಟನೆಗಳಾಗಿ ಪೂನಾ ಒಪ್ಪಂದ ಮತ್ತು ಸಂವಿಧಾನ ರಚನೆಯ ಸಂದರ್ಭಗಳನ್ನು ಕಾಣಬಹುದು. ಲಂಡನ್ ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ, ‘ಅಸ್ಪೃಶ್ಯರು ಹಿಂದೂಗಳಲ್ಲ, ಅವರು ಮುಸ್ಲಿಮರಂತೆ ಪ್ರತ್ಯೇಕ ಅಸ್ಮಿತೆಯುಳ್ಳವರು ಎಂಬುದನ್ನು ಸಾಕ್ಷ್ಯಾಧಾರಗಳ ಸಮೇತ ಬಾಬಾಸಾಹೇಬರು ಸಾಬೀತು ಮಾಡಿದರು ಮತ್ತು ಸಾಮಾಜಿಕವಾಗಿ ವಿಭಿನ್ನರಾದ ಅಸ್ಪೃಶ್ಯರಿಗೆ, ತಮ್ಮ ಪ್ರತಿನಿಧಿಗಳನ್ನು ತಾವೇ ಆರಿಸಿಕೊಳ್ಳುವ ‘ಪ್ರತ್ಯೇಕ ಚುನಾಯಕಗಳು’ (Separate Electorates)…

  • ‘ಟಿಕೆಟ್ ಪ್ಲೀಸ್’ ವಿಕ್ರಂ ಚದುರಂಗ ಅವರ ಅನುವಾದಿತ ಕತೆಗಳಾಗಿವೆ. ಈ ಕೃತಿಯಲ್ಲಿ ಐದು ಕತೆಗಳಿದ್ದು, ನಮ್ಮ ಹೊರಜಗತ್ತಿನ ಮತ್ತು ದೈಹಿಕ ಅನುಭವದ ಮೂಲಕವೇ ತಲುಪಬಹುದಾದ ಒಳ ಅನುಭವಗಳನ್ನು, ಭಾವಲೋಕವನ್ನು ಓದುಗರಿಗೆ ಒಗ್ಗಿಸುವ ಅನುವಾದದ ಪ್ರಯತ್ನವಿಲ್ಲಿದೆ. ಇಲ್ಲಿನ ಟಿಕೆಟ್ ಪ್ಲೀಸ್ ಲಾರೆನ್ಸನ ಪ್ರಸಿದ್ಧ ಕತೆಯಾಗಿದ್ದು, ಹಲವಾರು ಭಾಷೆಗಳಿಗೂ ಕೂಡ ಅನುವಾದಗೊಂಡಿದೆ. ಮೊದಲ ಮಹಾಯುದ್ಧಾನಂತರದ ಕಾಲದಲ್ಲಿ ಈ ಕಥೆ ನಡೆಯುವಾಗಿನ ಯುರೋಪಿನ ಪಟ್ಟಣದ ಸ್ಥಿತಿಗತಿಗಳು, ಅಲ್ಲಿ ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಗಳು, ಯುದ್ಧಾನಂತರದ ಯುವಕರ ಕೊರೆತಯಿಂದಾಗಿ ಕೆಲಸ, ಕೈಗಾರಿಕೆ, ನಗರ ವ್ಯವಸ್ಥೆ ಇತ್ಯಾದಿಗಳಲ್ಲಿ ಉಂಟಾದ ಬದಲಾವಣೆಗೆ ತೆರೆದುಕೊಳ್ಳುತ್ತ ಹೋದ ಸ್ತ್ರೀಯರ ವೃತ್ತಿ ವೈವಿಧ್ಯಗಳು ಮತ್ತು ಈ ಬದಲಾವಣೆಗಳು…

  • ಇದು ಯುನೆಸ್ಕೋದ ಏಷ್ಯಾ ಸಾಂಸ್ಕೃತಿಕ ಕೇಂದ್ರ ಪ್ರಾಯೋಜಿಸಿದ ಏಷ್ಯಾದ ಸಹ ಪ್ರಕಟಣಾ ಕಾರ್ಯಕ್ರಮದ ಅನುಸಾರ ಪ್ರಕಟಿಸಿದ ಏಷ್ಯಾದ 14 ದೇಶಗಳ ಸಮಕಾಲೀನ ಕತೆಗಳ ಸಂಕಲನ.

    ಮೊದಲ ಕತೆ ಅಫಘಾನಿಸ್ತಾನದ್ದು: ಗಿಡುಗ ಮತ್ತು ಮರ. ಒಂದೂರಿನಲ್ಲೊಂದು ಮೋಚಿಯ ಸಣ್ಣ ಅಂಗಡಿ. ಆತ ಬೆಳಗ್ಗೆ ಅಂಗಡಿ ತೆರೆದರೆ ಸಂಜೆಯ ವರೆಗೆ ಕೂತಿರುತ್ತಿದ್ದ. ಅವನ ಅಂಗಡಿಗೆ ಪ್ರತಿ ದಿನ ಇಬ್ಬರು ಸೋಮಾರಿಗಳು ಬಂದು ಹರಟೆ ಹೊಡೆಯುತ್ತಾ ಇರುತ್ತಿದ್ದರು. ಅದೊಂದು ದಿನ ಮೋಚಿ ಖಿನ್ನನಾಗಿದ್ದ. ಯಾಕೆಂದು ಕೇಳಿದಾಗ “ನನ್ನ ಗಿಡುಗ ತಪ್ಪಿಸಿಕೊಂಡಿದೆ” ಎಂದ. ಮುಂದುವರಿದು ಅವನು ಹೇಳಿದ: “ಅದಕ್ಕೇನೋ ಸಾಯುವ ಕಾಲ ಬಂದಿದೆ. ಅದರ ಕಾಲಿಗೆ ಕಟ್ಟಿದ ಹಗ್ಗ ಹಾಗೇ ಇದೆ. ಆ ಅನಿಷ್ಟ ಗಿಡುಗ ಮರದ ಮೇಲೆ ಕುಳಿತೊಡನೆ ಆ ದಾರ ಕೊಂಬೆಗಳಿಗೆ ಸಿಕ್ಕಿಕೊಳ್ಳುತ್ತದೆ. ಅದು ಸಾಯುವ ವರೆಗೂ ಅಲ್ಲೇ…

  • ವಿದ್ಯಾ ಭರತನಹಳ್ಳಿ ಬರೆದ ‘ಬೇಸೂರ್’ ಎನ್ನುವ ಚೊಚ್ಚಲ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತಮ್ಮ ಈ ಕಥಾ ಸಂಕಲನದ ಕುರಿತಾಗಿ ಲೇಖಕಿ ಹೇಳುವುದು ಹೀಗೆ…

    “ನಾನು ನನ್ನೊಳಗೇ ಕಥೆ ಬರೆದುಕೊಳ್ಳುತ್ತಿದ್ದೆ. ಮನೆಯ ಬಾಗಿಲಲ್ಲಿ ಗೇಟಿಗೆ ತಲೆಯಾನಿಸಿ ಮಗಳು ಬರುವುದನ್ನು ಕಾಯುತ್ತ ಇರುವಾಗ, ಗಂಡನೊಂದಿಗೆ ವಾಕಿಂಗ್ ಮಾಡುವಾಗ, ಅರಳಿದ ಹೂವಿನೊಳಗೆ ಕಣ್ಣಿಗೆ ಕಾಣಿಸದ ಹುಳ ಹೊಕ್ಕಿದ್ದನ್ನು ತೆಗೆಯುವಾಗ, ಫಕ್ಕನೆ ಯಾವುದೋ ನೆನಪಾಗಿ ಕಣ್ಣು ತುಂಬಿ ತುಳುಕುವಾಗ. ಸುತ್ತೆಲ್ಲ ಹರವಿಕೊಂಡ ಇತಿಹಾಸ, ವರ್ತಮಾನ, ಭವಿಷ್ಯ ಮೌನ ಮಾತಿಗೂ, ಮಾತು ಅಕ್ಷರಕ್ಕೂ ಕಾಯುತ್ತಿತ್ತು. ಅವಮಾನ, ಯಾರದೋ ಸಂಕಟ, ಕೋಪ, ಪ್ರೀತಿ, ನೀತಿ, ಒಂದು ಸುಂದರ ಗೀತೆ, ಕಥೆ ಎಲ್ಲವೂ ಕಥೆಗಳಾಗಿ ಹೊರಹೊಮ್ಮುವ ಕಾಲ…

  • `ಕಟ್ಟು’ ಎಂಬ ಪುಸ್ತಕ ಡಾ. ಬಸಯ್ಯಸ್ವಾಮಿ ಅವರ ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಸಾಹಿತ್ಯ, ಶಾಸನ, ಸಮಾಜ ಎಂಬ ಮೂರು ಭಾಗವನ್ನು ಒಳಗೊಂಡ ಒಟ್ಟು ೧೫ ಲೇಖನಗಳು ಇದರಲ್ಲಿವೆ.(ವಲಸೆ ಸಾಹಿತ್ಯ, ವಚನ ಸಾಹಿತ್ಯ, ಶಾಸನ, ಮತ್ತು ಭಾಷೆ) ಸಾಹಿತ್ಯವನ್ನು ವಿವಿದ ಆಯಾಮಗಳಲ್ಲಿ, ಹಲವು ಮಗ್ಗುಲುಗಳಲ್ಲಿ ನೋಡುವ ಕುತೂಹಲದ ಕಣ್ಣನ್ನೂ ಲೇಖಕ ಹೊಂದಿರುವುದನ್ನು ಇಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಅವರ ಆಸಕ್ತಿಯು ಡಾಳಾಗಿ ಕಾಣಿಸುತ್ತದೆ. ಕನ್ನಡ ಸಾಹಿತ್ಯವನ್ನು, ಕರ್ನಾಟಕ ಸಮಾಜವನ್ನು ಈ ಎರಡು ಕನ್ನಡಕಗಳಲ್ಲಿನ ಓದುವ ಆಸಕ್ತಿ ಇರುವ ಬಸಯ್ಯಸ್ವಾಮಿ ಅವರ ಹೊಸತುಗಳನ್ನು ಕಾಣುವ ತವಕ ಈ ಪುಸ್ತಕದಲ್ಲಿಯೂ ಕಾಣಿಸುತ್ತದೆ. ಹಳಗನ್ನಡ ಮತ್ತು ಹೊಸಗನ್ನಡ ಸಾಹಿತ್ಯದ ಜೊತೆಗೆ ಶಾಸನ, ಭಾಷೆಗೆ…

  • ನಮ್ಮ ದೇಶದ ಪ್ರಧಾನ ಮಂತ್ರಿಯಾಗಿ ಎರಡು ಅವಧಿಗಳನ್ನು ಮುಗಿಸಿ ಮೂರನೇ ಅವಧಿಯಲ್ಲಿ ಸಾಗುತ್ತಿರುವ ನರೇಂದ್ರ ದಾಮೋದರದಾಸ್ ಮೋದಿಯವರ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿವೆ. ನರೇಂದ್ರ ಮೋದಿಯವರು ಮೊದಲ ಬಾರಿ ಪ್ರಧಾನಿಯಾದ ಸಂದರ್ಭದಲ್ಲಿ ನಿತಿನ್ ಅಗರ್ ವಾಲ್ ಅವರು ಆಂಗ್ಲ ಭಾಷೆಯಲ್ಲಿ ಬರೆದ ಕೃತಿಯು ‘ನರೇಂದ್ರ ಮೋದಿಯವರು ನಿಮಗೆ ಗೊತ್ತೇ?’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದವಾಗಿದೆ. ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದವರು ಜಿ.ಎಂ.ಕೃಷ್ಣಮೂರ್ತಿಯವರು. ಈ ಪುಸ್ತಕ ಮಕ್ಕಳಿಗೆ ಓದಲು ಬಹಳ ಅನುಕೂಲಕರವಾಗಿದೆ ಏಕೆಂದರೆ ಇದರ ಅಕ್ಷರಗಳು ದೊಡ್ಡ ಗಾತ್ರದಲ್ಲಿದ್ದು, ಚಿತ್ರಗಳಿಂದ ಕೂಡಿದೆ.

    ನರೇಂದ್ರ ಮೋದಿಯವರು ಬಾಲಕರಾಗಿದ್ದಾಗ ಮತ್ತು ಹದಿಹರೆಯದಲ್ಲಿದ್ದಾಗ ಚಹಾ…

  • ‘ಅಲೆದಾಟದ ಅಂತರಂಗ’ ಎನ್ನುವುದು ನವೀನಕೃಷ್ಣ ಎಸ್ ಉಪ್ಪಿನಂಗಡಿ ಇವರ ಪ್ರವಾಸ ಕಥನ. ನಮಗೆ ಗೊತ್ತಿಲ್ಲದ ಊರಿನ ವಿಶೇಷತೆಗಳನ್ನು ರೋಚಕವಾಗಿ ಹರಡುವ ನವೀನಕೃಷ್ಣ ಅವರ ಪ್ರವಾಸಕಥನಗಳು ಓದಲು ಬಹಳ ಸೊಗಸಾಗಿರುತ್ತವೆ. ಅವರೊಂದಿಗೆ ನಾವೂ ಪ್ರವಾಸ ಮಾಡುತ್ತಿದ್ದೇವೆ ಎನ್ನುವಷ್ಟು ಹಿತವಾಗಿರುತ್ತದೆ. ಈ ಪ್ರವಾಸ ಕಥನಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ವಿವೇಕಾನಂದ ಕಾಲೇಜು ಪುತ್ತೂರು ಇದರ ಕುಲ ಸಚಿವರಾದ ಡಾ. ಶ್ರೀಧರ್ ಎಚ್ ಜಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಕೆಲವು ಸಾಲುಗಳು ನಿಮ್ಮ ಓದಿಗಾಗಿ…

    “ಶ್ರೀಯುತ ನವೀನಕೃಷ್ಣ ಎಸ್. ಉಪ್ಪಿನಂಗಡಿ ಇವರ ‘ಅಲೆದಾಟದ ಅಂತರಂಗ’ ದೇವರ ನಾಡಿಗೊಂದು ಪಯಣ ಎಂಬ ಪ್ರವಾಸ ಕಥನವು ಕೇರಳದ ಪ್ರಾಕೃತಿಕ…